ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು


Team Udayavani, Mar 20, 2020, 5:26 AM IST

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿನನಿತ್ಯದ ಕೆಲಸಗಳಲ್ಲಿ ನಾವು ಎಷ್ಟೊಂದು ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಳಸುತ್ತೇವೆ. ಅವುಗಳನ್ನು ಕಡಿಮೆ ಮಾಡಿಕೊಂಡರೆ ಅತ್ತ ಪರಿಸರಕ್ಕೂ ಒಳ್ಳೆಯದು. ಇತ್ತ ವೈಯಕ್ತಿಕ ಆರೋಗ್ಯಕ್ಕೂ ಒಳ್ಳೆಯದು.

ಮನೆ ನಿರ್ವಹಣೆಯ ವಿಧಾನ ಇತ್ತೀಚೆಗಿನ ವರ್ಷಗಳಲ್ಲಿ ಅಗಾಧವಾಗಿ ಬದಲಾಗಿದೆ. ಮಣ್ಣು, ಕೆಸರಿನ ಸ್ಪರ್ಶವಿಲ್ಲದೇ ಬೆಳೆಯುವ ಮಕ್ಕಳಿಗೆ ಪ್ರಕೃತಿಯನ್ನು ಪ್ರೀತಿಸುವುದಕ್ಕೆ ಕಲಿಸುವುದಾದರೂ ಹೇಗೆ. ಆದರೆ, ಕನಿಷ್ಠಪಕ್ಷ ಪ್ರಕೃತಿಗೆ ಹಾನಿ ಮಾಡದಂತೆ ಜೀವನ ನಿರ್ವಹಣೆ ಮಾಡುವುದನ್ನಾದರೂ ಕಲಿಸುವುದು ಅನಿವಾರ್ಯ.

ಇತ್ತೀಚೆಗಿನ ಎರಡು ದಶಕಗಳಲ್ಲಿ ತುಂಬ ಅಗ್ಗವಾಗಿರುವ ಪ್ಲಾಸ್ಟಿಕ್‌, ಮಣ್ಣು ಮತ್ತು ನೀರಿಗೆ ಸಂಚಕಾರವನ್ನು ತಂದೊಡ್ಡುತ್ತಿದೆ. ಪ್ಲಾಸ್ಟಿಕ್‌ನ ವಿಪರೀತ ಬಳಕೆಯನ್ನು ನಿಯಂತ್ರಿಸುವ ಸಂಯಮವನ್ನು ಪ್ರತೀ ಮನೆಯಲ್ಲಿಯೂ ರೂಢಿಸಿಕೊಳ್ಳಬೇಕಾಗಿದೆ. ಮನೆಯಲ್ಲಿ ಈ ಬಗ್ಗೆ ಮಕ್ಕಳಿಗೆ ತಿಳಿಹೇಳುವ, ಪ್ಲಾಸ್ಟಿಕ್‌ನಿಂದ ಆದಷ್ಟು ದೂರ ಇರಿಸುವ ಕೆಲಸ ಆಗಬೇಕಾಗಿದೆ.

ಸಾಮಾನ್ಯವಾಗಿ ಹಾಲುಹಣ್ಣು, ದಿನಸಿ ಸಾಮಾನು ಖರೀದಿ, ತರಕಾರಿ ಖರೀದಿ ಸಂದರ್ಭದಲ್ಲಿ ಪ್ಲಾಸ್ಟಿಕ್‌ನ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಸಾಧ್ಯ. ಮನೆ ನಿರ್ವಹಣೆಯ ಸೂತ್ರ ವಹಿಸಿಕೊಂಡಿರುವ ಮಹಿಳೆ ಅಥವಾ ಪುರುಷರು ಈ ಬಗ್ಗೆ ಮುತುವರ್ಜಿಯಿಂದ ಯೋಚಿಸಿದರೆ ಕಸದ ಪ್ರಮಾಣ ಕಡಿಮೆ ಮಾಡಬಹುದು.

