ಕಾಲೇಜಿನ ವಾಟ್ಸಾಪ್‌ ಗ್ರೂಪ್‌ 


Team Udayavani, Jun 1, 2018, 6:00 AM IST

z-18.jpg

ಪ್ರತಿದಿನ ಎಂಟು ಗಂಟೆಯಾದ್ರೂ ಏಳದ ನಾನು, ಅಂದು ಐದು ಗಂಟೆಗೇ ಎದ್ದು ಓದಲು ಪ್ರಾರಂಭಿಸಿದ್ದೆ. ನನ್ನ ಈ ಅವಸ್ಥೆ ನೋಡಿ ಅಣ್ಣ, “”ಅಮ್ಮ… ಮೆಲೆಗ್‌ ದಾದ ಆಂಡ್‌ಯೆ?” (ಅಮ್ಮ… ಇವಳಿಗೇನಾಯ್ತು?) ಎಂದು ಅಮ್ಮನಲ್ಲಿ ಕೇಳುವುದು ನನ್ನ ಕಿವಿಗೆ ಬಿತ್ತು. ಇದಕ್ಕೆ ಉತ್ತರವಾಗಿ ಅಮ್ಮ “”ಇವತ್ತು ಕಾಲೇಜಿನ ಮೊದಲ ದಿನ ಅಲ್ವಾ , ಇನ್ನು ಒಂದು ವಾರ ಐದು ಗಂಟೆಗೆ ಏಳ್ತಾಳೆ. ಆಮೇಲೆ ಅದೇ ರಾಗ, ಅದೇ ತಾಳ” ಎಂದು ಟೀಕಿಸಿದರು. “”ಹಾಗೇನಿಲ್ಲ , ಈ ವರ್ಷ ನಾನು ಸೆಕೆಂಡ್‌ ಪಿಯುಸಿ, ಚೆನ್ನಾಗಿ ಓದೆನೆ. ಬೇಕಾದ್ರೆ ನೀವೇ ನೋಡಿ, ಇನ್ನು ನಾನು ದಿನಾ ಐದು ಗಂಟೆಗೇನೆ ಏಳ್ಳೋದು. ಹೋದ ವರ್ಷದ ಹಾಗೆ ಅಲ್ಲ. ನನ್ನ ಮಾರ್ಕ್ಸ್ ನೋಡಿ ನಿಮ್ಗೆ ಗೊತ್ತಾಗುತ್ತೆ” ಅಂತೆಲ್ಲಾ ಭಾಷಣ ಬಿಗಿದೆ.

ಪುಸ್ತಕ ಹಿಡಿದು ಅಂಗಳದಲ್ಲಿ ಬಂದು ಕುಳಿತೆ. ಬರೀ ಪುಸ್ತಕ ಮಾತ್ರ ಅಲ್ಲ, ಜೊತೆಗೆ ನನ್ನ ಆಪ್ತಮಿತ್ರನಾದ ಮೊಬೈಲನ್ನೂ ಕೊಂಡೊಯ್ದೆ. “ನೀನೆಲ್ಲೋ ನಾನಲ್ಲೆ… ಈ ಜೀವ ನಿನ್ನಲ್ಲೆ’ ಎಂಬ ಹಾಡಿನ ಸಾರದಂತೆ, ನಾನು ಹೋದಲ್ಲೆಲ್ಲಾ ಈ ಮೊಬೈಲ್‌ ಪ್ರಿಯಕರನಂತೆ ನನ್ನೊಂದಿಗೇ ಇರುತ್ತದೆ. ಇನ್ನೇನು ಪುಸ್ತಕ ತೆರೀಬೇಕು ಅಷ್ಟರಲ್ಲಿ ನನ್ನ ಪ್ರಿಯಕರ ಶಿಳ್ಳೆ ಹೊಡೆದ. ಅಂದರೆ ಮೊಬೈಲ್‌ಗೆ ಒಂದು ಮೆಸೇಜ್‌ ಬಂತು. ತೆರೆಯಬೇಕಾಗಿದ್ದ ಪುಸ್ತಕ ತನ್ನಷ್ಟಕ್ಕೇ ದೂರ ಸರಿಯಿತು. ಮೊಬೈಲ್‌ನ್ನು ಕೈಗೆತ್ತಿಕೊಂಡು ನೋಡಿದಾಗ, ಕಾಲೇಜಿನ ವಾಟ್ಸಾಪ್‌ ಗ್ರೂಪ್‌ ಒಂದರಲ್ಲಿ 102 ಸಂದೇಶಗಳ ಸುರಿಮಳೆಯೇ ಇತ್ತು. ನನ್ನಿಂದ ಕೆಮಿಸ್ಟ್ರಿಯ ಎರಡು ಚಾಪ್ಟರ್‌ ಓದದೇ ಕೂರಲು ಆದೀತು. ಆದರೆ ವಾಟ್ಸಾಪ್‌ನ ಮೆಸೇಜ್‌ಗಳನ್ನು ಓದದೇ ಕೂರಲು ಖಂಡಿತ ಸಾಧ್ಯವಿಲ್ಲ. ತೆರೆದು ನೋಡಿದಾಗ ಅಪೇಕ್ಷಾಳ ಸಂದೇಶ ಹೀಗಿತ್ತು. “ಇನಿ ಕಾಲೇಜ್‌ ಸ್ಟಾರ್ಟ್‌. ಮಾತೆರ್ಲ ಬರ್ಪರತಾ?’ (ಇವತ್ತು ಕಾಲೇಜ್‌ ಸ್ಟಾರ್ಟ್‌. ಎಲ್ಲಾರೂ ಬರ್ತೀರಲ್ಲಾ?) ಇದಕ್ಕೆ ಉತ್ತರವಾಗಿ ನಿಧಿಯ ಸಂಭ್ರಮಾಚರಣೆಯ ಇಮೋಜಿಗಳು ರಾರಾಜಿಸಿದ್ದವು. ಹೀಗೆ ಎಲ್ಲರ ಮೆಸೇಜ್‌ಗಳನ್ನು ಓದುತ್ತಾ ಹೋದೆ. ಅದರಲ್ಲಿ ರಚನಾಳ ಒಂದು ಮೆಸೇಜ್‌ ನನ್ನ ಗಮನ ಸೆಳೆಯಿತು. ಅದೇನೆಂದರೆ, “ಈ ವರ್ಷ ಇಲೆಕ್ಷನ್‌ಗೆ ಯಾರು ನಿಲ್ಲುವವರು?’ ಇದನ್ನು ಓದಿದ ತಕ್ಷಣ, ಹೋದ ವರ್ಷದ ಕಾಲೇಜು ಚುನಾವಣಾ ಸಂದರ್ಭಗಳು ಸ್ಮತಿಪಟಲದಲ್ಲೊಮ್ಮೆ ಶಾರ್ಟ್‌ ಫಿಲ್ಮ್ನಂತೆ ಓಡಿದವು.

