Tata Motors ನೂತನ ಸುಧಾರಿತ ಟಾಟಾ ನೆಕ್ಸಾನ್‌, ನೆಕ್ಸಾನ್‌ ಇವಿ ಮಾರುಕಟ್ಟೆಗೆ


Team Udayavani, Sep 23, 2023, 10:09 PM IST

ನೂತನ ಸುಧಾರಿತ ಟಾಟಾ ನೆಕ್ಸಾನ್‌, ನೆಕ್ಸಾನ್‌ ಇವಿ ಮಾರುಕಟ್ಟೆಗೆ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಟಾಟಾ ಕಂಪನಿಯ ಅಧಿಕೃತ ಡೀಲರ್‌ ಆಗಿರುವ ಅಟೋಮ್ಯಾಟ್ರಿಕ್ಸ್‌ ಮಂಗಳೂರು ಹಾಗೂ ಉಡುಪಿ ಮಾರುಕಟ್ಟೆಗೆ ನೂತನ ಟಾಟಾ ನೆಕ್ಸಾನ್‌ ಹಾಗೂ ನೆಕ್ಸಾನ್‌ ಇವಿ 3.0 ವಾಹನಗಳನ್ನು ಬಿಡುಗಡೆ ಮಾಡಿದೆ.

ಮಂಗಳೂರಿನ ಅಟೊಮ್ಯಾಟ್ರಿಕ್ಸ್‌ ಮಳಿಗೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನೂತನ ವಾಹನಗಳನ್ನು ಟಾಟಾ ಗ್ರಾಹಕರಾದ ವ್ಯಾಪಾರಿ ವರದರಾಜ ಶೆಣೈ, ಕಂಟೆಂಟ್‌ ಕ್ರಿಯೇಟರ್‌ಗಳಾದ ಶರಣ್‌ ಚಿಲಿಂಬಿ, ಪ್ರಿಯಾ ಮೋನಿಕಾ ಡಿ’ಸೋಜ ಅವರು ಬಿಡುಗಡೆಗೊಳಿಸಿದರು. ಟಾಟಾ ವಾಹನಗಳ ಉನ್ನತ ಮಟ್ಟದ ಸುರಕ್ಷತಾ ರೇಟಿಂಗ್‌,ವೈಶಿಷ್ಟ್ಯಗಳು, ಚಾಲನೆಯ ಸುಖದ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು. ಈ ವೇಳೆ ಅಟೊಮ್ಯಾಟ್ರಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್‌ ಮಯ್ಯ ಉಪಸ್ಥಿತರಿದ್ದರು. ಟಾಟಾ ಮೋಟಾರ್ಸ್‌ ವಿಠಲದಾಸ್‌ ಅವರು ನೂತನ ವಾಹನಗಳ ವೈಶಿಷ್ಟ್ಯಗಳನ್ನು ಪರಿಚಯಿಸಿದರು.

ಟಾಟಾ ನೆಕ್ಸಾನ್‌
2017ರಲ್ಲಿ ಬಿಡುಗಡೆಯಾಗಿದ್ದ ನೆಕ್ಸಾನ್‌ 2020ರಲ್ಲಿ ಸುಧಾರಣೆ ಕಂಡಿತ್ತು. ಪ್ರಸ್ತುತ ದೇಶದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಎಸ್‌ಯುವಿ ಎನಿಸಿರುವ ನೆಕ್ಸಾನ್‌ ಈಗ ಆಲ್‌ ನ್ಯೂ ನೆಕ್ಸಾನ್‌ ಮತ್ತು ನೆಕ್ಸಾನ್‌ ಇವಿ ಸುಧಾರಿತ ಆವೃತ್ತಿಗಳೊಂದಿಗೆ ಉನ್ನತ ವೈಶಿಷ್ಟ್ಯ ಗಳು ಹಾಗೂ ಪರಿಚಯಾತ್ಮಕ ಎಕ್ಸ್‌-ಶೋರೂಂ ದರವಾದ 8.09 ಲಕ್ಷ ರೂ(ಪೆಟ್ರೋಲ್‌).ಗಳೊಂದಿಗೆ ಬಂದಿದೆ.

ಇಂಪಾಕ್ಟ್ 3.0 ವಿನ್ಯಾಸವು ಸಮಕಾಲೀನ ವಿನ್ಯಾಸ, ಆಕರ್ಷಕ ಒಳಾಂಗಣ ಹೊಂದಿದ್ದು ಗಮನಸೆಳೆಯುವ ಮುಂಭಾಗದ ಗ್ರಿಲ್‌, ಬೈ ಎಲ್‌ಇಡಿ ಹೆಡ್‌ಲೈಟ್‌, ಏರೋಡೈನಾಮಿಕ್‌ ಆಗಿ ವಿನ್ಯಾಸವಿರುವ ಬಂಪರ್‌, ಆಲಾಯ್‌ ವೀಲ್‌, ಎಲ್‌ಇಡಿ ಟೈಲ್‌ಲೈಟ್‌ನೊಂದಿಗೆ ಸಂಪೂರ್ಣ ನವೀಕರಿಸಲಾಗಿರುವ ಎಕ್ಸ್‌ ಫ್ಯಾಕ್ಟರ್‌ ಶೈಲಿಯ ಹಿಂಭಾಗ, ಸ್ವಾಗತ ಹಾಗೂ ವಿದಾಯ ಕೋರುವ ವಿನ್ಯಾಸದ ಭಾಷೆಯನ್ನೂ ಹೊಂದಿದೆ.