ಮುಂಜಾನೆ ಹಾಲು ತರಲು ಒಂದು ಪ್ಲಾಸ್ಟಿಕ್‌ ಕವರ್‌, ಮಧ್ಯಾಹ್ನ ಊಟ ಪ್ಯಾಕ್‌ ಮಾಡಲು ಒಂದು, ಸಂಜೆ ತರುವ ಸಾಮಾನುಗಳಿಗೆ ಇನ್ನೊಂದು, ರಾತ್ರಿ ಊಟಕ್ಕೆ ಪಾರ್ಸೆಲ್‌ ತರಲು ಮಗದೊಂದು- ಹೀಗೆ ಪ್ಲಾಸ್ಟಿಕ್‌ಗಳ ರಾಶಿಯನ್ನೇ ತಂದು ಅವನ್ನು ಕಸದಬುಟ್ಟಿಗೆ ಎಸೆಯುತ್ತೇವೆ.

ಪ್ರತಿನಿತ್ಯ ಹಾಲು ತರಲು ಕೈಚೀಲ, ಊಟದ ಬುತ್ತಿಗೆ ಮತ್ತೂಂದು ಬಟ್ಟೆಯ ಚೀಲ, ಹೊಟೇಲ್‌ನಿಂದ ಪಾರ್ಸೆಲ್‌ ತರಲು ತೆರಳುವಾಗ ಮನೆಯ ಡಬ್ಬಿಯನ್ನು ಕೊಂಡೊಯ್ಯುವ ಪರಿಪಾಠ ಇದ್ದರೆ ಎಷ್ಟೊಂದು ಪ್ಲಾಸ್ಟಿಕ್‌ ಬಳಕೆ ಕಡಿಮೆಯಾಗುತ್ತದೆ!

ಒಂದುವೇಳೆ ಚೀಲ ಮರೆತು ತರಕಾರಿ ತರಲು ಹೋದರೆ ಅಲ್ಲಿ ತೆಗೆದುಕೊಂಡ ಚೀಲವನ್ನು (ಪ್ಲಾಸ್ಟಿಕ್‌ ಆದರೂ) ಬಿಸಾಡದೆ ಮರುಬಳಕೆ ಮಾಡಬಹುದು. “ಮನೆಯೇ ಮೊದಲ ಪಾಠಶಾಲೆ, ತಾಯಿ ತಾನೇ ಮೊದಲ ಗುರು’ ಎಂಬಂತೆ ಅ,ಆ,ಇ,ಈ ಕಲಿಸಿದ ಅಮ್ಮನಿಗೆ ಪ್ಲಾಸ್ಟಿಕ್‌ ಬಳಸದಂತೆ ಜಾಗೃತಿಯ ಪಾಠ ಹೇಳಿಕೊಡುವುದು ಕಷ್ಟವೇನಲ್ಲ.

