Tourist Place: ಮಳೆಗಾಲದ ಸುಂದರ ತಾಣ ಯಾಣ


Team Udayavani, Oct 15, 2023, 3:26 PM IST

Tourist Place: ಮಳೆಗಾಲದ ಸುಂದರ ತಾಣ ಯಾಣ

ಮೊನ್ನೆ ಒಂದಿನ ಸ್ನೇಹಿತರೆಲ್ಲರೂ ಸೇರಿ ಒಂದು ದಿನದ ಪ್ರವಾಸ ಕೈಗೊಳ್ಳುವ ನಿರ್ಧಾರದೊಂದಿಗೆ ಒಂದು ಕಪ್‌ ಟೀನೊಂದಿಗೆ ಪ್ರೇಕ್ಷಣೀಯ ಸ್ಥಳಗಳ ಹುಡುಕಾಟ ಆರಂಭಿಸಿದೆವು. ಒಬ್ಬ ಅಂಬೂಲಿ ಪಾಲ್ಸ್‌ ಹೋಗೋಣ ಎಂದರೆ ಇನ್ನೊಬ್ಬ ಗೋವಾ, ಇವೆರಡರ ಮಧ್ಯೆ ಮತ್ತೂಬ್ಬನದು ಜೋಗ ಜಲಪಾತ ಹೀಗೆ ಮಳೆಗಾಲದ ಸುಂದರ ನಿಸರ್ಗ ರಮಣೀಯ ತಾಣಗಳ ಯಾದಿ ಆರಂಭವಾಯಿತು. ಇನ್ನೆನು ನಾಳೆ ಮುಂಜಾನೆ ಹೊರಡಬೆಕೆನ್ನುವಷ್ಟರಲ್ಲಿ ನಮ್ಮ ಪ್ರವಾಸದ ತಾಣವನ್ನು ಕೊಂಚ ಬದಲಾಯಿಸಿಕೊಂಡು ಸುತ್ತಲೂ ಮಂಜುಕವಿದ ವಾತಾವರಣ, ಜಿಟಿಜಿಟಿ ಮಳೆಹನಿಯ ನಿನಾದ, ಜತೆಗೆ ಎತ್ತ ನೋಡಿದರತ್ತ ಹಸಿರು ಹಾಸಿಗೆಯಿಂದ ಆವೃತ್ತವಾದ ಸ್ಥಳದತ್ತ ನಮ್ಮ ಪಯಣ ಸಾಗಿತ್ತು.

ಈಗ ನಿಮ್ಮಲ್ಲೂ ಅದು ಯಾವ ಸ್ಥಳ ಅಂತ ಕುತೂಹಲ ಮೂಡಿರಬೇಕಲ್ಲವೇ? ಹೌದು ಅದ್ಯಾವುದೆಂದರೆ ಹಚ್ಚ-ಹಸುರಿನ ಬಾನೆತ್ತರದಿ ಬೆಳದಿಹ ಗಿಡಮರಗಳ ಮಧ್ಯೆ ಕಾಣ ಸೀಗುವ, ಮಳೆಗಾಲದ ಸುಂದರ ತಾಣ ಯಾಣ. ಮುಂಜಾನೆಯ ಚುಮು-ಚುಮು ಚಳಿಯ ನಡುವೆ ಹುಬ್ಬಳ್ಳಿಯಿಂದ ಹೊರಟು ಇಬ್ಬರು ಸ್ನೇಹಿತರನ್ನು ಧಾರವಾಡದಿಂದ ಕರೆದುಕೊಂಡು ಆರಂಭಕ್ಕೆ ಒಂದು ಚಿತ್ರಪಟವಿರಲಿ ಎಂದು ಮಬ್ಟಾದ ಬೀದಿದೀಪದ ಕೆಳಗೆ ಸೆಲ್ಪಿ ತೆಗೆದುಕೊಳ್ಳುತ್ತಾ ನಮ್ಮ ಪ್ರವಾಸ ಆರಂಭವಾಯಿತು.

