ನೆಚ್ಚಿನ ಕ್ರೀಡಾಗುರುವಿಗೆ…


Team Udayavani, May 10, 2019, 5:50 AM IST

25

ಶಾಲಾ ಜೀವನದಲ್ಲಿ ಓದು-ಬರಹ ಎಷ್ಟು ಮುಖ್ಯವಾಗುತ್ತದೆಯೋ, ಅಷ್ಟೇ ಮುಖ್ಯ ಕ್ರೀಡೆ ಸಹ. ಕ್ರೀಡೆ ಎಂಬುದು ಕೇವಲ ವಿದ್ಯಾರ್ಥಿಯ ಮನೋವಿಕಾಸನಕ್ಕೆ ಪೂರಕವಾಗದೆ ಆತನನ್ನು ಚಟುವಟಿಕೆಯಿಂದಿಡಲು ಸಹ ನೆರವಾಗುತ್ತದೆ. ನನ್ನ ವಿದ್ಯಾರ್ಥಿ ಜೀವನದ ಆಟದ ಅವಧಿಯ ಬಗ್ಗೆ ಹೇಳಹೊರಟರೆ ನೆನಪುಗಳ ಸರಮಾಲೆಯೇ ಇದೆ. ಆಟದ ಮೈದಾನಕ್ಕೆ ಪಾದಾರ್ಪಣೆ ಮಾಡಿದ ಕೂಡಲೇ ನಮ್ಮಲ್ಲಿದ್ದ ಉತ್ಸಾಹ, ಅದೇ ರೀತಿ ಆಟದ ಮೈದಾನದಿಂದ ನಿರ್ಗಮಿಸಬೇಕಾದರೆ ಆಗುತ್ತಿದ್ದ ನೋವು ಹೇಳತೀರದು. ಯಾವ ಅವಧಿಯನ್ನು ಮರೆತರೂ ಆಟದ ಅವಧಿ ಮರೆಯುತ್ತಿರಲಿಲ್ಲ. ಹೈಸ್ಕೂಲ್‌ವರೆಗಿನ ನನ್ನ ಶೈಕ್ಷಣಿಕ ಜೀವನದಲ್ಲಿ ಕ್ರೀಡೆ ಒಂದು ಅವಿಭಾಜ್ಯ ಅಂಗವಾಗಿ ಬೆರೆತುಹೋಗಿತ್ತು. ಅದರಲ್ಲಿಯೂ ಹಿರಿಯ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ನಾನು ಹಾಗೂ ನನ್ನ ಸಹಪಾಠಿ ಮಿತ್ರರೆಲ್ಲ ಸೇರಿ ಆಡುತ್ತಿದ್ದ ಆಟ ಲಗೋರಿ. ಅದೆಷ್ಟೇ ಸುಡುಬಿಸಿಲಿದ್ದರೂ ಆ ಸೂರ್ಯನ ಕಿರಣಗಳಿಗೆ ಸವಾಲೊಡ್ಡಿ ಇನ್ನೇನು “ಈ ಸಲ ಕಪ್‌ ನಮೆª’ ಎನ್ನುವಷ್ಟು ಖುಷಿಯಿಂದ ಆಡುತ್ತಿದ್ದೆವು.

