ಸಂಸಾರ ಬೋರ್‌ ಆಯಿತೇ?


Team Udayavani, May 15, 2019, 6:00 AM IST

2

ಸಂಸಾರ ಬೋರ್‌ ಎನಿಸುವ ಮುಂಚೆಯೇ ಪತಿ- ಪತ್ನಿ ನಂಬಿಕೆಯನ್ನು ಪುನರ್‌ ಸ್ಥಾಪಿಸಬೇಕು. ಹೆಣ್ಣುಮಕ್ಕಳು ನಿರ್ಭಿಡೆಯಿಂದ ವರ್ತಿಸಿದರೆ, ಕೆಲ ಪುರುಷರು ಹೈಸ್ಕೂಲು ಹುಡುಗರಂತೆ ಬದಲಾಗುತ್ತಾರೆ! ಅವರಿಗೆ ಬೆಚ್ಚಗಿನ ಅನುಭವ. ತಾಯಿ ಈ ಸೂಕ್ಷ್ಮತೆಗಳನ್ನು ಮಕ್ಕಳಿಗೆ ಕಲಿಸಬೇಕು. ಹೆಣ್ಣುಮಕ್ಕಳು ಇನ್ನೊಬ್ಬರ ಸಂಸಾರದಲ್ಲಿ ತಮ್ಮ ಇತಿಮಿತಿಯನ್ನು ತಿಳಿಯಬೇಕು. ಅಸಹ್ಯ ಅನ್ನಿಸುವ ಸಂಬಂಧವಲ್ಲದಿದ್ದರೂ ಎಡವಟ್ಟಾದ ನಡವಳಿಕೆ ಬಾಂಧವ್ಯಗಳಲ್ಲಿ ಬೇಡ…

ಅಕ್ಕನ ಮಗಳು ನಿಕಿತಾಗೆ ತಾನಿರುವ ಊರಿನಲ್ಲಿ ಕೆಲಸ ಸಿಕ್ಕಿದಾಗ ಸೌಮ್ಯಾ ಬಹಳ ಹೆಮ್ಮೆಪಟ್ಟಿದ್ದಳು. ತನ್ನ ಮನೆಗೇ ನಿಕಿತಾಳನ್ನು ಆದರದಿಂದ ಬರಮಾಡಿಕೊಂಡು, ನಂತರ ಬಾಡಿಗೆ ಮನೆ ಮಾಡಿಕೊಟ್ಟು, ಬೇಕಾದ್ದನ್ನು ಕೊಡಿಸಿದ್ದಳು. ಹೊಸಾ ಬಟ್ಟೆ ಕೊಡಿಸಿದ್ದಳು. ನಿಕಿತಾ ಇದ್ದಷ್ಟು ದಿನ ಮನೆಯಲ್ಲಿ ಲವಲವಿಕೆ- ಖುಷಿ- ನಗು- ಸಂತಸ. ಎಲ್ಲರ ಮನ ಗೆದ್ದಿದ್ದ ನಿಕಿತಾ ಬೇರೆ ಹೋದಮೇಲೆ ಎಲ್ಲರಿಗೂ ಬೇಸರ. ರಜಾ ದಿನಗಳಲ್ಲಿ ಮಾತ್ರವೇ ಬಂದು ಹೋಗುತ್ತಿದ್ದಳು.

ಆಫೀಸಿನಲ್ಲೇ ಸ್ನೇಹಿತರು ಜಾಸ್ತಿಯಾದ ಮೇಲೆ ನಿಕಿತಾ ಮನೆಗೆ ಬರುವುದು ಕಡಿಮೆಯಾಗಿತ್ತು. ಹೇಗಾದರೂ ನಿಕಿತಾ ಜೊತೆಗಿರಲಿ ಎಂಬ ಕಾರಣಕ್ಕೆ ಸೌಮ್ಯಾಳ ಗಂಡ ಪ್ರವಾಸಗಳಿಗೆ/ ಚಾರಣಗಳಿಗೆ ಪ್ಲಾನ್‌ ಮಾಡುವುದು ಅಚಾನಕ್‌ ಜಾಸ್ತಿಯಾಯಿತು. ವಯಸ್ಸಿಗೆ ಬಂದ ನಿಕಿತಾ ಜೊತೆ ಸಲುಗೆಯಿಂದ ಗಂಡ ವರ್ತಿಸುವುದು ಸೌಮ್ಯಾಗೆ ಇಷ್ಟವಿಲ್ಲ. ನಿಕಿತಾ ಜೊತೆ ಸಿನಿಮಾಗಳನ್ನು ನೋಡುವ ಸಲುವಾಗಿ ಮಕ್ಕಳನ್ನೂ ಜೊತೆಗೆ ಕರಕೊಂಡು ಹೋಗಿ ಮಕ್ಕಳಿಗೆ ಸಿನಿಮಾ ಗೀಳು ಹಿಡಿದು, ಪರೀಕ್ಷೆಯಲ್ಲಿ ಅಂಕಗಳು ಕಡಿಮೆಯಾದವು. ಮಕ್ಕಳ ಪ್ರಾಜೆಕ್ಟ್ಗೆ ಸಹಾಯವಿಲ್ಲ, ಆಟೋಟಗಳ ತರಬೇತಿಯಿಂದ ಹಿಂತೆಗೆತ ಮತ್ತು ಸಂಸಾರದ ಇನ್ನಿತರ ಕೆಲಸಗಳಿಗೆ ಗಂಡನ ಬೇಜವಾಬ್ದಾರಿ ಜಾಸ್ತಿಯಾಗಿ, ಸೌಮ್ಯಾಗೆ ಗಂಡನ ಮೇಲೆ ಸಿಟ್ಟು. ಜಗಳವಾಡಿದ್ದಾಳೆ. ಪ್ರಯೋಜನವಾಗಿಲ್ಲ.

