Barkur: ಗತವೈಭವದ  ಬಾರಕೂರು


Team Udayavani, Dec 3, 2023, 8:00 AM IST

11-barkur

ತುಳುನಾಡು ಪರಶುರಾಮನ ಸೃಷ್ಠಿ ಎಂದೇ ಹೆಸರುವಾಸಿ ಪಡೆದ ಪರಿಸರ. ಇದು ದೈವಾರಾಧನೆ, ಯಕ್ಷಗಾನ, ಬೊಂಬೆಯಾಟ, ಕಂಬಳ, ಕೋಳಿ ಕಾಳಗ ಸೇರಿದಂತೆ ಅನೇಕ ಜಾನಪದ ಕ್ರೀಡೆ, ಕಲೆಗಳ ತವರೂರು. ಇತ್ತೀಚೆಗೆ ಪ್ರದರ್ಶನಗೊಂಡ ಕಾಂತಾರ ಚಿತ್ರದ ಅನಂತರ ತುಳುನಾಡು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಸಂಚಲನದಲ್ಲಿದೆ. ತುಳುನಾಡ ಇತಿಹಾಸದ ಪುಟಗಳನ್ನು ಮಗುಚಿ ನೋಡಿದರೆ ಒಂದೊಂದು ಸ್ಥಳವೂ ಒಂದೊಂದು ಕಥೆಯನ್ನು ತೆರೆದಿಡುತ್ತದೆ. ಇದರ ಸಾಲಿಗೆ ಸೇರುವ ಒಂದು ಮನೋಹರ ತುಳುನಾಡ ಸ್ಥಳವೇ ತುಳುನಾಡ ರಾಜಧಾನಿ ಬಾರಕೂರು. ಸಾವಿರ ವರ್ಷಗಳ ಇತಿಹಾಸ ಇರುವ ಸಂಸ್ಥಾನದಲ್ಲಿ ತುಳುವರ ಅರಸರಾದ ಆಳುಪರು ಆಳಿದ ಭವ್ಯ ರಾಜಧಾನಿ ಈ ಬಾರಕೂರು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ 13 ಕಿಲೋಮೀಟರ್‌ ಸಾಗಿದಾಗ ಸಿಗುವ ಸ್ಥಳ ಬ್ರಹ್ಮಾವರದಿಂದ ಬಲಬದಿಗೆ ಸಾಗುವ ರಸ್ತೆಯಲ್ಲಿ 3 ಕಿಲೋ ಮೀಟರ್‌ ಸಾಗಿದರೆ ಸಿಗುವುದೇ ಈ ಗತಕಾಲದ ವೈಭವದ ಪಳೆಯುಳಿಕೆಯ ನಾಡು, ತುಳುನಾಡ ಹಂಪೆ ಬಾಕೂìರು. ಆಗಿನ ಕಾಲದಲ್ಲಿ ಇದನ್ನು ಬಾರಕನ್ಯಾಪುರ ಅಥವಾ ಬರಕ್ಕನೂರು ಎಂದು ಕರೆಯುತ್ತಿದ್ದರು. ಬಾಕೂìರಿನ ಪರಿಸರದಲ್ಲಿ ಸಿಗುವ ಒಂದೊಂದು ಕಲ್ಲುಗಳು ತುಳುನಾಡಿನ ಅಂದಿನ ಗತವೈಭವದ ಪರಿಚಯ ಮಾಡಿಕೊಡುತ್ತದೆ.

ಬಾರಕೂರಿನ ವಿಶೇಷತೆ

ಬಾರಕೂರು ತುಳುನಾಡ ರಾಜಧಾನಿ ಮಾತ್ರವಲ್ಲದೇ ದೇವಾಲಯಗಳ ಬೀಡು ಎಂದು ಸಹ ಪ್ರಸಿದ್ಧಿ ಪಡೆದಿದೆ. ರಾಜಮನೆತನಗಳ ಆಳ್ವಿಕೆಯ ಕಾಲದಲ್ಲಿ ತುಳುನಾಡಿನ ಎಲ್ಲ ಜಾತಿಗಳ ಮೂಲ ಬಾರಕೂರಾಗಿದ್ದ ಕಾರಣ ಪ್ರತಿ ಸಮುದಾಯಕ್ಕೆ ಸಂಬಂಧಿಸಿದ ದೇವಸ್ಥಾನಗಳು ಬಾರಕೂರಲ್ಲಿದ್ದವಂತೆ. ಇಲ್ಲಿ 365 ದೇವಸ್ಥಾನಗಳಿದ್ದು, ಅದರಲ್ಲಿ ಈಗ ಶೇ. 75ಕ್ಕೂ ಅಧಿಕ ದೇವಾಲಯಗಳು ನಾಶವಾಗಿವೆ. ಬಹುಶಃ ಆ ದೇವಸ್ಥಾನಗಳು ನಾಶವಾಗದೆ ಇಂದಿಗೂ ಉಳಿದಿದ್ದರೆ ಇಂದು ಕೇರಳಕ್ಕೆ ಬದಲಾಗಿ ಕರ್ನಾಟಕ ದೇವಾಲಯಗಳ ನಾಡಾಗಿರುತ್ತಿತ್ತೇನೋ.