ಬೇಕೆಂದು ಹಠಮಾಡಿ, ಖರೀದಿಸಿದ ಚಾಕಲೇಟು, ಬಿಸ್ಕೆಟ್‌, ಚಿಪ್ಸ್‌ ತಿಂದು ಬಿಸಾಡುವ ಪ್ಲಾಸ್ಟಿಕ್‌ ಹೊರಕವಚವನ್ನು ಕಸದಬುಟ್ಟಿಗೆ ಹಾಕುವ ಪರಿಪಾಠ ಕಲಿಸಲೇ ಬೇಕು. ಹಳೇ ಬಟ್ಟೆಯನ್ನೇ ಬಳಸಿ ಕೈಚೀಲ ತಯಾರಿಸುವ ವಿಧಾನವನ್ನು ಮಕ್ಕಳಿಗೆ ಕಲಿಸಿದರೆ ಅವರೂ ಕೌಶಲವಂತರಾಗುತ್ತಾರೆ. ಪರಿಸರಕ್ಕೆ ಅದು ಪೂರಕ ಎಂಬ ಜ್ಞಾನವೂ ಅವರಲ್ಲಿ ಮೂಡುತ್ತದೆ. ಅಂತಹ ವಸ್ತುಗಳನ್ನು ಉಪಯೋಗಿಸಲು ಕಲಿಸಿದರೆ ಅವರಿಗೆ ಉತ್ತಮ ಚಟುವಟಿಕೆ ಮಾಡಿಸಿದಂತೆಯೂ ಸರಿ, ಪ್ಲಾಸ್ಟಿಕ್‌ ಬಳಕೆ ನಿಷೇಧವನ್ನು ಪಾಲಿಸಿದಂತೆಯೂ ಆಯಿತು. ಮಕ್ಕಳಿಗೆ ಈ ರೀತಿಯ ಜೀವನ ಶೈಲಿ ತಿಳಿಸಿದಂತೆಯೂ ಆಯಿತು.

ಪ್ಲಾಸ್ಟಿಕ್‌ನಿಂದ ದೂರ ಇರುವುದು ಕಷ್ಟವಲ್ಲ
ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಿದರೆ ಬದುಕೇ ಕಷ್ಟ ಎನ್ನುವ ಹಾಗಿಲ್ಲ. ಸ್ವಲ್ಪವೇ ಕಾಳಜಿ ವಹಿಸಿದರೂ ಸಾಕು- ಕಸದ ಪ್ರಮಾಣ ಕಡಿಮೆ ಮಾಡುವುದು ಸಾಧ್ಯ. ಮನೆಯಿಂದ ಆಚೆ ಹೋಗುವಾಗ ಕುಡಿಯಲು ನೀರು ಕೊಂಡೊಯ್ಯುವುದು, ಸ್ಟೀಲ್‌ ಅಥವಾ ತಾಮ್ರದ ಬಾಟಲಿಗಳನ್ನು ಬಳಸುವುದು, ಪ್ಲಾಸ್ಟಿಕ್‌ ಬಾಟಲಿಯೇ ಆದರೂ ಮರುಬಳಕೆಗೆ ಯೋಗ್ಯ ಬಾಟಲಿಯನ್ನು ತೊಳೆದು ಮತ್ತೆ ಮತ್ತೆ ಬಳಸುವುದು ಉತ್ತಮ. ಹೀಗೆ ಮಾಡಿದಾಗ, ನಾವು ಕಲುಷಿತ ನೀರು ಕುಡಿಯುವ ಸಾಧ್ಯತೆಯೂ ಕಡಿಮೆ. ಸ್ವತ್ಛತೆಯನ್ನೂ ಕಾಪಾಡಿಕೊಂಡಂತೆ ಆಗುತ್ತದೆ.

ಮನೆಯಲ್ಲಿ ಶುಭಕಾರ್ಯಗಳಿರುವಾಗ ನೀರು ಪೂರೈಸಲು ಪ್ಲಾಸ್ಟಿಕ್‌ ಕಪ್‌ ಬಳಸಬೇಡಿ. ಪಂಕ್ತಿಯಲ್ಲಿ ನೀರು ಕೊಡುತ್ತ ಬರುವ ಹಳೇ ಪದ್ಧತಿಯೇ ಉತ್ತಮ. ಅಗತ್ಯ ಇದ್ದವರಿಗೆ ಬಿಸಿನೀರು ಕೊಟ್ಟರಾಯಿತು.

