ಟ್ರಿಪ್‌ ಹೋಗ್ತಾ ಇದೀರಾ?ಇಲ್ಲೊಂದಿಷ್ಟು ಟಿಪ್ಸ್‌ ಇವೆ,ನೋಡ್ಕಂಡ್‌ ಹೋಗಿ


Team Udayavani, Feb 22, 2017, 9:45 AM IST

trip1.jpg

ರಜೆ ಹತ್ತಿರ ಬರುತ್ತಿದೆ. ಒಂದು ಫ್ಯಾಮಿಲಿ ಟ್ರಿಪ್‌ ಹೋಗೋಣವೇ? ಮನೆಯ ಒಬ್ಬ ಸದಸ್ಯನಿಂದ ಇಂಥದ್ದೊಂದು ಪ್ರಸ್ತಾಪ ಕೇಳಿ ಬಂದರಾಯ್ತು, ಮಕ್ಕಳು ಸೇರಿದಂತೆ ಮನೆ ಮಂದಿಗೆಲ್ಲಾ ಖುಷಿಯೋ ಖುಷಿ. ಎಲ್ಲರೂ ಹೊರಟೇ ಬಿಡುತ್ತಾರೆ. ಆದರೆ, ಇಡೀ ಮನೆಯ ಜವಾಬ್ದಾರಿ ಹೊತ್ತಿರುವ ಅಮ್ಮಂದಿರಿಗೆ, ಪಿಕ್‌ನಿಕ್‌- ಟೂರ್‌ ಕೂಡ ಪ್ರಯಾಸದ ಕೆಲಸವೇ. ಎಲ್ಲರನ್ನೂ, ಎಲ್ಲವನ್ನೂ ರೆಡಿ ಮಾಡಬೇಕು, ಲಗೇಜ್‌ ತುಂಬಬೇಕು,  ಬೇಕು-ಬೇಡಗಳನ್ನು ನೋಡಿಕೊಳ್ಳಬೇಕು. ಈ ತರಾತುರಿಯಲ್ಲಿ ಏನೇನನ್ನೋ ಮರೆತು, ಗೊಂದಲಕ್ಕೀಡಾಗಬಾರದು ಅಲ್ಲವೇ? ಅದಕ್ಕಾಗಿಯೇ ಕೆಲವು ಟಿಪ್ಸ್‌ ಇಲ್ಲಿದೆ.

1. ಪ್ರದೇಶದ ಬಗ್ಗೆ ಅರಿಯಿರಿ
ಮೊದಲು ನೀವು ಹೋಗುತ್ತಿರುವ ಪ್ರದೇಶ ಫ್ಯಾಮಿಲಿ ಫ್ರೆಂಡ್ಲಿಯೇ ಎಂಬುದನ್ನು ಅರಿಯಿರಿ. ವೆಬ್‌ಸೈಟ್‌ಗೆ ಭೇಟಿ ಕೊಟ್ಟು, ಆ ಪ್ರದೇಶಕ್ಕೆ ಹೋದವರ ಅನುಭವಗಳನ್ನು ಓದಿಕೊಂಡು, ಆ ಊರಿನ ಪರಿಸರ, ಅಲ್ಲಿನ ವಾತಾವರಣ ನಿಮ್ಮ 
ಮನೆಯ ಸದಸ್ಯರಿಗೆ ಸರಿಹೊಂದುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ.

2. ಮುನ್ನೆಚ್ಚರಿಕೆ ವಹಿಸಿ
ಪ್ರವಾಸ ಹೋದಾಗ ಆಕಸ್ಮಿಕವಾಗಿ ಜೊತೆಯಾಗಬಹುದಾದ ಎಲ್ಲ ರೀತಿಯ ಅಪಾಯಗಳು, ವಿದ್ಯಮಾನಗಳನ್ನು ಊಹಿಸಿಕೊಳ್ಳಿ. ಅಪ್ಪ-ಅಮ್ಮನಿಗೆ ಏನಾದರೂ ತೊಂದರೆಯಾದರೆ, ಗುಂಪಿನಿಂದ ಪ್ರತ್ಯೇಕವಾದರೆ, ಅಪರಿಚಿತ ವ್ಯಕ್ತಿಗಳಿಂದ ಸಮಸ್ಯೆ ಎದುರಾದರೆ ಏನು ಮಾಡಬೇಕು, ಹೇಗೆ ವರ್ತಿಸಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಿ.

