ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ


Team Udayavani, Sep 11, 2020, 4:34 PM IST

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹಿಮಾಚಲ ಎಂದರೆ, ತತ್‌ಕ್ಷಣ ನೆನಪಿಗೆ ಬರುವುದು ಸೇಬು, ಅಲ್ಲಿನ ಹಿಮದಿಂದ ಕೂಡಿದ ಪರ್ವತಗಳು, ದೇವದಾರು ಮರ, ಕಾಡು. ಒಟ್ಟಿನಲ್ಲಿ ಇದು ದೇವಭೂಮಿ ಎಂದೇ ಪ್ರಚಲಿತವಾಗಿದೆ. ಅನೇಕ ತೊರೆಗಳು, ನದಿಗಳ ಉಗಮ ಸ್ಥಾನವಾಗಿದೆ. ನದಿಗಳು ಹಿಮ ಕರಗಿದ ನೀರುಂಡು ತುಂಬಿ ಹರಿಯುತ್ತದೆ.

ಈ ರಾಜ್ಯದ ಒಂದೊಂದು ಸ್ಥಳ ವಿಶಿಷ್ಟ ಸ್ಥಳವೂ ಹೌದು. ‘ಚಮ’ ಎಂಬ ಸ್ಥಳದ ಚಂಪಾವತಿ ದೇವಸ್ಥಾನ, ಕಾಂಗ್ರಾ ಕಣಿವೆಯ ಕೋಟೆ, ಭ್ರಜೇಶ್ರವರಿ ದೇವಸ್ಥಾನ ಮತ್ತು ಸುಂದರವಾದ ಕಣಿವೆ. ಇವುಗಳನ್ನು ಏಪ್ರಿಲ್‌ ತಿಂಗಳಿಂದ ಅಕ್ಟೋಬರ್‌ ತಿಂಗಳವರೆಗೆ ಇಲ್ಲಿಯ ಹವಾಮಾನ ಪ್ರವಾಸಿಗರಿಗೆ ಅನೂಕಲವಾದದ್ದು.

ಬ್ರಿಟಿಷರ ಬೇಸಗೆಯ ತಾಣವೆಂದು ಹೆಸರುವಾಸಿಯಾದ ಸಿಮ್ಲಾ, ಇಲ್ಲಿನ ರಿಡ್ಜ, ಮಾಲ್, ಔಕೂ ದೇವಸ್ಥಾನ, ಇಲ್ಲಿನ ಮ್ಯೂಸಿಯಮ್‌ ಮತ್ತು ವಿಶ್ವವಿದ್ಯಾಲಯವನ್ನು ನೋಡಬೇಕು. ಅದಲ್ಲದೆ ಇಲ್ಲಿನ ವಾತಾವರಣ ಮನ ಸೋಲುವಂಥದು. ಲಾಹೋಲ್‌ ಮತ್ತು ಸೋಲಾನ್‌, ಸಿಟಿ ಕಣಿವೆ ನೋಡಲು ಬಲು ಸುಂದರ, ಜೂನ್‌ ತಿಂಗಳಿಂದ ಅಕ್ಟೋಬರ್‌ ತಿಂಗಳವರೆಗೆ ಇಲ್ಲಿಯ ಹವಾಮಾನ ಪ್ರವಾಸಿಗರಿಗೆ ಅನುಕೂಲವಾದ್ದು

ಕುಲು ಎಂದರೆ, ಅಲ್ಲಿನ ಅತ್ಯುತ್ತಮ ಸಾಲುಗಳು, ರತ್ನಗಂಬಳಿಗಳು ನೆನಪಿಗೆ ಬರುತ್ತದೆ. ಇಲ್ಲಿ ಅತೀ ಸುಂದರವಾದ ಮೂಲಗಳ ಒಂದು ಫಾರ್ಮ್ ಇದೆ. ಅದನ್ನು ನೋಡಿಯೇ ತೀರಬೇಕು. ‘ಮಂಡಿ’ ಎನ್ನುವ ಸ್ಥಳ ಬಿಯಾಸ್‌ ನದಿಯ ತಟದಲ್ಲಿದೆ. ಇಲ್ಲಿ ಕಲ್ಲಿನಲ್ಲಿ ಕಟ್ಟಿದ 80 ವರ್ಷಕ್ಕಿಂತ ಹಳೆಯ ದೇವಸ್ಥಾನವಿದೆ. ಇಲ್ಲಿಗೆ ಮಾರ್ಚ್‌ ತಿಂಗಳಿಂದ ಜೂನ್‌ ತಿಂಗಳವರೆಗೆ ಭೇಟಿ ಕೊಟ್ಟರೆ ಉತ್ತಮ.