ಮನೆಯ ತಿಂಗಳ ದಿನಸಿ ಸಾಮಾನುಗಳನ್ನು ತರಲೆಂದು ಹೋಗುವಾಗ ಆದಷ್ಟು ದೊಡ್ಡ ಪ್ಯಾಕಿನ ಸಾಮಾನುಗಳನ್ನು ಅಂದರೆ ಶ್ಯಾಂಪೂ, ಡಿಟರ್ಜೆಂಟ್‌ ಇತ್ಯಾದಿ ಸಾಮಾನುಗಳ ಸ್ಯಾಚೆಟ್‌ ತೆಗೆದುಕೊಳ್ಳುವ ಬದಲು ಬಾಟಲಿ, ಅಥವಾ ದೊಡ್ಡ ಪ್ಯಾಕ್‌ ತೆಗೆದುಕೊಳ್ಳಬಹುದು. ಸಣ್ಣ ಸಣ್ಣ ಪ್ಲಾಸ್ಟಿಕ್‌ ಸ್ಯಾಚೆಟ್‌ಗಳನ್ನು ಕತ್ತರಿಸಿ, ಅದು ಕಸದ ರಾಶಿಗೆ ಸೇರುವುದನ್ನು ತಪ್ಪಿಸಬಹುದು. ಪ್ರವಾಸದ ಸಮಯದಲ್ಲಿ ಸಣ್ಣ ಪ್ಯಾಕೆಟ್‌ಗಳ ಅನಿವಾರ್ಯತೆ ಏನೋ ಇರುತ್ತದೆ. ಆದರೆ, ಬೇರೆ ದಿನಗಳಲ್ಲಿ ಅವುಗಳ‌ನ್ನು ಆದಷ್ಟು ದೂರಮಾಡಿದರೆ ಒಳ್ಳೆಯದಲ್ಲವೇ? ಕೆಲವೊಮ್ಮೆ ದೊಡ್ಡ ಪ್ಯಾಕ್‌ಗಳನ್ನು ಕೊಳ್ಳುವಾಗ ಬೆಲೆಯೂ ಕಡಿಮೆ ಆಗಿರುತ್ತದೆ. ರಿಯಾಯತಿಯೂ ದೊರೆಯಬಹುದು.

ಮನೆಗೆ ತುಂಬಾ ಜನ ನೆಂಟರು ಬಂದಾಗ ಅವರಿಗೆ ನೀಡಲು ದೊಡ್ಡ ಪ್ರಮಾಣದಲ್ಲಿ ಹಣ್ಣಿನ ರಸವನ್ನು ತಯಾರಿಸಿ ನೀಡಲು ಕಷ್ಟವೆನಿಸಿದರೆ ನಿಂಬೆ ಶರಬತ್ತು ಮಾಡಿದರೆ ಅವರ ಆರೋಗ್ಯಕ್ಕೂ ಉತ್ತಮ. ಕಾಬೋìನೇಟೆಡ್‌ ಪಾನೀಯಗಳನ್ನು ತರಿಸಿ ಫ್ರಿಜ್‌ನಲ್ಲಿ ಇಡುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಲ್ಲ.

ಮಕ್ಕಳಿಗೆ ಮನೆಯಲ್ಲಿಯೇ ಹಣ್ಣಿನ ರಸ ಕೊಡುವುದರಿಂದ ಅವರಿಗೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. ಈ ಕೆಲಸದಲ್ಲಿ ಮಕ್ಕಳನ್ನು ಭಾಗಿಯಾಗಿಸಿದರೆ ಅವರಿಗೆ “ನಾವೇ ಮಾಡಿದ ಪಾನೀಯ’ ಎಂಬ ಹೆಮ್ಮೆ ಮೂಡುತ್ತದೆ. ಮನೋಲ್ಲಾಸದ ಕಾಯಕ ಇದು.

