ಸ್ವರ್ಗಸದೃಶ ಮೌಂಟ್‌ ಟಿಟ್ಲಿಸ್‌


Team Udayavani, Aug 4, 2019, 5:00 AM IST

x-3

ಇತ್ತೀಚೆಗಿನ ನಮ್ಮ ಯೂರೋಪ್‌ ಪ್ರವಾಸದಲ್ಲಿ ಸ್ವಿಟ್ಜರ್‌ಲೆಂಡ್‌ ಕೂಡ ಸೇರಿತ್ತು. ಅಲ್ಲಿನ ಟಿಟ್ಲಿಸ್‌ ಎಂಬ ಹಿಮಾವೃತ್ತ ಪರ್ವತದ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದವು. ಹದಿನಾಲ್ಕು ದಿನಗಳ ಬಸ್‌ ಪ್ರಯಾಣ, ಹವಾಮಾನದ ಬದಲಾವಣೆ, ಪರ್ವತದ ಮೇಲಿನ ಥಂಡಿಯ ವಾತಾವರಣ, ಹಿಮಪಾತ ಇವುಗಳ ಬಗ್ಗೆ ಸ್ವಲ್ಪ ಆತಂಕವಿತ್ತು.ಧೈರ್ಯ ಮಾಡಿ ಹೊರಟೆವು.

ದುಬೈ ಮೂಲಕ ಹೊರಟು ಮೇ 30ರಂದು ಪ್ಯಾರಿಸ್‌ ತಲುಪಿ, ಅದಾಗಲೇ ಲಂಡನ್‌ ನೋಡಿಕೊಂಡು ಪ್ಯಾರಿಸ್‌ಗೆ ಬಂದಿದ್ದ ನಮ್ಮ ಪ್ರವಾಸಿ ತಂಡವನ್ನು ಸೇರಿಕೊಂಡೆವು. ಮರುದಿನದಿಂದ ಪ್ಯಾರಿಸ್‌, ಬೆಲ್ಜಿಯಮ್, ನೆದರ್‌ಲೆಂಡ್‌ ನೋಡಿಕೊಂಡು ಸ್ವಿಟ್ಜರ್‌ಲೆಂಡ್‌ಗೆ ಬಂದಿದ್ದು ಪ್ರವಾಸದ ಏಳನೆಯ ದಿನ. ಝೂರಿಚ್‌ನ ಹೋಟೆಲ್ನಿಂದ ಹೊರಟು ಲೂಝರ್ನ್ ಮೂಲಕ ಏಂಜೆಲ್ಬರ್ಗ್‌ ತಲುಪಿದೆವು.

ಏಂಜೆಲ್ಬರ್ಗ್‌ನಲ್ಲಿರುವ ಪ್ರವೇಶದ್ವಾರದಿಂದ ಒಳಹೋದ ನಂತರ ಲಿಫ್ಟ್ನಲ್ಲಿ ಐದು ಮಜಲುಗಳಷ್ಟು ಮೇಲೆ ಹೋಗಬಹುದು. ಈ ಮಜಲುಗಳಲ್ಲಿ ಹೋಟೆಲ್, ಅಂಗಡಿಗಳು ಇವೆ. ನಮಗೆ ಎರಡನೆಯ ಮಜಲಿನ ಹೋಟೆಲಿನಲ್ಲಿ ಊಟದ ಏರ್ಪಾಟಾಗಿತ್ತು. ಮತ್ತೆ ಮೂರು ಮಜಲುಗಳನ್ನು ಲಿಫ್ಟಿನಲ್ಲಿ ಏರಿದೆವು. ಇಲ್ಲಿ ಕೃತಕವಾಗಿ ನಿರ್ಮಿಸಲಾದ ಮಂಜುಗಡ್ಡೆಯ ಸುರಂಗವೊಂದಿದೆ. ಜಾರುವ ನೆಲದ ಮೇಲೆ ಸುತ್ತಲ ಮಂಜುಗಡ್ಡೆಯ ಚುಮುಚುಮು ಚಳಿಯನ್ನು ಅನುಭವಿಸುತ್ತ್ತ ನಡೆಯುವುದು ಮೋಜೆನಿಸುತ್ತದೆ. ಹೊರಬಂದರೆ ಇಲ್ಲಿಯೇ ಹಿಮದ ಹಾಸಿನ ದರ್ಶನವಾಗುತ್ತದೆ. ಅದನ್ನು ನೋಡಿಯೇ ನಮ್ಮ ‘ವಾವ್‌Ø’ಗಳು ಶುರುವಾಗುತ್ತವೆ.

