UV Fusion: ಬಾಲ್ಯದ ಸುಂದರ ನೆನಪುಗಳು


Team Udayavani, Sep 11, 2023, 12:03 PM IST

10-uv-fusion

ಮಳೆ ಶುರುವಾಯ್ತು ಬಟ್ಟೆಗಳನ್ನೆಲ್ಲ ಒಳ ತಂದುಬಿಡು ಯಾವಾಗ್ಲೂ ಆ ಮೊಬೈಲ್‌ ಹಿಡ್ಕೊಂಡು ಕೂರ್ತಿಯ ಪ್ರವಾಹ ಬಂದ್ರು ಗೊತ್ತಾಗಲ್ಲ ನಿಂಗೆ ಅಮ್ಮನ ಬೈಗುಳ ಕೇಳಿ ಮೊಬೈಲ್‌ ಸೋಫಾದ ಮೇಲೆ ಎಸೆದು ಅಂಗಳಕ್ಕೆ ಓಡಿ ಬಟ್ಟೆಗಳನ್ನೆಲ್ಲ ತಂತಿಯಿಂದ ತೆಗೆಯೋ ವೇಳೆಗಾಗಲೇ ಅರ್ಧ ಒದ್ದೆಯಾಗಿಬಿಟ್ಟಿದೆ.

ಇನ್ನಷ್ಟು ಮಳೆಯಲ್ಲಿ ನೆನೆಯುವ ಆಸೆಯಾದರು ಎರಡು ದಿನಗಳ ಹಿಂದೆಯಷ್ಟೇ ನನ್ನ ಬಿಟ್ಟು ಹೋಗಿದ್ದ ಜ್ವರದ ನೆನಪಾಗಿ ಜತೆಗೆ ಅಮ್ಮನ ಕೈಯಿಂದ ಇನ್ನಷ್ಟು ಬೈಗುಳ ತಿನ್ನಬೇಕಲ್ಲ ಎಂದೆನಿಸಿ ಸುಮ್ಮನೆ ಒಳ ಬಂದು ಮತ್ತೆ ಮೊಬೈಲ್‌ ಹಿಡಿದು ಕುಳಿತೆ.

ಅಕ್ಕಾ.. ಅಕ್ಕಾ ಬಾ ನಿಂಗೇನೋ ತೋರಿಸ್ಬೇಕು ನನ್ನ ಚಿಕ್ಕಪ್ಪನ ಮಗ ಐದು ವರ್ಷದ ಪೋರ ಅವನ ಪುಟ್ಟ ಕೊಡೆ ಹಿಡಿದು ಅದನ್ನ ಅಲ್ಲೇ ಅಂಗಳದಲ್ಲಿ ಎಸೆದು ಬಂದಿದ್ದ ಮೊಬೈಲ್‌ ಹಿಡಿಯೋಕು ಬಿಡದೆ ಒಂದೇ ಸಮನೆ ತಲೆ ತಿಂತಾ ಇದ್ದ ಏನು ಎಂದರೆ ಹೊರಗೆ ಬಾ ಅಕ್ಕಾ ತೋರಿಸ್ತೀನಿ ಎನ್ನುತಿದ್ದ.. ಕೊನೆಗೂ ಅವನ ಕಾಟಕ್ಕೆ ಮಣಿದು ಮೊಬೈಲ್‌ ಹಿಡಿದು ಅಮ್ಮನಿಗೆ ತಿಳಿಸಿ ಅಂಗಳಕ್ಕೆ ಕಾಲಿಟ್ಟಿದ್ದೆ. ಕೊಡೆ ತಮ್ಮನ ಕೈಗಿಟ್ಟು ಮಳೆಯಲ್ಲಿ ಸ್ವಲ್ಪವೇ ನೆನೆಯುತ್ತ ಅರ್ಧ ದಾರಿ ತಲುಪುವ ವೇಳೆಗಾಗಲೇ ತಿಳಿದುಬಿಟ್ಟಿತು.

