Movie Review: ಸಿನೆರಂಗ; ರಾಮನ ಅವತಾರ


Team Udayavani, May 29, 2024, 2:17 PM IST

10-ramana-avathara

ಹಳ್ಳಿಯನ್ನು ಉದ್ದಾರ ಮಾಡುವ ಕನಸು ಅವನದು. ಏನೇ ಆದರೂ ಹಳ್ಳಿಯನ್ನು ಬಿಟ್ಟು ಹೋಗಬಾರದು, ಕೆಲಸಕ್ಕಾಗಿ ಸಿಟಿಗೆ ಹೋದವರು ಮತ್ತೆ ಹಳ್ಳಿಗೆ ಬಂದು ಇಲ್ಲೇ ಕೆಲಸ ಮಾಡುವಂತೆ ಪಣ ತೊಡುವ ರಾಮ. ಆದರೆ ಅವನೇ ಹಳ್ಳಿಯನ್ನು ಬಿಡುವ ವಿಪರ್ಯಾಸ ಉಂಟಾಗುತ್ತದೆ.

ಊರು ಬಿಟ್ಟು ಸಾಗುವ ಪಯಣದ ಹಾದಿಯೇ ಅಧ್ಯಾಯ-2. ಅಲ್ಲಿ ರಾಮನಿಗೆ ಸಿಗುವ ಹೀರೋಯಿನ್‌, ವಿಲ್ಲನ್‌, ಎಲ್ಲವೂ ರಾಮಾಯಣದ ಪರಿಕಲ್ಪನೆಯಡಿಯಲ್ಲಿ ಆಧುನಿಕವಾಗಿ ಹಾಸ್ಯಭರಿತವಾಗಿ ಸಾಗುತ್ತದೆ. ಇದು ರಿಷಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ರಾಮನ ಅವತಾರ’ ಸಿನೆಮಾ.

ಈ ರೀತಿ ಸಾಗುವ ಕಥೆಯಲ್ಲಿ ನಡು ನಡುವೆ ಸಂಭಾಷಣೆಯಲ್ಲಿ ಕೊಡುವ ಜಲಕ್‌, ಎಮೋಶನ್‌ ಹಾಗೂ ನೀತಿಪಾಠಗಳು ಎಲ್ಲಿಯೂ ಮೋಸ ಮಾಡಿಲ್ಲ. ರುಚಿಗೆ ತಕ್ಕಷ್ಟು ಉಪ್ಪು ಬಳಸುವಂತೆ ಕಥೆಗೆ ತಕ್ಕಷ್ಟು ಹಾಸ್ಯ, ಮನೋರಂಜನೆ, ಮಾಸ್‌ ಎಲಿಮೆಂಟ್‌ ಸೇರಿಸಿದ್ದಾರೆ.

ಇನ್ನು ಕೊನೆಯ ಭಾಗವೇ ಸಂಹಾರ. ರಾಮ ಅನ್ನೋ ಹೆಸರು ಇದೆ ಅಂದಮೇಲೆ ಯುದ್ಧ ಇರಲೇ ಬೇಕು ಅಲ್ವಾ? ಕ್ಲೈಮ್ಯಾಕ್ಸ್‌ ಅಲ್ಲಿ ಬರುವ 2 ನಿಮಿಷದ ಆಕ್ಷನ್‌ ಪ್ಯಾಕ್‌, ಕಡಕ್‌ ಲುಕ್‌ ಜನರನ್ನು ಹುರಿದುಂಬಿಸುತ್ತದೆ. ನಾಯಕನ ಪ್ರೀತಿಯ ಪಯಣದಲ್ಲಿ ಕಂಡು ಬರುವ ಸಂಭಾಷಣೆ, ಸೀತೆಯನ್ನು ಅವನ ಪ್ರೇಮ ಬಲೆಗೆ ಬೀಳಿಸಿಕೊಳ್ಳುವ ಅವನ ಮಾತಿನ ವರಸೆ, ಮಾತಿನ ಚಕಮಕಿ ಪ್ರೇಕ್ಷಕರ ಮುಖದಲ್ಲಿ ನಗು ಹುಟ್ಟುಹಾಕುತ್ತದೆ.

ಚಿತ್ರದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ಇದರೊಟ್ಟಿಗೆ ಬೆರೆತ ಮಂಗಳೂರು ಕನ್ನಡದ ಉಚ್ಚಾರಣೆ ಕಥೆಗೆ ಮತ್ತಷ್ಟು ಸ್ವಾಧ ತಂದಿದೆ. ದೃಶ್ಯಕ್ಕೆ ತಕ್ಕನಾದ ಮೆಲೋಡಿಸ್‌, ಬಿಜಿಎಂ ಹಾಗೂ ಸಂಜಿತ್‌ ಹೆಗ್ಡೆಯವರ ಧ್ವನಿ ಕಿವಿಗೆ ಹಿಂಪು ಎನ್ನಿಸುತ್ತದೆ.

ಅರುಣ್‌ ಸಾಗರ್‌ ಅವರ ನಟನಾ ಚಾತುರ್ಯ ಎಂದಿನಂತೆ ಹೊಸದೇನಲ್ಲ. ಆದರೂ ಅವರ ಮಂಗಳೂರು ಭಾಷೆ ಉಚ್ಚಾರಣೆ ಅಬ್ಟಾ ಅನ್ನಿಸುವುದರಲ್ಲಿ ಮತ್ತೂಂದು ಮಾತಿಲ್ಲ. ಕರಾವಳಿಯ ಸೊಬಗನ್ನು ಕೆಮರಾದಲ್ಲಿ ಸೆರೆಹಿಡಿಯುವಲ್ಲಿ ಛಾಯಾಗ್ರಾಹಕರು ಗೆದ್ದಿದ್ದಾರೆ.