ಇದಾದ ನಂತರ ಮೂರು ಕೇಬಲ್ ಕಾರ್‌ ಬಳಸಿ – ಮೊದಲನೆ ಯದರಲ್ಲಿ 4140 ಅಡಿ ಎತ್ತರದವರೆಗೆ, ಇನ್ನೊಂದರಲ್ಲಿ 5892 ಅಡಿಯವರೆಗೆ, ಮೂರನೆಯದರಲ್ಲಿ 7966 ಅಡಿಯವರೆಗೆ- ಮೇಲೇರಬಹುದು. ಕೇಬಲ್ ಕಾರಿನಲ್ಲಿ ಹೋಗುವಾಗ ಹೊರಗಿನೆ ನೋಟ ಬೆರಗುಗೊಳಿಸುತ್ತದೆ. ಕೊನೆಯ ಹಂತದ ಕೇಬಲ್ ಕಾರ್‌ ನಮ್ಮನ್ನು ಶಿಖರದ ಮೇಲುಭಾಗಕ್ಕೆ ಕರೆದೊಯ್ಯುತ್ತದೆ. ಇದು 360 ಡಿಗ್ರಿ ಸುತ್ತ ತಿರುಗುತ್ತ ಹೋಗುವ rotating cable car. ಈ ಪ್ರಯಾಣ ನಾಲ್ಕೂ ದಿಕ್ಕುಗಳ ನೋಟವನ್ನು ಒದಗಿಸುತ್ತ ವಿಭಿನ್ನ ಅನುಭವ ನೀಡುತ್ತದೆ. ಕೇಬಲ್ ಕಾರಿನಿಂದ ಹೊರಬಂದು ಕೆಲವು ಮೆಟ್ಟಿಲುಗಳನ್ನು ಹತ್ತಿ ಕಟ್ಟಡದ ಆಚೆ ಬಂದರೆ ನಾವು ಸಮುದ್ರ ಮಟ್ಟದಿಂದ 10, 020 ಅಡಿ ಎತ್ತರದಲ್ಲಿದ್ದೇವೆಂದು ತಿಳಿಸುವ ಒಂದು ಬೋರ್ಡ್‌ ನೋಡಿ ಎಲ್ಲರೂ ಸಂಭ್ರಮಿಸಿದೆವು.

ಕಾಜೋಲ್ ಮತ್ತು ಶಾರುಖ್‌ ಅಭಿನಯದ ದಿಲ್ವಾಲೇ ದುಲಾØನಿಯಾ ಲೇ ಜಾಯೇಂಗೇ ಸಿನಿಮಾದ ಶೂಟಿಂಗ್‌ ಇಲ್ಲಿ ನಡೆದಿತ್ತಂತೆ. ಹಾಗಾಗಿ ಅವರಿಬ್ಬರ ಕಟ್ಔಟ್ನ್ನು ಇಲ್ಲಿ ಇರಿಸಿದ್ದಾರೆ. ಅದನ್ನು ಕಂಡು ಭಾರತೀಯರಿಗೆ ಹೆಮ್ಮೆ ಅನಿಸುತ್ತದೆ. ಆ ಕಟ್ಔಟ್ ಜತೆ ಅವರದೇ ಪೋಸಿನಲ್ಲಿ ಫೋಟೊ ತೆಗೆದುಕೊಳ್ಳುವುದು ಯುವಜೋಡಿಗಳ ನೆಚ್ಚಿನ ವಿಷಯ. ನಾವು ಬಂದಾಗ ಹಿಮಪಾತವಾಗುತ್ತಿತ್ತು. ಸಾಕಷ್ಟು ಬೆಚ್ಚನೆಯ ಉಡುಪು ತೊಟ್ಟಿದ್ದರೂ ಚಳಿ ಮೈ ಕೊರೆಯುತ್ತಿತ್ತು.