10.25 ಇಂಚ್‌ ಅಲ್ಟಾ ಎಚ್‌ಡಿ ಟಚ್‌ ಸ್ಕ್ರೀನ್ ಸಿನೆಮಾಟಿಕ್‌ ಇನ್ಫೊಟೈನ್‌ಮೆಂಟ್‌ ವ್ಯವಸ್ಥೆ, ಫ್ಯೂಚರಿಸ್ಟಿಕ್‌ ಇನ್ಫೊಟೈನ್‌ಮೆಂಟ್‌ ಸಿಸ್ಟಂ ಜೊತೆ 3ಡಿ ನೇವಿಗೇಶನ್‌ ಸಿಸ್ಟಂ, ಸನ್‌ರೂಫ್‌, ವೈರ್‌ಲೆಸ್‌ ಚಾರ್ಜರ್‌, 360 ಡಿಗ್ರಿ ಕ್ಯಾಮೆರಾ ಸಿಸ್ಟಂ ಹೊಂದಿದೆ. 1.2 ಲೀಟರ್‌ ಟಬೋ ಚಾರ್ಜ್‌ಡ್‌ ಪೆಟ್ರೋಲ್‌ ಇಂಜಿನ್‌ 6 ಸ್ಪೀಡ್‌ನ‌ ಮ್ಯಾನ್ಯುವಲ್‌ ಅಥವಾ 7 ಸ್ಪೀಡ್‌ನ‌ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ಹೊಂದಿದೆ. 6 ಏರ್‌ಬ್ಯಾಗ್‌, ಎಬಿಎಸ್‌ ವಿತ್‌ ಇಬಿಡಿ, ಇಎಸ್‌ಪಿ ಹೊಂದಿದ್ದು ಸುರಕ್ಷಿತವಾಗಿದೆ.

ಜೆನ್‌-2 ಮೋಟಾರ್‌ನೊಂದಿಗೆ ಬಂದಿರುವ ನೆಕ್ಸಾನ್‌ ಇವಿ ಒಂದು ಚಾರ್ಜ್‌ನಲ್ಲಿ 456 ಕಿ.ಮೀ ವರೆಗೂ ಸಂಚರಿಸುವ ಕ್ಷಮತೆ ಹೊಂದಿದ್ದು ವೆಹಿಕಲ್‌-ಟು-ವೆಹಿಕಲ್‌ ಚಾರ್ಜಿಂಗ್‌, ವಿ2ಎಲ್‌ ಟೆಕ್ನಾಲಜಿ, ಆರ್ಕೇಡ್‌ ಇವಿ ಆ್ಯಪ್‌ ಸುಟ್‌, ಪ್ಯಾಡಲ್‌ ಶಿಫ್ಟರ್, ಮಲ್ಟಿ ಡ್ರೈವ್‌ ಮೋಡ್‌ಗಳನ್ನು ಹೊಂದಿದೆ. ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಲಿಕ್ವಿಡ್‌ ಕೂಲ್ಡ್‌ ಬ್ಯಾಟರಿ ಪ್ಯಾಕ್‌ ಇದರ ವೈಶಿಷ್ಟ್ಯ.

ಹೆಚ್ಚಿನ ಮಾಹಿತಿಗಾಗಿ ಬಿಜೈ ಮಂಗಳೂರು, ಉಡುಪಿ ಗುಂಡಿಬೈಲ್‌, ಪುತ್ತೂರು ಬೊಳುವಾರು, ಸುರತ್ಕಲ್‌, ಬಿ.ಸಿ.ರೋಡ್‌ನ‌ಲ್ಲಿರುವ ಅಟೊಮ್ಯಾಟ್ರಿಕ್ಸ್‌ ಶೋರೂಂಗಳನ್ನು ಸಂದರ್ಶಿಸಬಹುದು.

ಟಾಪ್ ನ್ಯೂಸ್

BJP 2

Lok Sabha Polls 2024: ಬಿಜೆಪಿಯ ಉತ್ಸಾಹ ಇಮ್ಮಡಿಗೊಳಿಸಿದ ಮೂರು ರಾಜ್ಯಗಳ ಫಲಿತಾಂಶ

Session: ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆ ಇದೆ: ಪ್ರಹ್ಲಾದ್ ಜೋಶಿ

Session: ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆ ಇದೆ: ಪ್ರಹ್ಲಾದ್ ಜೋಶಿ