ಇದರ ಜತೆಗೆ ಚಾಲುಕ್ಯ, ಹೊಯ್ಸಳ ಕಾಲದ ಶಿಲ್ಪಕಲೆಗಳು, ಜೈನ ಬಸದಿಗಳು, ತುಳು ಲಿಪಿಯಲ್ಲಿರುವ ಶಾಸನದ ಕಲ್ಲುಗಳು, ಮಹಾಸತಿ ಕಲ್ಲುಗಳು, ರಾಣಿ ಸ್ನಾನ ಮಾಡುತ್ತಿದ್ದ ಕೆರೆ ಎನ್ನಲಾದ, ಕಲ್ಲಿನಿಂದ ಸುಂದರವಾಗಿ ಕಟ್ಟಿದ ಬಾವಿಯಲ್ಲಿ ಈಗಲೂ ನೀರನ್ನು ನೋಡಬಹುದು.

ಬಾರಕೂರಿನ ಇತಿಹಾಸ

ಭೂತಾಳ ಪಾಂಡ್ಯ ಎಂಬ ರಾಜ ಬಾರಕೂರನ್ನು ಆಳುತ್ತಿದ್ದನೆಂಬ ನಂಬಿಕೆ. ಸಂಸ್ಕೃತದ “ಭೂತಾಳ ಪಾಂಡ್ಯ ಚರಿತಂ’ ಕೃತಿಯ 13ನೇ ಅಧ್ಯಾಯದಲ್ಲಿ ಭೂತಾಳ ಪಾಂಡ್ಯ ಕ್ರಿ.ಶ 77ರಲ್ಲಿ ಬಾರ್ಕೂರಿನಲ್ಲಿ ಆಳ್ವಿಕೆ ನಡೆಸುತ್ತಿದ್ದ ಎಂಬ ಮಾಹಿತಿ ಇದೆ. ಪಾಂಡ್ಯ ವಂಶ 259 ವರ್ಷ ಆಡಳಿತ ನಡೆಸಿದೆ ಎಂದು ಕೂಡ ಈ ಕೃತಿಯಲ್ಲಿ ಮಾಹಿತಿ ಇದೆ. ಭೂತಾಳ ಪಾಂಡ್ಯನನ್ನು ಹೊರತುಪಡಿಸಿದರೆ ಬಾರಕೂರಿನ ಇತಿಹಾಸದಲ್ಲಿ ಆಳುಪರ ಆಡಳಿತವೇ ಕಾಣುವುದು.

ನೂರಾರು ವರ್ಷಗಳ ಕಾಲ ಇಂತಹ ಗತವೈಭವಗಳಿಂದ ಕಂಗೊಳಿಸುತ್ತಿದ್ದ ಬಾರಕೂರು ಈಗ ಮರೆಯಾಗಿ ಹೋಗಿದೆ. ಇದರ ಆಸುಪಾಸಿನಲ್ಲಿ ಇನ್ನೂ ಸಾಕಷ್ಟು ಜೀರ್ಣೋದ್ಧಾರ ಕಾಣದ ಶಿಥಿಲಗೊಂಡ ಭೂಗತವಾದ ದೇವಾಲಯಗಳಿವೆ. ಸರಕಾರ ಇಲ್ಲಿ ಇನ್ನಷ್ಟು ಸಂಶೋಧನೆಗಳನ್ನು ನಡೆಸಿ ರಕ್ಷಣೆಗೆ ಮುಂದಾದರೆ ಬಾರಕೂರು ಬಹುಶಃ ಮೊದಲಿನ ರಂಗನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಕರ್ನಾಟಕದ ಒಂದೊಳ್ಳೆ ಪ್ರವಾಸಿ ತಾಣವಾಗಿ ಬದಲಾಗಬಹುದು.

-ದಿವ್ಯ ದೇವಾಡಿಗ

ಎಸ್‌.ಡಿ.ಎಂ., ಉಜಿರೆ

 

ಟಾಪ್ ನ್ಯೂಸ್

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.