ಇಷ್ಟೆಲ್ಲ ಕಾತರದಿಂದ ಕಾಯುತ್ತಿದ್ದ ಆಟದ ಅವಧಿಯ ಬಗ್ಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ನನ್ನ ಹಾಗೂ ಹಲವು ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ ಎಂಬ ಜ್ಯೋತಿ ಬೆಳಗಿಸಿ ಕ್ರೀಡೆಯತ್ತ ಮತ್ತಷ್ಟು ಒಲವು ಮೂಡುವಂತೆ ಮಾಡಿದವರು ನನ್ನ ನೆಚ್ಚಿನ ಗುರು ವಿನ್ಸೆಂಟ್‌ ಸರ್‌. ಅದೇನೋ ತಿಳಿಯೇ ಅವರ ಬಗ್ಗೆ ಹೇಳಲು ಪದಗಳೇ ಸಾಲದು ಎಂದೆ‌ನಿಸಿದ್ದುಂಟು. ಕೈಯಲ್ಲಿ ವಿಜಲ್‌ ಹಿಡಿದುಕೊಂಡು ಅವರು ಬಂದಾಗ ತುಸು ಭಯ ಆವರಿಸಿ ದೂರದಲ್ಲಿರುವ ಹಿಮಾಲಯ ಸೇರಿಬಿಡುತ್ತಿದ್ದೆವು. ಅವರೂ ನನಗೆ ಹೊಡೆದ ನೆನಪು ನನ್ನ ಬಳಿ ಇಲ್ಲವಾದರೂ, ಅವರು ಬೇರೆ ವಿದ್ಯಾರ್ಥಿಗಳಿಗೆ ಬೈಯುವಾಗಲೋ ಅಥವಾ ಆ ವಿಜಲ್‌ನ ಮಾರುದ್ದದ ದಾರದಿಂದ ಪೆಟ್ಟು ಕೊಡುವಾಗ ಆ ವಿದ್ಯಾರ್ಥಿಯ ಜಾಗದಲ್ಲಿ ನಾನಿರಬೇಕಾಗಿತ್ತು ಎಂದು ದಿಗಿಲಾಗುತ್ತಿತ್ತು. ನಿಜ ಹೇಳಬೇಕೆಂದರೆ, ವಿನ್ಸೆಂಟ್‌ ಸರ್‌ ಅವರ ಬುದ್ಧಿಮಾತುಗಳಿಗೆ ಕಿವಿಗೊಡದ ಸಂದರ್ಭಗಳನ್ನು ನೆನೆದಾಗ ನನ್ನ ತಪ್ಪಿನ ಅರಿವಾಗುತ್ತಿತ್ತು. ಬೇಸರವಾಗುವ ಸಂದರ್ಭಗಳನ್ನು ಸೃಷ್ಟಿಮಾಡುತ್ತಿದ್ದುದ‌ªಕ್ಕೆ ಕ್ಷಮೆಯಿರಲಿ ಎಂದು ಈಗ ಬೇಡಿಕೊಳ್ಳುವೆ.

ಶಾಲಾ ಕಾರ್ಯಕ್ರಮಗಳ ಬಗ್ಗೆ ಮಾತೇ ಬೇಡ, ಅದೆಷ್ಟು ಸಡಗರ-ಸಂಭ್ರಮ. ಅದರಲ್ಲಿಯೂ ವಾರ್ಷಿಕ ಕ್ರೀಡಾಕೂಟದ ದಿನ ನಿಗದಿಯಾಗುತ್ತಿದ್ದಂತೆ ನಮ್ಮಲ್ಲಿ ಆನಂದದ ಸಾಗರವೇ ಉಕ್ಕಿ ಹರಿಯುತ್ತಿತ್ತು. ಆ ದಿನ ಬೆಳಗ್ಗಿನಿಂದ ಮಧ್ಯಾಹ್ನದವರೆಗಿನ ಆಟೋಟ ಸ್ಪರ್ಧೆಗಳನ್ನು ಕಣ್ತುಂಬಿಸಿಕೊಂಡು ನಮ್ಮಲ್ಲಿದ್ದ ಶಕ್ತಿ, ನಿಶ್ಶಕ್ತಿಯಾಗುವ ಹೊತ್ತಿಗೆ ವೇದಿಕೆಯಲ್ಲಿದ್ದ ಶಿಕ್ಷಕರೋರ್ವರು ರಿಲೇ ಓಟ ಪ್ರಾರಂಭವಾಗುವ ಸೂಚನೆ ನೀಡಿದ್ದೇ ತಡ ನಮ್ಮಲ್ಲಿ ನೂರು ಆನೆಗಳ ಶಕ್ತಿ ಬಂದಷ್ಟು ಖುಷಿಯಾಗುತ್ತಿತ್ತು. ಇವೆಲ್ಲದರ ಜೊತೆಗೆ ವಿನ್ಸೆಂಟ್‌ ಸರ್‌ ನೀಡುತ್ತಿದ್ದ ಕಮೆಂಟರಿ ಕೇಳಲು ಕಾಯುತ್ತಿದ್ದ ನಮಗೆ ಇನ್ನೆಲ್ಲಿಲ್ಲದ ಆನಂದ.

