ರಾಧೆಯ ಪ್ರೀತಿಗೆ ಅದರ ರೀತಿಗೆ!ಕೃಷ್ಣ ನ ಹುಡುಕಾಟ ರಾಧೆಗಾಗಿ…


Team Udayavani, Feb 13, 2020, 5:39 PM IST

radha-krishna

“ಪ್ರೇಮ” ವೆನ್ನುವುದು ಒಂದು ನವಿರಾದ ಭಾವನೆ. ಮನಸ್ಸಿಗೆ ಮುದ ನೀಡುವ ಕನಸುಗಳಿಗೆ ರಂಗುಬಳಿಯುವ ಈ ಭಾವ ನಿಷ್ಕಲ್ಮಶ ನಿಸ್ವಾರ್ಥದಿಂದ ಕೂಡಿದಾಗಲೇ ಪ್ರೀತಿಗೊಂದು ಬೆಲೆ ಮತ್ತು ಪ್ರೇಮಕ್ಕೊಂದು ಅರ್ಥ! ಅಲ್ಲೊಂದು ಆರಾಧನೆ, ಮಮತೆ, ಕಾಳಜಿ, ನಂಬಿಕೆಯಿದ್ದಾಗ ಪ್ರೀತಿ ಚಿಗುರೊಡೆದು ಪ್ರೇಮ ಸಾಫಲ್ಯ ಕಂಡುಕೊಳ್ಳಲು ಸಾಧ್ಯ. ಪ್ರೀತಿ -ಪ್ರೇಮಕ್ಕೆ ಒಳ್ಳೆಯ ನಿದರ್ಶನವೆಂದರೆ ಅದುವೇ ರಾಧಾ-ಕೃಷ್ಣ.

ಪ್ರೇಮಿಗಳ ದಿನಾಚರಣೆಯ ಈ ಸಂದರ್ಭದಲ್ಲಿ ಮನಸಿನ ಪರದೆಯ ಮೇಲೆ ಮೂಡಿದ್ದು ರಾಧಾಕೃಷ್ಣರ ನಿಷ್ಕಲ್ಮಶ ಪ್ರೇಮ. ಪ್ರೇಮದ ವ್ಯಾಖ್ಯಾನಕ್ಕೆ ರಾಧಾ ಕೃಷ್ಣರ ಪ್ರೀತಿ ಕನ್ನಡಿ ಹಿಡಿದಂತೆ. ರಾಧಾ ಕೇ ಬೀನಾ ಶ್ಯಾಮ್ ಆದಾ, ಶ್ಯಾಮ್ ಕೇ ಬಿನಾ ರಾಧಾ ಆದಾ ಇಸಲಿಯೇ ಕೆಹತೆ ಹೈ “ರಾಧೆಶ್ಯಾಮ್”!. ಎಷ್ಟೊಂದು ಸುಂದರ. ಎಂಥಾ ವರ್ಣಾನಾತೀತ, ಅವನೆಂದರೆ ಅದೇನೊ ಸೆಳೆತ, ಮುರುಳಿಯ ಗಾನಕ್ಕೆ ಮನಸೋತು ಭಕ್ತಿಯ ಭಾವದಲ್ಲಿ ಸೆರೆಯಾಗುವಳು ಅವಳು. ಕೊಳಲಿನ ನೀನಾದಕ್ಕೆ ಗೆಜ್ಜೆ ಕಟ್ಟಿ ನರ್ತಿಸುತ್ತಿದ್ದರೆ ಮೋಹನ ನಾಗುವನು ರಾಧೆಯಲ್ಲಿ ಪರವಶ. ಶ್ಯಾಮನ ಪ್ರೀತಿಯ ಕೊಳಲಿನಲ್ಲಿ ರಾಧೆಯ ಪ್ರೇಮದ ಉಸಿರು ಇಡೀ ಬೃಂದಾವನವನ್ನು ಆವರಿಸುವಂತೆ ಮಾಡುತ್ತಿತ್ತು. ಪ್ರೀತಿಯ ಸೆಲೆ ಭಕ್ತಿಯ ಅಲೆ ಅಲೆಯಾಗಿ ಹೊರಹೊಮ್ಮುತ್ತಿತ್ತು.

