ಹೊಂಬಿಸಿಲು: ಇಂದಿಗೂ ನನ್ನೊಳಗೆ ಚಿಗುರುತ್ತಿರುವ ಭಾವ-ಬಳ್ಳಿ


Team Udayavani, Jun 25, 2020, 7:06 PM IST

Hombisilu

ಈ ಅಂಕಣ ನಿಮ್ಮ ಮೆಚ್ಚಿನ ಸಿನಿಮಾ ಕುರಿತು ಅಭಿಪ್ರಾಯ ಹಂಚಿಕೊಳ್ಳಲು. ಇಲ್ಲಿ ಪದಗಳ ಮಿತಿ ಇಲ್ಲ. ಕನಿಷ್ಠ 150-200 ಪದಗಳಿದ್ದರೆ ಚೆಂದ. ಒಂದುವೇಳೆ ಬರಹಗಾರರಲ್ಲದವರು ಕಡಿಮೆ ಪದಗಳಲ್ಲೂ ಹೇಳಬಹುದು. ಯಾಕೆಂದರೆ, ಚಿತ್ರದ ಕುರಿತು ಆಲೋಚಿಸುವ ಕ್ರಮ ಆರಂಭವಾಗಬೇಕು. ಅದು ಈ ಮೂಲಕ ಆಗಲೆಂಬುದು ನಮ್ಮ ಆಶಯ.

ಆಂಕಣದ ಮೊದಲ ಬರಹ ಬೆಂಗಳೂರಿನ ಸಾಫ್ಟ್ ವೇರ್‌ ಎಂಜಿನಿಯರ್‌ ಸುಪ್ರೀತಾ ವೆಂಕಟ್‌ ಅವರದ್ದು. ಚಿತ್ರ ಹೊಂಬಿಸಿಲು. ವಿಷ್ಣುವರ್ಧನ್‌ ಮತ್ತು ಆರತಿ ಅಭಿನಯದ ಈ ಚಿತ್ರ ರೂಪುಗೊಂಡು ಬಿಡುಗಡೆಯಾದದ್ದು 1978ರಲ್ಲಿ. ಆಗ ಸಾಹಿತ್ಯ ಕೃತಿಗಳು, ಕಾದಂಬರಿಗಳ ಹವಾ ಇದ್ದ ಕಾಲ. ಆಗ ಪ್ರಣಯದ ಕಥೆಗಳು ಒಂದು ಸ್ತರದಿಂದ ಮತ್ತೊಂದು ಸ್ತರಕ್ಕೆ ಜಿಗಿಯುತ್ತಿದ್ದ ಹೊತ್ತು.

ಶ್ರೀಮಂತರ ಬದುಕು, ಭಾವನೆಗಳು ಒಂದು ಬಗೆಯಲ್ಲಿ ಗಗನ ಚುಂಬಿ ಕಟ್ಟಡದಂತೆ ತೋರುತ್ತಿದ್ದ ಸಂದರ್ಭ. ಉಷಾ ನವರತ್ನರಾಮ್‌ ಅಂತದ್ದೇ ವಿಷಯಗಳನ್ನು ತೆಗೆದುಕೊಂಡು ಕುಸುರಿ ಮಾಡುತ್ತಿದ್ದರು. ಅಂಥದ್ದೇ ಅವರ ಕಾದಂಬರಿಯನ್ನು  ಚಿತ್ರ ನಿರ್ದೇಶಕ ಗೀತ ಪ್ರಿಯ ಅವರು ಸಿನಿಮಾವಾಗಿ ರೂಪಿಸಿದರು. ಬಿಎಸ್‌ ಸೋಮಶೇಖರ್‌ ಮತ್ತು ಸಂಪತ್‌ರಾಜ್‌ ಅವರು ಸುಮಾರು 10 ಲಕ್ಷ ರೂ. ಗಳ (ಲಭ್ಯ ಮಾಹಿತಿ ಪ್ರಕಾರ) ಲ್ಲಿ ರೂಪಿಸಿದ ಸಿನಿಮಾ.

ಇದಕ್ಕೆ ಸಂಗೀತ ನಿರ್ದೇಶನ ನೀಡಿದವರು ರಾಜನ್ -‌ ನಾಗೇಂದ್ರ ಜೋಡಿ. ಇದರ ಹಾಡುಗಳು ಆ ದಿನಗಳಲ್ಲಿ ಸೂಪರ್‌ ಹಿಟ್‌. ಅದರ ಮೂರು ಹಾಡುಗಳು ಇಂದಿಗೂ ನಮ್ಮ ಮನದಲ್ಲಿ ಗುನುಗುತ್ತವೆ. ‘ಜೀವ ವೀಣೆ ನೀಡು ಮಿಡಿತದ ಸಂಗೀತ’, ‘ನೀರ ಬಿಟ್ಟು ನೆಲದ ಮೇಲೆ’ ಹಾಗೂ ‘ಹೂವಿಂದ ಹೂವಿಗೆ..’ ಅಂದ ಹಾಗೆ ಈ ಹಾಡುಗಳನ್ನು ಹಾಡಿದವರು ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಎಸ್‌. ಜಾನಕಿ.
**********************

ಇದು ಕಾದಂಬರಿ ಆಧಾರಿತ ಚಲನಚಿತ್ರವಾದರೂ ಸಹ ನನ್ನಿಷ್ಟದ ಸಿನೆಮಾ. ಬಹುಮುಖ್ಯ ಕಾರಣ ಚಿತ್ರದ ನಾಯಕ ಡಾ.ವಿಷ್ಣುವರ್ಧನ್. ಅವರ ಬಹುತೇಕ ಸಿನೆಮಾಗಳನ್ನು ನೋಡಿದ್ದೇನೆ, ಮೆಚ್ಚಿದ್ದೇನೆ ಕೂಡ. ಅವುಗಳಲ್ಲಿ ಹೊಂಬಿಸಿಲು ಸಿನೆಮಾಗೆ ಪ್ರತ್ಯೇಕ ಸ್ಥಾನವಿದೆ. ಸಿನೆಮಾ ನೋಡಿದ ನಂತರವೇ ಕಾದಂಬರಿ ಓದಿದ್ದು, ಎರಡೂ ಇಷ್ಟವಾಯ್ತು. ಸದಾ ಒಂದಿಲ್ಲೊಂದು ರೀತಿಯಲ್ಲಿ ನಮ್ಮನ್ನು ಕಾಡುವ ಚಿತ್ರವಿದು.