ಹುಡುಗಿಯರ ಕಿಡ್ನಾಪ್‌ ದಂದೆ, ಮಾದಕ ವಸ್ತುವಿನ ದುಷ್ಪರಿಣಾಮಗಳು ಎಲ್ಲವೂ ಚಿತ್ರದಲ್ಲಿ ಸಮಾಜಕ್ಕೆ ದೊರಕುವ ಉತ್ತಮ ಸಂದೇಶ. ಕ್ಲೆçಮ್ಯಾಕ್ಸ್‌ನಲ್ಲಿ ಲಾಜಿಕ್‌ ಹುಡುಕಿದರೆ ಬೇಸರವಾಗಬಹುದು.. ಅದನ್ನು ಹೊರತುಪಡಿಸಿ ಹಾಸ್ಯಕ್ಕೆ, ಮನರಂಜನೆಗೆ ಕಿಂಚಿತ್ತೂ ಮೋಸವಿಲ್ಲ. ಪೈಸಾ ವಸೂಲ್‌ ಚಿತ್ರ ಎಂದರೆ ತಪ್ಪಾಗದು.

ಇನ್ನು ಹಳ್ಳಿ ಉದ್ಧಾರ ಮಾಡುವುದಾಗಿ ಪಣ ತೊಟ್ಟ ರಾಮ ಹಳ್ಳಿ ಬಿಡುವುದು ಯಾಕೆ? ಸೀತೆಯ ಅಪಹರಣ ಮಾಡುವುದು ಯಾಕೆ? ಈ ಆಧುನಿಕ ರಾಮಾಯಣದಲ್ಲಿ ವಾನರ ಸೇನೆ ಎಲ್ಲಿದೆ? ರಾಮ ತನ್ನ ಬದುಕಿನಲ್ಲಿ ಗೆಲ್ಲುವನೇ, ರಾವಣನ ವಧೆ ಆಗುವುದೇ? ಹಾಗೂ ಈ ಕಥೆಯಲ್ಲಿ ಲಕ್ಷ್ಮಣ ಯಾರು? ಎಂಬುದಕ್ಕೆ ಉತ್ತರ ತಿಳಿದುಕೊಳ್ಳಲು ನೀವು ಸಿನೆಮಾ ನೋಡಲೇಬೇಕು.

ಒಟ್ಟಾರೆ ಇದೊಂದು ವಿಭಿನ್ನ ಪ್ರಯತ್ನ, ಹೊಸ ರೀತಿಯ ಫ್ರೆಶ್‌ ಕಾನ್ಸೆಪ್ಟ್. ಜನರನ್ನು ಒಂದು ಇಂಚು ಆಚೆ ಇಚೆ ಅಲ್ಲಾಡದಂತೆ ಚಿತ್ರ ಬಂಧಿ ಮಾಡಿ ಕೊನೆಯ ತನಕ ಕಥಾ ಲೋಕದಲ್ಲಿ ಮುಳುಗಿಸುತ್ತದ್ದೆ.

ವಿಕಾಸ್‌ ಪಂಪಾಪತಿ ಅವರ ನಿರ್ದೇಶನ ನಿಜಕ್ಕೂ ಅದ್ಭುತ. ಸ್ಟೋರಿ ಲೈನ್‌ ಹೊಸ ತಂತ್ರಜ್ಞಾನದ ಬಳಕೆ, ಕಲರ್‌ ಗ್ರೇಡಿಂಗ್‌ ಐಡಿಯಾ ತುಂಬಾ ಹೊಸತೆನಿಸುತ್ತದೆ. ಲಾಜಿಕ್‌ ಹಾಗೂ ಪದ್ಯದ ಮೇಲೆ ಇನ್ನಷ್ಟು ಗಮನ ಕೊಟ್ಟಿದ್ದರೆ ಕಥೆ ಮತ್ತಷ್ಟು ಚೂಪಾಗಿ ಕಂಡು ಬರುತ್ತಿತ್ತು. ಆದರೆ ಆಕ್ಷನ್‌, ಹಾಸ್ಯ, ಪ್ರೀತಿ, ಎಮೋಷನ್‌ಗೆ ಯಾವುದೇ ರೀತಿಯ ಕೊರತೆ ಇಲ್ಲ.

-ರಕ್ಷಿತ್‌ ಆರ್‌.ಪಿ.

ಹೆಬ್ರಿ

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-fusion-cinema

UV Fusion: Cinema- ದಿ ಲಾಸ್ಟ್‌  ಬರ್ತ್‌ಡೇ

4-fusion-2

UV Fusion: Cinema- ದಿ ಪ್ರೆಸಿಡೆಂಟ್

15-uv-fusion

Reality Shows: ಮಕ್ಕಳ ಬೆಳವಣಿಗೆಯಲ್ಲಿ ರಿಯಾಲಿಟಿ ಶೋಗಳ ಪಾತ್ರ

14-uv-fusion

Tourism: ಭೂಲೋಕದ ಸ್ವರ್ಗ ಕಪ್ಪತ ಗುಡ್ಡ

13-uv-fusion

UV Fusion: ಚಪ್ಪಲಿಯೆಂದು ಹೀಗಳೆಯದಿರು ಮನುಜ, ಅದಕ್ಕೂ ಒಂದು ಮೌಲ್ಯವಿದೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.