ಸಿಟಿ ಲೈಫ್ ನಲ್ಲಿ ಹಳ್ಳಿ ಸೊಬಗಿನ ಹುಡುಕಾಟ!


Team Udayavani, Jul 18, 2021, 2:04 PM IST

Untitled-1

ಬೆಚ್ಚನೆಯ ಮಾಳಿಗೆ ಮನೆ. ತಣ್ಣನೆಯ ಹೆಂಚಿನ ಮನೆ, ಧಾನ್ಯಗಳ ತುಂಬುವ ಕಣಜ, ಹಿತ್ತಲಲ್ಲಿ ಪರದೆಯಿಂದ ಕಟ್ಟಿದ ಬಚ್ಚಲಮನೆ. ಬೆಳಕಿಗಾಗಿ ಬಿಟ್ಟುಕೊಂಡ ಕಿಂಡಿಗಳು, ಸೋರುವ ಮಳೆ ನೀರನ್ನು ಸಂಗ್ರಹಿಸಲು ಇಟ್ಟ ಮಡಿಕೆಗಳು. ಪೂಜಾ ಮನೆಯಲ್ಲಿ ನಿಲ್ಲಿಸಿದ ದೇವರ ಕಂಬ, ಆಕಾರವೇ ಇಲ್ಲದ ಕನ್ನಡಿಗಳು, ಬಟ್ಟೆಗಳನ್ನು ತುಂಬಲು ಮಾಡಿದ ಪಂಜರಗಳು, ಮನೆ ಮುಂದಿನ ತುಳಸಿಗಿಡ, ಅದರ ಸುತ್ತಲಿನ ಹೂದೋಟ, ಅಟ್ಟದಲ್ಲಿ ನೇತುಹಾಕಿದ ಪೊರಕೆ, ಈರುಳ್ಳಿ-ಬೆಳ್ಳುಳ್ಳಿ ಗೊಂಚಲುಗಳು, ಕೊಟ್ಟಿಗೆಯಲ್ಲಿ ಆಡುವ ಜಾನುವಾರುಗಳು, ಊರ ಹೊರಗಿನ ಕೆರೆಗಳು, ಈಚಲ ಮರ, ಊರನ್ನೇ ಸುತ್ತುವರಿದ ಬಿಟ್ಟ-ಗುಡ್ಡಗಳು, ಇನ್ನೇನು ಬೀಳಲಿರುವ ಸರಕಾರಿ ಶಾಲೆ, ಹಾಲಿನ ಡೈರಿ, ಪಶು ಆಸ್ಪತ್ರೆ, ಟೀ ಅಂಗಡಿಗಳು, ವರ್ಷಕ್ಕೊಮ್ಮೆ ಊರಿಗೆ ಊರೇ ಸೇರಿ ಹರಿ ಸೇವೆ ಮಾಡುವ ದೇವರ ಬಯಲು, ಚಿಕ್ಕ ಮಕ್ಕಳ ಕೈಯಲ್ಲಿನ ಮಳೆರಾಯ ಮೂರ್ತಿ, ಹಸಿವಿನ ಚಪಲ ತೀರಿಸುತ್ತಿದ್ದ ಬಳಪಗಳು.

ಅಬ್ಬಬ್ಟಾ… ಇದು ಹೊರನೋಟವಷ್ಟೇ! ಒಂದು ಹಳ್ಳಿ ಎಂದರೆ ಅದೊಂದು ಅನಂತ ಸಾಗರವಿದ್ದಂತೆ. ಒಂದೊಂದು ಹಳ್ಳಿಯ ಬಗ್ಗೆ ಒಂದೊಂದು ಬೃಹತ್‌ ಗ್ರಂಥವನ್ನೇ ಬರೆದಿಡಬಹುದು. ಅಷ್ಟೊಂದು ವಿಷಯಗಳಿವೆ. ಮಾತಿನಲ್ಲಿ ಅಥವಾ ಬರಹಗಳಲ್ಲಿ ಹಳ್ಳಿಯ ಸೊಬಗನ್ನು ಹಿಡಿದಿಡುವುದು ತುಂಬಾನೆ ಕಷ್ಟ. ಆ ಪ್ರಕೃತಿ ಸೌಂದರ್ಯವನ್ನು ಸವಿಯಲು ಎರಡು ಕಣ್ಣೂ ಸಾಲದು.

