ನಿಮ್ಗೆ ವಯಸ್ಸೇ ಆಗೋದಿಲ್ವಾ?

ಆ್ಯಂಟಿ ಏಜಿಂಗ್‌ ಫಾರ್ಮುಲಾ...

Team Udayavani, Sep 11, 2019, 5:00 AM IST

t-2

ಗಂಡಸಿನ ಸಂಬಳವನ್ನು, ಹೆಂಗಸರ ವಯಸ್ಸನ್ನು ಕೇಳಬಾರದು ಅಂತಾರೆ. ಯಾಕಂದ್ರೆ, ಯಾವ ಮಹಿಳೆಯೂ ತನಗೆ ವಯಸ್ಸಾಗುತ್ತಿದೆ ಅಂತ ಒಪ್ಪಿಕೊಳ್ಳುವುದಿಲ್ಲ. ತಾನು ಚಿರಯೌವನೆಯಾಗಿ, ಸದಾ ಸುಂದರವಾಗಿ ಕಾಣಬೇಕು ಅನ್ನೋದು ಅವಳ ಆಸೆ. ಆದರೆ, ವಯಸ್ಸು ನಲವತ್ತರ ಗಡಿ ದಾಟುತ್ತಿದ್ದಂತೆಯೇ ಕನ್ನಡಿ ಕಹಿಸತ್ಯವನ್ನು ಬಯಲು ಮಾಡಲು ಶುರುಮಾಡುತ್ತದೆ. ಚರ್ಮದ ಸುಕ್ಕು, ಮುಖದ ಮೇಲೆ ಕಪ್ಪು ಕಲೆಗಳು, ಕಣ್ಣಿನ ಸುತ್ತ ಕಪ್ಪು ವರ್ತುಲ, ನೆರಿಗೆ, ಬಿಳಿಕೂದಲು…ಹೀಗೆ, ವೃದ್ಧಾಪ್ಯದ ಒಂದೊಂದೇ ಲಕ್ಷಣಗಳು ಅವಳನ್ನು ಅಧೀರಗೊಳಿಸುತ್ತದೆ.

ವಯಸ್ಸಾಗುತ್ತಿದ್ದಂತೆ ದೇಹದಲ್ಲಿ ಬದಲಾವಣೆಗಳಾಗುವುದು ಸಹಜವಾದರೂ, ಸೂಕ್ತ ಕಾಳಜಿ ವಹಿಸಿದರೆ ಅದನ್ನು ಮರೆಮಾಚಬಹುದು. ಅಂಗಡಿಗಳಲ್ಲಿ ಸಿಗುವ ಆ್ಯಂಟಿ ಏಜಿಂಗ್‌ ಕ್ರೀಂ, ಲೋಶನ್‌, ಸೆರಮ್‌ಗಳನ್ನು ಬಳಸದೆಯೇ, ಪ್ರಕೃತಿಯಲ್ಲಿ ಸಿಗುವ ಕೆಲವು ವಸ್ತುಗಳಿಂದ ಸೌಂದರ್ಯವನ್ನು ವೃದ್ಧಿಸಬಹುದು. ಆ ವಸ್ತುಗಳು ಯಾವುವು ಗೊತ್ತಾ?

1. ಅಲೋವೆರ (ಲೋಳೆಸರ): ಅಲೋವೆರಾದಲ್ಲಿ ಅಧಿಕ ಪ್ರಮಾಣದ ಮಾಲಿಕ್‌ ಆ್ಯಸಿಡ್‌ ಇರುವುದರಿಂದ, ಚರ್ಮದಲ್ಲಿ
ಕೊಲಜೆನ್‌(ಚರ್ಮದ ಕಾಂತಿ ಹೆಚ್ಚಿಸುವ ಅಂಶ) ಉತ್ಪತ್ತಿಯನ್ನು ಹೆಚ್ಚಿಸಿ, ತ್ವಚೆಯನ್ನು ಕಾಂತಿಯುತವಾಗಿಡುತ್ತದೆ.
ಉಪಯೋಗ: ಲೋಳೆಸರದ ಎಲೆಯಿಂದ ಜೆಲ್‌ ತೆಗೆದು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಇದೇ ರೀತಿ ವಾರಕ್ಕೆರಡು ಬಾರಿ ಮಾಡಿ.

