ಮೂಲಗೇಣಿ ವಿಚಾರಣೆ ಪೂರ್ಣ ಜೂನ್ನಲ್ಲಿ ತೀರ್ಪು ?
Team Udayavani, May 1, 2023, 7:00 AM IST
ಮಂಗಳೂರು: ಮೂಲಗೇಣಿದಾರರಿಗೆ ಸಂಪೂರ್ಣ ಹಕ್ಕು ಕೊಡಿಸುವ ಕಾನೂನು 2012ರಲ್ಲಿ ಜಾರಿ ಕುರಿತು ರಾಜ್ಯ ಉತ್ಛ ನ್ಯಾಯಾಲಯದಲ್ಲಿ ವಿಚಾರಣೆ ಅಂತಿಮಗೊಂಡಿದ್ದು, ಕೋರ್ಟ್ ರಜೆಯ ಬಳಿಕ ಮುಂಬರುವ ಜೂನ್ ತಿಂಗಳಲ್ಲಿ ಅಂತಿಮ ಆದೇಶ ಬರುವ ನಿರೀಕ್ಷೆ ಇದೆ.
ಎ. 21ರಂದು ಹೈಕೋರ್ಟ್ ಅಂತಿಮವಾಗಿ ವಾದವಿವಾದಗಳನ್ನು ಆಲಿಸಿದ್ದು ಜೂನ್ ತಿಂಗಳಲ್ಲಿ (ಕೋರ್ಟ್ ರಜೆಯ ಬಳಿಕ) ಅಂತಿಮ ಆದೇಶ ನೀಡಲು ಕಾದಿರಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಮ್ಯಾಕ್ಸಿಂ ಡಿಸಿಲ್ವ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
2008ರಿಂದ ನಿರಂತರವಾಗಿ ವೇದಿಕೆಯು ಹೋರಾಡುತ್ತ ಸಂಘಟನೆಯನ್ನು ಬಲಪಡಿಸುತ್ತಿದ್ದು ಅಂತಿಮವಾಗಿ 2023 ಜೂನ್ ತಿಂಗಳಲ್ಲಿ ಆದೇಶ ಹೊರಬೀಳುವ ನಿರೀಕ್ಷೆ ಇದೆ. ಈಗಾಗಲೇ ಸ್ಥಾಪಿತ ಹಿತಾಸಕ್ತಿದಾರರು ಪರಿಸ್ಥಿತಿಯ ದುರುಪಯೋಗ ಪಡಿಸಿಕೊಳ್ಳುವುದು ತಿಳಿದು ಬಂದಿದೆ. ಮೂಲಗೇಣಿ ಒಕ್ಕಲುದಾರರು ಯಾರೂ ಅವಸರ ಪಡದೇ ಉತ್ಛ ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸಿಕೊಂಡಿದ್ದು ಮುಂದಿನ ನಡೆಯನ್ನು ಎಚ್ಚ ರಿಕೆಯಿಂದ ಇರಿಸುವಂತೆ ಪ್ರಕಟನೆ ತಿಳಿಸಿದೆ.