ಅಬ್ಟಾ, ಸ್ವರ್ಗ ಎಂದರೆ ಇದೇ ಇರಬಹುದೇ ಎನ್ನುವ ಮಾಯಾಲೋಕದ ದರ್ಶನ ನಮಗಾಯಿತು. ಕಣ್ಣು ಹಾಯಿಸಿದಷ್ಟೂ ಎಲ್ಲೆಡೆ ಕಾಣುವ ಹಿಮದ ಹಾಸು ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿತು.

ಕ್ಲಿಫ್ ವಾಕ್‌!

ಅಲ್ಲಿಂದ ಸ್ವಲ್ಪ ಮುಂದೆ ನಡೆದರೆ ಅಲ್ಲೊಂದು ತೂಗು ಸೇತುವೆ ಕ್ಲಿಫ್ ವಾಕ್‌ನ್ನು ಎರಡು ಶಿಖರಗಳ ನಡುವೆ ನಿರ್ಮಿಸಿದ್ದಾರೆ. ಕೆಳಗೆ ಪ್ರಪಾತ, ಆ ಕಡೆ ಈ ಕಡೆ ಹಿಮಾವೃತ್ತ ಬಂಡೆಗಲ್ಲುಗಳು. ಅದರ ಮೇಲೆ ನಡೆಯುತ್ತ ಹೋಗಿಬರುವುದೊಂದು ಅನನ್ಯ ಅನುಭವ. ಒಂದಷ್ಟು ಹೊತ್ತು ಆಟವಾಡಿ ಇನ್ನೂ ಮುಂದೆ ಹೋದಾಗ ಕಂಡಿದ್ದು ಮತ್ತೂಂದು ಟಿಕೆಟ್ ಕೌಂಟರ್‌. ಮೊದಲೇ ಕೊಂಡಿದ್ದರಿಂದ ಟಿಕೆಟ್ ತೋರಿಸಿ ಒಳಹೋದರೆ ಆರು ಜನ ಕೂರಬಹುದಾದ ಕೇಬಲ್ ಚೇರ್‌ ಕಾಣಬಂತು. ಇದರಲ್ಲಿ ಕುಳಿತು 500 ಮೀ.ಗಳಷ್ಟು ಕೆಳಗೆ ಇಳಿಯುವ ಅವಕಾಶವಿತ್ತು. ಅದು ಓಪನ್‌ಚೇರ್‌ ಆದುದರಿಂದ ಅದರಲ್ಲಿ ಕುಳಿತು ಕೆಳಗಿಳಿಯುವಾಗ ಭಯ ಮಿಶ್ರಿತ ಸಂಭ್ರಮ. ಆದರೆ ಸುತ್ತಲಿನ ನೋಟ ನಮ್ಮನ್ನು ಹಿಡಿದಿಟ್ಟುಕೊಳ್ಳುವುದರಿಂದ ಎಲ್ಲವನ್ನೂ ಮರೆತು ಅದರಲ್ಲಿ ತಲ್ಲೀನರಾಗಿಬಿಟ್ಟೆವು.

ಕೇಬಲ್ ಚೇರ್‌ನಿಂದ ಇಳಿದು ಒಂದಷ್ಟು ದೂರ ನಡೆದಾಗ ಕಂಡದ್ದು ಅಗಾಧವಾದ ಹಿಮದ ಹಾಸು, ಅಲ್ಲೊಂದಿಷ್ಟು ಜಾರುವುದಕ್ಕೋಸ್ಕರವಾಗಿ ಗುರುತಿಸಲಾದ ಸ್ಥಳ. ಅಲ್ಲಿರುವ ಪ್ಲಾಸ್ಟಿಕ್‌ ಮಣೆಗಳ ಮೇಲೆ ಕುಳಿತು ಇನ್ನೂರು ಅಡಿಗಳಷ್ಟು ಜಾರುವ ವಿಶಿಷ್ಟ ಅವಕಾಶದ ಸದುಪಯೋಗ ಮಾಡಿಕೊಳ್ಳದೆ ಇರಲಾಗಲಿಲ್ಲ. ಅದೊಂದು ರೋಮಾಂಚನಕಾರಿಯಾದ ಅನುಭವವೇ ಸರಿ. ಕೆಳಗೆ ಜಾರಿ ಇಳಿದವರು ಮೇಲೆ ಬರಲು ಎಸ್ಕಲೇಟರ್‌ ಸೌಲಭ್ಯವಿದೆ. ಅದರ ಮೇಲೆ ನಿಂತು ಮೊದಲಿನ ಸ್ಥಳಕ್ಕೆ ಬಂದು, ನಂತರ ಕೇಬಲ್ ಚೇರ್‌ ಮೂಲಕ ವಾಪಸಾದೆವು. ಮತ್ತೆ ಕೇಬಲ್ ಕಾರುಗಳ ಮೂಲಕ ಪರ್ವತದ ಬುಡಕ್ಕೆ ಬಂದಾಗ ಕನಸಿನ ಲೋಕದಿಂದ ಹೊರಬಂದಂತಹ ಪರಿಸ್ಥಿತಿ ನಮ್ಮದಾಗಿತ್ತು.

