Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’


Team Udayavani, Mar 22, 2024, 4:00 PM IST

7-uv-fusion

ಕವನ ಸಾಸುವೆಯಲ್ಲಿ ಸಾಗರವನ್ನು ತೋರಬಲ್ಲ ಸಾಹಿತ್ಯ ಪ್ರಕಾರ. ಬೆಳಕಿನ ದೊಂದಿಯಂಥ ಕವಿತೆ ಅಥವಾ ಕವನ ಸಾಹಿತ್ಯದಲ್ಲಿನ ಉಳಿದೆಲ್ಲ ಪ್ರಕಾರಗಳಿಗಿಂತ ವಿಭಿನ್ನ ಮತ್ತು ಚೆನ್ನ.

ಸಾಹಿತ್ಯ ಕ್ಷೇತ್ರಕ್ಕೆ ಕಥೆ, ಕಾದಂಬರಿ, ಅಂಕಣ ಸಾಹಿತ್ಯ, ನಾಟಕ, ಪ್ರಬಂಧ ಹೀಗೆ ಯಾವುದೇ ಮಾರ್ಗದ ಮೂಲಕ ಪ್ರವೇಶಿಸಬಹುದು. ಆದರೆ ಬರೆಯಲು ಹೊರಡುವ ಸಾಹಿತ್ಯಪ್ರೇಮಿಯ ಮೊದಲ ಒಲವು ಮಾತ್ರ ಕವನವೇ. ಕಾರಣ ಇಷ್ಟೇ, ಅಕ್ಷರಲೋಕಕ್ಕೆ ಧುಮುಕುವ ಹುಮ್ಮಸ್ಸಿಗೆ ಪೂರಕವೆಂಬಂತೆ ಕಡಿಮೆ ಸಮಯ ಮತ್ತು ಕಡಿಮೆ ಪದಗಳಲ್ಲಿ ತನ್ನ ಒಳಗುದಿಯನ್ನು ವ್ಯಕ್ತಪಡಿಸುವ ಧಾವಂತಕ್ಕೆ ದ್ವಾರವಾಗಿ ಕವಿತೆಯೇ ಆಯ್ಕೆಯಾಗಿಬಿಡುತ್ತದೆ.

ಕವನ ಚಿತ್ರಿಸುವಾಗ ಪ್ರಾಸ ಪದಗಳ ಚಮತ್ಕಾರ ತೋರಬಹುದು, ಸೂಚ್ಯವಾಗಿ ಗಂಭೀರ ವಿಷಯವನ್ನು ಹೇಳಿಬಿಡಬಹುದು, ಭಯವೆನಿಸುವ ಬೇಗುದಿಯನ್ನು ಪದಗಳ ಹೊದಿಕೆಯಡಿ ಮುಚ್ಚಿ ಹೇಳಿಬಿಡಬಹುದು ಈ ಬಗೆಯ ಹಲವಾರು ಕಾರಣಗಳಿಗಾಗಿ ಬರೆಹಶೈಶವಕ್ಕೆ ಕವಿತೆ ಮೆಚ್ಚಿನ ಆಟಿಕೆಯಾಗುತ್ತದೆ.

ಈಗ ಫೇಸುºಕ್‌ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತ ಬರೆಹಕ್ಕೆ ಅವಕಾಶವಿದ್ದ ಕಾರಣದಿಂದಾಗಿ ಅನೇಕರು ಕವಿತೆಗಳನ್ನು ಹೆಚ್ಚೆಚ್ಚು ಬರೆಯುತ್ತಿದ್ದಾರೆ. ಎಲ್ಲವೂ ಅತ್ಯುತ್ತಮ ಅಂತಲೋ, ಎಲ್ಲವೂ ಕಳಪೆಯಂತಲೋ ಪರಿಗಣಿಸಬೇಕಿಲ್ಲ. ಎಲ್ಲ ಬಗೆಯ ಕವಿತೆಗಳು ಅಲ್ಲಿ ರೂಪತಾಳಿ ನಿಲ್ಲುತ್ತವೆ. ಇತ್ತೀಚಿನ ಕವಿತೆಗಳ ಬಗ್ಗೆ ಸುಮ್ಮನೆ ಒಂದು ತಮಾಷೆಯ ಮಾತಿದೆ. ಪದದ ಪಕ್ಕ ಪದ ಬರೆದರೆ ಗದ್ಯ, ಪದದ ಕೆಳಗೆ ಪದ ಬರೆದರೆ ಪದ್ಯ ಎಂದು. ಈ ಬಗೆಯ ಕವಿತೆಗಳನ್ನೂ ಈಗ ಕಾಣಬಹುದು. ಇದರ ಹೊರತಾಗಿ ಕಣ್ಣುಹಾಯಿಸಿದರೆ ನಮಗೆ ಪುಟ್ಟ ಮೂರು ನಾಲ್ಕು ಸಾಲಿನ ಕವಿತೆಗಳಿಂದ ಪುಟಗಟ್ಟಲೆ ತಮ್ಮ ವಿಸ್ತಾರ ವ್ಯಾಪಿಸಿಕೊಂಡ ಖಂಡಕಾವ್ಯಗಳ ತನಕ ಅನೇಕ ಗಾತ್ರದ ಕವಿತೆಗಳು ಸಿಗುತ್ತವೆ.