ಕಾರಿನ ಹೊರಗೆ ತುಂತುರು ಹನಿಯ ನಿನಾದ, ಒಳಗಡೆ ಕೊರೆವ ಚಳಿ ಇವುಗಳ ಮಧ್ಯೆ ನಮ್ಮ ಹಾಡು-ಹರಟೆ ಶುರುವಾಗಿತ್ತು. ಮಾರ್ಗಮದ್ಯ ಸೀಗುವ ಯಲ್ಲಾಪುರದಲ್ಲಿ ಬಿಸಿಬಿಸಿ ಇಡ್ಲಿ-ವಡೆ ತಿಂದು ಮತ್ತೆ ಪ್ರಯಾಣ ಮುಂದುವರಿಸಿದೆವು. ಇನ್ನೇನು ಯಾಣದ ಮುಖ್ಯ ರಸ್ತೆಯಿಂದ ಒಳಗಡೆ ಸಾಗುತ್ತಲೇ ಎರಡೂ ಬದಿಗೂ ಹಸಿರು ಹುಲ್ಲಿನ ಹಾಸಿಗೆ ಭೂಮಿ ತಾಯಿಯನ್ನು ಆವರಿಸಿಕೊಂಡಿತ್ತು. ಸುತ್ತಮುತ್ತಲಿನ ನಿಸರ್ಗ ಸವಿಯುತ್ತಾ ಖುಷಿಗೆ ನೆಲೆಯೇ ಇಲ್ಲದಂತಾಗಿತ್ತು.

ಅಲ್ಲಿಂದ ಸ್ನೇಹಿತರೆಲ್ಲರೂ ಸೇರಿಕೊಂಡು ಅಂಕು-ಡೊಕಿನ ಕಲ್ಲು ಮುಳ್ಳಿನ ದಾರಿ, ಅಕ್ಕ-ಪಕ್ಕ ಗಿಡಗಂಟಿಗಳ ಮಧ್ಯೆ ಯಾಣ ಹತ್ತಲು ಆರಂಭಿಸಿದೆವು. ಅಲ್ಲೊಂದು ಇಲ್ಲೊಂದು ಸಿಗುವ ಕುರ್ಚಿಯ ಮೇಲೆ, ರಸ್ತೆಯ ಮಧ್ಯೆ ಸೆಲ್ಪಿ ತೆಗೆದುಕೊಳ್ಳುತ್ತಾ ಚಿಕ್ಕಗುಡ್ಡವ ಏರುತ್ತಲೇ ರಮಣೀಯ ನಿಸರ್ಗದ ನಡುವೆಯಿದ್ದ ಗುಡಿಯಲ್ಲಿ ಭೈರವೇಶ್ವರನ ದರ್ಶನವನ್ನು ಪಡೆದು ಸ್ವಲ್ಪಹೊತ್ತು ಅಲ್ಲೇ ವಿಶ್ರಮಿಸಿಕೊಂಡೆವು. ಮುಂದೆ ದೇಗುಲದ ಹಿಂಬದಿಯ ಬಾಗಿಲಿನಿಂದ ಸೀಗುವ ಮೆಟ್ಟಿಲುಗಳ ಮೂಲಕ ಗುಹೆಯತ್ತ ಸಾಗಿದೆವು. ಹೊರಗಡೆಯಿಂದ ನೊಡಿದರೆ ಕೇವಲ ಒಂದು ಬಂಡೆ ಕಲ್ಲಿನತೆ ಕಾಣುವ ಗುಹೆ ಸ್ವಲ್ಪ ಒಳನಡೆಯುತ್ತಲೇ ಸೂರ್ಯರಶ್ಮಿಯ ಕಿರಣಗಳು ಇಕ್ಕಲಗಳ ಮಧ್ಯೆ ನುಸುಳಿ ನಮಗೆ ದರ್ಶನ ನೀಡಿದಂತಿತ್ತು. ಗುಹೆಯ ಒಂದು ಭಾಗದಿಂದ ಒಳನಡೆದು ಮತ್ತೂಂದು ಭಾಗದ ಕಾಲುದಾರಿಯಿಂದ ಹೊರಗಡೆ ಬಂದೆವು.

