“ಅರಿಶಿನ’ ಪ್ರೇಮಾ


Team Udayavani, Jun 5, 2019, 6:00 AM IST

PREMA5

ಧಾರವಾಡದ ಕಲಘಟಗಿಯ ಪ್ರೇಮಾ ಅವರು, ಅರಿಶಿನದಲ್ಲೇ ಬದುಕಿನ ಖುಷಿಯ ಪರಿಮಳ ಕಂಡುಕೊಂಡವರು. ಎಪ್ಪತ್ತರ ವಯಸ್ಸಿನಲ್ಲೂ ನೀವು ಇವರ ಉತ್ಸಾಹ ನೋಡಬೇಕು…

ಹೆಣ್ಣಿಗೆ ಹಣ ಗಳಿಸುವುದು ಇಂದು ಚಾಲೆಂಜಿನ ವಿಷಯವೇ ಅಲ್ಲ. ನಾಲ್ಕು ಗೋಡೆಗಳ ಮಧ್ಯೆ ಕುಳಿತು, ಆಕೆ ಹಣಕ್ಕಾಗಿ ಕೈಚಾಚುವ ಪ್ರಸಂಗಗಳು ಮೊದಲಿಗಿಂತ ಈಗ ಬಹಳ ಕಡಿಮೆ. ದಿನದಿಂದ ದಿನಕ್ಕೆ ಸ್ತ್ರೀ ಜಗತ್ತು ಸ್ವಾವಲಂಬಿಯಾಗಿ ರೂಪುಗೊಳ್ಳುತ್ತಿರುವ ಈ ಹೊತ್ತಿನಲ್ಲಿ, ಧಾರವಾಡದ ಕಲಘಟಗಿಯ ಪ್ರೇಮಾ ಅವರು ಇದರಿಂದ ಹೊರಗುಳಿದಿಲ್ಲ. ಅರಿಶಿನದಲ್ಲೇ ಬದುಕಿನ ಖುಷಿಯ ಪರಿಮಳ ಕಂಡುಕೊಂಡ ಜಾಣೆ ಇವರು.

ಎಪ್ಪತ್ತರ ವಯಸ್ಸಿನಲ್ಲೂ ನೀವು ಪ್ರೇಮಾ ಅವರ ಉತ್ಸಾಹ ನೋಡಬೇಕು. ಅರಿಶಿನದ ಕೊಂಬುಗಳನ್ನು ಮಶೀನುಗಳಿಗೆ ಹಾಕಿ, ಪುಡಿ ಮಾಡಿಕೊಡುವ ಬಿಡುವಿಲ್ಲದ ಕೆಲಸದಲ್ಲಿ ಅವರಿಗೆ ದಣಿವೆಂಬುದೇ ಇಲ್ಲ. ಮಗ ತಂದುಕೊಟ್ಟ ಮಶೀನಿನಲ್ಲಿ, 1 ಕಿಲೋ ಅರಿಶಿನ ಪುಡಿಮಾಡಿಕೊಟ್ಟರೆ, 30 ರೂ. ಸಂಪಾದನೆ ಆಗುತ್ತದೆ. ಮಗನನ್ನು ಕಳಕೊಂಡ ದುಃಖದಲ್ಲಿರುವ ಅವರಿಗೆ, ಈ ಮಶೀನೇ ಧೈರ್ಯ ಹೇಳುತ್ತಿದೆ.

ಮದುವೆ, ಜಾತ್ರೆಯಂಥ ಸಂದರ್ಭಗಳಲ್ಲಿ ಅರಿಶಿನಕ್ಕೆ ಬೇಡಿಕೆ ಹೆಚ್ಚು. ಆಗ ಪ್ರೇಮಾ ಅವರು ಸಂಪೂರ್ಣವಾಗಿ ಈ ಕಾಯಕದಲ್ಲಿ ಮುಳುಗಿಬಿಡುತ್ತಾರೆ. “ಆ ಸೀಸನ್‌ ಕಳೆದರೆ, ಜನರಿಗೆ ಅಗತ್ಯವಿದ್ದರಷ್ಟೇ ಅರಿಶಿನ ಬಳಕೆಯಾಗುತ್ತದೆ. ಅಷ್ಟು ಡಿಮ್ಯಾಂಡ್‌ ಇರುವುದಿಲ್ಲ’ ಎನ್ನುತ್ತಾರೆ ಪ್ರೇಮಾ.
ಅರಿಶಿನವನ್ನು ಪುಡಿಮಾಡುವುದಷ್ಟೇ ಅಲ್ಲ, ಅದರ ಉಪಯೋಗದ ಬಗ್ಗೆಯೂ ಪ್ರೇಮಾ ವಿವರಣೆ ಕೊಡುತ್ತಾರೆ. “ಭಾರತೀಯ ಮಹಿಳೆಯರಿಗೆ, ಅರಿಶಿನ ಸೌಂದರ್ಯವರ್ಧಕ ಮತ್ತು ಶೃಂಗಾರ ಉತ್ಪನ್ನವಾಗಿ ಬಳಕೆಯಾಗುತ್ತಿದೆ. ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಬಿದ್ದು ಪೆಟ್ಟು ಮಾಡಿಕೊಂಡಾಗ ಗಾಯಕ್ಕೆ, ಹುಣ್ಣುಗಳು ಇದ್ದರೆ, ಅದಕ್ಕೆ ಅರಿಶಿನವೇ ರಾಮಬಾಣ. ಅರಿಶಿನ ಆರೋಗ್ಯಕ್ಕೂ ಒಳ್ಳೆಯದು. ಜೀರ್ಣಕ್ರಿಯೆಯನ್ನು ಚೆನ್ನಾಗಿಡುತ್ತದೆ’ ಎಂದು ವೈದ್ಯರಂತೆ ಸಲಹೆ ಕೊಡುತ್ತಾರೆ.

ಹೌದಲ್ಲವೇ… ಅರಿಶಿನದ ಪ್ರಯೋಜನಗಳು ಹಲವು. ಆ ಕಾರಣಕ್ಕಾಗಿಯೇ ಅಲ್ಲವೇ, ಸಾವಿರಾರು ವರ್ಷಗಳಿಂದ ಭಾರತದಲ್ಲಿ ಇದನ್ನು ಮಸಾಲೆ ಪದಾರ್ಥದಲ್ಲಿ, ಔಷಧ ಸಸ್ಯವಾಗಿ ಬಳಸುತ್ತಿರುವುದು? ಕರುಳಿನಲ್ಲಿರುವ ಹೆಪಾಟೈಟಿಕ್‌ ಅನ್ನು ಪುನಃಶ್ಚೇತನಗೊಳಿಸಿ, ನಂಜಿನ ವಿರುದ್ಧ ಹೋರಾಡುವ ಈ ಅರಿಶಿನ ಅಪ್ಪಟ ನಾಟಿ ವೈದ್ಯ. ಆ ವೈದ್ಯ, ಪ್ರೇಮಾರಂಥ ಬಡ ಮಹಿಳೆಯರಿಗೆ, ಬದುಕಿನ ದಾರಿಯನ್ನೂ ತೋರಿಸಿದ್ದಾನೆ.

ಸುನಿತಾ ಫ‌. ಚಿಕ್ಕಮಠ, ವಿಜಯಪುರ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.