ಅಣ್ಣನಿಗೊಂದು ಪತ್ರ


Team Udayavani, Jan 11, 2019, 12:30 AM IST

q-11.jpg

ಪ್ರೀತಿಯ ಸಹೋದರನಲ್ಲಿ, ನಾನು ಬೇಡುವ ಆಶೀರ್ವಾದಗಳು. ನಾನು ಕ್ಷೇಮವಾಗಿದ್ದೇನೆ, ನೀನು ಕ್ಷೇಮವಾಗಿರುವೆ ಎಂದು ಭಾವಿಸುತ್ತೇನೆ. ಮೊದಲನೆಯದಾಗಿ, ಹುಟ್ಟುಹಬ್ಬದ ಶುಭಾಶಯಗಳು. ಹಾಗೂ ನಿನ್ನ ಮುಂದಿನ ಜೀವನವು ಇನ್ನೂ ಸುಖಕರವಾಗಿರಲಿ ಎಂದು ಆಶಿಸುತ್ತೇನೆ.

ಅಣ್ಣ , ನಾನು ಈ ಮೂಲಕ ನಿನಗೆ ನನ್ನ ಪುಟ್ಟ ಥ್ಯಾಂಕ್ಯೂ ಹೇಳಬಯಸುತ್ತೇನೆ. ಯಾಕೆಂದರೆ, ಅಣ್ಣ-ತಂಗಿ ಪ್ರೀತಿ ಎನ್ನುವುದೇ ಹಾಗೆ. ಅವರಿಬ್ಬರ ನಡುವಿನ ಬಾಂಧವ್ಯದ ಬಗ್ಗೆ ವರ್ಣಿಸಲು ಪದಗಳೇ ಸಾಲದು. ಕೆಲವರು ತಮ್ಮ ಅಣ್ಣಂದಿರೊಂದಿಗೆ ಕಾಲ ಕಳೆಯುವುದನ್ನು ಕಂಡಾಗ ನನಗೂ ಒಬ್ಬ ಅಣ್ಣ ಇರಬೇಕಾಗಿತ್ತು ಎಂದೆನಿಸುತ್ತಿತ್ತು. ನಾನು ನನ್ನ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು. ಆದ್ದರಿಂದ ನನಗೆ ಸಂಬಂಧಿಕರಲ್ಲಿ ಅಣ್ಣತಂಗಿಯನ್ನು ಕಂಡಾಗ ನನಗೆ ಅಣ್ಣನಿಲ್ಲವೆಂಬ ಬೇಸರ ಕಾಡುತ್ತಿತ್ತು. ನೀನು ಬಂದಮೇಲೆ ನನಗೆ ಅಣ್ಣನಿಲ್ಲವೆಂಬ ಭಾವನೆ ಕಾಡಲಿಲ್ಲ. ಒಂದು ವೇಳೆ ಒಡಹುಟ್ಟಿದ ಅಣ್ಣ ಇದ್ದರೂ ಸಹ ನಿನ್ನಿಂದ ದೊರೆತ ಅಣ್ಣನೆಂಬ ಪ್ರೀತಿ, ಮಮತೆ, ವಾತ್ಸಲ್ಯ ಆತನಿಂದ ದೊರೆಯದು ಎಂದೆನಿಸುತ್ತದೆ. ನಾನು ನಿನ್ನ ರಕ್ತ ಸಂಬಂಧಿ, ಒಡಹುಟ್ಟಿದವಳಲ್ಲದಿದ್ದರೂ ಸಹ ಅಣ್ಣ ಎಂದು ಕರೆದಾಗ ನೀನು ತೋರುವ ಅಕ್ಕರೆ, ವಾತ್ಸಲ್ಯ, ಕಾಳಜಿ- ಇವೆಲ್ಲವೂ ಹೇಳತೀರದು. ಅಣ್ಣ-ತಮ್ಮ, ಅಕ್ಕ-ತಂಗಿ, ಅಕ್ಕ-ತಮ್ಮ ಈ ಎಲ್ಲ ಸಹೋದರತ್ವದ ಬಾಂಧವ್ಯಕ್ಕಿಂತಲೂ ಅಣ್ಣ-ತಂಗಿಯ ಬಾಂಧವ್ಯ ಬಹಳ ಶ್ರೇಷ್ಠವಾದುದು. ಅಲ್ಲಿ ಅವರಿಬ್ಬರ ನಡುವಿನ ಆತ್ಮೀಯತೆ, ಎಷ್ಟೇ ತರೆಲ-ತುಂಟಾಟಗಳಿದ್ದರೂ ಒಬ್ಬರನ್ನೊಬ್ಬರು ಬಿಟ್ಟಿರಲಾಗದಂತಹ ಬಾಂಧವ್ಯ ಇವೆಲ್ಲವೂ ಎಷ್ಟು ಹೇಳಿದರೂ ಮುಗಿಯದಂತಹ ಪ್ರೀತಿ. ಈ ಪ್ರೀತಿ ಚಿರಕಾಲದವರೆಗೂ ಹೀಗೆ ಇರಲಿ.