ಕಳೆದುಹೋದದ್ದು ಚಿನ್ನ !
ಹಳೆಯ ಫ್ಯಾಶನ್‌ ಎನಿಸಿದರೂ “ಓಲ್ಡ… ಈಸ್‌ ಗೋಲ್ಡ…’ ಎಂಬುದು ಎಲ್ಲರೂ ನಂಬಿರುವ ಸಮಾಚಾರವೇ ಆಗಿದೆ. ಓಲ್ಡ… ಫ್ಯಾಷನ್‌ ಎಂದು ಮಾತನಾಡಿಕೊಳ್ಳುವವರು ಮೂರನೇ ದಿನ ನಿಮ್ಮನ್ನೇ ಅನುಸರಿಸುತ್ತಾರೆ. ಪ್ರಯಾಣ ಸಮಯದಲ್ಲಿ ತಿನ್ನಲೆಂದು ಕೊಂಡ ಕುರುಕುಲು ತಿಂಡಿ, ಹಣ್ಣು ಇತ್ಯಾದಿಗಳ ಕವರುಗಳನ್ನು ರಸ್ತೆಯಲ್ಲೇ ವಾಹನದ ಕಿಟಕಿಯಿಂದ ಬಿಸಾಡುವ ಬದಲು, ಬಸ್ಸು, ರೈಲು ನಿಲ್ದಾಣಗಳಲ್ಲೋ ಅಥವಾ ಉಳಿದುಕೊಂಡ ಹೊಟೇಲ್‌ ಕೋಣೆಯ ಕಸದಬುಟ್ಟಿಗೆ ಹಾಕುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು. ಆ ಸಮಯದಲ್ಲಿ ಕುಡಿಯಲು ಹಣ್ಣಿನ ರಸವನ್ನು ಪಡೆದುಕೊಳ್ಳುವಾಗ ಪ್ಲಾಸ್ಟಿಕ್‌ ಸ್ಟ್ರಾ ಬಳಕೆ ಬೇಡ. ಕಚ್ಚಿ ಕುಡಿದರೆ ರುಚಿ ಜಾಸ್ತಿ. ತೀರಾ ಅಗತ್ಯವಿದ್ದರೆ ಪೇಪರ್‌ ಸ್ಟ್ರಾ ಕೇಳಿಪಡೆಯಿರಿ.

ಎಲ್ಲೆಲ್ಲಿ ಬಿಸಾಡಿದ ಕವರುಗಳು, ಸ್ಟ್ರಾಗಳು ಪ್ರಾಣಿಗಳ ಹೊಟ್ಟೆ ಸೇರಿ ಅವುಗಳ ಪ್ರಾಣಿಹಾನಿಯಾಗುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದುತ್ತೇವೆ. ಆದ್ದರಿಂದ ಅವುಗಳ ಮೇಲಿನ ಕರುಣೆಯಿಂದಲಾದರೂ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ.
ನೀವು ಕಾರಿನಲ್ಲಿ ಅಥವಾ ದ್ವಿಚಕ್ರವಾಹನದಲ್ಲಿ ಪ್ರಯಾಣಿಸುವಿರಾದರೆ ಅದರಲ್ಲಿ ಬ್ಯಾಗನ್ನೋ, ಅಥವಾ ಹಿಂದೆ ಪ್ಯಾಕ್‌ ಮಾಡಿತಂದಿರುವ ರಟ್ಟಿನ ಬಾಕ್ಸ್‌ ಅನ್ನೋ ಇಟ್ಟುಕೊಂಡರೆ, ಸಾಮಾನು ತರುವಾಗ ಅದರಲ್ಲಿ ಹಾಕಿ ತರಲು ಸಾಧ್ಯ.

