ಇ-ಕಾಮರ್ಸ್‌ ಉದ್ಯಮದಿಂದ ಬದುಕು ಕಟ್ಟಿಕೊಂಡ ಜುಬೈರ್‌ ರೆಹಮಾನ್‌


Team Udayavani, Aug 18, 2020, 4:58 PM IST

Jubair

ತಮಾಷೆಗೆ ಹೀಗೊಂದು ಮಾತಿದೆ, ಭಾರತದಲ್ಲಿ ಆರು ವಿದ್ಯಾವಂತರು ಢಿಕ್ಕಿ ಹೊಡೆದರೆ ಅದರಲ್ಲಿ ಕನಿಷ್ಠ 4 ಜನವಾದರೂ ಎಂಜಿನಿಯರ್‌ಗಳು ಇರುತ್ತಾರೆ ಎಂದು. 

ಅಷ್ಟು ಗರಿಷ್ಠ ಪ್ರಮಾಣದಲ್ಲಿ ಭಾರತ ಎಂಜಿನಿಯರ್‌ಗಳನ್ನು ಸೃಷ್ಟಿಸುತ್ತದೆ.

ಈ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳಗೊಂಡಿರುವುದರಿಂದ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ಪ್ರಮಾಣ ಕ್ಷೀಣಿಸುತ್ತಿದೆ ಎಂಬ ವಾದವೂ ಕೇಳಿ ಬರುತ್ತಿದೆ.

ಇದನ್ನರಿತ ಭಾರತದ ಎಂಜಿನಿಯರ್‌ಗಳು ಬಹುಮುಖವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಕೇವಲ ವ್ಯಾಸಂಗ ಮಾಡಿದ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂಬ ಅಲಿಖಿತ ಕಟ್ಟಳೆಯನ್ನು ಮುರಿದು ಇಂದು ಬಹುತೇಕರು ವಿಭಿನ್ನ, ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ.

ಇದಕ್ಕೆ ಸ್ಪಷ್ಟ ಮತ್ತು ಮಾದರಿ ಉದಾಹರಣೆ ಎಂದರೆ ತಮಿಳುನಾಡಿನ ತಿರುಪುರ ಯುವಕ ಜುಬೈರ್‌ ರೆಹಮಾನ್‌.

ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿರುವ ಈತ ಸ್ವಾವಲಂಬಿ ಜೀವನಕ್ಕೆ ಸ್ವಂತ ಇ-ಕಾಮರ್ಸ್‌ ಉದ್ಯಮ ತೆರೆದು ಇಂದು ಕೋಟ್ಯಧಿಪಧಿಯಾಗಿದ್ದಾನೆ. ಈತ ತನ್ನ ಈ ಉದ್ಯಮದ ಆರಂಭಕ್ಕೆ ಹೂಡಿದ ಬಂಡವಾಳ ಕೇವಲ 10 ಸಾವಿರ ರೂ. ಮಾತ್ರ.
10 ಸಾವಿರ ಬಂಡವಾಳದಲ್ಲಿ ಕಂಪೆನಿ ಆರಂಭಿಸಿದ ಈತ ಇಂದು ಕೋಟ್ಯಂತರ ರೂ. ವ್ಯವಹಾರ ಮಾಡುವ ಕಂಪೆನಿಯನ್ನು ಕಟ್ಟಿ ನಮ್ಮೆಲ್ಲರಿಗೂ ಆದರ್ಶವಾಗಿದ್ದಾನೆ. ಎಲ್ಲಿ ಸತತ ಪ್ರಯತ್ನ ಮತ್ತು ಪರಿಶ್ರಮ ಇರುತ್ತೋ ಅಲ್ಲಿ ಯಶಸ್ಸು ಇರುತ್ತೆ ಎಂಬುದಕ್ಕೆ ಈತ ಮಾದರಿಯಾಗಿದ್ದಾನೆ.

ಸಿಸಿಟಿವಿ ಆಪರೇಟರ್‌ ಆಗಿದ್ದ ಜುಬೈರ್‌
ತಿರುಪುರ ಯುವಕ ಜುಬೈರ್‌ ರೆಹಮಾನ್‌ ತನ್ನ ಎಂಜಿನಿಯರಿಂಗ್‌ ಪದವಿ ಮುಗಿದ ಬಳಿಕ ಈತ ಖಾಸಗಿ ಕಂಪೆನಿಯೊಂದರಲ್ಲಿ ಸಿಸಿಟಿವಿ ಆಪರೇಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ. ಅದೊಂದು ಸಾರಿ ತಮಿಳುನಾಡಿನ ದೊಡ್ಡ ಕಂಪೆನಿಯೊಂದಕ್ಕೆ ಸಿಸಿಟಿವಿ ಅಳವಡಿಸಲು ಹೋಗಿದ್ದ ಈತ ಅಲ್ಲಿನ ಕಾರ್ಯನಿರ್ವಾಹಕರೊಬ್ಬರು ತನ್ನ ಕಂಪೆನಿಯ ಸರಕು ಸಾಗಾಟ, ಮಾರಾಟದ ಬಗ್ಗೆ ಒಂದಿಷ್ಟು ಅನುಭವವನ್ನು ಹಂಚಿಕೊಳ್ಳುತ್ತಾನೆ. ಈ ಅನುಭವದ ಮಾತು ಜುಬೈರ್‌ ಅವರನ್ನು ಕಣ್ಣು ತೆರೆಸುತ್ತದೆ. ಇದರಿಂದ ಸ್ಫೂರ್ತಿಗೊಂಡು ಇ-ಕಾಮರ್ಸ್‌ ಕಂಪೆನಿ ಆರಂಭಿಸಲು ಮುಂದಾಗುತ್ತಾನೆ.