ಧರ್ಮಶಾಲಾ, ಮನಾಲಿ ಮತ್ತು ಕುಫ್ರಿ ಇವು ಅತೀ ಸುಂದರವಾದ ಜಾಗಗಳು. ಹಿಡಿಂಬೆ ದೇವಸ್ಥಾನ (ಇದು ಬೇರೆ ಎಲ್ಲೂ ಇಲ್ಲ), ಮನು ದೇವಸ್ಥಾನ, ಕ್ಲಬ್‌ ಹೌಸ್‌, ಟಿಬೆಟಿಯನ್ನರ ಮೊನೆಸ್ಟಿ, ವಶಿಷ್ಟರ ಸಿಹಿ ನೀರಿನ ಬುಗ್ಗೆ ಇವುಗಳನ್ನು ಮನಾಲಿಯಲ್ಲಿ ಕಾಣಬಹುದು. ರೋತಂಗ್‌ ಪಾಸ್, ಹಿಮದಿಂದ ಆವೃತವಾದ ಜಾಗ ಇಲ್ಲಿ ಹಿಮದಲ್ಲಿ ಆಡುವ ಅನುಭವ ಅದ್ಭುತ ಕುಫ್ರಿ ಇದು ಅತಿ ಎತ್ತರದ ಪರ್ವತ ಪ್ರದೇಶ, ಇವುಗಳನ್ನು ಸಂದರ್ಶಿಸಲು ಮೇ ತಿಂಗಳಿಂದ ಅಕ್ಟೋರ್ಬ ತಿಂಗಳ ಪ್ರಶಸ್ತ. ಈ ರಾಜ್ಯದ ಪ್ರಜೆಗಳು ಸ್ನೇಹಪರ, ಶ್ರಮ ಜೀವಿಗಳು,

ಚನ್ನ ಮಾದ್ರ

ಬೇಕಾಗುವ ಸಾಮಗ್ರಿ:
ಮೊಸರು ಮೂರು ಕಪ್‌, ಬೇಯಿಸಿದ ಕಾಬೂಲಿ ಚೆನ್ನ (ಬಿಳಿ ಕಡಲೆ) ಎರಡು ಕಪ್‌, ತುಪ್ಪ ಕಾಲು ಕಪ್‌, ಒಣದ್ರಾಕ್ಷಿ ಮೂರು ಟೀ ಚಮಚ, ಏಲಕ್ಕಿ ನಾಲ್ಕು, ಲವಂಗ ಐದು, ದೊಡ್ಡ ಏಲಕ್ಕಿ ಪುಡಿ ಒಂದು ಚಿಟಿಕೆ, ಲವಂಗ ಪುಡಿ ಒಂದು ಚಿಟಿಕೆ ಅರಸಿನ ಪುಡಿ ಅರ್ಧ ಟೀ ಚಮಚ, ಜೀರಿಗೆ ಪುಡಿ ಮುಕ್ಕಾಲು ಟೀ ಚಮಚ, ಉಪ್ಪು ಅರ್ಧ ಟೀ – ಚಮಚ.

ವಿಧಾನ: ಮೇಲಿನ ಎಲ್ಲ ಸಾಮಗ್ರಿಗಳನ್ನು ಬೆರೆಸಿ, ಸಣ್ಣ ಉರಿಯಲ್ಲಿ 30 ನಿಮಿಷ ಬೇಯಿಸಿ, ಚನ್ನು ಮಾದ್ರ ರೆಡಿ.