ತನ್ನ ಗಂಡ ಮತ್ತು ನಿಕಿತಾ ನಡುವಿನ ಮೆಸೇಜುಗಳು ಸಭ್ಯತೆಯ ಎಲ್ಲೆಯನ್ನು ಮೀರುತ್ತಿವೆ ಎನಿಸಿದಾಗ ಸೌಮ್ಯಾ, ನಿಕಿತಾಗೆ ಸೂಕ್ಷ್ಮವಾಗಿ ಬುದ್ಧಿ ಹೇಳಿದಳು. ನಿಕಿತಾ ಬದಲಾಗಿದ್ದಳು. ಚಿಕ್ಕಮ್ಮನ ಮಾತುಗಳು ಸೌಖ್ಯವೆನಿಸಲಿಲ್ಲ. ಸೌಮ್ಯಾಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ತನ್ನ ಚಾರಿತ್ರ್ಯದ ಬಗ್ಗೆ ಚಿಕ್ಕಮ್ಮ ಅನುಮಾನಪಟ್ಟಳು ಎಂಬ ಅರ್ಥ ಬರುವ ಹಾಗೆ, ನಿಕಿತಾ ತನ್ನ ತಾಯಿಗೆ ಮತ್ತು ಸೌಮ್ಯಾ ಗಂಡನಿಗೆ ಚಾಡಿ ಹೇಳಿದ್ದಾಳೆ. ಮದುವೆಗೆ ಬಂದಿರುವ ಹುಡುಗಿಯ ಬಗ್ಗೆ ಚಿಕ್ಕಮ್ಮ ಅಸೂಯೆಯ ಮಾತುಗಳನ್ನಾಡಬಹುದೇ? ಎಂದು, ಸೌಮ್ಯಾಳ ಅಕ್ಕ, ಸೌಮ್ಯಾಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗಂಡ ತನ್ನ ತಪ್ಪನ್ನು ಮುಚ್ಚಿಹಾಕುವ ಸಲುವಾಗಿ, ಸೌಮ್ಯಾಳನ್ನು ಸಂಕುಚಿತ ಮನೋಭಾವದ ಗೌರಮ್ಮ ಎನ್ನುವಂತೆ ಬಿಂಬಿಸಿ ಇಡೀ ಕುಟುಂಬದಲ್ಲಿ ಸೌಮ್ಯಾಳಿಗೆ ಅವಮಾನ ಮಾಡಿದ್ದಾರೆ.

ಸಂಸಾರದಲ್ಲಿ ಊಟಕ್ಕೆ ಕೊರತೆಯಿಲ್ಲದಿದ್ದರೂ ನೆಮ್ಮದಿ ಹಾಳಾಗುವುದು ಹೀಗೆಯೇ. ಸಂಸಾರ ಬೋರ್‌ ಎನಿಸುವ ಮುಂಚೆಯೇ ಪತಿ- ಪತ್ನಿ ನಂಬಿಕೆಯನ್ನು ಪುನರ್‌ ಸ್ಥಾಪಿಸಬೇಕು. ಹೆಣ್ಣುಮಕ್ಕಳು ನಿರ್ಭಿಡೆಯಿಂದ ವರ್ತಿಸಿದರೆ, ಕೆಲ ಪುರುಷರು ಹೈಸ್ಕೂಲು ಹುಡುಗರಂತೆ ಬದಲಾಗುತ್ತಾರೆ! ಅವರಿಗೆ ಬೆಚ್ಚಗಿನ ಅನುಭವ. ತಾಯಿ ಈ ಸೂಕ್ಷ್ಮತೆಗಳನ್ನು ಮಕ್ಕಳಿಗೆ ಕಲಿಸಬೇಕು. ಹೆಣ್ಣುಮಕ್ಕಳು ಪರ- ಸಂಸಾರದಲ್ಲಿ ತಮ್ಮ ಇತಿಮಿತಿಯನ್ನು ತಿಳಿಯಬೇಕು. ಅಸಹ್ಯ ಅನ್ನಿಸುವ ಸಂಬಂಧವಲ್ಲದಿದ್ದರೂ ಎಡವಟ್ಟಾದ ನಡವಳಿಕೆ ಬಾಂಧವ್ಯಗಳಲ್ಲಿ ಬೇಡ. ಸಂಸಾರದ ಆದ್ಯತೆಯನ್ನು ಪುರುಷರು ಎಂದೂ ಪಕ್ಕಕ್ಕೆ ಸರಿಸಬಾರದು. ತಪ್ಪು ಯಾರದ್ದು ಅನ್ನುವುದಕ್ಕಿಂತ ಜವಾಬ್ದಾರಿ ಮುಂದಿಟ್ಟುಕೊಂಡು, ಬಾಂಧವ್ಯವನ್ನು ಸವಿಯಿರಿ. ಹಾಗೆ ಮಾಡಿದರಷ್ಟೇ, ಸಂಸಾರ ಒಡೆಯುವುದಿಲ್ಲ. ಮಾನಸಿಕ ವ್ಯಥೆ- ಖನ್ನತೆ- ಒತ್ತಡಗಳೂ ಇರುವುದಿಲ್ಲ.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.