ಮಾತೃತ್ವ ರಜೆ ಮುಗಿಸಿ ಆಫೀಸಿಗೆ ಹೊರಟ್ರಾ?


Team Udayavani, Jul 12, 2017, 10:27 AM IST

SUP-1.jpg

ಮಾತೃತ್ವ ರಜೆ ಮುಗಿಸಿ, ಆಫೀಸಿಗೆ ಹೋದಾಗ, ಮನಸ್ಸೆಲ್ಲ ಮನೆಯಲ್ಲಿನ ಮಗುವಿನತ್ತಲೇ ಗಿರಕಿ ಹೊಡೆಯುತ್ತಿರುತ್ತೆ… 

ಮಾತೃತ್ವ ರಜೆ ಮುಗಿಸಿ, ಆರೇಳು ತಿಂಗಳ ನಂತರ ಆಫೀಸಿಗೆ ಕಾಲಿಡ್ತಿದ್ದೀರಿ. ಹೊಸತಾಗಿ ಕೆಲಸಕ್ಕೆ ಸೇರಿದ ಅನುಭವ ನಿಮ್ಮೊಳಗೆ. ಆಫೀಸಿನಲ್ಲಿ ಎಲ್ಲರ ದೃಷ್ಟಿ ನಿಮ್ಮ ಮೇಲೆಯೇ. ಸಹೋದ್ಯೋಗಿ ಗೆಳತಿಯರಂತೂ ನಿಮ್ಮನ್ನು ಮೇಲಿನಿಂದ ಕೆಳಕ್ಕೊಮ್ಮೆ ನೋಡಿರುತ್ತಾರೆ. ನಿಮ್ಮ ಬದಲಾದ ಬಣ್ಣ, ದಪ್ಪ, ತಲೆಕೂದಲು… ಇವೆಲ್ಲದರ ಬಗ್ಗೆಯೂ ಒಂದು ಸುತ್ತಿನ ಮಾತುಕತೆ ಮುಗಿಸಿರುತ್ತಾರೆ. ಆದರೆ, ನಿಮ್ಮ ಗಮನ ಮಾತ್ರ ಅವರೆಲ್ಲರ ಮೇಲಿರೋದಿಲ್ಲ. ಕಾಯ ಮಾತ್ರ ಆಫೀಸಿಗೆ ಬಂದಿದೆ, ಮನಸ್ಸು ಮನೆಯಲ್ಲಿಯೇ ಇದೆಯೆಂಬ ಭಾವ. ಮಾತೃತ್ವ ರಜೆಯ ನಂತರ ಕಾಡುವ ಈ ಸ್ಥಿತಿಯನ್ನು ನಿಭಾಯಿಸುವುದು ಹೇಗೆ?

– ಅತ್ತೆ- ಮಾವ ಮನೆಯಲ್ಲಿಯೇ ಇರ್ತಾರೆ ಅಂದ್ರೆ ನೀವೇ ಅದೃಷ್ಟವಂತರು. ಇಲ್ಲದಿದ್ದರೆ, ಮಗುವನ್ನು ನೋಡಿಕೊಳ್ಳಲು ಯೋಗ್ಯ, ನಂಬಿಕೆಗೆ ಅರ್ಹರನ್ನು ನೇಮಿಸುವ ಹೊಣೆ ನಿಮ್ಮದು. ಮಾತೃತ್ವ ರಜೆಯಲ್ಲಿಯೇ ಅವರನ್ನು ಮನೆಗೆ ಬರಲು ಹೇಳಿ, ಮಗುವಿನ ಆರೈಕೆ ಕುರಿತು, ನಿಮ್ಮ ಕಾಳಜಿಗಳ ಕುರಿತು ಮುಂಚಿತವಾಗಿ ಅವರಿಗೆ ಮನದಟ್ಟು ಮಾಡುವುದು ಮುಖ್ಯ.

