ಹಾಲು “ಗಡ್ಡೆ’!


Team Udayavani, Jan 16, 2019, 12:30 AM IST

w-4.jpg

ಮಗುವಿಗೆ ಜನ್ಮ ನೀಡಿದ ತಾಯಿ ಆರೋಗ್ಯವಂತಳಾಗಿದ್ದರೂ ಕೆಲವೊಮ್ಮೆ ಮಗುವಿಗೆ ಎದೆಹಾಲು ಉಣಿಸಲಾರದ ಸ್ಥಿತಿ ಉಂಟಾಗುತ್ತದೆ. ಅದಕ್ಕೆ ಕಾರಣ, ಎದೆಹಾಲಿನ ಗಂಟುಗಳಾಗುವುದು. ಹೆರಿಗೆಯಾಗಿ, ಸುಮಾರು ಒಂದು ತಿಂಗಳಾದ ನಂತರ ತಾಯಿಗೆ ಎದೆಯ/ ಮೊಲೆಯ ಮೇಲಿನ ಭಾಗದಲ್ಲಿ ಅಥವಾ ಕಂಕುಳಲ್ಲಿ ಗಂಟು ಕಾಣಿಸಿಕೊಳ್ಳಬಹುದು. ಇದು ಸರ್ವೇಸಾಮಾನ್ಯ ಕೂಡ. ಇದಕ್ಕೆ ತೀರಾ ಭಯಪಡುವ ಅಗತ್ಯವಿಲ್ಲ. ಇದು ಸಾಮಾನ್ಯ ಸಂಗತಿಯಾದರೂ, ಹಿರಿಯರ ಮಾರ್ಗದರ್ಶನದ ಕೊರತೆಯಿಂದ ನವತಾಯಂದಿರಿಗೆ ದುಃಸ್ವಪ್ನವಾಗಿ ಕಾಡಬಹುದು. ಹೀಗಾಗಿ ಇದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. 

ಗಂಟುಗಳು ಹೇಗಿರುತ್ತವೆ?
*ಮೊದಲನೇ ದಿನ ಸಣ್ಣ ಗಂಟು ಕಾಣಿಸಿಕೊಳ್ಳುತ್ತದೆ. 
*ಹಾಲುಣಿಸಿದಾಗ ಗಂಟು ಸಣ್ಣದಾಗುತ್ತದೆ.
*ಒತ್ತಿದರೆ ಸಣ್ಣದಾಗಿ ನೋವು ಕಂಡು ಬರುತ್ತದೆ. 
*ಕಂಕುಳಲ್ಲಿ ಗಂಟು ಎದ್ದರೆ, ಕೈ ಎತ್ತಿದಾಗ, ಸಣ್ಣ ಕೆಲಸ ಮಾಡುವಾಗ ನೋವಾಗುತ್ತದೆ.
*2-3 ದಿನ ಬಿಟ್ಟರೆ ಗಂಟಿನ ಸುತ್ತ ಕೆಂಪಾಗುತ್ತದೆ ಹಾಗೂ ಕೀವು ತುಂಬಲು ಶುರುವಾಗುತ್ತದೆ. 
*ತಾಯಿಯಲ್ಲಿ ಸಣ್ಣದಾಗಿ ಜ್ವರ ಕಾಣಿಸಿಕೊಳ್ಳಬಹುದು.

ಗಂಟುಗಳಾಗಲು ಕಾರಣ
*ಮಗುವಿನ ಅಗತ್ಯಕ್ಕಿಂತ ಹೆಚ್ಚಾದ ಎದೆಹಾಲಿನ ಉತ್ಪಾದನೆ 
*ಮಗುವು ಮೊಲೆಯನ್ನು ಸರಿಯಾಗಿ ಕಚ್ಚಿಕೊಳ್ಳದಿದ್ದರೆ(poor latching) ಸಾಕಷ್ಟು ಹಾಲು ಹೊರಗೆ ಬರದೆ, ಅಲ್ಲೇ ಉಳಿದು ಗಂಟುಗಳಾಗುವ ಸಾಧ್ಯತೆ. 
*ಮೊಲೆಯ ತೊಟ್ಟು ಸರಿಯಾಗಿಲ್ಲದಿದ್ದರೆ ಅಂದರೆ ಚಪ್ಪಟೆಯಾಗಿದ್ದು (flat nipple) ಇದ್ದಲ್ಲಿ ಮಗುವಿಗೆ ಹಾಲು ಹೀರಲು ಸಾಧ್ಯವಾಗದೆ ಹೋದಾಗ. 
*ಮೊಲೆಯ ತೊಟ್ಟು, ಸತ್ತ ಚರ್ಮದಿಂದಾಗಿ ಮುಚ್ಚಿಕೊಂಡರೆ, ಹಾಲು ಸರಾಗವಾಗಿ ಹೊರಗೆ ಬರುವುದಿಲ್ಲ. 
*ಎದೆಹಾಲು ಉಣಿಸುವಿಕೆಯ ಭಂಗಿ (position) ಸರಿಯಾಗಿರದಿದ್ದರೆ ಮಗುವಿಗೆ ಸಾಕಷ್ಟು ಹಾಲು ಕುಡಿಯಲು ಅಸಾಧ್ಯವಾಗುತ್ತದೆ.

ಪರಿಹಾರ ಏನು?
*ಹಾಲುಣಿಸುವ ಭಂಗಿ (position) ಸರಿಯಾಗಿರಬೇಕು. 
*ಮಗುವು ಸಾಕಷ್ಟು ಹಾಲು ಕುಡಿಯದೇ ಇದ್ದಾಗ, ಅಧಿಕವಾದ ಹಾಲನ್ನು ಕೈಯಿಂದ ಹಿಂಡಿ ತೆಗೆಯಬೇಕು. 
*ಗಂಟು ಕಾಣಿಸಿದ ಕೂಡಲೇ ಕೈಯಿಂದ ಗಂಟಿನ ಮೇಲೆ ನಿಧಾನವಾಗಿ ಮಸಾಜ್‌ ಮಾಡುತ್ತಾ, ಮಗುವಿಗೆ ಹಾಲುಣಿಸಬೇಕು. ಆಗ ಗಂಟು ಕರಗಿ ಹೋಗುತ್ತದೆ. 
*ಎದೆಹಾಲು ಹೆಚ್ಚಿಸುವಂಥ ಆಹಾರವನ್ನು ನಿಯಂತ್ರಿಸಬೇಕು. 
*ಬಿಗಿಯಾದ ಉಡುಪನ್ನು ತ್ಯಜಿಸಿ. 
*ಮೇಲಿನ ಎಲ್ಲ ಮುಂಜಾಗ್ರತೆ ವಹಿಸಿದರೂ ಗಂಟು ಕಂಡುಬಂದಲ್ಲಿ, ಅದರ ಬೆಳವಣಿಗೆಯನ್ನು ಗಮನಿಸುತ್ತಿರಬೇಕು. ನಂತರವೂ ಕೆಂಪಾಗಿದ್ದು ಕಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. 

ಅನುಪಮಾ ಬೆಣಚಿನಮರ್ಡಿ 

ಟಾಪ್ ನ್ಯೂಸ್

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.