ನಮ್ಮದು ಹಳ್ಳಿಗಳ ದೇಶವಾದರೂ ಇತ್ತೀಚೆಗೆ ಎಲ್ಲರೂ ದುಡಿಮೆಗೆಂದು ನಗರಕ್ಕೆ ಬಂದವರು ಅಲ್ಲೇ ಬದುಕು ಕಟ್ಟಿಕೊಂಡರು. ಊರಿನಲ್ಲಿದ್ದ ಅಲ್ಪ-ಸ್ವಲ್ಪ ಜಮೀನನ್ನು ಮಾರಿ, ನಗರಗಳಲ್ಲಿ ವ್ಯಾಪಾರ ಶುರುಮಾಡಿಕೊಂಡರು. ಅವರ ಮಕ್ಕಳು ಅಲ್ಲೇ ಹುಟ್ಟಿ, ಅಲ್ಲೇ ಬೆಳೆದು, ಓದಿ, ಕೆಲಸ ತೆಗೆದುಕೊಂಡು, ಮದ್ವೆ-ಹೆಂಡತಿ-ಮಕ್ಕಳು-ಸಂಸಾರ ಅಂತ ಮಾಡಿಕೊಂಡು, ಅವರ ಮಕ್ಕಳಿಗೂ ಹಳ್ಳಿ ತೋರಿಸುವುದನ್ನೇ ಮರೆತರು. ಈಗ ಆ ಮಕ್ಕಳು ದೊಡ್ಡವರಾಗಿದ್ದಾರೆ. ಒಳಕಲ್ಲು, ಗುಂಡುಕಲ್ಲು, ಒನಕೆ, ಪಂಜರ, ಗೊಟ್ಟ ಎಂಬ ಪದಗಳು ಕಿವಿಗೆ ಬಿದ್ದರೆ, ಏನು? ಎಂದು ಮರು ಪ್ರಶ್ನೆ ಮಾಡುತ್ತಾ ಉತ್ತರಕ್ಕಾಗಿ ಕಿವಿ ನಿಮಿರಿಸಿ ನಿಲ್ಲುತ್ತಾರೆ. ಅದಾಗಿಯೂ ನಾವು ಹೇಳುವ ಉತ್ತರಕ್ಕೆ ಸರಿಯಾದ ಕಲ್ಪನೆ ಅವರ ತಲೆಯಲ್ಲಿ ಮೂಡದೆ, ಅದನ್ನು ಅಲ್ಲಿಗೆ ಬಿಟ್ಟು ಸುಮ್ಮನಾಗುತ್ತಾರೆ. ಕಾನ್ವೆಂಟ್‌ ಪಾಲಾಗಿ, ನಾಲ್ಕು ಗೌಡೆಯ ಮಧ್ಯೆ ಆನ್‌ಲೈನ್‌ ತರಗತಿಗಳಲ್ಲಿಯೇ ಮುಳುಗಿಹೋಗಿರುವ ಇತ್ತೀಚಿನ ದಿನಗಳ ಮಕ್ಕಳಿಗಾಗಿ ಮುಂದೊಂದು ದಿನ ಆನೆ, ಕಪ್ಪೆ, ಹಾವು, ಹಲ್ಲಿಗಳ ಬಗ್ಗೆ ತಿಳಿಸಲು ಪಠ್ಯವನ್ನೇ ಇಡಬೇಕಾಗುತ್ತದೆ. ಎಲ್ಲಿಗೆ ಬಂತು..? ಯಾರಿಗೆ ಬಂತು? ಸ್ವಾತಂತ್ರ್ಯ! ಅನ್ನೋ ಮಾತಿನಂತೆ, ತಂತ್ರಜ್ಞಾನ ಹಾಗೂ ನಗರೀಕರಣಗಳಿಂದ ನಮಗಾದ ಪ್ರಯೋಜನಗಳೇನು ಎಂದು ನಾವೇ ಕೂತು ಯೋಚಿಸಬೇಕಾಗುತ್ತದೆ. ಹಳ್ಳಿ ಬಿಟ್ಟು ಬಂದು ಚೆನ್ನಾಗಿ ದುಡಿದು, ಸಂಸಾರ ಕಟ್ಟಿಕೊಂಡರೂ. ಹಳ್ಳಿಯಲ್ಲಿ ಬೆವರು ಸುರಿಸಿ, ಹೊಟ್ಟೆ ತುಂಬಾ ತಿಂದು, ಆರಾಮಾಗಿ ಮಲಗುತ್ತಿದ್ದ ದಿನಗಳು ಎಂದಿಗೂ ವಾಪಾಸಾಗುವುದಿಲ್ಲ. ಹಳ್ಳಿ ಜಮೀನುಗಳನ್ನೆಲ್ಲ ಮಾರಿದರು, ಮರಗಳನ್ನೆಲ್ಲ ನೆಲಸಮ ಮಾಡಿ, ದೊಡ್ಡ ದೊಡ್ಡ ಹೊಗೆ ಕಾರುವ ಬಿಲ್ಡಿಂಗ್‌ಗಳನ್ನು ಆಕಾಶದೆತ್ತರಕ್ಕೆ ಕಟ್ಟಿದರು. ಅಲ್ಲಿ ಎಲ್ಲಿಂದಲೋ ಬಂದವರು ಕೆಲಸ ಗಿಟ್ಟಿಸಿಕೊಂಡರು. ಮರಗಿಡಗಳಿಲ್ಲದೆ, ಹೊಗೆ ತುಂಬಿ, ನೀರು ಖಾಲಿಯಾಗಿ ಪ್ಲಾಸ್ಟಿಕ್‌ ನಿಂದ ಊರಿಗೆ ಊರೇ ಶ್ಮಶಾನವಾಯ್ತು. ಹೀಗೇ ಎಲ್ಲ ಹಳ್ಳಿಗಳು ಒಂದೊಂದೇ ನಗರದ ರೂಪ ಪಡೆಯುತ್ತಾ ಬಂದವು. ಪ್ರಕೃತಿ ಮಾತೆಯೂ ಎಷ್ಟೆಂದು ತಾಳ್ಮೆಯಿಂದ ಇರುತ್ತಾಳೆ ಹೇಳಿ? ಇಲ್ಲದ ರೋಗಗಳನ್ನು ಕೊಟ್ಟು, ಉಸಿರನ್ನೇ ನಿಲ್ಲಿಸಿದಳು. ಈಗ ನೀವೆಲ್ಲರೂ ಅದೇ ಸ್ಥಿತಿಯಲ್ಲಿದ್ದೇವೆ. ಮೊದಲು ತಿನ್ನಲು ಅಲೆದಾಡುತ್ತಿದ್ದೆವು, ಅನಂತರ ಬದುಕಲು ಪರದಾಡುತ್ತಿದ್ದೆವು, ಈಗ ಉಸಿರಾಡಲು ಒದ್ದಾಡುತ್ತಿದ್ದೇವೆ.