ಮಾದ್ರ
ಬೇಕಾಗುವ ಸಾಮಗ್ರಿ: ಬಟಾಣಿ ಒಂದು ಕಪ್‌, ಆಲೂಗಡ್ಡೆ ಎರಡು, ಮೊಸರು ಎರಡು ಕಪ್‌, ಹೆಚ್ಚಿದ ಹಸಿ ಶುಂಠಿ ಒಂದು ಟೀ ಚಮಚ, ಜೀರಿಗೆ ಒಂದು ಟೀ ಚಮಚ, ಕೊತ್ತಂಬರಿ ಬೀಜದ ಪುಡಿ ಒಂದು ಟೀ ಚಮಚ, ಅರಸಿನ ಪುಡಿ ಅರ್ಧ ಟೀ ಚಮಚ, ಮೆಣಸಿನಪುಡಿ ಒಂದು ಟೀ ಚಮಚ, ಕಾಳುಮೆಣಸು ಐದು, ಏಲಕ್ಕಿ ನಾಲ್ಕು ದಾರಿ ಒಂದು ಇಂಚು ತುಂಡು, ಲವಂಗ ಐದು, ತುಪ್ಪ ಒಂದು ದೊಡ್ಡ ಚಮಚ, ಎಣ್ಣೆ ಕರಿಯಲು ಉಪ್ಪು ರುಚಿಗೆ ತಕ್ಕಂತೆ.

ವಿಧಾನ: ಆಲೂಗಡ್ಡೆ ತೊಳೆದು ಮಧ್ಯಮ ಗಾತ್ರದ ಹೋಳುಗಳಾಗಿ ಕತ್ತರಿಸಿ, ಅರ್ಧ ಬೇಯುವವರೆಗೆ ಎಣ್ಣೆಯಲ್ಲಿ ಕರಿಯಿರಿ. ಎರಡು ದೊಡ್ಡ ಚಮಚ ಎಣ್ಣೆ ಬಿಸಿಮಾಡಿ, ಜೀರಿಗೆ, ಕೊತ್ತಂಬರಿ ಪುಡಿ, ಅರಸಿನ ಪುಡಿ, ಮೆಣಸಿನ ಪುಡಿ ಹಾಕಿ ಒಂದು ನಿಮಿಷ ಕೈಯಾಡಿಸಿ. ಮೊಸರು ಸೇರಿಸಿ ಚೆನ್ನಾಗಿ ಕದಡಿ. ಕುದಿ ಬಂದ ಒಡನೆ ಕಾಳುಮೆಣಸು, ಲವಂಗ, ಏಲಕ್ಕಿ ಮತ್ತು ದಾನಿ ಬೆರೆಸಿ ಕುದಿಸಿ, ಅರೆಬೆಂದ ಆಲೂಗೆಡ್ಡೆಯನ್ನು ಸೇರಿಸಿ ಬೇಯಿಸಿ ಮೊಸರಿನ ಮಿಶ್ರಣ ಇಂಗುವವರೆಗೆ ಕೈಯಾಡಿಸಿ. ಈಗ ಬಟಾಣಿ ಮತ್ತು ಅರ್ಧ ಕಪ್‌ ನೀರನ್ನು ಮೊಸರಿನ ಮಿಶ್ರಣಕ್ಕೆ ಬೆರೆಸಿ ಬೇಯಿಸಿ, ತಯಾರಾದ ಮಾದನ ತುಷವನ್ನು ಸೇರಿಸಿ ತಿನ್ನಲು ಕೊಡಿ.

ಖಡಿ
ಬೇಕಾಗುವ ಸಾಮಗ್ರಿ:
ಲವಂಗ ನಾಲ್ಕು, ಮೆಂತೆ, ಅರ್ಧ ಟೀ ಚಮ ಹಿಂಗು ಅರ್ಧ ಟೀ ಚಮಚ, ಒಣ ಮೆಣಸಿನಕಾಯಿ ನಾಲ್ಕು ಅರಸಿನ ಪುಡಿ ಕಾಲು ಟೀ ಚಮಚ, ಈರುಳ್ಳಿ ಎರಡು, ಮೆಣಸಿನಪುಡಿ ಒಂದು ಟೀ ಚಮಚ, ಕೊತ್ತಂಬರಿ ಬೀಜದ ಪುಡಿ ಒಂದು ಟೀ ಚಮಚ, ಎಣ್ಣೆ ಎರಡು ದೊಡ್ಡ ಚಮಚ, ಕಡಲೆ ಹಿಟ್ಟು ಅರ್ಧ ಕಪ್‌, ಮೊಸರು ಅರ್ಧ ಕಪ್‌, ನೀರು ಮೂರು ಕಪ್‌, ಹೆಚ್ಚಿದ ಕೊತ್ತಂಬರಿ ಸೊಪ್ಪು ಒಂದು ದೊಡ್ಡ ಚಮಚ, ಬೂಂದಿ ಅರ್ಧ ಕಪ್‌, ಉಪ್ಪು ರುಚಿಗೆ ತಕ್ಕಂತೆ.