ಅದು ನಮಗೆ ಕಾಲೇಜಿನಲ್ಲಿ ಮೊದಲ ಮತದಾನವಾಗಿತ್ತು. ವಿಜ್ಞಾನ ವಿಭಾಗದಲ್ಲಿ ಚುನಾವಣಾ ಸ್ಪರ್ಧಿಗಳು ಆಕಾಶ್‌ ಮತ್ತು ಅಂಕಿತಾ. ಇಡೀ ದಿನ ಕಾಲೇಜಿನಲ್ಲಿ “ಓಟ್‌ ಫಾರ್‌ ಆಕಾಶ್‌’, “ಓಟ್‌ ಫಾರ್‌ ಅಂಕಿತಾ’ ಎಂಬ ಮಂತ್ರ ಮಾತ್ರ ಕೇಳ್ತಿತ್ತು. ಕಾಲೇಜು ಚುನಾವಣೆ ಯಾವ ವಿಧಾನಸಭಾ ಚುನಾವಣೆಗಿಂತಲೂ ಕಡಿಮೆಯಲ್ಲ ಎಂಬ ರೀತಿಯಲ್ಲಿ ಪ್ರಚಾರ ಮಾಡ್ತಿದ್ದರು ನಮ್ಮ ಸೀನಿಯರ್. “ನಿಮಗೆ ಸಮೋಸ ಕೊಡಿಸ್ತೇವೆ’, “ಕಾಲೇಜ್‌ ಡೇಗೆ ಡಿಜೆ ಹಾಕಿಸ್ತೇವೆ’ ಎಂದೆಲ್ಲಾ ಆಮಿಷ ಒಡ್ಡಲು ಮರೆಯದ ಕಿಲಾಡಿಗಳು. ಮತನಾದ ನಡೆಯಿತು. ವಿಜ್ಞಾನ ವಿಭಾಗದ ಕಾರ್ಯದರ್ಶಿಯಾಗಿ ಆಯ್ಕೆಯಾದದ್ದು ಆಕಾಶ್‌. ಇಡೀ ವರ್ಷ ನಮ್ಮ ವಿಜ್ಞಾನ ವಿಭಾಗದ ಒಳಿತಿಗಾಗಿ ಶ್ರಮಿಸಿ, ತಮ್ಮ ಜವಾಬ್ದಾರಿಯನ್ನು ಸುಸೂತ್ರವಾಗಿ ಮುಗಿಸಿದ್ದರು ಆಕಾಶ್‌.

ಹಾಗಾದರೆ, ಈ ವರ್ಷ ಯಾರು ಎಲೆಕ್ಷನ್‌ಗೆ ನಿಲ್ಲುವವರು? ಎಂದು ಯೋಚಿಸುತ್ತ ಕುಳಿತೆ. ಅಷ್ಟರಲ್ಲಿ ಅಮ್ಮ “ಇವತ್ತು ಓದಿದ್ದು ಸಾಕು! ಹೀಗೆ ಓದಿದ್ರೆ ನೀನೇ ರ್‍ಯಾಂಕ್‌ ಬರ್ತೀಯಾ” ಅಂತ ವ್ಯಂಗ್ಯವಾಡಿದರು. “”ಇಲ್ಲಮ್ಮ, ಜೀವಿತಾ ಕಾಲ್‌ ಮಾಡಿದ್ಲು, ಕಾಲೇಜಿಗೆ ಬೇಗ ಹೋಗ್ಬೇಕಂತೆ” ಅಂತ ಬೊಗಳೆ ಬಿಟ್ಟು ತಂದ ಪುಸ್ತಕವನ್ನು ಅದರ ಮೂಲ ಜಾಗದಲ್ಲೇ ಇಟ್ಟು , ಕಾಲೇಜಿಗೆ ಹೋಗಲು ತಯಾರಾದೆ.

ಶಿವರಂಜನಿ ದ್ವಿತೀಯ ಪಿಯುಸಿ ಗೋವಿಂದದಾಸ ಪ.ಪೂ. ಕಾಲೇಜು, ಸುರತ್ಕಲ್‌

ಟಾಪ್ ನ್ಯೂಸ್

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.