ನಾವೇ ತೋಡಿಕೊಂಡ ಗುಂಡಿಗಳು ನಮ್ಮನ್ನೇ ಕೈಬೀಸಿ ಕರೆಯುತ್ತಿವೆ. ಮರಗಿಡಗಳು ಬೆಳೆಯಬೇಕಾದ ಜಾಗದಲ್ಲಿ ಮೆಟ್ರೋ ಕಂಬಗಳು ಬೆಳೆದು ನಿಂತುಬಿಟ್ಟಿವೆ. ಪ್ರಾಣಿಗಳು ಓಡಾಡುತ್ತಿದ್ದ ಜಾಗಗಳಲ್ಲಿ ಕಿರೋì.. ಎಂದು ವಾಹನಗಳು ಹಾರ್ನ್ ಮಾಡುತ್ತಾ ಮೈಮೇಲೆ ಹರಿಯಲು ಬರುತ್ತಿವೆ. ನದಿಗಳೆಲ್ಲ ಚರಂಡಿಗಳಾಗಿವೆ. ಕೆರೆಗಳೆಲ್ಲ ಮೈದಾನಗಳಾಗಿ ಅನಂತರ ಅಪಾರ್ಟ್‌ಮೆಂಟ್‌ಗಳಾಗಿವೆ. ಸರಕಾರಿ ಶಾಲಾ-ಕಾಲೇಜುಗಳು ಮುಚ್ಚುತ್ತಿವೆ. ರಸ್ತೆಗಳು ಅಗಲವಾದಷ್ಟೂ ವಾಹನಗಳು ತುಂಬುತ್ತಿವೆ. ಎಲ್ಲ ಜಾಗವು ಭರ್ತಿಯಾಗಿದೆ. ಭೂಮಿ ತಾಯಿ ಗರ್ಭವತಿಯಾಗಿರಬೇಕು. ಹೊಟ್ಟೆಯೊಳಗೆ ಕಿಚ್ಚು ಜಾಸ್ತಿಯಾಗಿ ಹೆರಿಗೆ ನೋವು ಹೆಚ್ಚಾಗುವ ಮೊದಲು, ಹೊಟ್ಟೆ ತಣ್ಣಗಿರುವಂತೆ ನೋಡಿಕೊಂಡು ಸುಂದರ ಮಗುವಿನ ಸರಾಗ ಹೆರಿಗೆಗಾಗಿ ನಾವೆಲ್ಲ ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಒಂದರಿಂದ ಎರಡು, ಎರಡರಿಂದ ನಾಲ್ಕು ಎಂಬಂತೆ ಮಲಿನದ ವಿಷ ಎಲ್ಲರನ್ನೂ ಆಕ್ರಮಿಸುತ್ತಾ, ಒಬ್ಬೊಬ್ಬರನ್ನೇ ಸುಡುತ್ತಾಹೋಗುತ್ತದೆ.