ವಿಧಾನ: ಕಡಲೆ ಹಿಟ್ಟು ಮತ್ತು ಮೊಸರನ್ನು ನೀರಿನೊಂದಿಗೆ ಬೆರೆಸಿ ಕೊಳ್ಳಿ. ಹದ ನೀರಾಗಿರಲಿ. ಮೆಂತೆ, ಲವಂಗ, ಹಿಂಗು, ಒಣ ಮೆಣಸಿನಕಾಯಿ ಯನ್ನು ಒಗ್ಗರಣೆ ಮಾಡಿ. ಹೆಚ್ಚಿದ ಈರುಳ್ಳಿಯನ್ನು ಒಗ್ಗರಣೆ ಹಾಕಿ ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಹುರಿದ ಈರುಳ್ಳಿ ಅರಸಿನ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಬೀಜದ ಪುಡಿ ಸೇರಿಸಿ ಹುರಿಯಿರಿ. ಈಗ ಬೆರೆಸಿದ ಕಡಲೆಹಿಟ್ಟಿಗೆ, ಉಪ್ಪನ್ನು ಸೇರಿಸಿ ಕುದಿಸಿ, ಸಣ್ಣನೆ ಉರಿಯಲ್ಲಿ 20 ನಿಮಿಷ ಕುದಿಸಿ, ಬಡಿಸುವ ಮುನ್ನ ಬೂಂದಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.

ಬೇಡವಾನ್ಸ್‌
ಬಗೆ – ಒಂದು ಬೇಕಾಗುವ ಸಾಮಗ್ರಿ:
ಗೋಧಿಹಿಟ್ಟು ಒಂದು ಕೆ.ಜಿ., ಅಡುಗೆ ಸೋಡಾ ಅರ್ಧ ಟೀ ಚಮಚ, ಯೀಸ್ಟ್ ಎರಡು ಟೀ ಚಮಚ, ಹಾಲು ಮುಕ್ಕಾಲು ಕಪ್, ತುಪ್ಪ ಅರ್ಧ ಕಪ…, ಸಕ್ಕರೆ ಅರ್ಧ ಟೀ ಚಮಚ,

ಬಗೆ – ಎರಡು
ಉದ್ದು ಎರಡು ಕಪ್‌, ಕೊತ್ತಂಬರಿ ಬೀಜ ಒಂದು ಟೀ ಚಮಚ, ಜೀರಿಗೆ ಒಂದು ಟೀ ಚಮಚ, ಹಿಂಗುಣಂದು ಚಿಟಿಕೆ, ಮೆಣಸಿನಕಾಯಿ ಎರಡು, ಉಪ್ಪು ರುಚಿಗೆ ತಕ್ಕಂತೆ.

