ಮಾವಿನ ಬಗ್ಗೆ ಮನದ ಮಾತು…


Team Udayavani, Apr 21, 2021, 12:00 PM IST

ಮಾವಿನ ಬಗ್ಗೆ ಮನದ ಮಾತು…

ಮಾವಿನ ನಂಟು ಶುರುವಾಗೋದೇ ಬಾಲ್ಯದಿಂದ. ಹಣ್ಣಿನ ಚಿತ್ರಗಳಿಗೆ ಬಣ್ಣ ತುಂಬಿ ಎಂದು ಕೊಡುವ ನರ್ಸರಿ ಡ್ರಾಯಿಂಗ್‌ಪುಸ್ತಕದಲ್ಲಿ ಮಾವಿನ ಚಿತ್ರ ಇಲ್ಲದೆ ಇರಲುಸಾಧ್ಯವೇ? M ಅಕ್ಷರದಿಂದ ಹೇಳುವ ಪದಗಳಲ್ಲಿಮ್ಯಾಂಗೊ ಅನ್ನುವ ಪದ ಇಲ್ಲದೆ ಹೋಗುವುದೆ?ಇದು ಮಾವಿನ ಬಗೆಗಿನ ಬೀಜ ಮನಸ್ಸಿನಲ್ಲಿ ಮೊಳಕೆಯಾಗುವ ಪರಿ.

ಹೀಗೆ ಬೆಳೆಯುತ್ತಿದಂತೆ ಮುಂದೆ ಮರಗಳ ಹೆಸರಿನ ಪಟ್ಟಿ ಮಾಡುತ್ತಾ ಮಾವಿನ ಮರದ ಸೇರ್ಪಡೆ ಆಗುತ್ತದೆ. ಪದ್ಯಕ್ಕೆ ಬರುವುದಾದರೆ “ಹತ್ತು ಹತ್ತು ಇಪ್ಪತ್ತು, ತೋಟಕೆ ಹೋದನು ಸಂಪತ್ತು’ ಎಂಬ ಪದ್ಯದಲ್ಲಿ ಪುಟ್ಟ ಹುಡುಗ ತೋಟಕ್ಕೆ ನುಗ್ಗಿ ಮಾವಿನ ಹಣ್ಣ ನ್ನು ಕೀಳುವಸಾಹಸ ಮಾಡುವ ಪದ್ಯದಲ್ಲಿ ಸಂಖ್ಯೆಗಳ ಪರಿಚಯವು ಮಾವಿನ ಹಣ್ಣಿನ ಆಸೆಯೊಂದಿಗೆ ಸೇರಿ ಹೋಗಿದೆ.

ಇನ್ನು ಸತ್ಯದ ಕಥೆಯನ್ನು ಪುಣ್ಯ ಕೋಟಿ ಗೋವಿನ ಹಾಡಿನ ಮೂಲಕ ಹೇಳಲಾಗುವ “ಧರಣಿ ಮಂಡಲ ಮಧ್ಯದೊಳಗೆ’ ಎಂಬ ಗೀತೆಯಲ್ಲಿ ಗೊಲ್ಲನು ಕೊಳಲನೂದುತ ಕೂರುವುದು ಮಾವಿನ ಮರದ ಕೆಳಗೆ ತಾನೆ? ಇದನ್ನುಹೇಳುವ ಆ ಹಾಡಿನ ಸಾಲುಗಳು “ಎಳೆಯ ಮಾವಿನ ಮರದ ಕೆಳಗೆ, ಕೊಳಲನೂದುತ ಗೊಲ್ಲಗೌಡನು’ ಎಂಬ ಸಾಲುಗಳನ್ನು ಓದು ತ್ತಾ, “ವಸಂತ ಕಾಲ ಬಂದಾಗ ಮಾವು ಚಿಗುರಲೇಬೇಕು, ಕೋಗಿಲೆ ಹಾಡಲೆ ಬೇಕು’ ಎಂಬ ಹಾಡುಗಳನ್ನು ಕೇಳುತ್ತಾ ಮಾವಿನ ಮರದ ಚಿತ್ರಣ ಮನದಲ್ಲಿ ಚಿಗುರೊಡೆಯುವುದು.

ಆಂಜನೇಯ ತಂದ ಹಣ್ಣು!? :

ಮಾವಿನ ಹಣ್ಣಿನ ಬಗೆಗಿನ ಕಥೆಗಳು, ಗಾದೆಗಳು ಅನೇಕ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಅಲೆಕ್ಸಾಂಡರ್‌ ನಮ್ಮ ದೇಶಕ್ಕೆ ಬಂದಾಗ ಅವನಿಗೆ ಈ ಹಣ್ಣು ತುಂಬ ಇಷ್ಟವಾಗಿತ್ತಂತೆ. ಇನ್ನೊಂದು ದಂತಕಥೆಯ ಪ್ರಕಾರ, ಮಾವಿನ ಹಣ್ಣನ್ನು ಲಂಕೆ ಯಿಂದ ನಮ್ಮ ದೇಶಕ್ಕೆ ತಂದದ್ದು ಆಂಜನೇಯನಂತೆ. ಅಶೋಕವನದಲ್ಲಿ ಸೀತೆ ಯನ್ನು ಕಂಡು ಉಂಗುರವನ್ನು ಕೊಟ್ಟ ಮೇಲೆ ಸಂತೋಷದಿಂದ ಮರದಿಂದ ಮರಕ್ಕೆ ಹಾರಿ ಸಿಕ್ಕ ಹಣ್ಣುಗಳನ್ನೆಲ್ಲಾ ತಿಂದನಂತೆ. ಎಲ್ಲಕ್ಕಿಂತ ಮಾವಿನಹಣ್ಣು ತುಂಬ ಪ್ರಿಯವಾಗಿದ್ದರಿಂದ ಅದರ ಬೀಜಗಳನ್ನು ನಮ್ಮ ದೇಶಕ್ಕೆ ತಂದುಹಾಕಿದನಂತೆ. ಹೀಗೆ, ಪುರಾಣ ಕಥೆಗಳಲ್ಲೂ ಹಲವು ಕಡೆ ಮಾವಿನ ಉಲ್ಲೇಖವಿದೆ.