ಹರೆಯದ ಕನಸಿಗೆ ಪರಿಶುದ್ಧತೆಯ ಕುಂಚ ಹಿಡಿದು ನಿಸ್ವಾರ್ಥ ಪ್ರೀತಿಯ ಬಣ್ಣ ಬಳಿದರು. ಆಕರ್ಷಣೆಯ ಲೇಪನವಿಲ್ಲದ, ಷರತ್ತುಗಳ ಕಟ್ಟಳೆಯಿಲ್ಲದ, ಸಂಬಂಧಗಳ ನಂಟಿನಲ್ಲಿ ಮಧುರ ಬಾಂಧವ್ಯಕ್ಕೆ ಮುನ್ನುಡಿ ಬರೆದರು.  ಇಂದಿನ ಮನುಕುಲಕ್ಕೆ ಮಾದರಿ ಅವರ ನಿಷ್ಕಾಮ ಪ್ರೇಮ. ಯಮುನಾ ತಟದಲಿ ಬಾಲ್ಯದ ಗೆಳತಿಯ ಸಾಂಗತ್ಯದಲ್ಲಿ ಯಶೋದೆಯ ಕನ್ಹಯ್ಯ ಕಳೆದುಹೋಗುವನು. ವೃಂದಾವನದಲಿ ಗೋಪಿಕೆಯರೊಡನೆ ರಾಸಲೀಲೆ ಆಡುತ್ತ, ತಂಟೆ-ತಕರಾರು ಮಾಡುತ್ತ, ಕಾಡುತ್ತ-ರಮಿಸುತ್ತ ಕಾಲೆಳೆಯುವ ಗೋಪಾಲನಿಗೆ ಗೋಪಿಯರಲ್ಲಿ ಅಚ್ಚು ಮೆಚ್ಚು ರಾಧೆ.

ರಾಧೆಯೆಂದರೆ ಎಲ್ಲಿಲ್ಲದ ಪ್ರೀತಿ! ಅವಳೊಂದು ಉತ್ಸಾಹ, ಭಕ್ತಿಯ ಚಿಲುಮೆ. ರಾಧೆಯ ಒಲುಮೆಯಲ್ಲಿ ಗೆಲುಮೆಯನ್ನು ಕಾಣುವ ಶ್ಯಾಮನಿಗೆ ಅವಳೊಬ್ಬಳು ಆತ್ಮಸಂಗಿನಿ ಮತ್ತು ಅಗಣಿತ ತಾರೆ. ಎಲ್ಲ ಕಟ್ಟುಪಾಡುಗಳನ್ನು ಮೀರಿ, ಮಡಿವಂತಿಕೆಯನ್ನು ಬದಿಗೊತ್ತಿ ಲೌಕಿಕ ನೆಲೆಯಲ್ಲಿ ಅಲೌಕಿಕ ಪಾರಮಾರ್ಥಿಕವನ್ನು ಮೆರೆದು ಪವಿತ್ರ ಪ್ರೇಮಕ್ಕೆ ಸಾಕ್ಷಿಯಾದಳು. ರಾಧೆಯ ನಿರ್ವಾಜ್ಯ ಪ್ರೇಮಕ್ಕೆ ಮಾಧವ ಸೋತ. ಅವಳ ಪ್ರೀತಿಯ ಮಳೆಯಲ್ಲಿ ನೆನೆದ. ತಿಂಗಳ ರಾತ್ರಿ ತೊರೆಯ ಸಮೀಪ ಉರಿಯುವ ದೀಪದ ನಡುವೆ ಕೃಷ್ಣ ನ ಹುಡುಕಾಟ ರಾಧೆಗಾಗಿ. ಅವಳು ಬಂದೆ ಬರುತ್ತಾಳೆನ್ನುವ ಅಧಮ್ಯ ವಿಶ್ವಾಸ ಗೋಪಿಕಾವಲ್ಲಭನಿಗೆ. ಲೋಕದ ಕಣ್ಣಿಗೆ ರಾಧೆ ಕೇವಲ ಹೆಣ್ಣಾಗಿರಬಹುದು. ಆದರೆ ಶ್ಯಾಮನ ಪಾಲಿಗೆ ಪ್ರೀತಿಯ ಕಣ್ಣು. ರಾಧೆಯ ಸಾಂಗತ್ಯ ಪ್ರೇಮಾರಾಧನೆಯ ಭಕ್ತಿ, ರಾಧೆಗಾಗಿ ಪಡುವ ಪರಿತಾಪ ಪರಮಾತ್ಮನಾದರೂ ಪ್ರೀತಿಯ ಆಳವನ್ನು ಪರಿಚಯಿಸುತ್ತದೆ. ವಯಸ್ಸಿನಲ್ಲಿ ಕೃಷ್ಣ ನಗಿಂತ ದೊಡ್ಡವಳಾದರೂ ನಿಸ್ವಾರ್ಥ ಪ್ರೇಮವನ್ನು ತುಂಬು ಮನದಿಂದ ಧಾರೆಯೆರೆದ ತ್ಯಾಗದ ಮೂರ್ತಿ ಅವಳು. ದೈಹಿಕ ಸಂಬಂಧವನ್ನು ಮೀರಿದ, ಎಲ್ಲಾ ಸಂಬಂಧಗಳಿಗಿಂತಲೂ ಮಿಗಿಲಾದ ಪರಮಾತ್ಮ ಜೀವಾತ್ಮಗಳ ಮಿಲನವದು. ಕೃಷ್ಣನ ಹೃದಯದಲ್ಲಿ ಲೀನವಾಗುವ, ಭಕ್ತಿ-ಭಾವದ ಸಂಕೇತವಾಗಿರುವ ರಾಧೆ ಅಜರಾಮರಳಾಗಿ ಉಳಿಯುತ್ತಾಳೆ.