– ಮಗುವಿಗೆ ಔಷಧವಿದ್ದರೆ, ವಿಶೇಷವಾಗಿ ತಯಾರಿಸಿದ ಆಹಾರವಿದ್ದರೆ, ಅದನ್ನು ಎಷ್ಟು ಹೊತ್ತಿಗೆ, ಎಷ್ಟು ಸಲ ಕೊಡಬೇಕೆಂಬುದನ್ನು ಮಗುವನ್ನು ಆರೈಕೆ ಮಾಡುವವರಿಗೆ ತಿಳಿಸಿಕೊಡಿ.

– ತಾಯಿಯ ಹೊರತಾಗಿ, ಮಗುವನ್ನು ಇಡೀ ದಿನ ಸಂಭಾಳಿಸುವುದು ಕಷ್ಟದ ಮಾತೇ. ಮಗುವನ್ನು ಹಠ ಮಾಡದಂತೆ ಸುಮ್ಮನೆ ಇರಿಸಲು, ಆಟಿಕೆಗಳನ್ನು ಮನೆಯಲ್ಲಿ ಇಟ್ಟಿರಿ.

– ನೀವು ಬೆಳಗ್ಗೆ ಬೇಗನೆ ಎದ್ದು, ಕಚೇರಿಗೆ ಹೊರಡುವ ಮುನ್ನ ಕನಿಷ್ಠ 5 ಬಾರಿಯಾದರೂ ಮಗುವಿಗೆ ಎದೆಹಾಲುಣಿಸುವುದು ಮುಖ್ಯ.

– ಇದು ಮಳೆಗಾಲವಾದ್ದರಿಂದ, ಮಗುವಿಗೆ ತಣ್ಣೀರಿನ ಉಪಚಾರ ಬೇಡ. ಮಗುವನ್ನು ನೋಡಿಕೊಳ್ಳುವವರಿಗೆ ಆದಷ್ಟು ತುಸು ಬೆಚ್ಚಗಿನ ನೀರನ್ನೇ ಬಳಸಲು ಸೂಚಿಸಿ.

– ಕಚೇರಿಯಲ್ಲಿ ಬಿಡುವಿದ್ದಾಗ, ಕನಿಷ್ಠ 2 ತಾಸಿಗೊಮ್ಮೆ ಮಗುವಿನ ಕ್ಷೇಮ ಸಮಾಚಾರ ತಿಳಿದುಕೊಳ್ಳುವುದು ಉತ್ತಮ.

– ಕಚೇರಿಯ ಕೆಲಸ ಮುಗಿದ ಮೇಲೆ ಸಹೋದ್ಯೋಗಿಗಳೊಂದಿಗೆ ಚರ್ಚೆಗೆ ಕೂರುವುದು, ಹರಟೆಗೆ ನಿಲ್ಲುವುದನ್ನು ಮಾಡಬೇಡಿ.

– ಮಾತೃತ್ವ ರಜೆಯ ನಂತರ ಕಚೇರಿಗೆ ಹೋದಾಗ, ಮನಸ್ಸಿನೊಳಗೆ ಶೂನ್ಯ ಆವರಿಸುತ್ತದೆ. ಹೀಗಾಗದಂತೆ ನೋಡಿಕೊಳ್ಳಲು, ಸಹೋದ್ಯೋಗಿಗಳ ಜತೆಗೆ ಹೆಚ್ಚು ಬೆರೆಯಿರಿ. ಇಲ್ಲವೇ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ.

– ಕಚೇರಿಗೆ ಆದಷ್ಟೇ ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನೇ ಕೊಂಡೊಯ್ಯಿರಿ. ಹೊರಗಿನ ಪದಾರ್ಥವನ್ನು ತಿಂದು, ಆರೋಗ್ಯ ಹೆಚ್ಚುಕಡಿಮೆ ಮಾಡಿಕೊಂಡರೆ, ಮಗುವಿನ ಆರೋಗ್ಯವೂ ಏರುಪೇರಾದಂತೆ ಆಗಬಹುದು.

– ನಿಮ್ಮ ಪತಿಗೂ ನಿಮ್ಮ ಕಚೇರಿಯ, ಮನೆಯ ಹೊಣೆಯ ಬಗ್ಗೆ ಹೇಳಿ, ಮನೆಯ ಕೆಲಸದಲ್ಲಿ ನೆರವಾಗಲು ಕೇಳಿಕೊಳ್ಳಿ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.