ಟಿಟ್ಲಿಸ್‌ ಪರ್ವತ
1435ರ ದಾಖಲೆಗಳ ಪ್ರಕಾರ ಈ ಪರ್ವತಕ್ಕೆ ಟ್ಯುಟಿಲೋಸ್‌ ಎಂಬ ಸ್ಥಳೀಯ ರೈತನೊಬ್ಬನ ಹೆಸರಿನಿಂದ ಟಟಲ್ಸ್ ಬರ್ಗ್‌ (Tuttelsberg) ಅಂದರೆ ಟ್ಯುಟಿಲೋಸ್‌ ಪರ್ವತ (Tutilos mountain) ಎಂದು ಕರೆಯಲಾಗುತ್ತಿತ್ತು. ನಂತರ ಅದು ಟಿಟ್ಲಿಸ್‌ಬರ್ಗ್‌ (Titlisberg) ಎಂದಾಗಿ ಈಗ ಟಿಟ್ಲಿಸ್‌ ಎನ್ನುವ ಹೆಸರೇ ಪ್ರಚಲಿತದಲ್ಲಿದೆ.

ಲೂಝರ್ನ್ ಸರೋವರದ ದಕ್ಷಿಣದಲ್ಲಿರುವ ಟಿಟ್ಲಿಸ್‌, ಯೂರೋಪಿಯನ್‌ ಆಲ್ಫ್ಸ್ ಪರ್ವತದ ಒಂದು ಶಿಖರ. ಸಮುದ್ರ ಮಟ್ಟದಿಂದ 3, 238 ಮೀ. ಗಳಷ್ಟು ಎತ್ತರವಿದೆ 10, 623 ಅಡಿ. ಇದು ಉತ್ತರ ಸ್ವಿಟ್ಜರ್‌ಲೆಂಡ್‌ ಪರ್ವತ ಶ್ರೇಣಿಯ ಅತಿ ಎತ್ತರದ ಶಿಖರ. ಉತ್ತರಭಾಗದಲ್ಲಿ ಟಿಟ್ಲಿಸ್‌ ಹಿಮನದಿ (Titlis Glacier) ಇದೆ. ಭೂ ತಾಪಮಾನದ ಏರಿಕೆಯಿಂದಾಗಿ ಇದೂ ಕೂಡ ಕರಗುತ್ತಿದ್ದು, ಕೆಲವೇ ವರ್ಷಗಳಲ್ಲಿ ಕಣ್ಮರೆಯಾಗಬಹುದೆಂಬ ಆತಂಕವಿದೆ.

ತಲುಪುವ ಬಗೆ : ಹತ್ತಿರದ ವಿಮಾನ ನಿಲ್ದಾಣಗಳು ಬರ್ನ್ ಮತ್ತು ಝೂರಿಚ್. ಏಂಜೆಲ್ಬರ್ಗ್‌ನಿಂದ 157 ಕಿ. ಮೀ., ಮತ್ತು ಝೂರಿಚ್ನಿಂದ 101 ಕಿ. ಮೀ. ದೂರವಿದೆ. ರೈಲು ಮತ್ತು ರಸ್ತೆಯ ಮೂಲಕವೂ ಇಲ್ಲಿಗೆ ತಲುಪಬಹುದು.

ಟಾಪ್ ನ್ಯೂಸ್

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.