ಕೊರೊನಾ ಬಂದು ಕೆಲವರಿಗಾದರೂ ಬುದ್ದಿ ಬಂದಿರಲೇಬೇಕು. ಅದಕ್ಕೆ ನಗರದ ಸಹವಾಸ ಬಿಟ್ಟು, ಮತ್ತೆ ಹಳ್ಳಿಯ ಕಡೆಗೆ ಮುಖ ಮಾಡುತ್ತಿದ್ದಾರೆ. ಅವರ ತಾತಂದಿರೇ ಮಾರಿಹೋದ ಜಾಗಕ್ಕೆ ಇಂದು ಹತ್ತುಪಟ್ಟು ಹಣಕೊಟ್ಟು ಕೊಂಡುಕೊಳ್ಳಲು ಮುಂದಾಗಿದ್ದಾರೆ. ಜೀವನಕ್ಕಿಂತ, ಜೀವ ಮುಖ್ಯ ಎಂದು ಬೇಸಾಯ ಮಾಡಲು ಹೊರಟಿದ್ದಾರೆ. ಆದರೆ ಇನ್ನೂ ಕೆಲವರು ಅಂದರೆ ಬಿಸಿಲನ್ನು ಕಂಡರೆ ಭಯಪಡುವವರು, ಚರ್ಮ ಕಾಂತಿಗಾಗಿ ಹಗಲಿರುಳು ಶ್ರಮಿಸುವವರು ಮಣ್ಣಿನ ವಾಸನೆಯ ಭಯದಿಂದ ನಗರದಲ್ಲೇ ಇದ್ದುಕೊಂಡು “ಹಾಗಿದ್ದಿದ್ದರೆ ಚೆಂದ!!” ಎಂದು ಹಳ್ಳಿಯ ಲೈಫ್ನ ಬಗ್ಗೆ ಮೆಲುಕು ಹಾಕುತ್ತಾ ಕಾಲ ಕಳೆಯುತ್ತಿದ್ದಾರೆ. ಆಗತ್ಯಕ್ಕಿಂತ ಹೆಚ್ಚಿನ ತಂತ್ರಜ್ಞಾನದ ತ್ವರಿತ ಬೆಳವಣಿಗೆ ಎಷ್ಟೋ ಜನರ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡಿದೆ. ಇನ್ನಾದರೂ ಜನ ಎಚ್ಚೆತ್ತುಕೊಳ್ಳಲಿ.

 

ಅನಂತ ಕುಣಿಗಲ್‌

ತುಮಕೂರು

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.