ಕಾಡುವ ಮಳೆಗಾಲದ ಸಂಭ್ರಮ


Team Udayavani, Jun 8, 2021, 11:00 AM IST

ಕಾಡುವ ಮಳೆಗಾಲದ ಸಂಭ್ರಮ

ಮಳೆ ಎಂದರೆ ಸಾಕು ಹೆಣ್ಮಕ್ಕಳಿಗೆ ಏನೂ ಒಂದು ಸಂತಸ. ಯಾರು ಕಾಣದ ಲೋಕವನ್ನು ಅವರು ಮಳೆಯಲ್ಲಿ ಕಾಣುತ್ತಾರೆ.

ಹೆಣ್ಣು ಮಕ್ಕಳು ಹಾಗೆ ತಾನೇ ತಮ್ಮ ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೂ ಖುಷಿ ಕಾಣುವುದು ಸಹಜ. ಮಳೆ ಎಂದಾಗ ನಮ್ಮ ಬಾಲ್ಯ, ಕಾಲೇಜು ದಿನಗಳು ನೆನಪಿಗೆ ಬರುವುದು. ಮೋಡದ ಅಲೆಗಳು, ಮಿಂಚಿನ ಓಟಗಳು, ಸಿಡಿಲಿನ ಭಯಾನಕ ಸದ್ದು ಇವೆಲ್ಲವೂ ಮಳೆ ಆಗಮನದ ಮುನ್ಸೂಚನೆಗಳು. ಆಗ ನೋಡಿ ಜಿಟಿ ಜಿಟಿ ಮಳೆ ಹಾನಿಗಳು ನಮ್ಮ ಮನೆ ಅಂಗಳಕ್ಕೆ ಬೀಳಲು ಶುರುವಾಯಿತು. “ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು’ ಎಂಬ ಗಾಯನದ ಸ್ವರ ಹೊರಹೊಮ್ಮಿತು. ಮನಸ್ಸಿನಲ್ಲಿ ಏನೋ ಒಂದು ಮೌನ, ಸಂತಸ, ಬೆಚ್ಚಗಿನ ಕನಸುಗಳು.

ಮಳೆ ನಿಂತ ಅನಂತರ ಕಾಮನ ಬಿಲ್ಲಿನ ಸೊಗಸನ್ನು ನೋಡಲು ಕಣ್ಣಿಗೆ ಇಂಪು. ಜತೆಗೆ ಬಾಲ್ಯದ ನೆನಪುಗಳು ತುಂಬಿ ತುಂಬಿವೆ. ನೀರಿನಲ್ಲಿ ಆಟವಾಡಿ ದೋಣಿ ಬಿಡುವುದೆಂದರೆ ಎಲ್ಲಿಲ್ಲದ ತವಕ. ಮಳೆಗಾಲವನ್ನು ರೈತರ ಹಬ್ಬವೆಂದೇ ಹೇಳಬಹುದು. ಇದರ ಆಗಮನದಿಂದ ರೈತನ ಮುಖದಲ್ಲಿ ಮಂದಹಾಸ ಜತೆಗೆ ಉತ್ತಮ ಫಲ ಪಡೆಯುವ ಭವಿಷ್ಯದ ಕನಸು, ಇವೆಲ್ಲವನ್ನು ನನಸಾಗಿಸುವ ಈ ದಿನ ಅವರ ಬಾಳಿಗೆ ಸುದಿನ. ಅದೇ ರೀತಿ ಅತೀ ಹೆಚ್ಚು ಮಳೆ ಸುರಿದರು ನೆರೆಗೆ ಬೆಳೆ ಹಾನಿ ಆಗುವ ಸಂಭವ ಅತೀ ಹೆಚ್ಚು. ಮತ್ತೂಂದು ಕಡೆ ಮಕ್ಕಳಿಗೆ ಕೊಂಚ ಖುಷಿ, ವರುಣನ ಆರ್ಭಟದಿಂದ ಎಲ್ಲಿ ಶಾಲೆಗೆ ರಜೆ ಸಿಗುತ್ತದೆ ಎನ್ನುವ ಕಾತರ.

ಮತ್ತೂಂದೆಡೆ ಕೆರೆ, ಬಾವಿ ಇವೆಲ್ಲವೂ ಕೂಡ ತುಂಬಿ ತುಳುಕುತ್ತಿರುತ್ತವೆ. ಈ ಸಮಯದಲ್ಲಿ ಮೀನು, ಸಿಗಡಿ, ಇದನ್ನೆಲ್ಲ ಹಿಡಿಯುವ ಮಜಾನೇ ಬೇರೆ. ಅದರಲ್ಲಿ ಸಿಗುವ ಖುಷಿ ಮತ್ತೆ ಯಾವುದರಲ್ಲೂ ಪಡೆಯಲು ಅಸಾಧ್ಯ. ಜೋರಾಗಿ ಗಾಳಿಯ ಸದ್ದು ಕೇಳಿದರೆ ಸಾಕು ಎಲ್ಲರೂ ಮಾವಿನ ಹಣ್ಣಿನ ಬುಡದಲ್ಲಿ ತಾ ಮುಂದು ನಾ ಮುಂದು ಎಂದು ಓಡಿ ಹೋಗಿ ಜಗಳವಾಡುವ ಸಂಭ್ರಮ.

ವರ್ಷದಲ್ಲಿ ಒಂದು ಬಾರಿ ಮಳೆಯನ್ನು ಸಂಭ್ರಮವನ್ನು ಅನುಭವಿಸದಿದ್ದರೆ ಆ ವರ್ಷಕ್ಕೆ ಹರುಷವೇ ಇಲ್ಲ. ಈ ರೀತಿಯಾಗಿ ಮಳೆಯಲ್ಲಿ ಪಡೆದ ಅನುಭವವನ್ನು ಬಣ್ಣಿಸಲು ಸಾಧ್ಯವಿಲ್ಲ. ಹೀಗೆ ಪ್ರತಿಯೊಬ್ಬರು ಮಳೆ ಖುಷಿಯನ್ನು ಅನುಭವಿಸದೇ ಇರಲು ಸಾಧ್ಯವಿಲ್ಲ. ಹೀಗೆ ಮಳೆಗಾಲದ ಪ್ರತಿಯೊಂದು ಅನುಭವ ಹೊಸ ತನದ ಜತೆಗೆ ಮನಸ್ಸಿಗೆ ಉಲ್ಲಾಸವನ್ನು ಮತ್ತು ಮುದವನ್ನು ನೀಡುತ್ತದೆ. ಪತ್ರಿಯೊಂದು ಸಣ್ಣ ಪುಟ್ಟ ವಿಷಯದಲ್ಲಿಯೂ ಸಂಭ್ರಮಿಸಲು ಮಳೆರಾಯ ಮುಖ್ಯ ಕಾರಣನಾಗಿರುತ್ತಾನೆ.

 

 ಚೈತನ್ಯ ಕೊಟ್ಟಾರಿ

ಸೈಂಟ್‌ ಅಲೋಶಿಯಸ್‌ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.