ವಿಧಾನ: ಗೋಧಿಹಿಟ್ಟು ಅಡುಗೆ ಸೋಡಾ, ಯೀಸ್ಟ್‌, ಹಾಲು, ತುಪ್ಪವನ್ನು ಸೇರಿಸಿ ಕಲಸಿ,ನಾದಿ ಮುಚ್ಚಿಡಿ. ಯೀಸ್ಟನ್ನು ಸಕ್ಕರೆಯೊಂದಿಗೆ ಬಿಸಿನೀರಿನಲ್ಲಿ 10 ನಿಮಿಷ ನೆನೆಸಿಡಿ. ನಂತರ ಉಪಯೋಗಿಸಬೇಕು. ಉದ್ದಿನ ಬೇಳೆಯನ್ನು ಎಂಟು ಗಂಟೆ ನೀರಿನಲ್ಲಿ ನೆನೆಸಿ, ಬಸಿದಿಡಿ. ಬಸಿದ ಬೇಳೆಯನ್ನು ಗಟ್ಟಿಯಾಗಿ ರುಬ್ಬಿಕೊಳ್ಳಿ. ಹೆಚ್ಚು ನೀರನ್ನು ಉಪಯೋಗಿಸುವುದು ಬೇಡ, ಕಾಳುಮೆಣಸು, ಹಸುರು ಮೆಣಸಿನಕಾಯಿ, ಹಿಂಗು, ಕೊತ್ತಂಬರಿ ಬೀಜ ಮತ್ತು ಜೀರಿಗೆಯನ್ನು ರುಬ್ಬಿಕೊಳ್ಳಿ. ಅದನ್ನು ರುಬ್ಬಿದ ಬೆಳೆಗೆ ಬೆರೆಸಿ. ಗೋಧಿ ಹಿಟ್ಟಿನ ಮಿಶ್ರಣ ಒಂದು ಉಂಡೆಯನ್ನು ತೆಗೆದು ಅಂಗೈಯಲ್ಲಿ ಚಿಕ್ಕ ಪೂರಿಯಂತೆ ತಟ್ಟಿಕೊಳ್ಳಿ ಒಂದು ಚಮಚ ರುಬ್ಬಿದ ಬೇಳೆಯ ಮಿಶ್ರಣವನ್ನು ತಟ್ಟಿದ ಹಿಟ್ಟಿನ ಮಧ್ಯೆ ಇಟ್ಟು ಮಡಚಿ, ತಟ್ಟಿ ಹತ್ತು ನಿಮಿಷ ಇಡಿ. ಅನಂತರ ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿಯಿರಿ. ಹೊಂಬಣ್ಣಕ್ಕೆ ಕರಿದು, ತುಪ್ಪದಲ್ಲಿ (ಉರಿ ಹೆಚ್ಚಾದಲ್ಲಿ ಒಳಗಿನ ಹೂರಣದ ಬೇಳೆ ಬೇಯುವುದಿಲ್ಲ) ಅದ್ದಿ ಕೊಡಿ.

ಪಟೀಡ್‌ ಕಾ ಪಕೋಡೆ

ಬೇಕಾಗುವ ಸಾಮಗ್ರಿ:
ಟಾಕೊ ಎಲೆಗಳು (ಕೆಸುವಿನೆಲೆ) ಎಂಟು, ಕಡಲೇ ಹಿಟ್ಟು ಎರಡು ಕಪ್‌, ಈರುಳ್ಳಿ ಮೂರು, ಬೆಳ್ಳುಳ್ಳಿ ಐದು ಎಸಳು, ಹಸಿಶುಂಠಿ ಎರಡು ಇಂಚು ತುಂಡು, ಹಸುರು ಮೆಣಸಿನಕಾಯಿ ಮೂರು, ಹುಣಿಸೇಹಣ್ಣಿನ ರಸ ಒಂದು ದೊಡ್ಡ ಚಮಚ, ಅರಸಿನ ಪುಡಿ ಅರ್ಧ ಟೀಚಮಚ, ಕೊತ್ತಂಬರಿ ಬೀಜದ ಪುಡಿ ಒಂದು ಟೀ ಚಮಚ, ಮೇಣಸಿನಪುಡಿ ಅರ್ಧ ಟೀ ಚಮಚ, ದಾಳಿಂಬೆ ಬೀಜ (ಅನಾರ ದಾನಾ) ಒಂದು ಟೀ ಚಮಚ ನೀರು ಒಂದೂವರೆ ಕಪ್‌, ದಾರ ಅಥವಾ ನಾರು, ಎಣ್ಣೆ ಕರಿಯಲು, ಉಪ್ಪು ರುಚಿಗೆ ತಕ್ಕಂತೆ.

