ಉತ್ತರಖಂಡ್‌ನ‌ ಕೌಸಾನಿ ನೋಡಿದ್ದೀರಾ…!


Team Udayavani, Aug 13, 2020, 4:20 PM IST

kousani

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಉತ್ತರಖಂಡ್‌ನ‌ ಹಿಮಾಚಲ ತಪ್ಪಲಿನ ಪ್ರಕೃತಿ ಸೊಭಗನ್ನು ಹೊದ್ದು ಮಲಗಿರುವ ಹಳ್ಳಿಯೇ ಕೌಸಾನಿ.

ನಮ್ಮ ರಾಷ್ಟ್ರಪಿತ ಗಾಂಧೀಜಿ ಇಲ್ಲಿಗೊಮ್ಮೆ ಭೇಟಿ ನೀಡಿದ್ದರು.

ಇಲ್ಲಿನ ಪ್ರಕೃತಿಯ ಸೊಬಗು, ಹವಾಮಾನ ಸ್ವಿಡ್ಜರ್‌ಲ್ಯಾಂಡ್ ಅನ್ನು ಹೊಲುವಂತಿದ್ದ ಕಾರಣಕ್ಕೆ ಗಾಂಧೀಜಿ ಇದನ್ನು ಭಾರತದ ಸ್ವಿಡ್ಜರ್‌ಲ್ಯಾಂಡ್ ಎಂದು ಕರೆದಿದ್ದಾರೆ.

ಅಂದಿನಿಂದ ಕೌಸಾನಿಗೆ ಇದು ಅನ್ವರ್ಥಕ ನಾಮವಾಗಿ ಉಳಿದುಕೊಂಡಿದೆ. ಮಳೆಗಾಲಕ್ಕೆ ಭೇಟಿ ನೀಡಲು ಇದು ಹೇಳಿ ಮಾಡಿಸಿದಂತ ಸ್ಥಳವಾಗಿದೆ. ಇಲ್ಲಿನ ಭವ್ಯವಾದ ಹಿಮ ಪರ್ವತಗಳ ಮನಮೋಹಕ ದೃಶ್ಯ ಮತ್ತು ಪ್ರಕೃತಿಯ ಸೊಬಗನ್ನು ಸವಿಯ ಬಯಯಸುವವರು ಖಂಡಿತಾ ಇಲ್ಲಿಗೊಮ್ಮ ಭೇಟಿ ನೀಡಿ. ತನ್ನಗೆ ಜಿನುಗುವ ಮಳೆ, ಉನ್ನತ ಶಿಖರಗಳು, ವಿವಿಧ ಬಗೆಯ ಹಕ್ಕಿಗಳ ಚಿಲಿಪಿಲಿ ಸದ್ದು ಇವೆಲ್ಲವೂ ಪ್ರಕೃತಿ ಆರಾಧಕರನ್ನು ಮಂತ್ರ ಮುಗ್ಧಗೊಳಿಸುವುದರಲ್ಲಿ ಸಂದೇಹವೇ ಇಲ್ಲ.

ಕೌಸಾನಿ ಎಲ್ಲಿದೆ, ಹೊಗುವುದು ಹೇಗೆ. ?
ಕೌಸಾನಿ ಉತ್ತರಖಂಡ್‌ ರಾಜ್ಯದ ಬಾಗೇಶ್ವರ ಜಿಲ್ಲೆಯಲಿದ್ದು, ಬಾಗೇಶ್ವರದಿಂದ 40 ಕಿ.ಮೀ. ದೂರದಲ್ಲಿದೆ. ಜೂನ್‌ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಲು ಯಾವುದೇ ಅಡ್ಡಿಗಳಿಲ್ಲ ಮತ್ತು ಈ ಸಮಯದಲ್ಲಿ ವಾತವರಣವೂ ಕೂಡ 16ರಿಂದ 28 ಸೆಲ್ಸಿಯಸ್‌ ಮಧ್ಯ ಇದ್ದು ಬಹಳ ಆಹ್ಲಾದಕರವಾಗಿರುತ್ತದೆ. ಕೌಸಾನಿಯಲ್ಲಿ ಬೈಕ್‌ನ ಹೊರತಾಗಿ ಹೊಗುವುದಾದರೆ ಡೆಹರಾಡೂನ್‌ ಅಥವಾ ದೆಹಲಿ ವಿಮಾಣ ನಿಲ್ದಾಣ ತಲುಪಿ ಅಲ್ಲಿಂದ ಬಸ್‌ ಅಥವಾ ಟ್ಯಾಕ್ಸಿಯಲ್ಲಿ ತಲುಪಬೇಕಾಗುತ್ತದೆ. ಏಕೆಂದರೆ ಕೌಸಾನಿಯಲ್ಲಿ ಯಾವುದೇ ರೈಲು ಅಥವಾ ವಿಮಾಣ ನಿಲ್ದಾಣಗಳಿಲ್ಲ.

ಕೌಸಾನಿಯ ವಿಶೇಷತೆ ಏನು
ಇದು ಕೇವಲ ಒಂದು ವರ್ಗ ಭೇಟಿ ನೀಡುವಂತದ್ದಲ್ಲ. ಚಾರಣ, ಪಕ್ಷಿ ವೀಕ್ಷಣೆ, ಹನಿಮೂನ್‌, ವೀಕೆಂಡ್‌ ಟ್ರಿಪ್‌, ಛಾಯಾಗ್ರಹಣ, ದೇಶೀಯ ಹಳ್ಳಿ ಸೊಬಗು ಸವಿಯುವ ಹೀಗೆ ಯಾವುದೇ ಅಭಿರುಚಿ ಉಳ್ಳವರೂ ಸಹ ಇಲ್ಲಿಗೆ ಭೇಟಿ ನೀಡಬಹುದು. ಶಾಫಿಂಗ್‌ ನ ಹುಚ್ಚು ಇರುವವರಿಗೂ ಇದು ಒಂದು ಪ್ರಶಸ್ತವಾದ ಸ್ಥಳ.

ಭೇಟಿ ನೀಡಬಹುದಾದ ಸ್ಥಳಗಳು
ರುದ್ರಧಾರಿ ಗುಹಾಂತರ ದೇವಾಲಯ ಮತ್ತು ಫಾಲ್ಸ್‌, ಬೈಜ್‌ನಾಥ್‌ ದೇಗುಲ, ಕೌಸಾನಿ ಶಾಲು ಫ್ಯಾಕ್ಟರಿ, ಸುಮಿತ್ರಾನಂದನ್‌ ಪಂತ್‌ ವಸ್ತುಸಂಗ್ರಹಾಲಯ, ಕೌಸಾನಿ ಟೀ ಎಸ್ಟೇಟ್‌, ಲಕ್ಷ್ಮೀ ಹಾಗೂ ಅನಾಸಕ್ತಿ ಆಶ್ರಮಗಳು, ಖಗೋಳ ವೀಕ್ಷನಾಲಯ ಹೀಗೆ ಹತ್ತು ಹಲವು ವೈವಿಧ್ಯಮಯ ಸ್ಥಳಗಳನ್ನು ಕೌಸಾನಿಯಲ್ಲಿ ಕಾಣಬಹುದು.

ಟಾಪ್ ನ್ಯೂಸ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.