ಮೊದಲ ಪರಿಚಯದಲ್ಲೆ ಆತ್ಮೀಯ; ಮುಂದೆನಾಯಿತು?
Team Udayavani, Aug 31, 2020, 12:00 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸ್ನೇಹ ಸೇರುವುದು ಬಹಳ ಸಹಜ. ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಯಾವುದೋ ಒಂದು ಸ್ಥಳದಲ್ಲಿ ಪರಿಚಯವಾಗಿ ಪರಸ್ಪರ ಹತ್ತಿರವಾಗುತ್ತೇವೆ.
ಅಂದು ಕಾಲೇಜಿನ ಮೊದಲ ದಿನ ಪತ್ರಿಕೋದ್ಯಮ ನನ್ನ ಆಯ್ಕೆ.
ಧಾರವಾಡದ ಕವಿವಿ ಕ್ಯಾಂಪಸ್ನಲ್ಲಿ ಮೊದಲು ಪರಿಚಯವಾದ ವ್ಯಕ್ತಿ ಇಂದು ಬಿಟ್ಟಿರಲಾರದ ಆತ್ಮೀಯ ಗೆಳೆಯನಾಗಿದ್ದಾನೆ. ಅರಿಯದೇ ಹುಟ್ಟಿಕೊಂಡ ಗೆಳೆತನ ನನ್ನ ಕಾಲೇಜಿನ ಮೊದಲ ದಿನವೇ ಆರಂಭವಾಯಿತೆಂಬುದು ಇನ್ನೊಂದು ಸಂತೋಷ.
ಹೀಗೆ ಒಂದು ದಿನ ಒಂದಿಷ್ಟು ಗೆಳೆಯರು ಸೇರಿ ಕಾಲೇಜ್ ಕ್ಯಾಂಟೀನ್ನಲ್ಲಿ ಟೀ ಕುಡಿದು ಎಲ್ಲರೂ ಪರಿಚಯ ಮಾಡಿಕೊಂಡು ನಮ್ಮ ನಮ್ಮ ಕ್ಲಾಸ್ ರೂಮಿಗೆ ತೆರಳಿದೆವು.
ಅಂದು ನಾನು ಮತ್ತು ಅವನು ಒಂದೇ ಡೆಸ್ಕ್ನಲ್ಲಿ ಕೂರುವುದು ಆರಂಭವಾಯಿತು ಅಂದಿನಿಂದ ನಮ್ಮಿಬ್ಬರ ಸ್ನೇಹ ಮತ್ತಷ್ಟು ಬೆಳೆಯಿತು. ಇಂದು ಅವನ ಜತೆಗೆ ಸೇರಿ ನಡೆದರೆ ಡಿಪಾರ್ಟ್ಮೆಂಟ್ ಎಷ್ಟು ಬೇಗ ತಲುಪುತ್ತೇವೆ ಎಂಬುದೇ ಅರಿವಿಗೆ ಬರುವುದಿಲ್ಲ. ಕ್ಲಾಸ್ನಲ್ಲಿ ಯಾರು ಇರಲಿ ಇಲ್ಲದಿರಲಿ ನೀನು ಯಾರನ್ನೂ ಲೆಕ್ಕಿಸದೇ ನಗುತ್ತಿದ್ದರೆ ಇಡೀ ಪತ್ರಿ ಕೋದ್ಯಮ ವಿಭಾಗವೇ ನಿನ್ನ ನೋಡುತ್ತಿತ್ತು.
ನೀ ನಿಲ್ಲದ ಕ್ಲಾಸ್ ನನ್ನ ಪಾಲಿಗಂತು ಜೈಲಿನಂತೆ ಕಾಣಿಸುತ್ತಿತ್ತು, ಮುಂಜಾನೆಯ ನಿನ್ನ ಪೋನ್ ಕಾಲ್ ಬರುವುದನ್ನು ಕಾಯುತ್ತಾ ಕೂರುತ್ತಿದ್ದೆ. ದಿನದ ಭೇಟಿ ಕ್ಯಾಂಟೀನ್ನಲ್ಲಿ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ನಿನ್ನ ಜತೆಗೆ ಇದ್ದರೂ ಸಮಾಧಾನವಿರುತ್ತಿರಲಿಲ್ಲ, ಹಾಗಾಗಿ ನಿನ್ನ ರೂಮ್ ಕಡೆಗೆ ವಾಲುತ್ತಿದ್ದೆ. ಪತ್ರಿಕೋದ್ಯಮ ವಿಭಾಗದಿಂದ ಬಸ್ ಸ್ಟಾಪ್ ಕಡೆಗೆ ಹೋಗುವ ದಾರಿಯುದ್ದಕ್ಕೂ ಪೋಟೋ ತಗೆಯುತ್ತಾ ಯಾರಾನ್ನಾದ್ರು ಗೋಳು ಹೋಯ್ಕೊಳುತ್ತಾ, ದೇಶ, ವಿದೇಶ, ರಾಜ್ಯ ಜಿಲ್ಲಾ, ಗ್ರಾಮೀಣ ಪ್ರದೇಶದ ಕ್ಯಾಂಪಸ್ನ ಹೊಸ ಹೊಸ ವಿಚಾರಗಳು ಎಲ್ಲರಿಗೂ ಮಾತನಾಡುತ್ತಾ ದಾರಿಯುದ್ದಕ್ಕೂ ಮೆಲುಕು ಹಾಕುತ್ತಾ ಸಾಗುತ್ತಿದ್ದೆವು.
ರಾತ್ರಿ ಅಂದ ಕೂಡಲೇ ನಮಗೆ ಪಂಚ ಪ್ರಾಣ ಏಕೆಂದರೆ ಆ ಸಮಯದಲ್ಲಿ ವಾಕಿಂಗ್ ಮಾಡುವುದು ನಮ್ಮಿಬ್ಬರಿಗೂ ಸ್ವರ್ಗಕ್ಕೆ ಮೂರೆ ಗೇಣು ಆಗುತ್ತಿತ್ತು. ವಾರದಲ್ಲಿ ಮೂರು ನಾಲ್ಕು ಬಾರಿಯಾದರೂ ಹೋಗಲೇ ಬೇಕು. ಅಂದಾಗ ಮಾತ್ರ ನಮಗೆ ಸಂತೋಷ ಇಲ್ಲ ಅಂದ್ರೆ ಏನೋ ಕಳೆದುಕೊಂಡ ಹಾಗೇ.
ಪ್ರಕಾಶಗೌಡ ಶಿ. ಪಾಟೀಲ, ಪತ್ರಿಕೋದ್ಯಮ ವಿದ್ಯಾರ್ಥಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ದಿ| ಜಾರ್ಜ್ ಫೆರ್ನಾಂಡಿಸ್ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್ ಚೌಟ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