ಸಿನೆಮಾದ ನಾಯಕ ವಿಷ್ಣುವರ್ಧನ್ ಹಾಗೂ ನಾಯಕಿ ಆರತಿ ಇಬ್ಬರೂ ಡಾಕ್ಟರ್ಸ್. ಪ್ರೀತಿಸಿ ಮದುವೆಯಾಗಿದ್ದಲ್ಲ, ಮದುವೆಯಾದ ಮೇಲೆ ಪ್ರೀತಿಸಿದ್ದು. ತನಗೊಬ್ಬಳು ಅಸಿಸ್ಟೆಂಟ್ ಬೇಕೆಂದು ಮದುವೆಯಾಗುವ ನಾಯಕ, ಆ ಮಾತನ್ನು ಕೇಳಿ ಛಲದಿಂದ ಮದುವೆಯಾಗುವ ನಾಯಕಿ, ಆಸ್ಪತ್ರೆಯಲ್ಲಿ ನಾಯಕನ ಹಿಂದೆ ಬಿದ್ದಿದ್ದ ಇನ್ನೊಬ್ಬಳು ಡಾಕ್ಟರ್. ಹೀಗೆ ಮೂವರ ಸುತ್ತ ಸುತ್ತುವ ಕಥಾ ಹಂದರ. ಈ ಡೆಡ್ ಲಾಕ್ ಪರಿಸ್ಥಿತಿ ಹೇಗೆ ತಿಳಿಗೊಳ್ಳುತ್ತದೆ ಎಂಬುದೇ ಸ್ವಾರಸ್ಯಕರ.

ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಮಾಧುರ್ಯ, ಅರ್ಥಗರ್ಭಿತ. ಅವುಗಳಲ್ಲಿ ತೀರಾ ಮನಸ್ಸಿಗೆ ಹತ್ತಿರವಾಗಿದ್ದು ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’ ಹಾಡು. ದಂಪತಿಗಳು ಅರ್ಥೈಸಿಕೊಂಡು ಸುಖೀ ಜೀವನ ನಡೆಸಬೇಕಾದ ಅಂಶಗಳಿವೆ. ಚಿತ್ರದ ಸಂಭಾಷಣೆ ಉತ್ತಮವಾಗಿವೆ.

ಬದುಕಿನ ಆಯ್ಕೆಯ ಕುರಿತಾದ ಗೊಂದಲವನ್ನೂ ನಮ್ಮೆದುರು ಮಂಡಿಸುತ್ತಲೇ ಯಾವುದಾದರೂ ಒಂದು ಕಡೆ ವಾಲಿಸಿ ಬಿಡುವ ಶಕ್ತಿಯೂ ಈ ಸಿನಿಮಾಕ್ಕಿತ್ತು. ಇದರಲ್ಲಿನ ಪಾತ್ರಗಳ ನಿರೂಪಣೆ ಅದೇ ಧಾಟಿಯಲ್ಲಿ ಸಾಗುವುದು ವಿಶೇಷ. ಸಿನಿಮಾದಲ್ಲಿ ಪಾತ್ರಗಳ ಆನ್ಯೋನ್ಯತೆಯನ್ನು ಪ್ರತಿಪಾದಿಸುತ್ತಲೇ ಬದುಕೆಂಬ ಪಯಣದಲ್ಲೂ ಪಾತ್ರಗಳಲ್ಲಿನ ಅನ್ಯೋನ್ಯತೆಯನ್ನು ಪ್ರತಿಪಾದಿಸುವ ಸಿನಿಮಾ.

ಕೆಲವೇ ಕೆಲವು ಸಿನೆಮಾಗಳನ್ನು ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ವಿಷ್ಣುವರ್ಧನ್ ಅವರು ಈ ಚಿತ್ರದ ಮೂಲಕ ಮತ್ತೊಂದು ಸಲ ಸಿನೆಮಾ ರಂಗದಲ್ಲಿ ಬೆಳೆಯಲು ಅವಕಾಶ ಸಿಕ್ಕಿತ್ತು. ಅದನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡ ಅವರ ನಟನೆ ಅದ್ಭುತ. ಆರತಿ ಅವರದ್ದು ತೀರಾ ನಾಟಕೀಯ ನಟನೆಯಿಲ್ಲದೆ, ಸಹಜವಾಗಿದೆ. ವಿಷ್ಣುವರ್ಧನ್ ಅವರ ಆಗಿನ ದುಂಡು ಮುಖಕ್ಕೆ ಆ ದೊಡ್ಡ ಕನ್ನಡಕ ಚೆನ್ನಾಗಿ ಒಪ್ಪಿದೆ. ಒಟ್ಟಾರೆಯಾಗಿ ಇಂದಿಗೂ ನನ್ನ ಅಚ್ಚುಮೆಚ್ಚಿನ ಸಿನೆಮಾ ಹೊಂಬಿಸಿಲು.

– ಸುಪ್ರೀತಾ ವೆಂಕಟ್

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.