2. ತೆಂಗಿನ ಹಾಲು: ತೆಂಗಿನ ಹಾಲಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ತ್ವಚೆಯಲ್ಲಿನ ಡೆಡ್‌ ಸ್ಕಿನ್‌ ಅನ್ನು ಸ್ವತ್ಛಗೊಳಿಸಿ, ಹೊಳಪನ್ನು ನೀಡುತ್ತವೆ.
ಉಪಯೋಗ: ತೆಂಗಿನತುರಿಗೆ ಸ್ವಲ್ಪ ನೀರು ಬೆರೆಸಿ ರುಬ್ಬಿ, ಹಾಲನ್ನು ತಯಾರಿಸಿ. ಹತ್ತಿಯನ್ನು ತೆಂಗಿನ ಹಾಲಿನಲ್ಲಿ ಅದ್ದಿ ಮುಖಕ್ಕೆ ಮಸಾಜ್‌ ಮಾಡಿ, ಅರ್ಧ ಗಂಟೆ ನಂತರ ಮುಖ ತೊಳೆಯಿರಿ.

3. ಮೆಂತ್ಯೆ ಕಾಳು: ನಿಯಸಿನ್‌ ಮತ್ತು ವಿಟಮಿನ್‌ ಬಿ 3 ಅನ್ನು ಹೇರಳವಾಗಿ ಹೊಂದಿರುವ ಮೆಂತ್ಯೆ, ಚರ್ಮಕ್ಕೆ ಮರುಜೀವ ಕೊಟ್ಟು, ಒಣ ಚರ್ಮವನ್ನು ಹೋಗಲಾಡಿಸುತ್ತದೆ. ಚರ್ಮ ಸುಕ್ಕಾಗುವುದನ್ನು ಕೂಡ ತಡೆಯುತ್ತದೆ.
ಉಪಯೋಗ: ಮೆಂತ್ಯೆಕಾಳನ್ನು ನಾಲ್ಕು ಗಂಟೆ ನೀರಲ್ಲಿ ನೆನೆಸಿ, ನಂತರ ರುಬ್ಬಿ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿ. ಒಂದು ಗಂಟೆ ನಂತರ ಮುಖ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಮಾಡಿದರೆ ಉತ್ತಮ.

4. ಬಾಳೆಹಣ್ಣು: ಬಾಳೆಹಣ್ಣಲ್ಲಿರುವ ವಿಟಮಿನ್‌ ಸಿ, ಇ ಮತ್ತು ಪೊಟ್ಯಾಷಿಯಂ ಅಂಶಗಳು ಚರ್ಮದ ಕೊಲಜೆನ್‌ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.
ಉಪಯೋಗ: ಬಾಳೆಹಣ್ಣನ್ನು ರುಬ್ಬಿ ಪೇಸ್ಟ್‌ ಮಾಡಿ, ಮುಖಕ್ಕೆ ಹಚ್ಚಿ, ಒಣಗಿದ ನಂತರ ತೊಳೆಯಿರಿ.

5. ಕಬ್ಬಿನ ಹಾಲು : ಕಬ್ಬಿನಹಾಲಿನಲ್ಲಿ ಗ್ಲಯೊಲಿಕ್‌ ಆ್ಯಸಿಡ್‌ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಚರ್ಮದ ಸತ್ತ ಜೀವಕೋಶಗಳನ್ನು ಹೊರ ಹಾಕಿ, ತ್ವಚೆಗೆ ಮರುಜೀವ ಕೊಡುತ್ತದೆ.
ಉಪಯೋಗ: ಕಬ್ಬಿನ ಹಾಲನ್ನು ಒಂದು ಚಿಟಿಕೆ ಅರಿಶಿನದೊಂದಿಗೆ ಬೆರೆಸಿ, ಮುಖಕ್ಕೆ ಹಚ್ಚಿ. 15 ನಿಮಿಷ ಒಣಗಲು ಬಿಟ್ಟು, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

-ಮೇಘನಾ, ಮಂಗಳೂರು

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.