ಯಾವುದೇ ಕಾರ್ಯಕ್ರಮದ ನಿರೂಪಣೆ ಮಾಡಲು ನನಗೆ ಅವಕಾಶ ದೊರೆತಾಗ ಮೊದಲು ನೆನಪಾಗುತ್ತಿದ್ದದ್ದು ವಿನ್ಸೆಂಟ್‌ ಸರ್‌ ಅವರ ನಿರೂಪಣೆ. ಕಾರ್ಯಕ್ರಮದ ಕೊನೆಯವರೆಗೂ ಎಲ್ಲರ ಗಮನ ಪೂರ್ತಿಯಾಗಿ ಕಾರ್ಯಕ್ರಮದತ್ತ ಸೆಳೆಯುವಂತೆ ಮಾಡುವ ಅವರ ಮಾತುಗಾರಿಕೆಯ ಕಲೆ ನನಗೆ ಸದಾ ಸ್ಫೂರ್ತಿ. ಕೆಲವು ಬಾರಿ ರಾಷ್ಟ್ರೀಯ ಹಬ್ಬಗಳ ದಿನದಂದು ಅವರ ನಿರೂಪಣೆ ಇದ್ದರೆ ಅದರ ಚೆಂದವೇ ಬೇರೆ!

ಈಗಲೂ ವಿನ್ಸೆಂಟ್‌ ಸರ್‌ ವಿದ್ಯಾರ್ಥಿಗಳಿಗೆ ಎಷ್ಟು ಅಚ್ಚುಮೆಚ್ಚು ಎನ್ನುವುದಕ್ಕೆ ಬಹುದೊಡ್ಡ ಸಾಕ್ಷಿ ಹಳೆವಿದ್ಯಾರ್ಥಿಗಳು. ಅವರನ್ನು ಭೇಟಿಯಾಗಲು ಬಂದಾಗ ಹಳೆವಿದ್ಯಾರ್ಥಿಗಳ ಮೊಗದಲ್ಲಿರುತ್ತಿದ್ದ ನಗು, ಮನಸ್ಸಿಗಾಗುತ್ತಿದ್ದ ಆನಂದ ಅಪಾರ. ಅವರು ನಮ್ಮೊಂದಿಗೆ ನಮ್ಮ ಹಾಗೂ ಅವರ ನಡುವಿನ ಗುರು-ಶಿಷ್ಯ ಬಾಂಧವ್ಯದ ಬಗ್ಗೆ ಹೇಳಿಕೊಳ್ಳುವಾಗ ನನಗೆ ತಿಳಿಯದೇ ನನ್ನ ಮೊಗದಲ್ಲೊಂದು ನಗು ಮೂಡುತ್ತಿತ್ತು.

ತಮ್ಮ ಈ ವೃತ್ತಿಜೀವನದಲ್ಲಿ ವಿದ್ಯಾರ್ಥಿಗಳೊಂದಿಗೆ ಸದಾ ಹುರುಪಿನಿಂದ ಇರುತ್ತಿದ್ದ ವಿನ್ಸೆಂಟ್‌ ಸರ್‌ ವಿದ್ಯಾರ್ಥಿಗಳಿಗೆ ಒಬ್ಬ ಸರಿಯಾದ ಮಾರ್ಗದರ್ಶನ ನೀಡುವ ಗುರು ಮಾತ್ರವಾಗದೆ, ಸೋತಾಗ ಧೈರ್ಯ ತುಂಬುವ ದಾತನಾಗಿ, ಬಿದ್ದಾಗ ಕಾಳಜಿ ವಹಿಸುವ ತಾಯಿಯಾಗಿ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿದ್ದಾರೆ.

ಯಶಸ್ವಿ ಕೆ.
ದ್ವಿತೀಯ ಪಿಯುಸಿ, ಕಪಿತಾನಿಯೋ ಪದವಿಪೂರ್ವ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.