ಅತ್ತ ಅಮ್ಮ, ಇತ್ತ ಹೆಂಡತಿ…

ಅತ್ತೆ-ಸೊಸೆಯ ಜಗಳದಲ್ಲಿ ಹುಡುಗ ಬಡವಾದ

Team Udayavani, Nov 13, 2019, 5:00 AM IST

qq-4

ನವೀನ್‌ ಕಂಗಾಲಾಗಿದ್ದರು. ಹೆಂಡತಿ ತವರಿಗೆ ಹೋಗಿ ಇಪ್ಪತ್ತು ದಿನಗಳಾಗಿವೆ. ಫೋನ್‌ ಮಾಡಿದರೆ ಉತ್ತರವಿಲ್ಲ. ಅತ್ತೆ-ಮಾವ ಮುಗುಮ್ಮಾಗಿ ಮಾತನಾಡುತ್ತಾರೆ. ನವೀನ್‌, ಒಂದು ದಿನವೂ ಶಾಲೆ-ಕಾಲೇಜು-ಆಫೀಸಿನಲ್ಲಿ ಕೂಡಾ ಬೈಸಿಕೊಂಡ ವ್ಯಕ್ತಿಯಲ್ಲ. ಹೆಂಡತಿಯ ವರ್ತನೆಗೆ, ಅಮ್ಮನೇ ಕಾರಣ ಎನಿಸಿತು. ಮೊದಲು ನಿಮ್ಮಮ್ಮನಿಗೆ ಸಲಹೆ ನೀಡಿ ಎಂದಾಗ, ನವೀನ್‌ ತಾಯಿಗೆ ಮಗನ ಮೇಲೆ ಸಿಟ್ಟು ಬಂತು. “ಹಾಗಾದ್ರೆ, ನಾವು ಗಂಡು ಮಕ್ಕಳನ್ನು ಧಾರೆ ಎರೆದು ಕೊಡಕ್ಕಾಗುತ್ತದೆಯೇ ಮೇಡಂ? ಎಂದು ಮರುಪ್ರಶ್ನೆ ಹಾಕಿದರು. ಅತ್ತೆಗೆ ಮಗ-ಸೊಸೆಯ ಮೇಲೆ ಸೈರಣೆ ತಪ್ಪಿತ್ತೇನೋ.

ಅತ್ತೆ-ಸೊಸೆ ಮದುವೆಯ ಸಮಯದಲ್ಲಿ ಚೆನ್ನಾಗಿಯೇ ಇದ್ದವರು, ಈಗ, ಕ್ಷುಲ್ಲಕ ಕಾರಣಗಳಿಗೂ ಜಗಳವಾಡಿಕೊಳ್ಳುತ್ತಾರೆ. ಮಗುವಿಗೆ ನೀರು ಹಾಕುವಾಗ, ಹರಳೆಣ್ಣೆಯೋ, ತೆಂಗಿನ ಎಣ್ಣೆಯೋ ಎಂಬಲ್ಲಿ ಶುರುವಾದ ಚರ್ಚೆ, ಮಗುವಿನ ಹಕ್ಕನ್ನು ಪ್ರತಿಪಾದಿಸುವ ತನಕ ಬೆಳೆಯಿತು. ಮಾವ ಕೂಡಾ ಈ ವಾದಕ್ಕೆ ದನಿ ಸೇರಿಸಿದ್ದಾರೆ. ಮಾತಿಗೆ ಮಾತು ಬೆಳೆದು ಸೊಸೆ ತವರು ಸೇರಿದ್ದಾಳೆ. ನವೀನ್‌ ಇತ್ತ ತಾಯಿಗೂ ಹೇಳಲಾರ, ಅತ್ತ ಹೆಂಡತಿಯನ್ನೂ ಸಂತೈಸಲಾರ.

ಗಂಡ-ಹೆಂಡತಿ ರಾತ್ರಿ ಸಿನಿಮಾಕ್ಕೆ ಹೋಗಿ, ತಡವಾಗಿ ಮನೆಗೆ ಬಂದಾಗ, ಅತ್ತೆ ಡಬಾರ್‌ ಅಂತ ಬಾಗಿಲು ಹಾಕಿದ್ದಾರೆ. ನಂತರ, ಕೈ ಜಾರಿ ಬಾಗಿಲು ಬಿತ್ತೆಂದು ಸಮಜಾಯಿಶಿ ಕೊಟ್ಟರೂ, ನವದಂಪತಿಗೆ ತಪ್ಪಿತಸ್ಥ ಭಾವನೆ ಮೂಡಿದೆ. ಆದರೆ, ಗಂಡ-ಹೆಂಡತಿ ರಾತ್ರಿ ತಡವಾಗಿ ತಿರುಗಾಡಿಕೊಂಡು ಬಂದರೆ ತಪ್ಪೇನು ಎಂಬ ಪ್ರಶ್ನೆಯೂ ಕಾಡತೊಡಗಿತು.

