ಪ್ರೀತಿಯೇ ಅಲಾರಾಮ್


Team Udayavani, Dec 27, 2019, 4:44 AM IST

12

ಮಕ್ಕಳ ಪರೀಕ್ಷೆ ಯಾವಾಗ, ಮುಂದಿನ ಹಬ್ಬ ಎಂದು ಬರುವುದು, ನೆಂಟರ ಮದುವೆ ತಯಾರಿ ಏನೇನು ಇದೆ ಎಂಬೆಲ್ಲ ವಿಚಾರಗಳನ್ನು ನೆನಪಿಸುವ ಅಮ್ಮನೂ ಕೂಡ ಅಲಾರಮ್‌ನಂತೆಯೇ. ಕೆಲಸ ಮುಗಿಯುವವರೆಗೂ ನೆನಪಿಸುವ ಆಕೆಯದ್ದು ಪ್ರೀತಿಯ ಅಲಾರಮ್‌.

ಪ್ರತಿಯೊಂದು ಮನೆಯಲ್ಲೂ ಅಲಾರಮ್‌ ಇದ್ದೇ ಇರುತ್ತದೆ, ನಮಗೆ ಬೇಕಾದ ಸಮಯಕ್ಕೆ ಸರಿಯಾಗಿ ನಮ್ಮನ್ನು ಎಚ್ಚರಗೊಳಿಸಲು ಅದನ್ನು ಅಣಿಗೊಳಿಸಿರುತ್ತೇವೆ. ಆದರೆ, ಹೀಗೆ ಎಚ್ಚರಿಸುವ ಕೆಲಸವನ್ನು ಮನೆಯಲ್ಲಿ ಅಮ್ಮನೂ ಮಾಡುತ್ತಾಳೆ ಅಲ್ಲವೇ. ಆಕೆ ಮಾತ್ರ ತನ್ನ ಕೆಲಸಗಳಿಗಾಗಿ ಅಲಾರಮ್‌ ಇಟ್ಟುಕೊಳ್ಳುವುದಕ್ಕೂ ಹೆಚ್ಚಾಗಿ ಮನೆಯಲ್ಲಿ ಇತರರ ಅಗತ್ಯಗಳಿಗೆ ತಕ್ಕಂತೆ ಅಲಾರಮ್‌ ಅನ್ನು ಅಣಿಗೊಳಿಸಿರುತ್ತಾಳೆ.

ಅಮ್ಮ, ಪತ್ನಿ, ಸೊಸೆ ಹೀಗೆ ಹಲವಾರು ಪಾತ್ರಗಳನ್ನು ನಿಭಾಯಿಸುತ್ತ ಇರುವ ಅಮ್ಮ ಹತ್ತಾರು ಅಲಾರಮ್‌ಗಳನ್ನು ಅಣಿಗೊಳಿಸಬೇಕಾಗುತ್ತದೆ. ಅದು ಆಕೆಯ ಮನಸ್ಸಿನಲ್ಲಿಯೇ ಸಿದ್ಧಗೊಳ್ಳುವ ಅಲಾರಮ್‌. ಮಕ್ಕಳ ಶಾಲಾ, ಕಾಲೇಜುಗಳ ಸಮಯ, ಪತಿಯ ಕೆಲಸಕ್ಕೆ ಹೋಗುವ ಸಮಯ, ಅತ್ತೆ ಮಾವಂದಿರ ಔಷಧಿ ಸಮಯ ಎಲ್ಲವನ್ನೂ ತನ್ನಲ್ಲಿ ತಾನೇ ಸೆಟ್‌ ಮಾಡಿಕೊಂಡು, ನಿಗದಿತ ಸಮಯಕ್ಕೆ ಸರಿಯಾಗಿ ಪ್ರತಿಯೊಬ್ಬರನ್ನು ಎಬ್ಬಿಸುವ, ಎಚ್ಚರಿಸುವ ಕಾರ್ಯ ನಿರ್ವಹಿಸುತ್ತಾಳೆ.

