ಬೇಸಗೆ ಬೇಗೆ ನಿವಾರಿಸಲು ಆರೋಗ್ಯಕರ ಪಾನೀಯಗಳು
Team Udayavani, May 3, 2019, 6:00 AM IST
ಬೇಸಿಗೆಯ ಈ ದಿನಗಳಲ್ಲಿ ಪಾನಕ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾಯಾರಿಕೆ, ದಣಿವು ನೀಗಿಸಿ ಹೊಟ್ಟೆ ತಂಪಾಗಿಸಿ ಉಲ್ಲಾಸ ನೀಡುವ ಪಾನೀಯಗಳು ಇಲ್ಲಿವೆ…
ಮಾವಿನ ಹಣ್ಣಿನ ಲಸ್ಸಿ
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣು- 2, ಸಕ್ಕರೆ- 4 ಚಮಚ, ದಪ್ಪ ಮೊಸರು- 1 ಕಪ್, ಹಾಲು- 1/2 ಕಪ್, ಏಲಕ್ಕಿ ಸ್ವಲ್ಪ , ಐಸ್ ಚೂರು 4-5.
ತಯಾರಿಸುವ ವಿಧಾನ: ಮಾವಿನ ಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿ ಜಾರ್ನಲ್ಲಿ ಹಾಕಿ ರುಬ್ಬಿ ಪಾತ್ರೆಗೆ ಹಾಕಿ. ಮೊಸರನ್ನು ಮಿಕ್ಸಿಗೆ ಹಾಕಿ ಗೊಟಾಯಿಸಿ ಸಕ್ಕರೆ, ಬಿಸಿಮಾಡಿ ತಣಿಸಿದ ಹಾಲು, ಏಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರುಬ್ಬಿದ ಮಾವಿನ ಪಾತ್ರೆಗೆ ಹಾಕಿ. ಕುಡಿಯುವಾಗ ಒಂದೆರಡು ಐಸ್ಕ್ಯೂಬ್ ಹಾಕಿ ಫ್ರಿಜ್ನಲ್ಲಿಟ್ಟು ತಣಿಸಿಯೂ ಕುಡಿಯಬಹುದು.
ಕೋಕಂ (ಪುನರ್ಪುಳಿ) ಜ್ಯೂಸ್
ಬೇಕಾಗುವ ಸಾಮಗ್ರಿ: ಒಣ ಪುನರ್ಪುಳಿ ಒಟೆ 5-6, ಸಕ್ಕರೆ 5-6 ಚಮಚ, ಕಾಮಕಸ್ತೂರಿ ಬೀಜ- 2 ಚಮಚ, ಏಲಕ್ಕಿ ಪುಡಿ- 1 ಚಮಚ.
ತಯಾರಿಸುವ ವಿಧಾನ: ಪುನರ್ಪುಳಿ ಓಟೆಯನ್ನು 4 ಕಪ್ ನೀರಿನಲ್ಲಿ ಕುದಿಸಿ ತಣಿಸಿರಿ. ಕಾಮಕಸ್ತೂರಿ ಬೀಜ, ಸಕ್ಕರೆ, ಏಲಕ್ಕಿ ಹುಡಿ ಹಾಕಿ ಫ್ರಿಜ್ನಲ್ಲಿಡಿ. ತಣ್ಣಗಾದ ಮೇಲೆ ಕುಡಿಯಿರಿ. ಇದರ ಸೇವನೆಯಿಂದ ಪಿತ್ತ ಶಮನವಾಗುವುದು. ಅಲ್ಲದೆ ಬಾಯಾರಿಕೆ ನೀಗುವುದು.
ಐಸ್ ಎಪ್ಪಲ್ (ತಾಟೆನುಂಗು) ಶರಬತ್
ಬೇಕಾಗುವ ಸಾಮಗ್ರಿ: ತಾಟೆನುಂಗು- 4, ಸಕ್ಕರೆ- 2 ಚಮಚ, ಲಿಂಬೆರಸ- 2 ಚಮಚ, ಏಲಕ್ಕಿ ಪುಡಿ.
ತಯಾರಿಸುವ ವಿಧಾನ: ಸಿಪ್ಪೆ ತೆಗೆದ ತಾಟೆನುಂಗಿನ ಚೂರು, ಸಕ್ಕರೆ, ಏಲಕ್ಕಿ ಹುಡಿ ಮಿಕ್ಸಿಯಲ್ಲಿ ಹಾಕಿ ತೆಳುಮಾಡಿ ಲಿಂಬೆರಸ ಹಾಕಿ ಫ್ರಿಜ್ನಲ್ಲಿಟ್ಟು ತಣಿಸಿ ಕುಡಿದರೆ ಬೇಸಿಗೆಯ ಬೇಗೆ ನೀಗುವುದು.
ಸಿಯಾಳ ಶರಬತ್
ಬೇಕಾಗುವ ಸಾಮಗ್ರಿ: ಸಿಯಾಳದ ತಿರುಳು- 1 ಕಪ್, ಸಕ್ಕರೆ- 2 ಚಮಚ, ಏಲಕ್ಕಿ ಹುಡಿ, ಲಿಂಬೆರಸ- 2 ಚಮಚ, ಕಾಳುಮೆಣಸಿನ ಹುಡಿ- 1 ಚಮಚ.
ತಯಾರಿಸುವ ವಿಧಾನ: ಸಿಯಾಳದ ತಿರುಳು, ಸಕ್ಕರೆ, ಏಲಕ್ಕಿ ಹುಡಿ, ಕಾಳುಮೆಣಸಿನ ಪುಡಿ, ಲಿಂಬೆರಸ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ ಪಾತ್ರೆಯಲ್ಲಿ ಹಾಕಿ ಫ್ರಿಜ್ನಲ್ಲಿಟ್ಟು ತಣಿಸಿ ಕುಡಿಯಿರಿ.
ಗುಲಾಬಿದಳ ಲಸ್ಸಿ
ಬೇಕಾಗುವ ಸಾಮಗ್ರಿ: ಮಜ್ಜಿಗೆ- 2 ಕಪ್, ಸಕ್ಕರೆ- 2 ಚಮಚ, ಗುಲಾಬಿ ದಳಗಳು, ಹಸಿ ಶುಂಠಿರಸ- 2 ಚಮಚ.
ತಯಾರಿಸುವ ವಿಧಾನ: ಗುಲಾಬಿ ದಳಗಳನ್ನು ನಯವಾಗಿ ರುಬ್ಬಿ ಮಜ್ಜಿಗೆ, ಸಕ್ಕರೆ, ಶುಂಠಿ ರಸ ಬೆರೆಸಿ ತಣಿಸಿ ಕುಡಿದರೆ ಬಾಯಾರಿಕೆ, ದಣಿವು ಶಮನವಾಗುವುದು.
– ಎಸ್. ಜಯಶ್ರೀ ಶೆಣೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