ಇನ್ನು , ಮೊನ್ನೆ ನವೆಂಬರಿಗಷ್ಟೇ ನಮ್ಮಿಬ್ಬರ ಅಣ್ಣತಂಗಿ ಬಾಂಧವ್ಯಕ್ಕೆ ಎರಡು ವರ್ಷಗಳಾಯಿತು. ಈ ಎರಡು ವರ್ಷದ ಬಾಂಧವ್ಯದಲ್ಲಿ ನಿನ್ನೊಂದಿಗೆ ಕಳೆದ ಪ್ರತಿಕ್ಷಣವೂ ಮರೆಯಲಾಗದಂತಹ ಸಿಹಿ ಕ್ಷಣಗಳು. ನಿನ್ನೊಂದಿಗೆ ಮುನಿಸಿಕೊಂಡಿದ್ದಿರಬಹುದು, ನನ್ನ ಅತಿಯಾದ ಮಾತುಗಳಿಂದ ನಿನಗೆ ಕೋಪ ಬಂದರೂ ಸಹ ನೀನು ತಾಳ್ಮೆಯಿಂದ ಆಲಿಸಿದ್ದಿರಬಹುದು. ಇವೆಲ್ಲವೂ ಮರೆಯಲಾಗದಂತಹ ಕ್ಷಣಗಳು. ಕಣ್ಣು ಮುಚ್ಚಿದಾಗ ಅಕ್ಷಿಪಟಲದಲ್ಲಿ ನಿನ್ನೊಂದಿಗೆ ಕಳೆದ ಪ್ರತಿ ಕ್ಷಣಗಳು ಒಮ್ಮೆಗೆ ಹಾದುಹೋಗುತ್ತದೆ.

ಅಣ್ಣನೆಂಬವನು ತಾಯಿತಂದೆಯನ್ನೇ ಮೀರಿಸುವ ಪ್ರೀತಿ, ವಾತ್ಸಲ್ಯವನ್ನು ತೋರುತ್ತಾನೆ. ಆದರೆ, ನೋಡುವ ಕಣ್ಣುಗಳಷ್ಟೇ ಅದನ್ನು ಅನುಮಾನಿಸುತ್ತದೆ. ಇಂದು ಈ ಅನುಮಾನದಿಂದ ನೋಡುವ ಕಣ್ಣುಗಳಿಂದಾಗಿ ನೀನು ಕಣ್ಣೆದುರು ಇದ್ದರೂ ಅಣ್ಣ ಎಂದು ಕರೆಯಲಾಗುತ್ತಿಲ್ಲ ಎಂಬ ನೋವಿದೆಯಾದರೂ ಇಂದಿಗೂ ನಾವಿಬ್ಬರು ಅಣ್ಣ-ತಂಗಿಯರು ಎಂಬ ಮಾತು ಖುಷಿ ಕೊಡುವಂತಹದು.

ಯಶಸ್ವಿ
ಪ್ರಥಮ ಪಿಯುಸಿ,
ಕಪಿತಾನಿಯೋ ಪದವಿಪೂರ್ವ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.