ಮಾಡುವ ವಿಧಾನ: ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸುರು ಮೆಣಸಿನಕಾಯಿ, ದಾಳಿಂಬೆ ಒಣ ಬೀಜವನ್ನು ರುಬ್ಬಿಕೊಳ್ಳಿ, ರುಬ್ಬಿದ ಮಸಾಲೆಯೊಂದಿಗೆ ಕಡಲೆಹಿಟ್ಟು ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಹುಣಸೆಹಣ್ಣು ರಸ, ಉಪ್ಪನ್ನು ಬೆರೆಸಿ. ಕೆಸುವಿನೆಲೆ ಯನ್ನು ತೊಳದು, ದಂಟಿನ ನೀರನ್ನು ತೆಗೆದು, ಒಳಗಿನ ಭಾಗಕ್ಕೆ ಮೇಲಿನ ಹಿಟ್ಟನ್ನು ಹಚ್ಚಿ ಮೇಲೆ ಇನ್ನೊಂದು ಎಲೆಯನ್ನು ಹೇಗೆ ಇಟ್ಟು ಪುನಃ ಹಿಟ್ಟು ಮಿಶ್ರಣವನ್ನು ಹಚ್ಚಿ (ಪತ್ರೋಡೆ ಮಾಡಿದ ಹಾಗೆ). ಹಂಗೆ ಹೆಚ್ಚಿದ ಎಲೆಗಳನ್ನು ಹಾಸಿಗೆ ಸುತ್ತಿದಂತೆ ಸುತ್ತಿ, ಒಂದು ಇಂಚಿನ ಅಂತರದಲ್ಲಿ ದಾರದಿಂದ ಅಥವಾ ನಾರಿನಿಂದ ಕಟ್ಟಿ ತುಂಡುಗಳನ್ನಾಗಿ ಮಾಡಿ, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದ, ಪುದೀನಾ ಚಟ್ನಿಯೊಂದಿಗೆ ಸವಿಯಲು ಕೊಡಿ.

ಆಲೂಗಡ್ಡೆ ಪಲ್ಯ
ಬೇಕಾಗುವ ಸಾಮಗ್ರಿ:
ಆಲೂಗಡ್ಡೆ ಆರು, ಸಕ್ಕರೆ ಒಂದೂವರೆ ಕಪ್‌, ತುಪ್ಪ ಮುಕ್ಕಾಲು ಕಪ್ಪು, ಒಣದ್ರಾಕ್ಷಿ ಒಂದು ದೊಡ್ಡ ಚಮಚ, ಬಾದಾಮಿ ಮತ್ತು, ಏಲಕ್ಕಿ ಪುಡಿ ಎರಡು ಟೀ ಚಮಚ, ಕಾಯಿತುರಿ ಅರ್ಧ ಕಪ್, ನೀರು ಕಾಲು ಕಪ್‌,

ವಿಧಾನ: ಆಲೂಗಡ್ಡೆ ತೊಳೆದು ಬೇಯಿಸಿ, ಸಿಪ್ಪೆ ಸುಲಿದು ಪುಡಿ ಮಾಡಿಕೊಳ್ಳಿ, ತುಪ್ಪ ಬಿಸಿ ಮಾಡಿ, ಬೆಂದ ಆಲೂಗಡ್ಡೆಯನ್ನು ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಸಕ್ಕರೆಯನ್ನು ಆಲೂಗೆಡ್ಡೆಗೆ ಬೆರೆಸಿ ಕದಡಿ, ದ್ರಾಕ್ಷಿ ಕಾಯಿತುರಿ, ಬಾದಾಮಿಯನ್ನು ಬೆರೆಸಿ ಕೈಯಾಡಿಸಿ. ಏಲಕ್ಕಿ ಪುಡಿಯನ್ನು ಬೆರೆಸಿ, ನೀರನ್ನು ಸೇರಿಸಿ ಎರಡು ನಿಮಿಷ ಚೆನ್ನಾಗಿ ಕದಡಿ. ಆಲೂಗಡ್ಡೆ ಪಲ್ಯ ರೆಡಿ.