ಅಲ್ಲಿನ ಸೌಂದರ್ಯ ವನ್ನು ಎಂದಿಗೂ ಮರೆಯು ವಂತಿಲ್ಲ. ಅಲ್ಲಿಂದ ಹೊರಬಂದು ನಿಸರ್ಗ ಸವಿದು ಖುಷಿಯಾದ ನಾವು ಅಲ್ಲಿಂದ ಹತ್ತು ಕಿಲೋ ಮೀಟರ್‌ ದೂರದಲ್ಲಿರುವ ವಿಭೂತಿ ಪಾಲ್ಸ್‌ನತ್ತ ಪ್ರಯಾಣ ಮುಂದುವರೆಸಿದೆವು. ಅಲ್ಲಿ ನಮಗೆ ಮತ್ತೂಂದು ಅಚ್ಚರಿಯೇ ಕಾದಿತ್ತು. ಎಡ ಬಲ ಪ್ರಪಾತ, ಕಿರುದಾದ ದಾರಿ ಮುಂದೆ ಯಾವ ಕಾರು ಗಾಡಿ ಬರುತ್ತವೆ ಅನ್ನುವ ಭಯ, ಇವೆಲ್ಲದರ ನಡುವೆ ನಮ್ಮ ಸಾರಥಿಯ ಮೇಲೆ ನಂಬಿಕೆ ಇಟ್ಟು ಮುಂದೆ ಸಾಗಿದೆವು. ಪಾಲ್ಸ್‌ಗೆ ತಲುಪುತ್ತಲೇ ಮತ್ತೂಂದು ಚಾಲೆಂಜ್‌. ಬರಿಗಾಲಲ್ಲಿ ನಡೆದರೂ ಜಾರುವಂತಿದ್ದ ಕೆಸರಿನ ಚಿಕ್ಕದಾರಿ ಸ್ವಲ್ಪ ಮುಂದೆ ಸಾಗುತ್ತ ಮಧ್ಯೆಯೇ ಬಲಗಡೆ ಹರಿಯುವ ಝರಿ, ಪಾಲ್ಸ್‌ ಅನ್ನು ತಲುಪಿದ ನಮಗೆ ಮೇಲಿಂದ ಬೋರ್ಗರೆಯುತ್ತಾ ಹರಿಯುವ ಜಲಪಾತದ ದೃಶ್ಯವನ್ನು ನೋಡುತ್ತ ಒಂದು ಕ್ಷಣ ಮಂತ್ರಮುಗªರಾಗಿ ನಿಂತದ್ದು ಸುಳ್ಳಲ್ಲ.

ಮಳೆಗಾಲವಾದ್ದರಿಂದ ನೀರಿನಲ್ಲಿ ಆಟವಾಡಿಲ್ಲವಾದರೂ ಕೆಳಗಿಳಿದು ಸೆಲ್ಪಿ ತೆಗೆದುಕೊಂಡು ಹೊರಬಂದೆವು. ಅಷ್ಟರಲ್ಲಾಗಲೇ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಹೊಟ್ಟೆ ಚುರುಕ್‌ ಅನ್ನಲು ಶುರುಮಾಡಿತ್ತು, ಮನೆಯಿಂದ ತೆಗೆದುಕೊಂಡು ಬಂದಿದ್ದ ಮಂಡಕ್ಕಿಯ ಪೊಟ್ಟಣ ಕ್ಷಣ ಮಾತ್ರದಲ್ಲೇ ಖಾಲಿಯಾಯಿತು. ಅಲ್ಲಿಂದ ಹೊರಟು ಮಾರ್ಗ ಮಧ್ಯೆ ಸಿಕ್ಕ ಶ್ರೀಕೃಷ್ಣ ಭವನದಲ್ಲಿ ಊಟ ಮುಗಿಸಿಕೊಂಡು ಗೋಕರ್ಣ ತಲುಪುವಾಗ ಸಂಜೆ ಗಂಟೆ ನಾಲ್ಕರ ಗಡಿ ದಾಟಿತ್ತು.

ಕೆಲವು ಹೊತ್ತು ಸಮುದ್ರದಲ್ಲಿ ರಭಸವಾಗಿ ಬರುವ ಅಲೆಗಳಿಗೆ ಎದುರಾಗಿ ನಿಂತು ಮನಬಂದತೆ ಕುಣಿಯುತ್ತ ಒಬ್ಬರಿಗೊಬ್ಬರು ನೀರೆರಚುತ್ತಾ ಖುಷಿ-ಖುಷಿಯಾಗಿ ನೀರಲ್ಲಿ ಆಟವಾಡಿದೆವು. ಸಂಜೆ ಸೂರ್ಯಾಸದ ಹೊತ್ತಿಗೆ ಅಲ್ಲಿ ಪಕ್ಕದಲ್ಲಿದ್ದ ಗಣೇಶನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದುಕೊಂಡು ಬಂದೆವು. ಮೂರು ಸ್ಥಳಗಳ ನೋಡುತ್ತಲೇ ಎಲ್ಲರೂ ಸುಸ್ತಾಗಿದ್ದರು. ಮತ್ತು ರಾತ್ರಿ ಬೇಗ ಊರು ತಲುಪಬೇಕಿದ್ದರಿಂದ ನಾವೆಲ್ಲರೂ ಮುಂಜಾನೆಯಿದ ಅನುಭವಿಸಿದ ಸುಂದರ ಕ್ಷಣಗಳನ್ನು ಮೇಲಕು ಹಾಕಿಕೊಳ್ಳುತ್ತಾ ಹುಬ್ಬಳ್ಳಿ ಕಡೆಗೆ ಹೊರಟೆವು.

-  ಅಕ್ಷಯಕುಮಾರ ಜೋಶಿ, ಹುಬ್ಬಳಿ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.