ಮುಂದೆ ಬರಲಿರುವ ಹಬ್ಬ ಹರಿದಿನಗಳು, ಅದಕ್ಕೆ ಬೇಕಾದ ತಯಾರಿ, ಖರೀದಿಯ ವಿಚಾರ, ನೆಂಟರಿಷ್ಟರ ಮದುವೆ ಸಮಾರಂಭ ಗಳಿಗೆ ಭೇಟಿ ನೀಡಲು ತಯಾರಿ, ಉಡುಗೊರೆ ಸಿದ್ಧಪಡಿಸುವುದು, ಮಕ್ಕಳು, ಅತ್ತೆ, ಗಂಡ ಯಾವ ಉಡುಗೆ ತೊಡಬೇಕಾಗಿದೆ, ಅದೆಲ್ಲ ಸರಿಯಾಗಿದೆಯೇ ಎಂದು ಗಮನಿಸುವ ಈ ನಿರಂತರ ಕೆಲಸಕ್ಕೆ ಆಕೆಗೆ ಅಂಗಡಿಯಲ್ಲಿ ಸಿಗುವ ಮುಷ್ಟಿ ಗಾತ್ರದ ಅಲಾರಮ್‌ ಸಾಕಾದೀತೇ.

ಹಾಗಿದ್ದರೆ ಇವೆಲ್ಲವನ್ನೂ ಆಕೆ ಹೇಗೆ ನಿಭಾಯಿಸುತ್ತಾಳೆ. ಈ ನಿರಂತರ ಅಲಾರಮ್‌ಗೆ ಬ್ಯಾಟರಿಯ ಮಾದರಿಯಲ್ಲಿ ಸಹಾಯ ಮಾಡುವುದು ಪ್ರೀತಿ. ಮನೆಯವರ ಮೇಲಿನ ಪ್ರೀತಿ-ಕಾಳಜಿಯೇ ಆಕೆಯ ಈ ಜೈವಿಕ ಅಲಾರಮ್‌ನ್ನು ಅಣಿಗೊಳಿಸುತ್ತದೆ.

ನಿರ್ಜೀವ ಅಲಾರಮ್‌ನ್ನು ಕುಟ್ಟಿ ಸುಮ್ಮನಾಗಿಸಿ, ಎರಡೇ ನಿಮಿಷ ಎಂದು ಕಣ್ಣುಮುಚ್ಚುವ ನಾವು ಮತ್ತೆ ಗಾಢನಿದ್ದೆಗೆ ಜಾರುವ ಸಂಭವವಿರುತ್ತದೆ. ಈ ಅಮ್ಮ ಹಾಗಲ್ಲ, ನಾವು ಎದ್ದು ನಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡ ಮೇಲೆಯೇ ಸುಮ್ಮನಾಗುವುದು. ಇಲ್ಲಿಗೆ ಎಬ್ಬಿಸುವ ಕೆಲಸ ಮುಗಿಯಿತಾ? ಖಂಡಿತ ಇಲ್ಲ, ಪ್ರತಿ ಐದು ನಿಮಿಷಗಳಿಗೊಮ್ಮೆ, “ಬೇಗ ಬೇಗ ಮಾಡು ಸಮಯ ಇಷ್ಟಾಯಿತು’ ಎನ್ನುತ್ತ ಎಚ್ಚರಿಸುತ್ತ ಇರುತ್ತಾಳೆ. ನಾವು ಪ್ರತಿಯಾಗಿ ಬೈದೆವೆಂದು ಮರುದಿನ ಎಚ್ಚರಿಸುವ ಕೆಲಸ ಮಾಡದೇ ಇರುವುದಿಲ್ಲ.

ಹಾಗೆ ಆಕೆ ಎಚ್ಚರಿಸುವ ರೀತಿಯಲ್ಲಿ ಎಂದೂ ಏಕತಾನತೆ ಇಲ್ಲ. ಮೊದಲಿಗೆ ಪ್ರೇಮಪೂರಿತವಾದ ನಯವಾದ ಮಾತುಗಳಿಂದ ಎಬ್ಬಿಸಲಾರಂಭಿಸುವ ಅಮ್ಮ, ಮುಂದಿನ ಕೆಲವು ಕ್ಷಣಗಳ ನಂತರ ತುಸು ಗಡುಸಾಗುತ್ತಾಳೆ.

