ವಿದ್ಯುತ್ ವಾಹನಗಳಿಗೆ ಜನ ಶರಣು; ವರ್ಷದಲ್ಲಿ ಇವಿ ವಾಹನಗಳ ಸಂಖ್ಯೆ ಜಿಗಿತ
ತೈಲೋತ್ಪನ್ನ ದರ ಏರಿಕೆಗೆ ಬಸವಳಿದ ಜನರು
Team Udayavani, Apr 12, 2022, 4:50 PM IST
ಹೊಸದಿಲ್ಲಿ: ದಿನ ಬೆಳಗಾದರೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದೆ.ಹೀಗಾಗಿ ಜನರು ವಿದ್ಯುತ್ ಚಾಲಿತ ವಾಹನ (ಇವಿ)ಗಳತ್ತ ಮುಖ ಮಾಡಿದ್ದಾರೆ. 2021-22ನೇ ಸಾಲಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಖರೀದಿ ಮೂರು ಪಟ್ಟು ಹೆಚ್ಚಾಗಿದೆ. ಅದರಲ್ಲೂ ದ್ವಿಚಕ್ರ ವಾಹನಗಳ ಪ್ರಮಾಣವೇ ಹೆಚ್ಚು ಎಂದು ವಾಹನ ಡೀಲರ್ಗಳ ಒಕ್ಕೂಟ (ಎಫ್ಎಡಿಎ)ವು ದೇಶ ವ್ಯಾಪಿ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.
ಒಟ್ಟು 4,29,217 ಇವಿಗಳು ಮಾರಾಟ ವಾಗಿವೆ. 2020-21ನೇ ಸಾಲಿನಲ್ಲಿ 1,34,821 ವಾಹನಗಳು ಮಾರಾಟ ವಾಗಿದ್ದವು. ತೈಲೋ ತ್ಪನ್ನ ಗಳ ದರ ಏರಿಕೆ ಮತ್ತು ದುರಸ್ತಿ ವಿಚಾರವೂ ಜನರನ್ನು ಕಂಗೆಡಿಸಿದ್ದು ಇದಕ್ಕೆ ಕಾರಣ.
ಪ್ರಯಾಣಿಕರ ವಾಹನದಲ್ಲೂ ಏರಿಕೆ
ಪ್ರಯಾಣಿಕರ ವಾಹನಗಳ ವಿಭಾಗದಲ್ಲಿ ಕೂಡ ಇವಿಗಳು ಹೆಚ್ಚು ಮಾರಾಟವಾಗಿರುವ ಬಗ್ಗೆ ಒಕ್ಕೂಟ ಮಾಹಿತಿ ನೀಡಿದೆ. 2020-21ನೇ ಸಾಲಿನಲ್ಲಿ 4,984 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದರೆ, ನಿಕಟಪೂರ್ವ ವಿತ್ತೀಯ ವರ್ಷದಲ್ಲಿ 17,802 ವಾಹನಗಳಿಗೆ ಬೇಡಿಕೆ ಬಂದಿದ್ದವು. ಈ ಪೈಕಿ ಟಾಟಾ ಮೋಟರ್ಸ್ನ 15,198 ವಾಹನಗಳು ಗ್ರಾಹಕರನ್ನು ಕಂಡುಕೊಂಡಿವೆ. ಇನ್ನು ಎಂ.ಜಿ. ಮೋಟಾರ್ ಇಂಡಿಯಾದ 2,045 ವಾಹನಗಳು ಮಾರಾಟವಾಗುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮತ್ತು ಹ್ಯುಂಡೈ ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನಗಳಲ್ಲಿವೆ.
ಐದರಷ್ಟು ಹೆಚ್ಚು
ಹೆಚ್ಚು ಮಾರಾಟವಾಗಿರುವುದು ದ್ವಿಚಕ್ರ ವಾಹನಗಳು. 2021-22ನೇ ಸಾಲಿನಲ್ಲಿ 2,31,338 ವಿದ್ಯುಚ್ಛಾಲಿತ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ಅದಕ್ಕಿಂತ ಹಿಂದಿನ ವಿತ್ತೀಯ ವರ್ಷದಲ್ಲಿ ಕೇವಲ 41,046 ಇವಿಗಳು ಮಾರಾಟವಾಗಿದ್ದವು. ದ್ವಿಚಕ್ರ ವಾಹನಗಳ ಪೈಕಿ ಹೀರೋ ಇಲೆಕ್ಟ್ರಿಕ್ ಕಂಪೆನಿಯ ಶೇ. 28.23 ವಾಹನಗಳು ಮಾರಾಟವಾಗಿವೆ. ಒಕಿನಾವಾ ಅಟೋಟೆಕ್ ದ್ವಿತೀಯ ಸ್ಥಾನದಲ್ಲಿದೆ. ಆ್ಯಂಪ್ರೀ ವೆಹಿಕಲ್ನ 24,648 ವಾಹನಗಳು ಮಾರಾಟವಾಗಿ ತೃತೀಯ, ಎಥರ್ ಎನರ್ಜಿಯ 19,97 ವಾಹನಗಳು ಮಾರಾಟವಾಗಿ ನಾಲ್ಕನೇ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
MUST WATCH
ಹೊಸ ಸೇರ್ಪಡೆ
Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ
Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ
Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ
Udupi ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ
Dhruva Sarja ಮಾರ್ಟಿನ್ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್ ಮೆಹ್ತಾ