ಪ್ರಿಯಾಮಣಿ ಇಲ್ಲಿ ಭಾರೀ ಚಂದ


Team Udayavani, Jan 4, 2020, 5:55 AM IST

4

ನಟಿ ಪ್ರಿಯಾಮಣಿ ಅವರ ನಟನೆಯನ್ನು ಇಷ್ಟಪಡುವವರು ತುಂಬಾ ಜನರಿದ್ದಾರೆ. ನಾನು ಕೂಡ ಬೆಳ್ಳಿತೆರೆಯಲ್ಲಿ ಅವರ ನಟನೆಯನ್ನು ಇಷ್ಟಪಡುತ್ತೇನೆ. ಆದರೆ, ಅವರು ನನಗೆ ಹೆಚ್ಚು ಇಷ್ಟವಾಗಿದ್ದು ವೈಟ್‌ ಎಂಬ ಮಿನಿಚಿತ್ರದಲ್ಲಿ.

ಇಡೀ ಚಿತ್ರದಲ್ಲಿರುವುದು ಎರಡೇ ಪಾತ್ರ. ಆದರೆ, ಅದು ಕೊಡುವ ಸಂದೇಶ ಮಹತ್ವದ್ದು. ಸಂದೇಶವನ್ನು ಸ್ವೀಕರಿಸುವ ಮನಸ್ಥಿತಿಯನ್ನೂ ಈ ಚಿತ್ರ ಸೃಷ್ಟಿಸುತ್ತದೆ. ಲ್ಯಾಬ್ರಡಾರ್‌ ನಾಯಿಯ ಜೊತೆಗೆ ಬೆಟ್ಟದ ಮೇಲೆ ದಿನವೂ ವಾಕಿಂಗ್‌ ಹೋಗುವ ಸುಂದರಿಯ ಕೈಯಲ್ಲೊಂದು ಕೋಲು ಇರುತ್ತದೆ. ಸದಾ ನಾಯಿಯೇ ಆಕೆಯನ್ನು ಕರೆದುಕೊಂಡು ಮುಂದೆ ಮುಂದೆ ಹೋಗುತ್ತದೆ. ಮುಂಜಾನೆ ಬೆಟ್ಟವನ್ನು ಏರುತ್ತ ಸಾಗುವ ಈ ದೃಶ್ಯವನ್ನು ಅತ್ಯಂತ ಸುಂದರ ವಾಗಿ ಕೆಮರಾ ಸೆರೆ ಹಿಡಿದಿದೆ. ಸೂರ್ಯನ ಕಿರಣಗಳು, ಬೆಟ್ಟದಿಂದ ಕಾಣುವ ಹಸಿರ ಸೊಬಗು, ಆ ಹಸಿರಿಗೆ ಮುತ್ತಿಕ್ಕುವ ಮೋಡಗಳು, ಮಂಜಿನ ಹನಿಗಳ ಚೆಲ್ಲಾಟ… ಎಲ್ಲವೂ ಬಹಳ ಸುಂದರವಾಗಿದೆ.

ಒಂದು ದಿನ ಬೆಟ್ಟದ ಮೇಲೆ ಆಕೆಯ ನಾಯಿ ಕಾಣೆಯಾಗುತ್ತದೆ. ಆ ನಾಯಿಯನ್ನು ಹುಡುಕುವಾಗ, ಕೈಯಿಂದ ಆ ಕೋಲೂ ಕೆಳಕ್ಕೆ ಬೀಳುತ್ತದೆ. ಚಿತ್ರದ ನಾಯಕಿಗೆ ಕಣ್ಣು ಕಾಣುವುದಿಲ್ಲ ಎಂಬುದು ಆಗಲೇ ಪ್ರೇಕ್ಷಕರಿಗೆ ಅರಿವಾಗುವುದು. ಕೋಲಿನಿಂದ ಕೇವಲ ಐದಾರು ಸೆಂ.ಮೀ. ಅಂತರದಲ್ಲೇ ಆಕೆಯ ಕೈ ಇದ್ದರೂ, ಆಕೆಗೆ ಕೋಲು ಸಿಗುವುದಿಲ್ಲ. ಆಕೆಗೆ ಆಸರೆಯಾಗಿದ್ದ ಮೊದಲ ಜೀವ ನಾಯಿ ಕಾಣೆಯಾಗಿದೆ. ಎರಡನೆಯ ಆಸರೆ ಕೋಲೂ ಕೈಯಿಂದ ಜಾರಿದೆ. ಅಲ್ಲಿ ಕುಸಿದು ಕುಳಿತ ಆಕೆ ಸಹಾಯಕ್ಕಾಗಿ ಕಿರುಚುತ್ತಾಳೆ.

ಮತ್ತೆ ನಾಯಿ ಬಂದು ಆಕೆಗೆ ಕೋಲು ಎತ್ತಿಕೊಡುವ ದೃಶ್ಯವು ನೋಡುಗರ ಕಣ್ಣಲ್ಲಿ ನೀರು ತರಿಸುತ್ತದೆ. ಕೊನೆಯಲ್ಲಿ “ನೇತ್ರದಾನ’ದ ಮಹತ್ವವನ್ನು ಬೆಂಬಲಿಸಿ ಅಮಿತಾಭ್‌ ಬಚ್ಚನ್‌ ನೀಡುವ ಸಂದೇಶವಿದೆ. ಆ ಧ್ವನಿಯೂ ಚೆನ್ನಾಗಿದೆ. ಮನು ನಾಗ್‌ ನಿರ್ದೇಶನಕ್ಕೆ ಹ್ಯಾಟ್ಸ್‌ ಆಫ್ ಅನ್ನಲೇಬೇಕು.
(ನೋಡಿ : https://www.youtube.com/watch?v=91zBwrJuLAw)

ಕಿರಣ್‌ ಕುಮಾರ್‌ ಕಣ್ಣೂರು

ಟಾಪ್ ನ್ಯೂಸ್

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.