ಸಣ್ಣ ಮಕ್ಕಳಾದರೆ ಮೊದಲಿಗೆ ಅವರನ್ನು ಪ್ರೀತಿಯಿಂದ ಮು¨ªಾಡುತ್ತ ಎಬ್ಬಿಸುವ ತಾಯಿ, ಎರಡನೇ ಸಲ ಆ ಮಗುವಿಗೆ ಇಷ್ಟವಾದ ತಿಂಡಿಯನ್ನೋ, ಕೇಕ್‌, ಬಿಸ್ಕಿಟನ್ನೋ ಡಬ್ಬಿಗೆ ಹಾಕುವ ಭರವಸೆ ನೀಡುತ್ತಾಳೆ. ಆಗಲೂ ಆ ಮಗು ಏಳದಿದ್ದರೆ ನೇರವಾಗಿ ಎತ್ತಿಕೊಂಡು ಹೋಗಿ ಸ್ನಾನಗೃಹದಲ್ಲಿ ನಿಲ್ಲಿಸಿಬಿಡುತ್ತಾಳೆ.

ಹೈಸ್ಕೂಲ್‌-ಕಾಲೇಜುಗಳಿಗೆ ಹೋಗುವ ಮಕ್ಕಳಿಗಾದರೆ ಮೊದಲು ನಯವಾದ ಮಾತುಗಳಿಂದ ಕೂಡಿದ ಅಲಾರಮ್‌ ಗಂಟೆ, ಶಾಲಾ ವ್ಯಾನ್‌ ಅಥವಾ ಬಸ್‌ ತಪ್ಪಿ ಹೋಗುವ, ಮೊದಲ ಕ್ಲಾಸ್‌ ತಪ್ಪಿ ಹೋಗುವ, ಅಟೆಂಡನ್ಸ್‌ ಶಾರ್ಟೆಜ್‌ ಆಗುವ ಗದರುವಿಕೆ ದನಿಯಲ್ಲಿರುತ್ತದೆ.

ಪತಿಗಾದರೆ ನಯವಾದ ಮಾತುಗಳ ಎಚ್ಚರಿಕೆ, ಆಕ್ಷೇಪಣೆಗೆ ಬದಲಾಗುತ್ತದೆ, ನಡು ರಾತ್ರಿವರೆಗೆ ಟಿವಿ, ಮೊಬೈಲ್‌ ಬಳಕೆ ಒಳ್ಳೆಯದಲ್ಲ ಎಂದರೆ ಕೇಳುವುದಿಲ್ಲ, ಈಗ ನಿ¨ªೆ ಸಾಕಾಗುವುದಿಲ್ಲ, ಎಬ್ಬಿಸಿದರೆ ಕಣ್ಣು ಬಿಡಲಿಕ್ಕಾಗುವುದಿಲ್ಲ ಎಂಬ ಗೊಣಗಾಟದ ಅಲಾರಮ್‌.

ರಾತ್ರಿ ನಿದ್ದೆ ಬಾರದೇ ಹೊರಳಾಡುವ ವಯಸ್ಸಾದ ಅತ್ತೆಮಾವಂದಿರಿಗೆ, ಸೊಸೆ ಅಡುಗೆ ಮನೆಯಲ್ಲಿ ಕೆಲಸ ಆರಂಭಿಸಿದ ಸಪ್ಪಳವೇ ಒಂದು ಅಲಾರಾಮ್‌. ತಾವು ಹಾಸಿಗೆಯಿಂದ ಎದ್ದು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಬಹುದು ಎಂಬುದಕ್ಕೆ ಸೂಚನೆ. ದೋಸೆ ಕಾವಲಿ “ಚುಂಯ್‌’ ಅಂದ ಶಬ್ದ ಕೇಳಿಸಿತೋ, ಹೊರಹೋಗುವ ಧಾವಂತ ಇರುವವರ ಟಿಫಿನ್‌ ಮುಗಿದಾಕ್ಷಣ ತಮ್ಮ ಸರದಿ ಬಂತೆಂದು ಗೊತ್ತಾಗುತ್ತದೆ. ಈಗ ಇನ್ಸುಲಿನ್‌ (ಮಧುಮೇಹಿಗಳಿಗೆ) ತೆಗೆದುಕೊಂಡರೆ ಸರಿಯಾಗುತ್ತದೆ ಎಂಬ ಮುನ್ಸೂಚನೆ.

