ತರಬೇತಿಯ ಲಾಭ


Team Udayavani, Oct 12, 2018, 6:00 AM IST

z-15.jpg

ಶಿಕ್ಷಣ ಎಂಬುದು ಬಾಲ್ಯದಿಂದ ಆರಂಭಗೊಂಡು ನಮ್ಮ ಅಭಿಲಾಷೆಗೆ ತಕ್ಕಂತೆ ಹೊಂದಿಕೊಂಡು ಮುಂದುವರಿಕೆ ಕಾಣುತ್ತದೆ. ಕೆಲವರು ಪಿಯುಸಿ-ಪದವಿ ಜೀವನಕ್ಕೆ ಚುಕ್ಕೆ ಇಟ್ಟುಬಿಡುವವರಿದ್ದಾರೆ. ನಾನೋ ಪತ್ರಿಕಾ ಕ್ಷೇತ್ರದಲ್ಲಿ ತನ್ನನ್ನ ತಾನು ಗುರುತಿಸೋ ನೆಪದಲ್ಲಿ  ಪತ್ರಿಕಾ ವಿಭಾಗಕ್ಕೆ ದಾಖಲಾತಿ ಮಾಡಿಕೊಂಡವನು. ಬಿ.ಎ. ವಿಭಾಗದ ನಾನು ನಮ್ಮದೇ ಒಬ್ಬರು ಪ್ರೊಫೆಸರ್‌ ಪಾರ್ಟ್‌ಟೈಮ್‌ ಉದ್ಯೋಗಿಯಾಗಿ ಒಂದು ಹೆಸರಾಂತ ದೃಶ್ಯ ಮಾಧ್ಯಮದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದುದ್ದರಿಂದ ಅವರ ಒಂದು ಸಲಹೆಯ ಮೇರೆಗೆ ಪತ್ರಿಕಾ ರಂಗದ ಉದ್ಯೋಗ ತರಬೇತಿಗೆ ಮುಂದಾದಾಗ ಪಾಂಶುಪಾಲರ ಪತ್ರದಿಂದಾಗಿ ಸಮ್ಮತಿ ಪಡೆದು ಒಂದೂವರೆ ತಿಂಗಳುಗಳ ಕಾಲ ತರಬೇತಿಗಾಗಿ ಮಂಗಳೂರಿನ ಹೆಸರಾಂತ ಕರಾವಳಿ ಕರ್ನಾಟಕದ ನಾಡಿಮಿತವಾಗಿದ್ದ  ದೃಶ್ಯಮಾಧ್ಯಮದಲ್ಲಿ 45 ದಿನಗಳ ತರಬೇತಿಗೆ ನನ್ನ ತರಗತಿಯ ಇನ್ನೊಬ್ಬಳು ಸಹೋದರಿಯೊಂದಿಗೆ ಅಪ್ಪಣೆ ಸಿಕ್ಕಿತ್ತು. 

ತರಬೇತಿಯ ಪ್ರಥಮ ದಿನ ಧೈರ್ಯದಿಂದ ಒಳನುಸುಳಿ ಎಲ್ಲರಿಂದಲೂ ವಿಶ್ವಾಸಗರಿಯನ್ನ ಸಂಪಾದಿಸಿ ನ್ಯೂಸ್‌ ಮೇಲಧಿಕಾರಿಯಿಂದ ಸ್ನೇಹದ ಭಾವವನ್ನ ಗಳಿಸಿದೆವು. ಪ್ರಾರಂಭದಲ್ಲಿ  ಸುದ್ದಿಯನ್ನು ಕಲೆಹಾಕುವುದರ ತರಬೇತಿಗೆ ಒಳಪಟ್ಟರೆ, ಬಳಿಕದ ದಿನಗಳಲ್ಲಿ  ರಿಪೋರ್ಟಿಂಗ್‌, ದೃಶ್ಯ ಮಾಧ್ಯಮದ ನೆಲೆಯಲ್ಲಿ ಸುದ್ದಿಗೆ ಹಿನ್ನಲೆ ಸ್ವರ, ಎಡಿಟಿಂಗ್‌, ಪ್ರೋಗ್ರಾಮ್‌ ತಯಾರಿ, ಜಾಹೀರಾತು ವಿಭಾಗದ ಕಡೆಗಳಲ್ಲಿಯೂ ಕಣ್ಣಾಡಿಸುವ ಅವಕಾಶ ಸಿಕ್ಕಿ ಎಲ್ಲರ ಆತ್ಮೀಯತೆ ಗಳಿಸಿದೆವು.

ಪದವಿ ಜೀವನದಲ್ಲೇ ಫೋಟೋಗ್ರಫಿ ವಿಚಾರದಲ್ಲಿ ಕೊಂಚ ಆಸಕ್ತಿ ಹೊಂದಿದ್ದರಿಂದ ತರಬೇತಿಯ ಸಮಯ ರಿಪೋರ್ಟಿಂಗ್‌ ಮಾಡಲು ಬಹಳ ಪೂರಕವಾಗಿತ್ತು. ಆ ದಿನಗಳಲ್ಲಿ ಚುನಾವಣಾ ರಂಗು ಬಿರುಸಾಗಿಯೇ ಬೀಸತೊಡಗಿತ್ತು. ನಮ್ಮದು ಜಾಹೀರಾತು ಆಧಾರಿತ ವಾಹಿನಿ ಆದದ್ದರಿಂದ ಈ ಪ್ರಚಾರದ ಹಿನ್ನಲೆಯಲ್ಲಿ ಎಲ್ಲ ಅಭ್ಯರ್ಥಿಗಳ ಸಾಕ್ಷ್ಯ ಚಿತ್ರ ರಚಿಸುವ ಸೂಚನೆಯ ಇದ್ದರಿಂದ ಛಾಯಾಗ್ರಹಣದ ನೆಲೆಯಲ್ಲಿ ಈ ಅವಕಾಶ ಒದಗಿಬಂತು.

ಈ ತರಬೇತಿಯಿಂದ ನನ್ನ ಕಲ್ಪನೆ ಲೋಕಕ್ಕೆ ಸೀಮಿತವಾದ ಮಾಧ್ಯಮ ಕ್ಷೇತ್ರದಲ್ಲಿ ಡೆಸ್ಕ್ನಿಂದ ಹಿಡಿದು, ರಿಪೋರ್ಟಿಂಗ್‌, ಹಿನ್ನಲೆ ಧ್ವನಿ, ನೇರ ಪ್ರಸಾರ, ವಾರ್ತೆಗಳು, ಜಾಹೀರಾತು ಕಾರ್ಯಗಳು- ಹೀಗೆ ದೃಶ್ಯ ಮಾಧ್ಯಮದ ವೈವಿಧ್ಯಮಯ ಕಾರ್ಯಗಳನ್ನು 45 ದಿನಗಳ ಅವಧಿಯಲ್ಲಿ ಒಂದು ಸಂಸ್ಥೆಯಿಂದ ಪಡೆಯುವಂತಾಯಿತು.

ಗಣೇಶ್‌ ಕುಮರ್‌
ಪತ್ರಿಕೋದ್ಯಮ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.