3. ವೈದ್ಯಕೀಯ ತುರ್ತು ಅಗತ್ಯಗಳು
ಪ್ರವಾಸಕ್ಕಲ್ಲವೇ ಎಂದು ಹಾಗೇ ಎದ್ದು ಹೋಗುವುದು ಸರಿಯಲ್ಲ. ಬಟ್ಟೆ-ಬರೆಗಳನ್ನು ಪ್ಯಾಕ್‌ ಮಾಡುವಾಗ ಅದರೊಂದಿಗೆ ಜ್ವರ, ತಲೆನೋವು, ನೆಗಡಿ, ಸಣ್ಣಪುಟ್ಟ ಗಾಯಗಳಿಗೆ ಬೇಕಾದ ಔಷಧಗಳು, ಬ್ಯಾಂಡೇಡ್‌ಗಳನ್ನೂ ಕಟ್ಟಿಕೊಳ್ಳಿ. ನಿಮ್ಮಲ್ಲಿ ಯಾರಿಗಾದರೂ ಅನಾರೋಗ್ಯ ಕಂಡುಬಂದರೆ ಗೊಂದಲಕ್ಕೀಡಾಗುವುದು ತಪ್ಪುತ್ತದೆ.

4. ಗಾಢ ಬಣ್ಣದ ಉಡುಪು
ಜನಜಂಗುಳಿ ಹೆಚ್ಚಿರುವ ಪ್ರದೇಶಕ್ಕೆ ಹೋಗುವುದಾದರೆ, ಮಕ್ಕಳಿಗೆ ಗಾಢ ಬಣ್ಣದ ಉಡುಪನ್ನು ಧರಿಸಿರಿ. ಒಂದು ವೇಳೆ, ಜನರ ನಡುವೆ ಮಕ್ಕಳೇನಾದರೂ ಕಳೆದುಹೋದರೆ, ಅವರನ್ನು ಹುಡುಕಲು ಸುಲಭವಾಗುತ್ತದೆ. ಆದಷ್ಟು, ಎಲ್ಲಿ ಹೋಗುವುದಿದ್ದರೂ ಎಲ್ಲರೂ ಒಟ್ಟಾಗಿ ಹೋಗಿರಿ. ಮಕ್ಕಳು, ಹಿರಿಯರ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.

5. ಎಲ್ಲವನ್ನೂ ಶೇರ್‌ ಮಾಡಬೇಡಿ
ಟೂರ್‌ ಹೋಗುವುದೇನೋ ಸರಿ. ಆದರೆ, ಹೋದಲ್ಲೆಲ್ಲ ತೆಗೆಸಿಕೊಂಡ ಫ್ಯಾಮಿಲಿ ಫೋಟೋವನ್ನು ಅಪ್‌ಲೋಡ್‌ ಮಾಡುವುದು, ನಾವೆಲ್ಲ ಇಂತಿಷ್ಟು ದಿನ ಟೂರ್‌ ಹೋಗುತ್ತಿದ್ದೇವೆ, ಇಂಥ ದಿನವೇ ವಾಪಸ್‌ ಬರುತ್ತೇವೆ ಎಂಬೆಲ್ಲ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅಭ್ಯಾಸ ಬೇಡ. ಏಕೆಂದರೆ, ಕಳವು ಮಾಡಲು ಹೊಂಚುಹಾಕುವವರಿಗೆ ನೀವು ಮನೆಯಲ್ಲಿಲ್ಲ ಎಂಬ ಮಾಹಿತಿಯನ್ನು ನೀವೇ ಕೊಟ್ಟಂತಾಗುತ್ತದೆ.

– ದಿಯಾ
 

ಟಾಪ್ ನ್ಯೂಸ್

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.