TDY-16

World Record: 24 ಗಂಟೆಯಲ್ಲಿ 99 ಬಾರ್‌ಗಳಲ್ಲಿ ಕುಡಿದು ಗಿನ್ನಿಸ್‌ ದಾಖಲೆ ಬರೆದ ಸ್ನೇಹಿತರು

Rajasthan Election; Former CM Vasundhara Raje won a landslide victory

Rajasthan Election; ಭರ್ಜರಿ ಗೆಲುವು ಸಾಧಿಸಿದ ಮಾಜಿ ಸಿಎಂ ವಸುಂಧರಾ ರಾಜೆ

ದಾವಣಗೆರೆಯ ಉತ್ಸಾಹಿ ಯುವಕನ “ಕೇಸರಿ ಕೃಷಿ” ಯಶೋಗಾಥೆ

ದಾವಣಗೆರೆಯ ಉತ್ಸಾಹಿ ಯುವಕನ “ಕೇಸರಿ ಕೃಷಿ” ಯಶೋಗಾಥೆ

8-hanur-news

ಶಾಸಕ ಮಂಜುನಾಥ್ ಅಧಿಕಾರ ದರ್ಪದ ವಿರುದ್ಧ ಹರಿಹಾಯ್ದ ಎಎಪಿ ಜಿಲ್ಲಾಧ್ಯಕ್ಷ ಹರೀಶ್.ಕೆ.ಮತ್ತೀಪುರ

police USA

Philippines ; ಪ್ರಬಲ ಭೂಕಂಪದ ಬೆನ್ನಲ್ಲೇ ಉಗ್ರರ ದಾಳಿ : 4 ಮೃತ್ಯು, ಹಲವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

US Market: ಟೆಸ್ಲಾದ “ಸೈಬರ್‌ ಟ್ರಕ್‌ ಮಾರುಕಟ್ಟೆಗೆ ಬಿಡುಗಡೆ…ಬೆಲೆ ದುಬಾರಿ!

US Market: ಟೆಸ್ಲಾದ “ಸೈಬರ್‌ ಟ್ರಕ್‌ ಮಾರುಕಟ್ಟೆಗೆ ಬಿಡುಗಡೆ…ಬೆಲೆ ದುಬಾರಿ!

X

X ಸಂಸ್ಥೆಯ ಉದ್ಯೋಗಿಗಳ ಸಾಮೂಹಿಕ ರಾಜೀನಾಮೆ

India records 37.9 ಲಕ್ಷ ವಾಹನ ಮಾರಾಟ: ದಾಖಲೆ

India records 37.9 ಲಕ್ಷ ವಾಹನ ಮಾರಾಟ: ದಾಖಲೆ

you tube 1

AI News: ಯೂಟ್ಯೂಬ್‌ ವಿಡಿಯೋ ಪ್ರಶ್ನೆಗೆ ಎ.ಐ.ಉತ್ತರ

chat gpt owner

Open AI: ಆಡಳಿತ ಮಂಡಳಿಯನ್ನೇ ವಜಾ ಮಾಡಿದ ಆಲ್ಟ್ಮನ್‌! 

MUST WATCH

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

udayavani youtube

ಗುರುಕಿರಣ್ ರಿಗೆ ಬೆಂಗಳೂರು ಕಂಬಳದ ಮೇಲಿನ ಆಸಕ್ತಿಯ ಹಿಂದಿದೆ ಅದೊಂದು ಕಾರಣ

ಹೊಸ ಸೇರ್ಪಡೆ

BJP 2

Lok Sabha Polls 2024: ಬಿಜೆಪಿಯ ಉತ್ಸಾಹ ಇಮ್ಮಡಿಗೊಳಿಸಿದ ಮೂರು ರಾಜ್ಯಗಳ ಫಲಿತಾಂಶ

Session ಅಡ್ಡಿಪಡಿಸಿದರೆ ಕೆಟ್ಟ ಫಲಿತಾಂಶ ನೋಡಬೇಕಾಗುತ್ತದೆ: ಪ್ರತಿಪಕ್ಷಗಳಿಗೆ ಜೋಶಿ ಮಾತು

Session ಅಡ್ಡಿಪಡಿಸಿದರೆ ಕೆಟ್ಟ ಫಲಿತಾಂಶ ನೋಡಬೇಕಾಗುತ್ತದೆ: ಪ್ರತಿಪಕ್ಷಗಳಿಗೆ ಜೋಶಿ ಮಾತು

Belagavi: ಸಾಂಬ್ರಾದಲ್ಲಿ ವಿಮಾನ ನಿಲ್ದಾಣ ಇದ್ದರೂ ಬಸ್‌ ಇಲ್ಲ

Belagavi: ಸಾಂಬ್ರಾದಲ್ಲಿ ವಿಮಾನ ನಿಲ್ದಾಣ ಇದ್ದರೂ ಬಸ್‌ ಇಲ್ಲ

Session: ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆ ಇದೆ: ಪ್ರಹ್ಲಾದ್ ಜೋಶಿ

Session: ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆ ಇದೆ: ಪ್ರಹ್ಲಾದ್ ಜೋಶಿ

TDY-16

World Record: 24 ಗಂಟೆಯಲ್ಲಿ 99 ಬಾರ್‌ಗಳಲ್ಲಿ ಕುಡಿದು ಗಿನ್ನಿಸ್‌ ದಾಖಲೆ ಬರೆದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.