ಆಲಿಯಾ ಔದಾರ್ಯ
Team Udayavani, Mar 29, 2019, 6:00 AM IST
ಸಾಮಾನ್ಯವಾಗಿ ಚಿತ್ರತಾರೆಯರು, ಸೆಲೆಬ್ರಿಟಿಗಳು ಎಂದರೆ ಯಾವಾಗಲೂ ಅದ್ದೂರಿ ಜೀವನವನ್ನು ನಿರ್ವಹಣೆ ಮಾಡುತ್ತಿರುತ್ತಾರೆ. ತಮ್ಮ ಆಡಂಬರಕ್ಕಾಗಿ ಕೋಟಿ-ಕೋಟಿ ಖರ್ಚು ಮಾಡುತ್ತಾರೆ. ಅವರಿಗೆ ತಮ್ಮ ಜೊತೆಯಲ್ಲಿರುವವರ ಮೇಲೆ ಕಾಳಜಿ, ಕಳಕಳಿ ಇರುವುದಿಲ್ಲ ಎಂಬ ಅಸಹನೆಯ ಮಾತುಗಳನ್ನು ಆಗಾಗ್ಗೆ ಕೇಳುತ್ತಿರುತ್ತೀರಿ. ಇದಕ್ಕೆ ಇಂಬು ನೀಡುವಂತೆ ಬಹುತೇಕ ಸ್ಟಾರ್, ಸೆಲೆಬ್ರಿಟಿಗಳು ಕೂಡ ನಡೆದುಕೊಳ್ಳುವುದರಿಂದ, ಇಂಥ ವಿಷಯದಲ್ಲಿ ಜನಸಾಮಾನ್ಯರು ಕೂಡ ಮೂಗು ಮುರಿಯುವುದೇ ಹೆಚ್ಚು. ಆದರೆ, ಬಾಲಿವುಡ್ ನಟಿ ಆಲಿಯಾ ಭಟ್ ಮಾತ್ರ ಈ ವಿಷಯದಲ್ಲಿ ಭಿನ್ನವಾಗಿ ನಿಂತು ಈಗ ಸುದ್ದಿಯಾಗುತ್ತಿದ್ದಾರೆ.
ಹೌದು, ವಿಭಿನ್ನ ರೀತಿಯ ಪಾತ್ರಗಳ ಮೂಲಕ ಬಾಲಿವುಡ್ ಸಿನಿಪ್ರಿಯರ ಗಮನ ಸೆಳೆದಿರುವ ನಟಿ ಆಲಿಯಾ ಭಟ್, ಈಗ ತನ್ನ ಔದಾರ್ಯ ಕೆಲಸದ ಮೂಲಕ ಸಿನಿ ಪ್ರಿಯರ ಹೃದಯ ಗೆದ್ದಿದ್ದಾರೆ. ಇತ್ತೀಚೆಗೆ ತನ್ನ ಬಾಯ್ಫ್ರೆಂಡ್ ರಣಬೀರ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಆಲಿಯಾ ಭಟ್, ಹುಟ್ಟುಹಬ್ಬದ ಸಂದರ್ಭದಲ್ಲಿ ಸದಾ ತನ್ನ ಜೊತೆಗಿರುವವರಿಗೆ ಮರೆಯಲಾರದ ಉಡುಗೊರೆ ನೀಡಿದ್ದಾರೆ. ಕಳೆದ ಐದಾರು ವರ್ಷಗಳಿಂದ ತನ್ನ ಕಾರ್ ಡ್ರೈವರ್ ಆಗಿದ್ದ ಸುನೀಲ್ ಹಾಗೂ ತನ್ನ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅನ್ಮೋಲ್- ಇಬ್ಬರಿಗೂ 50 ಲಕ್ಷ ನೀಡಿರುವ ಆಲಿಯಾ ಮನೆ ಖರೀದಿ ಮಾಡಲು ಸಹಾಯ ಮಾಡಿದ್ದಾರೆ. ಇನ್ನು ಆಲಿಯಾ ಭಟ್ ನೀಡಿರುವ ಹಣದಿಂದ ಈ ಇಬ್ಬರೂ ಮುಂಬೈನಲ್ಲಿ ಹೊಸ ಮನೆಯನ್ನು ಬುಕ್ ಮಾಡಿದ್ದಾರೆ.
ಇನ್ನು ಇಷ್ಟೊಂದು ದೊಡ್ಡ ಮೊತ್ತದ ಹಣ ನೀಡಿರುವುದರ ಬಗ್ಗೆ ಮಾತನಾಡಿರುವ ಆಲಿಯಾ, “”ನಾನು ಚಿತ್ರರಂಗಕ್ಕೆ ಬಂದ ಪ್ರಾರಂಭದಿಂದ ಈ ಇಬ್ಬರು ನನ್ನ ಜೊತೆಗೆ ಇದ್ದರು. ಇಷ್ಟು ವರ್ಷ ಈ ಇಬ್ಬರೂ ನನಗಾಗಿ ಕೆಲಸ ಮಾಡಿದ್ದಾರೆ. ಸದಾ ನನ್ನ ನೆರಳಿನಂತೆ ನನ್ನನ್ನು ಕಾಪಾಡುತ್ತಿದ್ದಾರೆ. ಹಾಗಾಗಿ, ಈ ಇಬ್ಬರ ಕುಟುಂಬಕ್ಕಾಗಿ ನಾನು ಮಾಡಿರುವ ಚಿಕ್ಕ ಸಹಾಯ ಇದು” ಎಂದು ಆಲಿಯಾ ಹೇಳಿದ್ದಾರೆ.
ಒಟ್ಟಾರೆ ಆಲಿಯಾ ಮಾಡಿರುವ ಈ ಸಹಾಯದ ವಿಷಯ ಬಿ ಟೌನ್ನಲ್ಲಿ ಸಾಕಷ್ಟು ಸುದ್ದಿಯಾಗಿದ್ದು, ಆಲಿಯಾ ಹೃದಯವಂತಿಕೆಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶಹಬ್ಟಾಸ್ ಎನ್ನುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಆಲಿಯಾ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು, ಆಲಿಯಾ ಕಾರ್ಯ ಇತರರಿಗೂ ಮಾದರಿಯಾಗಲಿ ಎನ್ನುತ್ತಿದ್ದಾರೆ ಸಿನಿಪ್ರಿಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