ಬಯಕೆ ಹುಟ್ಟಿಸುವುದು ಇದೇ ಮಾವು! :  ಮಗುವಿಗೆ ಹಲ್ಲು ಬರುವ ಮುನ್ನವೇ, ಮಾವಿನ ಸವಿ ನಾಲಿಗೆಗೆ ತಲುಪಿರುತ್ತದೆ. ವಿಟಮಿನ್‌ ಎ, ಫೈಬರ್‌,ಪೊಟಾಸಿಯಂ ಹಾಗೂಇನ್ನೂ ಹಲವು ಪೌಷ್ಟಿಕಾಂಶಗಳು ಈ ಹಣ್ಣಿನಲ್ಲಿ ಹೇರಳವಾಗಿ ಇರುವುದರಿಂದ ವೈದ್ಯರು ಇದನ್ನು ಮಕ್ಕಳಿಗೆ ಚಿಕ್ಕವರಿರುವಾಗಲೇ ತಿನ್ನಿಸಬಹುದು ಎಂದು ಹೇಳುತ್ತಾರೆ. ಬೆಳೆಯುತ್ತಾ ಇದೇ ಹಣ್ಣಿನ ಸೀಕರ್ಣೆ, ಮಿಲ್ಕ್ ಶೇಕ್‌, ಬರ್ಫಿ ಹೀಗೆ ಹತ್ತು ಹಲವು ಮಾವಿನ ತಿನಿಸುಗಳು ಪ್ರಿಯವಾಗಿ ಬಿಡುತ್ತದೆ. ಪಾಯಸ, ಕೋಸಂಬರಿ, ಚಿತ್ರಾನ್ನದಿಂದ ಹಿಡಿದು ಐಸ್‌ಕ್ರೀಮ್‌ ತನಕ ಮಾವಿನಕಾಯಿ, ಹಣ್ಣಿನ ಬಳಕೆ ಮಾಡಬಹುದು. ಮಾವಿನ ಕಾಯಿಗೆ ಉಪ್ಪು, ಖಾರ ಹಚ್ಚಿ ಶಾಲಾ, ಕಾಲೇಜುಗಳ ಮುಂದೆ ಗಾಡಿಗಳಲ್ಲಿ ಮಾರುತ್ತಿದ್ದರೆ ನಮಗೆ ಬಾಯಲ್ಲಿ ನೀರೂರುವುದಂತೂ ಖಂಡಿತ. ಮಾವಿನ ಚಾಕಲೇಟ್‌, ಮ್ಯಾಂಗೋ ಟಾಫಿಸ್‌ ಚೀಪಿ ತಿನ್ನಲು ಚಂದ. ಬಸುರಿಯರಿಗೆ ಬಯಕೆ ಹುಟ್ಟಿಸುವುದು ಇದೇ ಮಾವಲ್ಲವೇ? ಉಪ್ಪಿನ ಕಾಯಿಗಳಲ್ಲೂ ಇದರದ್ದೇ ಕಾರುಬಾರು.

ಮಾವಿನ ಎಲೆಗಳು ಶುಭ ಸಮಾರಂಭಗಳಲ್ಲಿ ಕಳಶಕ್ಕೆ ಸೇರಿ, ಮನೆಯ ಮುಂದಿನ ತೋರಣವಾಗಿ, ಚಪ್ಪರದಲ್ಲಿಯೂ ಶೋಭಿಸುತ್ತವೆ. ಮಾವಿನ ಮರದ ತೊಗಟೆ, ಹೂ, ಎಲೆ, ಹಣ್ಣು, ಬೀಜ ಎಲ್ಲದರಲಿಯೂ ಔಷಧೀಯ ಗುಣಗಳಿದ್ದು ಆಯುರ್ವೇದ ಔಷಧಗಳಲ್ಲಿ ಬಳಕೆಯಾಗುತ್ತದೆ. ಬಾದಾಮಿ, ರಸಪುರಿ, ತೋತಾಪುರಿ, ಮಲ್ಲಿಕಾ, ಮಲಗೋವಾ, ನೀಲಂ, ಸಿಂಧು, ಆಮ್ರಪಾಲಿ..ಹೀಗೆ ಹಲವಾರು ಮಾವಿನ ಹಣ್ಣಿನ ತಳಿಗಳಿದ್ದು, ಪ್ರತಿಯೊಂದೂ ತನ್ನದೇ ಆದ ರುಚಿ ಹೊಂದಿರುತ್ತದೆ. ಒಟ್ಟಿನಲ್ಲಿ ಎರಡನೇ ಕಲ್ಪವೃಕ್ಷ ಮಾವಿನ ಮರ ಎಂದರೆ ಅತಿಶಯೋಕ್ತಿ ಆಗಲಾರದು. ­

 

-ಶ್ರೀಲಕ್ಷ್ಮೀ

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಯುಗಾದಿ ಮರಳಿ ಬರುತಿದೆ…

ಯುಗಾದಿ ಮರಳಿ ಬರುತಿದೆ…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.