ಸಂಸಾರ ಬೋರ್‌ ಆಯಿತೇ?


Team Udayavani, May 15, 2019, 6:00 AM IST

2

ಸಂಸಾರ ಬೋರ್‌ ಎನಿಸುವ ಮುಂಚೆಯೇ ಪತಿ- ಪತ್ನಿ ನಂಬಿಕೆಯನ್ನು ಪುನರ್‌ ಸ್ಥಾಪಿಸಬೇಕು. ಹೆಣ್ಣುಮಕ್ಕಳು ನಿರ್ಭಿಡೆಯಿಂದ ವರ್ತಿಸಿದರೆ, ಕೆಲ ಪುರುಷರು ಹೈಸ್ಕೂಲು ಹುಡುಗರಂತೆ ಬದಲಾಗುತ್ತಾರೆ! ಅವರಿಗೆ ಬೆಚ್ಚಗಿನ ಅನುಭವ. ತಾಯಿ ಈ ಸೂಕ್ಷ್ಮತೆಗಳನ್ನು ಮಕ್ಕಳಿಗೆ ಕಲಿಸಬೇಕು. ಹೆಣ್ಣುಮಕ್ಕಳು ಇನ್ನೊಬ್ಬರ ಸಂಸಾರದಲ್ಲಿ ತಮ್ಮ ಇತಿಮಿತಿಯನ್ನು ತಿಳಿಯಬೇಕು. ಅಸಹ್ಯ ಅನ್ನಿಸುವ ಸಂಬಂಧವಲ್ಲದಿದ್ದರೂ ಎಡವಟ್ಟಾದ ನಡವಳಿಕೆ ಬಾಂಧವ್ಯಗಳಲ್ಲಿ ಬೇಡ…

ಅಕ್ಕನ ಮಗಳು ನಿಕಿತಾಗೆ ತಾನಿರುವ ಊರಿನಲ್ಲಿ ಕೆಲಸ ಸಿಕ್ಕಿದಾಗ ಸೌಮ್ಯಾ ಬಹಳ ಹೆಮ್ಮೆಪಟ್ಟಿದ್ದಳು. ತನ್ನ ಮನೆಗೇ ನಿಕಿತಾಳನ್ನು ಆದರದಿಂದ ಬರಮಾಡಿಕೊಂಡು, ನಂತರ ಬಾಡಿಗೆ ಮನೆ ಮಾಡಿಕೊಟ್ಟು, ಬೇಕಾದ್ದನ್ನು ಕೊಡಿಸಿದ್ದಳು. ಹೊಸಾ ಬಟ್ಟೆ ಕೊಡಿಸಿದ್ದಳು. ನಿಕಿತಾ ಇದ್ದಷ್ಟು ದಿನ ಮನೆಯಲ್ಲಿ ಲವಲವಿಕೆ- ಖುಷಿ- ನಗು- ಸಂತಸ. ಎಲ್ಲರ ಮನ ಗೆದ್ದಿದ್ದ ನಿಕಿತಾ ಬೇರೆ ಹೋದಮೇಲೆ ಎಲ್ಲರಿಗೂ ಬೇಸರ. ರಜಾ ದಿನಗಳಲ್ಲಿ ಮಾತ್ರವೇ ಬಂದು ಹೋಗುತ್ತಿದ್ದಳು.

ಆಫೀಸಿನಲ್ಲೇ ಸ್ನೇಹಿತರು ಜಾಸ್ತಿಯಾದ ಮೇಲೆ ನಿಕಿತಾ ಮನೆಗೆ ಬರುವುದು ಕಡಿಮೆಯಾಗಿತ್ತು. ಹೇಗಾದರೂ ನಿಕಿತಾ ಜೊತೆಗಿರಲಿ ಎಂಬ ಕಾರಣಕ್ಕೆ ಸೌಮ್ಯಾಳ ಗಂಡ ಪ್ರವಾಸಗಳಿಗೆ/ ಚಾರಣಗಳಿಗೆ ಪ್ಲಾನ್‌ ಮಾಡುವುದು ಅಚಾನಕ್‌ ಜಾಸ್ತಿಯಾಯಿತು. ವಯಸ್ಸಿಗೆ ಬಂದ ನಿಕಿತಾ ಜೊತೆ ಸಲುಗೆಯಿಂದ ಗಂಡ ವರ್ತಿಸುವುದು ಸೌಮ್ಯಾಗೆ ಇಷ್ಟವಿಲ್ಲ. ನಿಕಿತಾ ಜೊತೆ ಸಿನಿಮಾಗಳನ್ನು ನೋಡುವ ಸಲುವಾಗಿ ಮಕ್ಕಳನ್ನೂ ಜೊತೆಗೆ ಕರಕೊಂಡು ಹೋಗಿ ಮಕ್ಕಳಿಗೆ ಸಿನಿಮಾ ಗೀಳು ಹಿಡಿದು, ಪರೀಕ್ಷೆಯಲ್ಲಿ ಅಂಕಗಳು ಕಡಿಮೆಯಾದವು. ಮಕ್ಕಳ ಪ್ರಾಜೆಕ್ಟ್ಗೆ ಸಹಾಯವಿಲ್ಲ, ಆಟೋಟಗಳ ತರಬೇತಿಯಿಂದ ಹಿಂತೆಗೆತ ಮತ್ತು ಸಂಸಾರದ ಇನ್ನಿತರ ಕೆಲಸಗಳಿಗೆ ಗಂಡನ ಬೇಜವಾಬ್ದಾರಿ ಜಾಸ್ತಿಯಾಗಿ, ಸೌಮ್ಯಾಗೆ ಗಂಡನ ಮೇಲೆ ಸಿಟ್ಟು. ಜಗಳವಾಡಿದ್ದಾಳೆ. ಪ್ರಯೋಜನವಾಗಿಲ್ಲ.

