ಸಾಬೂನಿನ ಘಮ


Team Udayavani, May 4, 2018, 6:00 AM IST

s-25.jpg

ಪ್ರತಿಯೊಬ್ಬರು ಸ್ನಾನ ಮಾಡಲು ಸಾಬೂನು ಬಳಸುತ್ತಾರೆ. ಆಹ್ಲಾದಕರ ಪರಿಮಳ, ಮೈನವಿರೇಳಿಸುವ ನೊರೆ, ಕಣ್ಮನ ಸೆಳೆಯುವ ಸಾಬೂನುಗಳು ಚರ್ಮದ ರಕ್ಷಣೆಗೆ ಅತ್ಯಗತ್ಯ. ಇವು ಚರ್ಮವನ್ನು ಶುಭ್ರಗೊಳಿಸುತ್ತವೆ. ಮಗುವಿನ ಕೋಮಲವಾದ ಚರ್ಮವನ್ನು ರಕ್ಷಿಸುವ ಬೇಬಿ ಸೋಪ್‌ನಲ್ಲಿಯೂ ಸಹ ಸಾಕಷ್ಟು ವಿಧಗಳಿವೆ. ಜೇನು, ಗ್ಲಿಸರಿನ್‌, ಬೇವು, ಗುಲಾಬಿ, ಚಂದನ, ಹಾಲು, ಅಲೋವೆರಾ, ಬಾದಾಮಿ, ಪ್ರಾಣಿಗಳ ಕೊಬ್ಬು ಪದಾರ್ಥ, ಅಪಾಯರಹಿತ ಸಸಿಗಳ ಅಂಶ‌, ಸೋಡಿಯಂ, ಪೊಟಾಶಿಯಂ- ಹೀಗೆ ಹಲವು ಅಂಶಗಳು ಇದರಲ್ಲಿರುತ್ತದೆ. ಮೆಡಿಕೇಟೆಡ್‌ ಸಾಬೂನಿನಲ್ಲಿ ಬಗೆಬಗೆಯ ಚರ್ಮ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆಂದು ನಾನಾ ಸೋಪುಗಳಿವೆ. ತಜ್ಞ ವೈದ್ಯರ ಶಿಫಾರಸಿನಂತೆ ಬಳಸಿದರೆ ಉತ್ತಮ.

ಬ್ಯೂಟಿಬಾರ್‌ನಲ್ಲಿ  ಕ್ಷಾರಗುಣವು ಒಂದು ಪರಿಮಾಣದಲ್ಲಿರುತ್ತದೆ. ಸಾಮಾನ್ಯ ಚರ್ಮ ಹೊಂದಿರುವವರು ಇದನ್ನು ಬಳಸದೇ ಇರುವುದು ಒಳ್ಳೆಯದು. ಮಾಯಿಶ್ಚರೈಸರ್‌ ಸೋಪಿನಲ್ಲಿ ಕೊಬ್ಬು ಪದಾರ್ಥಗಳು, ಕೆಲವು ಬಗೆಯ ಎಣ್ಣೆಗಳು, ಗ್ಲಿಸರಿನ್‌ನಂತಹ ವಸ್ತುಗಳಿವೆ. ಒಣ ಚರ್ಮಕ್ಕಿದು ಉತ್ತಮ. ಪಾರದರ್ಶಕ ವಿಧದ ಸಾಬೂನಿನಲ್ಲಿ  ಗ್ಲಿಸರಿನ್‌ ಅಧಿಕವಾಗಿರುತ್ತದೆ. ಡಿಯೋಡರೆಂಟ್‌ ಸಾಬೂನಿನಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಏಜೆಂಟ್‌ ಸಮೃದ್ಧವಾಗಿ ಇರುತ್ತದೆ. ಬ್ಯಾಕ್ಟೀರಿಯಾದಿಂದ ಶರೀರದಲ್ಲಿ ಉಂಟಾಗುವ ದುರ್ವಾಸನೆಯನ್ನು ಇದು ಮಾಯ ಮಾಡುತ್ತದೆ. ಸೋಪ್‌ ಫ್ರೀ ಫೇಸ್‌ವಾಶ್‌ಗಳು ಎಲ್ಲಾ ಬಗೆ ಚರ್ಮಕ್ಕೂ ಹೊಂದುತ್ತದೆ. ಇದನ್ನು ಎಲ್ಲ ವಯೋಮಿತಿಯವರು ಬಳಸಬಹುದು. ಶ್ರೀಗಂಧದ ಸಾಬೂನು ಮೈಮನಸ್ಸಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಚರ್ಮಕ್ಕೂ ಒಳ್ಳೆಯದು.

ಇನ್ನು ಹಲವು ಉತ್ತಮ ದರ್ಜೆಯ ಸಾಬೂನುಗಳು ಮಾರುಕಟ್ಟೆಯಲ್ಲಿವೆ. ಅವನ್ನು ಬಳಸಿಯೂ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಆದರೆ ಎಚ್ಚರಿಕೆ ಅವಶ್ಯ. ಆದರೂ ಮುಂಜಾನೆ ಸ್ನಾನಕ್ಕೆ ಆದಷ್ಟು ಕಡಿಮೆ ಸಾಬೂನು ಬಳಸಿ ಸಾಬೂನು ಹಚ್ಚಿಕೊಂಡ ನಂತರ ಧಾರಾಳ ನೀರು ಬಳಸಿ ಚರ್ಮ ಸ್ವಚ್ಛಗೊಳಿಸಿ. ಇಲ್ಲದಿದ್ದರೆ ಕೆಲವರಿಗೆ ಅಲರ್ಜಿಯಾಗುತ್ತದೆ.

ಒಬ್ಬರು ಬಳಸಿದ ಸೋಪು ಮತ್ತೂಬ್ಬರು ಬಳಸಬಾರದು. ಚರ್ಮಕ್ಕೆ ಹೊಂದಿಕೆಯಾಗುವ ಸಾಬೂನು ಬಳಸಿ. ತೀಕ್ಷ್ಣ ಪರಿಮಳದ ಸಾಬೂನು ಅಧಿಕ ಬಳಸಿದರೆ ಅಲರ್ಜಿ ಉಂಟಾಗುತ್ತದೆ. ಆಲ್ಫಾ ಹೈಡ್ರಾಕ್ಸಿಡ್‌ ಇರುವ ಸಾಬೂನು ಮೊಡವೆಯಿರುವ ಹರೆಯದ ಮಕ್ಕಳು ಬಳಸಿದರೆ ಸಮಸ್ಯೆಯಿಂದ  ಮುಕ್ತಿ ಹೊಂದಬಹುದು. ಋತುವಿಗನುಗುಣವಾಗಿ ಸೋಪನ್ನು ಬದಲಿಸಿ ಬಳಸಿ.

ಸುಜಾತಾ

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.