ವ್ಯಾಪಾರ ಮಾರ್ಗ ಅರಿತ ಜುಬೈರ್‌
ತಾನು ವಾಸಿಸುವ ತಿರುಪುರದಲ್ಲಿ ಯಾವ ಉತ್ಪನ್ನದ ಉದ್ಯಮ ಆರಂಭಿಸಿದರೆ ಒಳಿತು ಎಂಬ ಯೋಚನೆಯನ್ನು ಸತತ ಎರಡು ತಿಂಗಳು ಮಾಡಿದ ಜುಬೈರ್‌ ಕೊನೆಗೆ ಜವುಳಿ ಉದ್ಯಮದ ಮೇಲೆ ಇ-ಕಾಮರ್ಸ್‌ ಆರಂಭಿಸಿದರೆ ಯಶಸ್ವಿಯಾಗುವುದು ಖಚಿತ ಎಂದು ಅರಿತನು. ಇದಕ್ಕೆ ಪೂರಕ ವಾತಾವರಣದ ಬಗ್ಗೆ ಅಧ್ಯಯನ ಮಾಡಿ ತಿರುಪುರ ಭಾರತದ ಮಟ್ಟಿಗೆ ಉತ್ತಮ ಜವುಳಿ ಉದ್ಯಮ ಹೊಂದಿರುವ ಪ್ರದೇಶವಾಗಿದೆ. ಜವುಳಿ ರಾಜಧಾನಿ ಎಂದೇ ಪ್ರಸಿದ್ಧವಾಗಿದೆ. ಇದಕ್ಕಾಗಿ ಆತ ನಗರದ ಪ್ರಮುಖ ಜವುಳಿ ಉದ್ಯಮಿಗಳೊಂದಿಗೆ ಚರ್ಚಿಸಿದನು. ಕೊನೆಗೆ ಈ ಉದ್ಯಮವನ್ನೇ ಇ-ಕಾಮರ್ಸ್‌ ರೂಪದಲ್ಲಿ ಆರಂಭಿಸಲು ಮುಂದಾದನು. ಆಗ ರೂಪುಗೊಂಡಿದ್ದೇ ದಿ ಪ್ಯಾಶನ್‌.

ಆರಂಭದಲ್ಲಿ ಕೈ ಹಿಡಿದ ಉದ್ಯಮ
ತನ್ನ ಮೊದಲಿನ ಕೆಲಸವನ್ನು ಬಿಟ್ಟ ಜುಬೈರ್‌ ಅವರು 10 ಸಾವಿರ ರೂ. ಬಂಡವಾಳದಲ್ಲಿ 2015ರಲ್ಲಿ ದಿ ಪ್ಯಾಶನ್‌ ಎಂಬ ಇ-ಕಾಮರ್ಸ್‌ ಉದ್ಯಮವನ್ನು ಆರಂಭಿಸಿದನು. ಕಂಪೆನಿ ಆರಂಭದ ಮೊದಲಿಗೆ ಈತ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮೂಲಕ ದಿನಕ್ಕೆ ಒಂದು, ಎರಡು ಸರಕುಗಳನ್ನು ತರಿಸಿಕೊಳ್ಳುತ್ತಿದ್ದರು. ಬಳಿಕ ಇದು ಹೆಚ್ಚಾಯಿತು. ಮುಂದೆ ಇವರೇ ತಮ್ಮ ಘಟಕವನ್ನು ಆರಂಭಿಸಿದರು. ಮಕ್ಕಳು, ಯುವಕರು, ಹೆಂಗಸರು ಮತ್ತು ಗಂಡಸರ ಅಭಿರುಚಿಗೆ ತಕ್ಕಂತೆ ಬೇಕಾದ ಬಟ್ಟೆಗಳನ್ನು ತಯಾರಿಸಲು ಆರಂಭಿಸಿದರು. ಹೆಚ್ಚಿನ ಗ್ರಾಹಕರನ್ನು ಸೆಳೆದಂತೆ ಉದ್ಯವವು ಗಟ್ಟಿಗೊಂಡಿತು.

ಯಶಸ್ವಿಯತ್ತ ಉದ್ಯಮ
ಆರಂಭದಲ್ಲಿ ಕಡಿಮೆ ಬೇಡಿಕೆಯಿದ್ದ ಕಂಪೆನಿಗೆ ಸದ್ಯ ಸುಮಾರು ದಿನಕ್ಕೆ 250-300 ಆರ್ಡರ್‌ಗಳು ಬರುತ್ತವೆ. ಇದರಿಂದ ಉದ್ಯಮವೂ ಕೂಡ ಗಟ್ಟಿಯಾಗಿದೆ. ಏನಿಲ್ಲವೆಂದರೂ ತಿಂಗಳಿಗೆ ಸುಮಾರು 50 ಲಕ್ಷ ರೂ. ಆದಾಯವನ್ನು ಗಳಿಸಲು ಶಕ್ತವಾಗಿದೆ.

ಈ ಉದ್ಯಮ ಯಶಸ್ವಿಯಾಗಲು ಜುಬೈರ್‌ ರೆಹಮಾನ್‌ ಅವರ ಅಪ್ರತಿಮ ಪರಿಶ್ರಮ, ವ್ಯಾಪಾರ ಕೌಶಲತೆಯೇ ಕಾರಣ. ಹೀಗಾಗಿ ನಮಗೆ ಇವರು ಸ್ಫೂರ್ತಿಯಾಗುತ್ತಾರೆ.

ಶಿವಮಲ್ಲಯ್ಯ ಸಿಂಧನೂರು

 

 

ಟಾಪ್ ನ್ಯೂಸ್

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.