ಹಳೆ ಸಾಮಾನುಗಳನ್ನು ಸಾಧ್ಯವಾದಷ್ಟು ಮರುಬಳಕೆ ಮಾಡಿ. ಅವು ನೋಡುವುದಕ್ಕೆ ಚಂದವಿಲ್ಲದೇ ಇದ್ದರೂ ಪರವಾಗಿಲ್ಲ, ಬಳಕೆಯೋಗ್ಯವಾಗಿ ಇರುವಾಗಲೇ ಅವುಗಳನ್ನು ಕಸದ ಬುಟ್ಟಿಗೆ ಎಸೆಯಬೇಡಿ. ಖಾಲಿ ಡಬ್ಬಿಗಳನ್ನು ಬಳಸಿ ಗಿಡನೆಡುವ ಹವ್ಯಾಸ ನಿಜಕ್ಕೂ ಉತ್ತಮವಾದುದು. ಇದರಿಂದ ಅಡುಗೆಗೆ ಉತ್ತಮ ತರಕಾರಿಯೂ ಸಿಗುತ್ತದೆ. ಕಸದ ಪ್ರಮಾಣವನ್ನು ತಗ್ಗಿಸಿದಂತಾಗುತ್ತದೆ.

“ನಾನು ಮಾತ್ರ ಈ ಕಾಳಜಿ ಮಾಡಿದರೆ ಜಗತ್ತು ಬದಲಾಗುತ್ತದೆಯೇ’ ಎಂಬ ಸಿನಿಕತನ ಬೇಡ. ಪ್ರತಿಯೊಬ್ಬರೂ ಕೈ ಜೋಡಿಸಿದರೆ ಬದಲಾವಣೆ ಅಸಾಧ್ಯವಲ್ಲ. ಇತರರಿಗೆ ಪ್ರೇರಣೆ ಆಗುವ ದೃಷ್ಟಿಯಿಂದಲಾದರೂ ಪ್ಲಾಸ್ಟಿಕ್‌ನಿಂದ ದೂರ ಇರುವ ನಿರ್ಧಾರ ಮಾಡಿ.

ಪ್ಲಾಸ್ಟಿಕ್‌ನಿಂದ ದೂರ ಆರೋಗ್ಯಕ್ಕೆ ಹತ್ತಿರ
.ಕಾರ್ಬೋನೇಟೆಡ್‌ ಪಾನೀಯಗಳನ್ನು ಕುಡಿಯಬೇಡಿ.
.ಮನೆಯಲ್ಲಿಯೇ ಹಣ್ಣಿನ ರಸ ತಯಾರಿಸಿ
.ಸಮಾರಂಭಗಳಲ್ಲಿ ಸ್ಟೀಲ್‌ ಲೋಟಗಳಲ್ಲಿಯೇ ನೀರು ಹಂಚಿ.
.ತರಕಾರಿ ತರಲು ಮನೆಯಿಂದಲೇ ಚೀಲ ಕೊಂಡು ಹೋಗಿ
.ತ್ಯಾಜ್ಯವನ್ನು ಬಳಸಿ ತರಕಾರಿ ಬೆಳೆಸುವ ಪ್ರಯತ್ನ ಮಾಡಿ.

ಸಾವಿತ್ರಿ ಶ್ಯಾನುಭಾಗ್‌

ಟಾಪ್ ನ್ಯೂಸ್

Mudigere ಮನೆಗೆ ನುಗ್ಗಿದ ಇನ್ನೋವಾ ಕಾರು; ಕುಸಿದು ಬಿದ್ದ ಮನೆಯ ಗೋಡೆ

Mudigere ಮನೆಗೆ ನುಗ್ಗಿದ ಇನ್ನೋವಾ ಕಾರು; ಕುಸಿದು ಬಿದ್ದ ಮನೆಯ ಗೋಡೆ

web-29-goosberry

Gooseberry Benefits: ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ…

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 728 ಅಂಕ ಏರಿಕೆ, ನಿಫ್ಟಿ 20,100

Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 728 ಅಂಕ ಏರಿಕೆ, ನಿಫ್ಟಿ 20,100

