ಮಳೆ ಎಂಬ ಪ್ರಕೃತಿಯ ಅತ್ಯುನ್ನತ ಕೊಡುಗೆ


Team Udayavani, Jun 5, 2021, 3:53 PM IST

ಮಳೆ ಎಂಬ ಪ್ರಕೃತಿಯ ಅತ್ಯುನ್ನತ ಕೊಡುಗೆ

ಮಳೆ ಎಂದರೆ ಸಂಭ್ರಮ. ಆತಂಕ, ಹಸುರು ಹಾಡಿನ ಚರಣ. ಮಳೆ ಬೀಳುವಾಗ ಗಾಳಿ ನವಿರಾಗಿ ಬೀಸಿದರೆ ಮಳೆ ನಿಂತು ಸುರಿಯುತ್ತದೆ. ಹೊಲ, ಗದ್ದೆಗಳು ನೆನೆಯುತ್ತವೆ. ಗಾಳಿ ಜೋರಾದರೆ ಹನಿಗಳು ಮೈಮೇಲೆ ಸೂಸುತ್ತವೆ. ಮಳೆ ಬೀಳುವಾಗ ಪ್ರಕೃತಿ ಹಸುರು ಹಾಸಿಗೆಯಿಂದ ಹಾಸಿದಂತೆ, ಮಳೆ ಬರುವ ಮುಂಚೆ, ಕಪ್ಪೆಗಳು ಮೇಘರಾಜನನ್ನು ಕರೆಯುತ್ತವೆ. ಇಬ್ಬನಿಯ ತಿಳಿ ಗಾಳಿಯಲ್ಲಿ ನಮ್ಮ ಮನಸ್ಸು ಬಾಚಿದಂತೆ, ಆಹಾ !! ಆಹಾ !! ಈ ಮಳೆಯ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು.

ಮೋಡ ಕವಿದಾಗ, ಗುಡುಗು ಕೇಳಿಸಿದಾಗ, ಮಿಂಚು ಸಿಡಿದಾಗ, ಒಮ್ಮೆಲೇ ಮನಸ್ಸು ತಳಮಳಗೊಳ್ಳುತ್ತದೆ. ವಿದ್ಯುತ್‌ ಕಣ್ಮರೆಯಾಗುತ್ತದೆ. ಕತ್ತಲು ಕವಿದು, ಮಳೆಯು ತನ್ನ ಗತಿಯಲ್ಲಿ ಸುರಿಯುತ್ತಿರುವಾಗ ನಮ್ಮೂರಿನಲ್ಲಿ ಗಾಳ ಹಿಡಿದುಕೊಂಡು ನದಿಗಳತ್ತ ಪ್ರಯಾಣ.

ಮಳೆಯಲ್ಲಿ ನೆನೆಯುದೆಂದರೆ ಪ್ರಕೃ ತಿಯ ಜತೆಗೆ ಒಂದಾಗುವ ಕ್ರಮ. ಮಳೆಯಲ್ಲಿ ನೆನೆಯುವುದೇ ಅದ್ಭುತ ಅನುಭವ. ನಾನಂತೂ ಮಳೆ ಸುರಿಯಲು ಆರಂಭಿಸಿದರೆ ನಮ್ಮ ಗದ್ದೆ ಬಯಲು ಪ್ರದೇಶದಲ್ಲಿ ಕುಣಿದು ಕುಪ್ಪಳಿಸಲು ಶುರುಮಾಡುತ್ತೇನೆ. ಮಳೆಯ ಹನಿಗಳಲ್ಲಿ, ಪ್ರಕೃತಿ ಜತೆ ಆನಂದಿಸುವುದು ಸ್ವರ್ಗ. ಸಿನೆಮಾದಲ್ಲಿ ಮಾತ್ರ ನೋಡಿ ಖುಷಿಪಡುತ್ತಿದ್ದೆವು. ಆದರೆ ನಿಜವಾದ ಸ್ವರ್ಗ ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿಯೇ ಇದೆ.

ಮಳೆಗಾಲದ ಆರಂಭದಲ್ಲಿ ಶಾಲೆ ಕಾಲೇಜಿನ ಬಾಗಿಲು ತೆರೆಯುತ್ತವೆ. ವಿದ್ಯಾರ್ಥಿಗಳು ಮೆಲ್ಲನೆ ಬರುತ್ತಿರುವ ಮಳೆಯ ಜತೆ, ಯಾವುದೋ ಮೂಲೆಯಲ್ಲಿ ಬಿದ್ದಿರುವ ಕಳೆದ ವರ್ಷದ ಕೊಡೆ ಬಿಡಿಸಿ ಹೋಗುವ ಸಂದರ್ಭ. ಮಳೆ ಜೋರಾಗಿ ಸುರಿದರೆ ಶಾಲೆಗಳಿಗೆ ರಜೆ. ವಿದ್ಯಾರ್ಥಿಗಳ ಪಾಲಿಗೆ ಮಳೆಯೇ ದೇವರು. ಮಳೆ ಜೋರಾಗಿ ಸುರಿದರೆ ಬೆಳಗ್ಗೆ ಬಂದಿರುವ ನೆಂಟರು ಸಂಜೆ ಉಳಿಯುವುದಿಲ್ಲ ಎಂಬ ಗಾದೆಗಳು ಇವೆ.

