ಟ್ವಿಟರ್ ಬಳಕೆದಾರರು ಗಮನಿಸಿ, ಸರಿಯಾದ ಮಾಹಿತಿ ಪಡೆಯುವುದು ಹೇಗೆ #ThinkBeforeYouShare


Team Udayavani, Apr 9, 2020, 3:48 PM IST

ಟ್ವಿಟರ್ ಬಳಕೆದಾರರು ಗಮನಿಸಿ, ಸರಿಯಾದ ಮಾಹಿತಿ ಪಡೆಯುವುದು ಹೇಗೆ #ThinkBeforeYouShare

ಕೋವಿಡ್-19 ವೈರಸ್ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ  ಅಗತ್ಯ ಮತ್ತು ಅನಗತ್ಯ ಮಾಹಿತಿಗಳು ಎಗ್ಗಿಲ್ಲದಂತೆ ಪ್ರಸಾರವಾಗುತ್ತಿವೆ. ಇದರಲ್ಲಿ ಸತ್ಯ ಯಾವುದು? ಸುಳ್ಳು ಯಾವುದು ಎಂಬ ಗೊಂದಲ ಸಾರ್ವಜನಿಕರಿಗೆ ಮೂಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಟ್ವಿಟರ್ ತನ್ನ ಬಳಕೆದಾರರಿಗೆ ಈ ಸಂದರ್ಭದಲ್ಲಿ ಕೆಲವು ಸಲಹೆಗಳನ್ನು ನೀಡಿದೆ. ಖಚಿತ ಮಾಹಿತಿ ಪಡೆಯಲು ಟ್ವಿಟರ್ ಬಳಕೆದಾರರು ಏನನ್ನು ಅನುಸರಿಸಬೇಕು ಎಂಬ ಮಾರ್ಗದರ್ಶನ ಮಾಡಿದೆ.

ಲಾಕ್‌ಡೌನ್ ಸಮಯದಲ್ಲಿ ನಾವೆಲ್ಲರೂ ದೂರದೂರವಾಗಿದ್ದರೂ  ಒಟ್ಟಾಗಿರುವುದಕ್ಕಾಗಿ ಟ್ವಿಟ್ಟರ್‌ನಲ್ಲಿ ವಿಶ್ವಾಸನೀಯ ಮಾಹಿತಿಯನ್ನು ಪಡೆಯುವುದಕ್ಕೆ ಕೆಲವು ಸಲಹೆಗಳನ್ನು ನೀಡಿದೆ. #ThinkBeforeYouShare    #FlattenTheCurve ಎಂಬ ಹ್ಯಾಶ್‌ಟ್ಯಾಗನ್ನು ಇದಕ್ಕಾಗಿ ನೀಡಿದೆ.

*ವಿಶ್ವಾಸನೀಯ ಮೂಲಗಳನ್ನೇ ಅನುಸರಿಸಿ, ಮತ್ತು ವಿಶ್ವಾಸನೀಯ ಮೂಲಗಳಿಂದ ಕೋವಿಡ್-19 ಸೋಂಕು ಕುರಿತ ಮಾಹಿತಿ ಪಡೆಯಿರಿ. COVID-19 search prompt ಅನ್ನೇ ಉಪಯೋಗಿಸಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ @MoHFW,  @WHO @PMO ದಂತಹ ಅಧಿಕೃತ ಖಾತೆಗಳಿಗೆ ಸೂಚನೆಗಳನ್ನು (ನೋಟಿಫಿಕೇಶನ್‌) ಆನ್ ಮಾಡಿ.