Sandalwood: ‘ಕಾಟೇರʼದಲ್ಲಿ ಪಕ್ಕಾ ಲೋಕಲ್‌ ಹೈದನಾದ ʼದಾಸʼ: ರಿಲೀಸ್ ಡೇಟ್ ಅನೌನ್ಸ್

Sandalwood: ‘ಕಾಟೇರʼದಲ್ಲಿ ಪಕ್ಕಾ ಲೋಕಲ್‌ ಹೈದನಾದ ʼದಾಸʼ: ರಿಲೀಸ್ ಡೇಟ್ ಅನೌನ್ಸ್

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Bribe: ಪಹಣಿ ಪತ್ರ ತಿದ್ದುಪಡಿಗೆ ಲಂಚ… ಎಸಿ ಕಚೇರಿ ಎಸ್‌ಡಿಸಿ ಲೋಕಾಯುಕ್ತ ಬಲೆಗೆ

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು…!

Thirthahalli: ಬಾವಿಕೈಸರು ಬಳಿ ಟ್ರಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಮೃತ್ಯು

Kollywood: 4 ಬಾರಿ ರಜಿನಿಕಾಂತ್‌ ಜೊತೆ ನಟಿಸುವ ಅವಕಾಶ ಬಂದರೂ ತಿರಸ್ಕರಿಸಿದ ಖ್ಯಾತ ನಟಿ ಈಕೆ

Kollywood: 4 ಬಾರಿ ರಜಿನಿಕಾಂತ್‌ ಜೊತೆ ನಟಿಸುವ ಅವಕಾಶ ಬಂದರೂ ತಿರಸ್ಕರಿಸಿದ ಖ್ಯಾತ ನಟಿ ಈಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಬನ್‌-ಪ್ರಿಯೆ

ಬನ್‌-ಪ್ರಿಯೆ

MUST WATCH

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

udayavani youtube

ಗುರುಕಿರಣ್ ರಿಗೆ ಬೆಂಗಳೂರು ಕಂಬಳದ ಮೇಲಿನ ಆಸಕ್ತಿಯ ಹಿಂದಿದೆ ಅದೊಂದು ಕಾರಣ

udayavani youtube

ಕಂಬಳದ ಬಗ್ಗೆ ಸಮಿತಿಯವರ ಮಾತು

ಹೊಸ ಸೇರ್ಪಡೆ

Gangavathi: ರಸಗೊಬ್ಬರ-ಏಕ ಬೆಳೆ ಪದ್ಧತಿ ಕೈ ಬಿಡಲು ಸಲಹೆ

Gangavathi: ರಸಗೊಬ್ಬರ-ಏಕ ಬೆಳೆ ಪದ್ಧತಿ ಕೈ ಬಿಡಲು ಸಲಹೆ

Sandalwood: ಸೂಟ್‌ ಹಾಡು ಹಬ್ಬ

Sandalwood: ಸೂಟ್‌ ಹಾಡು ಹಬ್ಬ

Kaiva: ಟ್ರೇಲರ್‌ನಲ್ಲಿ ಕೈವ ಸದ್ದು

Kaiva: ಟ್ರೇಲರ್‌ನಲ್ಲಿ ಕೈವ ಸದ್ದು

Gadaga: ಹುಟ್ಟು-ಸಾವಿನ ನಡುವಿನ ಅಂತರ ಕಂಡುಕೊಳ್ಳಿ; ಗವಿಶ್ರೀ ಆಶೀರ್ವಚನ

Gadaga: ಹುಟ್ಟು-ಸಾವಿನ ನಡುವಿನ ಅಂತರ ಕಂಡುಕೊಳ್ಳಿ; ಗವಿಶ್ರೀ ಆಶೀರ್ವಚನ

Mudigere ಮನೆಗೆ ನುಗ್ಗಿದ ಇನ್ನೋವಾ ಕಾರು; ಕುಸಿದು ಬಿದ್ದ ಮನೆಯ ಗೋಡೆ

Mudigere ಮನೆಗೆ ನುಗ್ಗಿದ ಇನ್ನೋವಾ ಕಾರು; ಕುಸಿದು ಬಿದ್ದ ಮನೆಯ ಗೋಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.