ಬರಡಾದ ಭೂಮಿಯಲ್ಲಿ ರೈತನೋರ್ವ ತನ್ನ ಕೈಯನ್ನು ತಲೆಮೇಲೆ ಇಟ್ಟು ಮಳೆರಾಯನನ್ನು ಕರೆಯುವ ಕ್ಷಣ. ಒಂದೇ ಸಮನೆ ಬರುವ ಮಳೆಯ ಜತೆಗೆ, ರೈತ ತನ್ನ ಕಣ್ಣೀರಿನ ಮುಖದಲ್ಲಿ, ಇಡೀ ದೇಹವನ್ನೇ ನೀರಲ್ಲಿ ನೆನೆಸಿ ಗದ್ದೆಯಲ್ಲಿ ಭತ್ತ ಬಿತ್ತುವ ಸಮಯ. ಇಳಿ ಸಂಜೆಯ ತಿಳಿ ಮಳೆಯಲ್ಲಿ, ಮೈ ನಡುಗುವ ಚಳಿ. ಚಳಿಗೆ ಒಂದು ಬಿಸಿ ಬಿಸಿ ಕಣ್ಣ ಚಾ (Black Tea) ಈ ಮಳೆಯ ಸುಂದರ ಕ್ಷಣ ಅನುಭವಿಸುವುದೇ ಸ್ವರ್ಗ.

ಈ ಭೂಮಿಯ ಮೇಲೆ ಎಲ್ಲವೂ ಮಳೆಯ ಮೇಲೆ ನಿಂತಿದೆ. ತುಂಬಾ ಕಾಲ ವಿಲವಿಲ ಒದ್ದಾಡುತ್ತಿರುವ ನೆಲವು ಒಂದು ಹನಿ ಬಿದ್ದ ಹೊತ್ತಿಗೆ, ಇನ್ನೂ ನನಗೆ ಬರೀ ತಂಪು ಎಂದು ಕೂಗುತ್ತದೆ. ಹಸುರಿಲ್ಲದೇ ಪ್ರಕೃತಿಗೆ ಉಸಿರಿಲ್ಲ, ನೀರಿಲ್ಲ ಎಂಬ ಕೆಲವು ಚಿಂತೆಗಳು ರೈತನಿಗೆ ಇರಲ್ಲ. ಮಳೆ ಬಂದರೆ, ಕಾಲಚಕ್ರದ ತರ. ರೈತನ ದಿನ ನಿತ್ಯ ಕಾಯಕ ನೆಮ್ಮದಿಯ ವಾತಾವರಣದಲ್ಲಿ ಸಾಗುತ್ತದೆ. ಜೋರಾದ ಮಳೆಯ ಜತೆ, ಒಂದು ಎಲೆ ಅಡಿಕೆ, ಒಂದು ಚಾ ಇದ್ದರೆ ಸಾಕು ಅದೇ ಸ್ವರ್ಗ ಎನ್ನುತ್ತಿದ್ದರು ನಮ್ಮ ತಾತ…

ಆದರೆ ಇಂದಿನ ಪ್ರಕೃತಿಯಲ್ಲಿ ಮಳೆಯು ಊಹೆಗೂ ಸಿಗದ ರಹಸ್ಯವಾಗಿದೆ. ಮಾನವ ಪ್ರಕೃತಿಯನ್ನು ಘೋರವಾಗಿ ನಾಶಮಾಡುತ್ತಿರುವ ಕಾರಣ. ಮಳೆಯೇ ಇಲ್ಲದೆ ಬರಿದಾಗಿದೆ. ಪ್ರಕೃತಿಯ ಅಳಿವಿಗೆ ಮಾನವ ಕಾರಣನಾದರೆ, ಮಾನವನ ಅಳಿವಿಗೆ ಪ್ರಕೃತಿಯೇ ಕಾರಣವಾಗು ತ್ತದೆ. ಪ್ರಕೃತಿಯನ್ನು ಉಳಿಸಿ, ಸುಂದರವಾದ ಉಸಿರಾಟದ ಜತೆಗೆ, ನೆಮ್ಮದಿಯ ಜೀವನ ನಡೆಸಲು ಪ್ರಕೃತಿಯ ಪಾತ್ರ ವಿಭಿನ್ನವಾದದ್ದು….!!

 

ಶರತ್‌ MCL ಮುದೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.