ಮನೆಯಿಂದ ಸ್ವಲ್ಪವೇ ದೂರವಿರುವ ಗದ್ದೆ ಉಳುಮೆ ಮಾಡುವ ಯಂತ್ರ ಬಂದಿದೆಯೆಂದು ಅವನ ಹೆಜ್ಜೆಗೆ ಸರಿಯಾಗಿ ನಡೆಯುತ್ತಾ ಹೋದೆ.. ತಮ್ಮ ಗದ್ದೆ ಉಳುಮೆ ಮಾಡುವುದನ್ನೇ ನೋಡುತ್ತಾ ನಿಂತ ಅವನಿದು ಎರಡನೇ ಬಾರಿ ನೋಡುತ್ತಿರುವುದು.. ನನ್ನ ಸ್ಮೃತಿಯಲ್ಲಿ ಬಾಲ್ಯದ ಚಿತ್ರಣ ಹಾದುಹೋಯಿತು.

ನಾನು ಬಾಲ್ಯದಲ್ಲಿ ಅದೆಷ್ಟು ಖುಷಿಯಿಂದ ಕಾದಿದ್ದ ಈ ದಿನಕ್ಕಾಗಿ ಆಗೆಲ್ಲ ಗದ್ದೆ ಉಳುಮೆ ಮಾಡುವುದು ನೋಡುವುದೇ ಒಂದು ಖುಷಿಯಾದರೆ, ಆ ಕೆಸರಿನಲ್ಲಿ ಇಳಿದು ಆಟ ಆಡುವುದು ಪೈರು ನಾಟಿ ಮಾಡುವಾಗಲಂತೂ ಅದೆಷ್ಟು ಪೈರು ಹಾಳು ಮಾಡಿದ್ದೇವೋ ಏನೋ.. ಅದರ ಜೊತೆಗೆ ಒಂದಿಷ್ಟು ಬೈಗುಳಗಳು.

ಗದ್ದೆ ತೋಟದ ಬದಿಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುವ ಖುಷಿ ಈಗ ಫೈವ್‌ ಸ್ಟಾರ್‌ ಹೋಟೆಲಿನಲ್ಲಿ ಕುಳಿತು ಊಟ ಮಾಡಿದರು ಸಿಗಲಾರದು. ಆಗೆಲ್ಲ ಆ ಕೆಲಸಗಳು ಅಷ್ಟೇ ಖುಷಿ ಕೊಡುತಿದ್ದವು.. ಈಗ ಆ ಗದ್ದೆಯ ಜಾಗದಲ್ಲಿ ಅಡಿಕೆ ಮರಗಳು ಎದ್ದು ನಿಂತಿವೆ.

ಒಂದು ಮೂಲೆಯಲ್ಲಿ ಬೇಸರವಂತೂ ಇದ್ದೆ ಇದೆ.. ನಮ್ಮ ಇಡೀ ಊರಿನಲ್ಲಿ ಒಂದೆರಡು ಕಡೆ ಗದ್ದೆ ತೋಟ ಇದೆ ಅಷ್ಟೇ. ಈಗೇನಿದ್ದರೂ ಪೂರ್ತಿ ಕೆಲಸಗಳು ಯಂತ್ರದ ಮೂಲಕವೇ ನಡೆಯುತ್ತಿದೆ. ಎಲ್ಲೋ ಒಂದೆರಡು ಕಡೆ ಬಿಟ್ಟರೆ. ತಮ್ಮ ಕೈ ಹಿಡಿದು ಅಕ್ಕಾ ಹೋಗೋಣ ಮನೆಗೆ ಎಂದಾಗ ಯೋಚನ ಲಹರಿಯಿಂದ ಹೊರಬಂದೆ. ಅದಾಗಲೇ ಅಲ್ಲಿದ್ದ ಕೆಲಸಗಾರರು ಇಬ್ಬರು ಕೂಡ ಹೊಟ್ಟೆ ಹಸಿವು ತಣಿಸಿಕೊಳ್ಳುವುದಕ್ಕಾಗಿ ಹೋಟೆಲ್‌ ಕಡೆ ಪ್ರಯಾಣ ಬೆಳೆಸಿಯಾಗಿತ್ತು.

ಮೊಬೈಲ್‌ ನಲ್ಲಿ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ತಮ್ಮನ ಕೈ ಹಿಡಿದು ಮನೆ ಸೇರಿದ್ದೆ.

-ವಿದ್ಯಾಶ್ರೀ ಎ.

ಎಡಮಂಗಲ

ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ

ಸುಬ್ರಹ್ಮಣ್ಯ

ಟಾಪ್ ನ್ಯೂಸ್

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.