*ಪರಿಶೀಲಿತ ಮೂಲಗಳಿಂದ ಕೋವಿಡ್-19 ಕುರಿತಾದ ಇತ್ತೀಚಿನ ವಾಸ್ತವಾಂಶಗಳಿಗಾಗಿ dedicated bilingual events page ನೋಡಿ. ಭಾರತೀಯರು ತಮ್ಮ ದೇಶದ ಕಾಲಮಾನದ ಮೇಲ್ಭಾಗದಲ್ಲಿ ಈ ಪುಟವನ್ನು ನೋಡಬಹುದು. ಈ ಕಾಲಮಾನವು ಇತ್ತೀಚಿನ ಸಾಮಾಜಿಕ ಅಂತರ ಮತ್ತು ಆರೋಗ್ಯ ಶುಶ್ರೂಷಾ ಮಾಹಿತಿಗಳ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಲು ಜನರಿಗೆ ನೆರವಾಗುತ್ತದೆ.

*ದೊಡ್ಡ ಸಂವಾದಗಳ ಗುಂಪನ್ನು ಸೇರಿಕೊಳ್ಳಲು, ನಿಮ್ಮ ಟ್ವೀಟ್‌ಗಳಲ್ಲಿ ಅದಕ್ಕೆ ಸಂಬಂಧಪಟ್ಟ ಹ್ಯಾಶ್‌ಟ್ಯಾಗ್ ಉಪಯೋಗಿಸಿ. ಉದಾಹರಣೆಗೆ, ವೈರಾಣುವನ್ನು ನಿಗ್ರಹಿಸಲು ಭಾರತದ ಪ್ರಯತ್ನಗಳು ಮತ್ತು ಕಾರ್ಯಾಚರಣೆಗಳ ಕುರಿತಾದ ಟ್ವೀಟ್‌ಗಳನ್ನು ಅನುಸರಿಸಲು #IndiaFightsCorona ಸೂಕ್ತವಾದ ಹ್ಯಾಶ್‌ಟ್ಯಾಗ್ ಆಗಿದೆ.

*ಬಹಳ ಜವಾಬ್ದಾರಿಯುತವಾಗಿ ಟ್ವೀಟ್ ಮರುಟ್ವೀಟ್ ಮಾಡಿ ಮತ್ತು ತೊಡಗಿಕೊಳ್ಳಿ. ನಿಮ್ಮ ಮಾಹಿತಿಯ ಮೂಲವು ವಿಶ್ವಾಸನೀಯವಾಗಿರುವುದನ್ನು ಖಾತರಿಪಡಿಸಿಕೊಳ್ಳಿ. ಅಧಿಕೃತ ಮೂಲದಿಂದ ಬಂದಿರುವುದು ಅಥವಾ ಪರಿಶೀಲಿಸಲ್ಪಟ್ಟಿರುವುದನ್ನು ಹೊರತುಪಡಿಸಿ ಇತರ ಅಪರಿಶೀಲಿತ ಸಂದೇಶಗಳು ಅಥವಾ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳಬೇಡಿ. ತಪ್ಪು ಮಾಹಿತಿ ಸಂಗ್ರಹಿಸಬೇಡಿ ಅಥವಾ ಕಳುಹಿಸಬೇಡಿ. #ThinkBeforeYouShare

*ಜಾಗತಿಕ, ರಾಷ್ಟ್ರೀಯ ಹಾಗು ಪ್ರಾದೇಶಿಕ ಸಂದರ್ಭದಲ್ಲಿ, ಕೋವಿಡ್-19 ಸುತ್ತಲಿರುವ ಇತ್ತೀಚಿನ ಮಾಹಿತಿ ಮತ್ತು ಸುದ್ದಿಗಳನ್ನು ತಿಳಿದುಕೊಂಡಿರಲು ವಿಶ್ವಾಸನೀಯ ದಿನ ಪತ್ರಿಕೆಗಳ ಖಾತೆಗಳನ್ನು ಅನುಸರಿಸಿ.

