ನಮ್ಮ ಕಾಲೇಜಿನ ಪ್ರವಾಸ ಕಥನ


Team Udayavani, May 18, 2018, 6:00 AM IST

k-15.jpg

ಪ್ರವಾಸ ಎಂದ ತಕ್ಷಣ ಎಲ್ಲರಿಗೂ ಖುಷಿ ಆಗುತ್ತದೆ. ಅದೇ ಖುಷಿಯಲ್ಲಿ ನಾವು ನಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜು- ಉಪ್ಪಿನಂಗಡಿಯಿಂದ ಪ್ರವಾಸ ಹೋಗಿದ್ದೆವು. ಊಟಿ, ಕೊಡೈಕನಲ್‌, ಮೈಸೂರು ಕಡೆಗೆ ಪ್ರವಾಸವನ್ನು ಕೈಗೊಂಡೆವು. 

ನಾವು ಒಟ್ಟು 45 ವಿದ್ಯಾರ್ಥಿಗಳು ಹಾಗೂ ಆರು ಮಂದಿ ಪ್ರಾಧ್ಯಾಪಕರು ಮತ್ತು ಮೂರು ಮಂದಿ ಉಪ್ಪಿನಂಗಡಿ ಸ್ಮಾರ್ಟ್‌ ಬಸ್ಸಿನ ಚಾಲಕರು ನಮ್ಮೊಂದಿಗಿದ್ರು. ನಾವು ಎಪ್ರಿಲ್‌ ನಾಲ್ಕು 2018ರಂದು ರಾತ್ರಿ ವೇಳೆ ಉಪ್ಪಿನಂಗಡಿಯಿಂದ ಹೊರಟೆವು. ಅದೂ ಕೂಡ ಎ.ಸಿ. ಸ್ಮಾರ್ಟ್‌ ಬಸ್‌Õ . ಬೆಳಗಾಗುವುದರೊಳಗೆ ಊಟಿನೂ ತಲುಪಿದೆವು. ಬೆಳಗ್ಗೆ ಎಲ್ಲರೂ ಫ್ರೆಶ್‌ಅಪ್‌ ಆಗಿ ತಿಂಡಿ ತಿಂದು ಅಲ್ಲಿಂದ ಶುರುವಾಯಿತು ಸುತ್ತಾಟದ ಪಯಣ ಹಾಗೂ ವಿದ್ಯಾರ್ಥಿಗಳ ಸೆಲ್ಫಿ . ಈ ಸೆಲ್ಫಿಯ ನಡುವೆ ಲೆಕ್ಚರರ್ ಯಾರು? ಸ್ಟೂಡೆಂಡ್ಸ್‌ ಯಾರು ಎಂದು ಗೊತ್ತಾಗುತ್ತಿರಲಿಲ್ಲ. ಯಾಕೆಂದರೆ ಕಾಲೇಜಿನಲ್ಲಿ ದಿನಾಲೂ ಸೀರೆಯಲ್ಲೇ ನೋಡುವ ಮೇಡಂಗಳು ಅವತ್ತು ನಮ್ಮ ಹಾಗೆ ಡ್ರೆಸ್‌Õನಲ್ಲಿ ಇದ್ದರು. ಅಲ್ಲದೇ, ಸೆಲ್ಫಿಗೆ ಫೋಸು ಕೊಡುವುದು ಹೇಳಬೇಕಾ? ಟೀ ಫ್ಯಾಕ್ಟರೀ, ಗಾರ್ಡನ್‌ ಫ್ಲವರ್‌ ಶೋ… ವಾವ್‌! ಸೂಪರ್‌ ಆಗಿತ್ತು. ಬರೀ ಒಂದು ದಿನದಲ್ಲಿಯೇ ನಮ್ಮ ಮೊಬೈಲ್‌ನಲ್ಲಿ 200 ಫೋಟೋಸ್‌ ಏರಿತ್ತು. ಆ ದಿನ ಫ‌ುಲ್‌ ಜಾಲಿ ಮಾಡಿದೆವು. ನೀರಿನಲ್ಲಿ ಬೋಟಿಂಗ್‌ ಮಾಡಿದೆವು. ರಾತ್ರಿ ವೇಳೆ ಊಟಿಯಲ್ಲಿಯೇ ಉಳಿದೆವು. ಎರಡನೇ ದಿನ ಪುನಃ ಸಿದ್ಧರಾದೆವು. ಚಾ-ತಿಂಡಿ ಮುಗಿಸಿ ಕೊಡೈಕೆ‌ನಲ್‌ಗೆ ಹೊರಟೆವು. ಆ ದಿನ ಪೂರ್ತಿ ಬಸ್ಸಿನಲ್ಲಿಯೇ ನಮ್ಮ ಪಯಣವಾಗಿತ್ತು. ಇಲ್ಲೂ ನಾವೇನು ಕಡಿಮೆ ಇಲ್ಲ, ಬಸ್ಸಲ್ಲಿ ನಮ್ಮದು ಡ್ಯಾನ್ಸೇ ಡ್ಯಾನ್ಸ್‌. ಎಲ್ಲರೂ ಸೇರಿ ಕುಣಿಯುವುದು ಹಾಗೂ ಕೆಲವು ಗೇಮ್‌ಗಳನ್ನು ಆಯೋಜಿಸಲಾಗಿತ್ತು. ಕೆಲವರಿಗಂತು ಬಸ್ಸಲ್ಲಿ ಕೂತು ಕೂತು ವಾಂತಿ ಶುರುವಾಯಿತು. ಸಂಜೆ ವೇಳೆ ಕೊಡೈಕೆನಲ್‌ನಲ್ಲಿ ಸೂಸೈಡ್‌ ಪಾಯಿಂಟ್ಸ್‌ ನೋಡಿದೆವು. ನಂತರ ನಮ್ಮನ್ನು ಪರ್ಚೇಸಿಂಗ್‌ ಮಾಡಲು ಬಿಟ್ಟಿದ್ದರು. ರಾತ್ರಿ ನಮಗಾಗಿ ಫ‌ಯರ್‌ ಕ್ಯಾಂಪನ್ನೂ ಇಡಲಾಗಿತ್ತು. ಬಸ್ಸಲ್ಲಿ ಕೂತದ್ದರಿಂದ ಆಯಾಸವನ್ನು ನೀಗಿಸಲು ಬೆಂಕಿ ಹಾಕಿ ಅದರ ಬೆಳಕಿನಲ್ಲಿ ಡ್ಯಾನ್ಸ್‌ ಮಾಡಿದೆವು. ನಂತರ ಊಟ ಮಾಡಿ ಅಲ್ಲಿಂದ ಮೈಸೂರಿನತ್ತ ನಮ್ಮ ಪಯಣ. ಎಂಟನೆ ತಾರೀಕು ಬೆಳಿ‌ಗ್ಗೆ ಮೈಸೂರಿನಲ್ಲಿ  ಫ್ರೆಶ್‌ಅಪ್‌ ಆಗಿ ಅಲ್ಲಿಯೇ ಕೆಲವು ಸ್ಥಳಗಳನ್ನು ನೋಡಿದೆವು. ಮಧ್ಯಾಹ್ನ ಊಟವನ್ನು ಕುಶಾಲನಗರದಲ್ಲಿ ಮುಗಿಸಿ ಆ ಸವಿನೆನಪಿನೊಂದಿಗೆ ಉಪ್ಪಿನಂಗಡಿಗೆ ವಾಪಸ್‌ ಬಂದೆವು. 

ವಾಣಿಶ್ರೀ ಕೋರಿಯರ್‌  ದ್ವಿತೀಯ ಎಂ. ಎ. ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ

ಟಾಪ್ ನ್ಯೂಸ್

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.