ತನ್ನ ಗಂಡ ಮತ್ತು ನಿಕಿತಾ ನಡುವಿನ ಮೆಸೇಜುಗಳು ಸಭ್ಯತೆಯ ಎಲ್ಲೆಯನ್ನು ಮೀರುತ್ತಿವೆ ಎನಿಸಿದಾಗ ಸೌಮ್ಯಾ, ನಿಕಿತಾಗೆ ಸೂಕ್ಷ್ಮವಾಗಿ ಬುದ್ಧಿ ಹೇಳಿದಳು. ನಿಕಿತಾ ಬದಲಾಗಿದ್ದಳು. ಚಿಕ್ಕಮ್ಮನ ಮಾತುಗಳು ಸೌಖ್ಯವೆನಿಸಲಿಲ್ಲ. ಸೌಮ್ಯಾಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ತನ್ನ ಚಾರಿತ್ರ್ಯದ ಬಗ್ಗೆ ಚಿಕ್ಕಮ್ಮ ಅನುಮಾನಪಟ್ಟಳು ಎಂಬ ಅರ್ಥ ಬರುವ ಹಾಗೆ, ನಿಕಿತಾ ತನ್ನ ತಾಯಿಗೆ ಮತ್ತು ಸೌಮ್ಯಾ ಗಂಡನಿಗೆ ಚಾಡಿ ಹೇಳಿದ್ದಾಳೆ. ಮದುವೆಗೆ ಬಂದಿರುವ ಹುಡುಗಿಯ ಬಗ್ಗೆ ಚಿಕ್ಕಮ್ಮ ಅಸೂಯೆಯ ಮಾತುಗಳನ್ನಾಡಬಹುದೇ? ಎಂದು, ಸೌಮ್ಯಾಳ ಅಕ್ಕ, ಸೌಮ್ಯಾಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಗಂಡ ತನ್ನ ತಪ್ಪನ್ನು ಮುಚ್ಚಿಹಾಕುವ ಸಲುವಾಗಿ, ಸೌಮ್ಯಾಳನ್ನು ಸಂಕುಚಿತ ಮನೋಭಾವದ ಗೌರಮ್ಮ ಎನ್ನುವಂತೆ ಬಿಂಬಿಸಿ ಇಡೀ ಕುಟುಂಬದಲ್ಲಿ ಸೌಮ್ಯಾಳಿಗೆ ಅವಮಾನ ಮಾಡಿದ್ದಾರೆ.

ಸಂಸಾರದಲ್ಲಿ ಊಟಕ್ಕೆ ಕೊರತೆಯಿಲ್ಲದಿದ್ದರೂ ನೆಮ್ಮದಿ ಹಾಳಾಗುವುದು ಹೀಗೆಯೇ. ಸಂಸಾರ ಬೋರ್‌ ಎನಿಸುವ ಮುಂಚೆಯೇ ಪತಿ- ಪತ್ನಿ ನಂಬಿಕೆಯನ್ನು ಪುನರ್‌ ಸ್ಥಾಪಿಸಬೇಕು. ಹೆಣ್ಣುಮಕ್ಕಳು ನಿರ್ಭಿಡೆಯಿಂದ ವರ್ತಿಸಿದರೆ, ಕೆಲ ಪುರುಷರು ಹೈಸ್ಕೂಲು ಹುಡುಗರಂತೆ ಬದಲಾಗುತ್ತಾರೆ! ಅವರಿಗೆ ಬೆಚ್ಚಗಿನ ಅನುಭವ. ತಾಯಿ ಈ ಸೂಕ್ಷ್ಮತೆಗಳನ್ನು ಮಕ್ಕಳಿಗೆ ಕಲಿಸಬೇಕು. ಹೆಣ್ಣುಮಕ್ಕಳು ಪರ- ಸಂಸಾರದಲ್ಲಿ ತಮ್ಮ ಇತಿಮಿತಿಯನ್ನು ತಿಳಿಯಬೇಕು. ಅಸಹ್ಯ ಅನ್ನಿಸುವ ಸಂಬಂಧವಲ್ಲದಿದ್ದರೂ ಎಡವಟ್ಟಾದ ನಡವಳಿಕೆ ಬಾಂಧವ್ಯಗಳಲ್ಲಿ ಬೇಡ. ಸಂಸಾರದ ಆದ್ಯತೆಯನ್ನು ಪುರುಷರು ಎಂದೂ ಪಕ್ಕಕ್ಕೆ ಸರಿಸಬಾರದು. ತಪ್ಪು ಯಾರದ್ದು ಅನ್ನುವುದಕ್ಕಿಂತ ಜವಾಬ್ದಾರಿ ಮುಂದಿಟ್ಟುಕೊಂಡು, ಬಾಂಧವ್ಯವನ್ನು ಸವಿಯಿರಿ. ಹಾಗೆ ಮಾಡಿದರಷ್ಟೇ, ಸಂಸಾರ ಒಡೆಯುವುದಿಲ್ಲ. ಮಾನಸಿಕ ವ್ಯಥೆ- ಖನ್ನತೆ- ಒತ್ತಡಗಳೂ ಇರುವುದಿಲ್ಲ.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.