ರಾಧೆಯಿಲ್ಲದ ಮಾಧವ ಕಲ್ಪನೆಗೂ ನಿಲುಕಲಾರ! ರಾಧೆಯ ಪ್ರೇಮದ ಶಕ್ತಿ ರಾಧಾಕೃಷ್ಣರನ್ನು ಅಗ್ರಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ. ರಾಧೆಯ ಪ್ರೀತಿಗೆ ಅದರ ರೀತಿಗೆ ಬೆಲೆ ಕಟ್ಟಲು ಅಸಾಧ್ಯ.  ಜಗತ್ತು ಇರುವ ತನಕ ರಾಧಾಕೃಷ್ಣ ರ ಹೆಸರು ಸದಾ ಜೀವಂತ ಮತ್ತು ಪ್ರೇಮಕ್ಕೆ ಮತ್ತೊಂದು ಭಾಷ್ಯವೇ ರಾಧಾಕೃಷ್ಣ!

ಸುಮಾ ಸತೀಶ್.
(ಸುಮಂಗಲಾ ಸತೀಶ ಭಟ್ಟ, ಶಿರಸಿ)

ಟಾಪ್ ನ್ಯೂಸ್

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

lovee

ಜೀವವೇ ಕೊಡುಗೆ

love

ಪ್ರೇಮಕವಿ

br-tdy-1

ಪ್ರೇಮಿಗಳ ದಿನ: ಗುಲಾಬಿಗೆ ಡಿಮ್ಯಾಂಡ್‌

Ratan-Tata-01-730

ಪ್ರೇಮ ವೈಫ‌ಲ್ಯದ ಕತೆ ಬಿಚ್ಚಿಟ್ಟ ರತನ್‌ ಟಾಟಾ

2-crsuh

ಟಾಲ್ ಬಾಯ್, ಶಾರ್ಟ್ ಗರ್ಲ್ ಪರ್ಫೆಕ್ಟ್ ಪೇರ್.. ಕಾಲೇಜು ಕ್ರಶ್ ಎಂಬ ಮಧುರ ಭಾವನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.