ಹೀಗೆ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಕ್ಲಪ್ತ ಸಮಯಕ್ಕೆ ಎಬ್ಬಿಸುವ ಈ ಅಮ್ಮನನ್ನು ಯಾರು ಎಬ್ಬಿಸುತ್ತಾರೆ? ಬೆಳಗಿನ ಸವಿ ನಿದ್ದೆಯಲ್ಲಿರುವ ಅವಳಿಗೂ ಒಂದೈದು ನಿಮಿಷ ಮಲಗೋಣ ಅನಿಸುವುದಿಲ್ಲವೇ? ಮನೆಯ ಸದಸ್ಯರೆಲ್ಲ ಮಲಗಿದ ನಂತರ ಮಲಗುವ, ಎಲ್ಲರಿಗಿಂತಲೂ ಮೊದಲು ಏಳುವ, ದಿನವಿಡೀ ಮನೆ ಕೆಲಸಗಳಲ್ಲಿ ವ್ಯಸ್ತಳಾಗಿರುವ ಅವಳಿಗೂ ಸುಸ್ತಾಗುವುದಿಲ್ಲವೇ?

ಖಂಡಿತ ಅಮ್ಮನಿಗೂ ದಣಿವಾಗುತ್ತದೆ, ಎಲ್ಲರಿಗೂ ಅನಿಸುವಂತೆ ಅವಳಿಗೂ ಅನಿಸುತ್ತದೆ ಒಂದೈದು ನಿಮಿಷ ಮಲಗುವ ಎಂದು. ಹಾಗೇನಾದರೂ ಅವಳು ಮಲಗಿ ಗಾಢನಿದ್ದೆಗೆ ಜಾರಿದರೆ, ಕೇವಲ ಅವಳೊಬ್ಬಳದಲ್ಲ ಮನೆಯ ಸದಸ್ಯರೆಲ್ಲರ ದಿನಚರಿಯಲ್ಲೂ ಏರುಪೇರು. ಮುಂದಿನ ಗಡಿಬಿಡಿ, ಧಾವಂತ ಊಹಿಸಲೂ ಸಾಧ್ಯವಿಲ್ಲ, ಈ ಎಲ್ಲ ಸಮಸ್ಯೆಗಳಿಂದ ಪಾರಾಗಲು ಅವಳು ತನ್ನ ಐದು ನಿಮಿಷ ಮಲಗುವ ಬಯಕೆಯನ್ನು ಅಲ್ಲಿಯೇ ಚಿವುಟಿ, ತಟ್ಟಂತ ಎದ್ದು ತನ್ನ ಕೆಲಸಕಾರ್ಯಗಳಲ್ಲಿ ತೊಡಗುತ್ತಾಳೆ.

ಈ ದಣಿವಿಲ್ಲದ ಅಲಾರಮ್‌ಗೆ ಪ್ರೀತಿಯೆಂಬ ರೀಚಾರ್ಜ್‌ ಬೇಕೇಬೇಕು. ನಮ್ಮ ಮನೆಯಲ್ಲಿ ಅಮ್ಮನಿಗೆ ಪ್ರೀತಿಯ ಮಾತುಗಳನ್ನು ಹೇಳುವ ಪರಿಪಾಠ ಇದೆಯೇ… ಎಂದು ಒಮ್ಮೆ ಯೋಚಿಸೋಣ ಅಲ್ಲವೇ.

ಅನಿತಾ ಪೈ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.