ಎಲ್ಲ ಬಗೆಯ ಕವಿತೆಗಳಲ್ಲಿ ಹೊಸತನ, ರಮ್ಯತೆ, ಒಳದನಿ, ತುಡಿತ, ಭಾವ ವ್ಯಕ್ತಗೊಳ್ಳುತ್ತಿರುತ್ತದೆ. ಓದುಗ ಅದಕ್ಕೆ ತೆರೆದುಕೊಳ್ಳಬೇಕು. ಓದುಗನ ಹೃದಯವೀಣೆ ಕವಿಯ ಭಾವವೀಣೆಯೊಂದಿಗೆ ಶ್ರುತಿಗೊಂಡಾಗ ಕಾವ್ಯಗಾನ ಹೊಮ್ಮುತ್ತದೆ. ಈ ಕಾರಣಕ್ಕಾಗಿಯೇ ಕವಿತೆ ಅಥವಾ ಕಾವ್ಯದ ಓದುಗರನ್ನು ಓದುಗ ಎನ್ನದೇ ಸಹೃದಯ ಎನ್ನುತ್ತಾರೆ. ಕವನಗಳು ಒಂದೇ ಓಘದಲ್ಲಿ ಓದಿ ಮುಗಿಸುವ ಅವಸರ ಬಯಸುವುದಿಲ್ಲ.

ಒಂದೊಂದು ಕವಿತೆಯೂ ಒಂದೊಂದು ಭಾವಬೀಜ. ಓದಿದಾಗ ಅಥವಾ ಕೇಳಿದಾಗ ಮನದ ಮಣ್ಣಲ್ಲಿ ಬಿತ್ತರಗೊಂಡು ನಿರಂತರವಾಗಿ ನಿಧಾನವಾಗಿ ಸಾತತ್ಯದಲ್ಲಿ ಚಿಗುರುತ್ತದೆ; ವಿಕಸಿತಗೊಳ್ಳುತ್ತದೆ; ಮೊಗ್ಗು ಮೂಡುತ್ತದೆ; ಅರಳಿ ಹೂವಾಗುತ್ತದೆ. ಆಗಲೇ ನೋಡಿ ಕವಿತೆಯ ಘಮಲು, ಹೊಳಹು ಪಸರಿಸಿ ಹೃದಯಕ್ಕೆ ಮುದದಾಲಿಂಗನ ದಕ್ಕುವುದು. ಆ ಹೂವು ನಿಧಾನಕ್ಕೆ ಬೀಜವೊಂದನ್ನು ನೀಡಿದಾಗ ಓದುಗನಲ್ಲಿ ಹೊಸತೊಂದು ಸ್ಪೂರ್ತಿ ಚಿಮ್ಮಿ ಮನದಗರ್ಭದಲ್ಲೊಂದು ಕವಿತೆ ಆವಿರ್ಭವಿಸುತ್ತದೆ. ಹೊಸ ಕವಿತೆ ಹೊರಬರುತ್ತದೆ.

ಕವಿತೆಯ ಅರ್ಥ ಕೂಡ ಒಂದೇ ಬಗೆಯದ್ದಲ್ಲ. ಕವಿತೆ ಅಂಗೈಲಿ ಜೋಪಾನವಾಗಿ ಹಿಡಿದಿಟ್ಟ ದೀಪ. ಯಾರಿಗೆ ಯಾವ ಬೆರಳ ಸಂದಿಯಿಂದ ಹೊಮ್ಮಿದ ಬೆಳಕು ದಕ್ಕುವುದೋ ಅದೇ ಅವರ ಪಾಲಿನ ಅರ್ಥ. ಈ ನಮ್ಯತೆ ಕವಿತೆಗೆ ಇರುವ ಕಾರಣಕ್ಕೆ ಕವಿತೆಗೆ ಅನಂತತೆ ಮತ್ತು ಜನಪ್ರಿಯತೆ ಸಿಕ್ಕಿರುವುದು. ಕವಿತೆಯ ಸ್ವಾದ ದಕ್ಕಬೇಕಾದರೆ ಒಂದು ಕವಿತೆ ಓದಬೇಕು, ಅದನ್ನೇ ಮನದಲ್ಲಿ ಧ್ಯಾನಿಸಬೇಕು. ಅದು ಮಾಗಿ ತಾನೇ ತನ್ನೊಳಗಿನ ಒಂದು ಅರ್ಥವನ್ನು ಕೊಡುವ ತನಕ ಕಾಯಬೇಕು. ಅದರೊಟ್ಟಿಗೆ ಮಾಗಬೇಕು. ನಾವೂ ಕವಿತೆಯಾಗಿಬಿಡಬೇಕು…. ಕವಿತೆಯೊಂದಿಗೆ ಸಾಫ‌ಲ್ಯ ಸಾಧಿಸುವ ಸುಲಭ ಸಾಧ್ಯತೆ ಇದು.

-ಚಿದಂಬರ ಕುಲಕರ್ಣಿ

ಧಾರವಾಡ ವಿವಿ

ಟಾಪ್ ನ್ಯೂಸ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.