ಆಫೀಸ್‌ನಿಂದ ಮನೆಗೆ ಬಂದ ತಕ್ಷಣ ನವೀನ್‌ ಆರಾಮವಾಗಿ ಕೂರುವಂತಿಲ್ಲ. ಅಮ್ಮ ಕಾಫಿ ಕೊಡಲು ಕೂಗಿದರೆ, ಹೆಂಡತಿ ಮಗುವಿನ ಬಗ್ಗೆ ಏನೋ ಹೇಳಲು ಶುರು ಮಾಡುತ್ತಾಳೆ. ಇವರಿಬ್ಬರ ಜಗಳಕ್ಕೆ ಜvj… ಆಗಿ ನವೀನನ ರಕ್ತದೊತ್ತಡ ಜಾಸ್ತಿಯಾಗಿದೆ. ಅಮ್ಮ, ಮಗನನ್ನು “ಹೆಂಡತಿಯ ದಾಸ’ ಎಂದರೆ, ಹೆಂಡತಿ, “ತಾಯಿಗೆ ಹೆದರಿಕೊಳ್ಳುವ ಹೇಡಿ’ ಎಂದು ಮೂದಲಿಸುತ್ತಾಳೆ.

ವಾಸ್ತವ ಏನೆಂದರೆ, ಇವರಿಬ್ಬರೂ ಮೊದಲಿನಿಂದಲೂ ಶಾಲೆ, ಕಾಲೇಜು, ಪುಸ್ತಕ, ಸ್ನೇಹಿತರು, ಹಾಸ್ಟೆಲ್‌, ಪಿ.ಜಿ. ಅಂತ ಸಮಯ ಕಳೆದವರು. ಕುಟುಂಬದ ವಾತಾವರಣಕ್ಕೆ ಒಗ್ಗಿಕೊಳ್ಳಲು ಗಂಡ-ಹೆಂಡಿರಿಬ್ಬರಿಗೂ ಸಮಯ ಬೇಕಾಗಿದೆ. ಜೊತೆಗೆ ಮದುವೆಯಾದ ಕೂಡಲೇ ಗರ್ಭಿಣಿಯೂ ಆಗಿದ್ದರಿಂದ, ಆಕೆಗೆ ಆಗಾಗ್ಗೆ ತವರಿಗೆ ಹೋಗುವ, ಅಮ್ಮನನ್ನು ನೋಡುವ ಆಸೆಯಾಗಿದೆ. ಹೆಂಡತಿಯ ಜೊತೆಗೆ ನವೀನನೂ ಆಕೆಯ ಮನೆಗೆ ಹೋಗುತ್ತಿದ್ದ. ಅದರಿಂದ, ಅತ್ತೆಗೆ, ಮಗ ಹೆಂಡತಿಯ ಮನೆಗೇ ಸೇರಿದವನೆಂದು ಅನ್ನಿಸತೊಡಗಿದೆ. ನನ್ನ ಜೊತೆ ಮಗ ಸಮಯ ಕಳೆಯುತ್ತಿಲ್ಲ, ಮದುವೆಯ ನಂತರ ಮಗನನ್ನು ಕಳೆದುಕೊಂಡುಬಿಟ್ಟೆ ಎಂಬ ಆತಂಕ ಕಾಡಿ, ಸೈರಣೆ ತಪ್ಪಿ, ಬೇಕಿಲ್ಲದ ಮಾತು-ನಡವಳಿಕೆಗೆ ಆಸ್ಪದಮಾಡಿಕೊಟ್ಟಿದೆ.

ಇತ್ತೀಚಿನ ದಿನಗಳಲ್ಲಿ ವಿಚ್ಛೇದನಗಳು ಹೆಚ್ಚುತ್ತಿರುವುದಕ್ಕೆ ಅತ್ತೆ-ಸೊಸೆಯರ ನಡುವಿನ ಸಂಬಂಧ ಜಾಳಾಗಿರುವುದೂ ಒಂದು ಕಾರಣ. ಗಂಡಿನ ತಾಯಿ, ಮಗ-ಸೊಸೆ ಪರಸ್ಪರ ಹೊಂದಿಕೊಳ್ಳಲು ಸಮಯ ಕೊಡಲೇಬೇಕು. ಅದು ತ್ಯಾಗವಲ್ಲ, ಜವಾಬ್ದಾರಿ. ಹೆಣ್ಣಿನ ತಾಯಿಗೂ ಮಗಳನ್ನು ಬೇರೆ ಮನೆಗೆ ಕಳುಹಿಸಿದ ನೋವಿರುತ್ತದೆ. ಆಕೆಯ ಪಾಲಿಗೆ, ಬಾಣಂತನ ಜವಾಬ್ದಾರಿಯುತ ಕೆಲಸ ಎಂಬುದನ್ನು ಅತ್ತೆ ಅರಿತುಕೊಳ್ಳಬೇಕು. ಸೊಸೆಯನ್ನು ಮಗಳಂತೆ ಕಾಣಿರಿ, ಸೊಸೆಯೂ ತನ್ನ ಗಾಂಭೀರ್ಯವನ್ನು ಉಳಿಸಿಕೊಳ್ಳುತ್ತಾಳೆ.

ಮದುವೆ ಮಾಡುವುದು ಮುಖ್ಯವಲ್ಲ, ಎಳೆಯ ಸಂಬಂಧವನ್ನು ಚಿಗುರೊಡೆಯಲು ಹಿರಿಯರು ಆಸ್ಪದ ಮಾಡಿಕೊಡುವುದು ಬಹಳ ಮುಖ್ಯ.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.