ಕುಲ್ಲು ಟೊವ್ರು
ಬೇಕಾಗುವ ಸಾಮಗ್ರಿ:
ಸಿಹಿ ನೀರಿನ ಮೀನು ಅರ್ಧ ಕೆ.ಜಿ., ಕೊತ್ತಂಬರಿ ಪುಡಿ ಒಂದು ಟೀ ಚಮಚ, ಒಣ ಮೆಣಸಿನಕಾಯಿ ಚೂರು ಒಂದು ಟೀ ಚಮಚ, ನಿಂಬೆ ಸಿಪ್ಪೆ ಅರ್ಧ ಟೀ ಚಮಚ (ನಿಂಬೆ ಹಣ್ಣನ್ನು ಕ್ಯಾರೆಟ್‌ ತುರಿಯುವ ಮನೆಯಲ್ಲಿ ತುರಿಯಿರಿ.), ಲಿಂಬೇರಸ ಎರಡು ದೊಡ್ಡ ಚಮಚ, ಎಲ್ಲಿ ಎರಡು ದೊಡ್ಡ ಚಮಚ, ಸಬ್ಬಸಿಗೆ ಸೊಪ್ಪು (ಹೆಚ್ಚಿದ) ಒಂದು ದೊಡ್ಡ ಚಮಚ, ಎಣ್ಣೆ ಹುರಿಯಲು,

ಸಾಸ್‌ಗೆ ಬೇಕಾಗುವ ಸಾಮಗ್ರಿ: ಹಚ್ಚಿದ ಈರುಳ್ಳಿ ನಾಲ್ಕು ದೊಡ್ಡ ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು ಒಂದು ದೊಡ್ಡ ಚಮಚ ಸಾಸಿವೆ ಅರ್ಧ ಟೀ ಚಮಚ, ನಿಂಬೆ ರಸ ಎರಡು ದೊಡ್ಡ ಚಮಚ, ಎಣ್ಣೆ ಮೂರು ದೊಡ್ಡ ಚಮಚ, ಉಪ್ಪು ರುಚಿಗೆ ತಕ್ಕಂತೆ.

ವಿಧಾನ: ಮೀನನ್ನು ತೊಳೆದು, ಕೊತ್ತಂಬರಿ ಪುಡಿ, ಮೆಣಸಿನ ಕಾಯಿ ಚೂರು, ನಿಂಬೆ ಸಿಪ್ಪೆ ಲಿಂಬೆಹಣ್ಣಿನ ರಸ, ಸಬ್ಬಸಿಗೆ ಸೊಪ್ಪು ಒಂದು ಚಮಚ, ಎಣ್ಣೆ ಉಪ್ಪಿನೊಂದಿಗೆ ಬೇರೆಸಿ ಅರ್ಧ ಗಂಟೆ ಇಡಿ. ಅನಂತರ ಮೀನನ್ನು ಸಣ್ಣನೆ ಉರಿಯಲ್ಲಿ ಹುರಿಯಿರಿ. ಒಂದು ದೊಡ್ಡ ಚಮಚ ಎಣ್ಣೆ ಬಿಸಿಮಾಡಿ, ಸಾಸಿವೆ ಒಗ್ಗರಣೆ ಮಾಡಿ, ಅದರಲ್ಲಿ ಹೆಚ್ಚಿದ ಈರುಳ್ಳಿಯನ್ನು ಹುರಿಯಿರಿ. ನಸುಗೆಂಪು ಬಣ್ಣಕ್ಕೆ ಹುರಿಯಿರಿ. ಉರಿಯಿಂದ ಕೆಳಗಿಳಿಸಿದ ಈರುಳ್ಳಿಗೆ ಕೊತ್ತಂಬರಿ ಸೊಪ್ಪು ನಿಂಬೆರಸ, ಎಣ್ಣೆ ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ಕದಡಿ, ಮೀನಿನ ಮೇಲೆ ಸುರಿಯಿರಿ. ಅನ್ನದೊಂದಿಗೆ ಬಡಿಸಿ.

ಮುಂದುವರಿಯುವುದು…

(ಮುಂದೆ: ಖಾದ್ಯ ಪ್ರಿಯರ ನಾಡು ಸಿಖ್ಖರ ಊರಿನ ಬಾಯಿ ನೀರೂರಿಸುವ ಖಾದ್ಯ ವೈವಿಧ್ಯ)

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food-Punjab

ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಗಳಲ್ಲಿ ಎಷ್ಟು ಪ್ರಬೇಧಗಳಿವೆ ಗೊತ್ತಾ? ಅವುಗಳನ್ನು ಧರಿಸಿದರೆ ಆಗುವ ಲಾಭಗಳೇನು?

ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.