Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ
Team Udayavani, Apr 20, 2024, 3:53 PM IST
ವಿಭಿನ್ನವಾದ ಶೀರ್ಷಿಕೆಯಿಂದ ಮೂಡಿಬಂದಿರುವ ಈ ಚಿತ್ರ ಆರಂಭದಿಂದ ಕೊನೆಯವರೆಗೂ ಸೀಟ್ನ ತುದಿ ಕೂರಿಸಿ ಹೊಟ್ಟೆ ಹುಣ್ಣು ಬರಿಸುವುದು ಸ್ಪಷ್ಟ.
ಯೋಗರಾಜ್ ಭಟ್ ಅವರ ನಿರ್ದೇಶನದ ಮೂಲಕ ಬರುವ ಸಿನೆಮಾ ಎಂದಿಗೂ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿಲ್ಲ, ಭಾವನೆಯಿಂದಾಗಲಿ, ಬಾಂಧವ್ಯ ದಿಂದಾಗಲಿ, ಭಾಷಾ ವೈಖರಿ ಯಿಂದಾಗಲಿ ಸಿನಿ ಪ್ರಿಯರನ್ನು ಬಂದಿ ಮಾಡುತ್ತದೆ. ಕಥೆಯ ಆರಂಭ ತುಂಬಾನೇ ಸರಳವಾಗಿ ಶುರುವಾದರೂ ಕಥೆಯನ್ನು ಎಲ್ಲಿಯೂ ನಿಧಾನಗತಿ ಯಾಗಿ ಎನಿಸಲಿಲ್ಲ. ಪ್ರತಿಯೊಂದು ಸನ್ನಿವೇಶವೂ ಅದರ ಹಿಂದಿನ ಪರಿಶ್ರಮ ಹಾಗೂ ಚಾಣಾಕತನ ತೋರಿಸುತಿತ್ತು. ಇಬ್ಬರು ಅನಾಥರು ಸಮಾಜದಲ್ಲಿ ಸರಿಯಾದ ಮಾರ್ಗದರ್ಶನ ಸಿಗದೇ ಸಾಗುವ ದಾರಿ, ಮಾಡುವ ಕೆಲಸ, ಎಲ್ಲವೂ ಸಿನೆಮಾದ ಹೀರೋ ಪಾತ್ರಗಳಿಗೆ ಇನ್ನಷ್ಟು ಮಸಾಲಾ ಸವರಿದೆ.
ಜೈಲಿನಿಂದ ಆಗುವ ಕತಾರಂಭ ಸಾಗುತ್ತಾ ಸಾಗುತ್ತಾ ಗ್ರಾಮೀಣ ತೀರ ತಲುಪುತ್ತದೆ. ಅಲ್ಲಿನ ಕಟ್ಟುಪಾಡು ಸ್ಥಿತಿ – ಗತಿ ಎಲ್ಲವನ್ನು ತಿಳಿಸಲಾಗಿದೆ. ಊರ ಜನರ ನಂಬಿಕೆ ರೀತಿ ರಿವಾಜು ಮಾತಿಗೆ ತಪ್ಪಾದ ಜನ ಮುಗ್ದತೆ ಹಾಗೂ ಖಳ ನಾಯಕನ ಪಾತ್ರ ಚಿತ್ರದಲ್ಲಿ ತುಂಬಾ ನೈಜವಾಗಿ ಕಂಡುಬಂದಿದೆ.
ಕಥೆಯಲ್ಲಿ ಹೇಳಬೇಕೆಂದರೆ ನಾಯಕ ನಟರು ಗ್ರಾಮಕ್ಕೆ ಹೋಗುವುದು ಆದರೂ ಯಾಕೆ? ಜೈಲರ್ಗೂ ನಂದಿಕೊಡು ಊರಿಗೂ ಸಂಬಂಧವೇನು? ಹಾಗೂ ಚಿತ್ರದಲ್ಲಿ 2 ವಿಭಾಗ ಕಂಡು ಬರುತ್ತದೆ, ಹುಲು ಮಾನವ ಹುಲಿ ಮಾನವ ಹುಲು ಮಾನವ ಎಂದರೆ ಗ್ರಾಮೀಣಸ್ತಾರು, ಹುಲಿ ಮಾನವ ಎಂದರೆ ಯಾರು? ಅವರಿಗೂ ಆ ಊರಿಗೂ ಸಂಬಂಧವೇನು?
ಅಲ್ಲಿ ಅವರು ಮಾಡುವ ಪ್ರಮಾಣಗಳು, ಅದನ್ನು ಉಳಿಸಿಕೊಳ್ಳಲು ಮಾಡುವ ಹರಸಾಹಸ ನರಗಳಲ್ಲಿ ವಿದ್ಯುತ್ ಸಂಚಲನಗೊಳಿಸುತ್ತದೆ. ಮುಂದೆ ಏನು ಮುಂದೆ ಏನು ಆಗಬಹುದು ಅನ್ನುವ ಪ್ರಶ್ನೆ ತಲೆಯಲ್ಲಿ ಮೂಡಿಸುತ್ತದೆ. ಇನ್ನು ಶಿವಣ್ಣನ ಜತೆಗೆ ಕಂಡು ಬಂದ ಕಥೆಯ ಇನೋರ್ವ ನಾಯಕ ಎಂದರೆ ಪ್ರಭುದೇವ್. ಸ್ಪಷ್ಟನೆಯ ಕನ್ನಡ ಬಾರದೇ ಹೋದರು ಅವರ ಕಷ್ಟಪಟ್ಟು ಮಾತಾಡಿದ ಶೈಲಿಯೇ ಬಲು ಸೊಗಸು.
ಉತ್ತರ ಕನ್ನಡ ಶೈಲಿಯಿಂದ ಸಾಗುವ ಕಥೆ ನಡು ನಡುವಿನಲ್ಲಿ ಅವಾಚ್ಯನ ಶಬ್ದಗಳು ಎಷ್ಟೇ ಬಾರಿ ಬಂದರು ರಾಡಿ ಎನಿಸುವಂತೆ ತೋರಿಸಲ್ಪಟ್ಟಿಲ್ಲ. ನಾನು ಒಬ್ಬ ಕಳ್ಳ ಎಂಬ ವಿಚಾರದಿಂದ ಹಿಡಿದು ನಾನು ಒಬ್ಬ ಮನುಷ್ಯ ಎನ್ನುವ ತನಕ ಕಥೆ ಸಾಗಿದ ರೀತಿ ಬೇಜಾರು ಆದಾಗ ಸಂಭಾಷಣೆಯಲ್ಲಿ ಕೊಡುವ ಎನರ್ಜಿ ಬೂಸ್ಟ್ ಪದಗಳು ಮತ್ತೆ ಗಮನ ಸೆಳೆಯುತ್ತದೆ. ಕರಟಕ ದಮನಕ ಚಿತ್ರವು ಕುಟುಂಬ ಸಹಿತ ನೋಡಬಲ್ಲ ಚಿತ್ರ ಎಂದು ಬಹಳ ಗಟ್ಟಿಯಾಗಿ ಹೇಳ ಬಲ್ಲೆ. ಹೀರೋಗಳು ಇಬ್ಬರನ್ನು ನರಿಗಳಂತೆ ತೋರಿಸುವಲ್ಲಿ ಯೋಗರಾಜ್ ಭಟ್ರು ಗೆದ್ದಿದ್ದಾರೆ.
-ರಕ್ಷಿತ್ ಆರ್. ಪಿ.
ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ
Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!