* ಒಂದು ಟ್ವೀಟ್ ಕೋವಿಡ್-19 ಕುರಿತು ಗಾಳಿಸುದ್ದಿ ಹರಡುತ್ತಿದೆ ಅಥವಾ ಮೂಢನಂಬಿಕೆ ಬೆಳೆಸುತ್ತಿದೆ ಎಂದು ನಿಮಗನಿಸಿದರೆ, ಅಥವಾ ಟ್ವಿಟರ್ ನಿಯಮಗಳನ್ನು ಉಲ್ಲಂಸುತ್ತಿದೆ ಎನಿಸಿದರೆ ದಯವಿಟ್ಟು ಅದನ್ನು ವರದಿ ಮಾಡಿ. ಟ್ವಿಟ್ಟರ್ ಉದ್ಯೋಗಿಗಳು ಅಥವಾ ಟ್ವಿಟ್ಟರ್ ಸಂಸ್ಥೆಯ ಖಾತೆಗಳಿಗೆ ಟ್ಯಾಗ್ ಮಾಡಿ. ಒಂದು ಟ್ವೀಟ್‌ಅನ್ನು ವರದಿ ಮಾಡಲು,  ಟ್ವೀಟ್‌ನ ಮೇಲ್ಭಾಗದಲ್ಲಿರುವ ಡ್ರಾಪ್‌ ಡೌನ್ ಮೆನು ಮೇಲೆ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗೆ ಕ್ಲಿಕ್‌ ಮಾಡಿ. https://blog.twitter.com/en_in/topics/events/2019/Twitter-rules-reporting.html

*ಇಚ್ಛೆಯಿಲ್ಲದ ಖಾತೆಗಳನ್ನು ಅನುಸರಿಸಬೇಡಿ. ಅಂಥ ಖಾತೆಗಳು ನಿಮ್ಮನ್ನು ಅನುಸರಿಸುವುದನ್ನು ಬ್ಲಾಕ್ ಮಾಡಿ. ತಪ್ಪು ಮಾಹಿತಿ ಹರಡದಂತೆ ಎಚ್ಚರ ವಹಿಸಿ. ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಮಾತುಕತೆ ನಡೆಸಿ. ನಿಮ್ಮ ಮಾನಸಿಕ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಿ.

*ನಿಮ್ಮ ಆಸಕ್ತಿಯನ್ನು ಗಮನಿಸಿ. ನೀವು ಅನುಸರಿಸಲು ಬಯಸುವ ಖಾತೆಗಳ ಪಟ್ಟಿ ಮಾಡಿ. ಪಟ್ಟಿಯ ಸಮಯಸೂಚಿ ನೋಡುವುದರಿಂದ ನೀವು ಕೇವಲ ಆ ಪಟ್ಟಿಯಲ್ಲಿರುವ ಖಾತೆಗಳಿಗೆ ಮಾತ್ರ ಟ್ವೀಟ್ ಮಾಡಲು ವ್ಯವಸ್ಥಿತವಾಗುತ್ತೀರಿ. ನಿಮ್ಮ ಸಮಯಸೂಚಿಗೆ ಪಟ್ಟಿಯನ್ನು ಪಿನ್ ಮಾಡುವುದರಿಂದ ನಿಮ್ಮ ಸರಿಸಮಾನ ಆಸಕ್ತರು ಅದನ್ನು ನೋಡಬಹುದು. ಹೆಚ್ಚಿನ ಮಾಹಿತಿಗಾಗಿ https://help.twitter.com/en/using-twitter/twitter-lists

*ನೇರ ಸಂದೇಶಗಳನ್ನು ನೀವು ನಿಷ್ಕ್ರಿಯಗೊಳಿಸಬಹುದು. ನಿಮ್ಮ ನೋಟಿಫಿಕೇಶನ್‌ಗಳನ್ನು ಫಿಲ್ಟರ್ ಮಾಡಬಹುದು. ಇವುಗಳು ಹಾಗು ಇತರ ಸುರಕ್ಷತಾ ಅಂಶಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ: https://help.twitter.com/en/safety-and-security/control-your-twitter-experience

 

ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.