ಕರಾವಳಿಯಲ್ಲಿ ಸಂಚಲನ ಮೂಡಿಸುತ್ತಿರುವ ಆಲ್ಬಂ ಆಸರೆ
Team Udayavani, May 5, 2019, 8:36 PM IST
ಕರಾವಳಿಯಲ್ಲಿ ಚಲನಚಿತ್ರ ಗಳ ಕೋಸ್ಟಲ್ ವುಡ್ ನಲ್ಲಿ ಸಣ್ಣನೆ ಆಲ್ಬಾಂ ಸಾಂಗುಗಳು ಗುಲ್ಲೆಬ್ಬಿಸುತಿದೆ . ತುಳು ಭಾಷೆಯಲ್ಲಿ ನಿರ್ಮಾಣ ಗೊಂಡ ಆಲ್ಬಂ ಆಸರೆ ಪ್ರೋಮೋ ಯೂಟ್ಯೂಬ್ನಲ್ಲಿ ರಿಲೀಸ್ ಆಗಿದ್ದು ವೈರಲ್ ಆಗುತಿದೆ. ಬಲೆತೆಲಿಪಾಲೆ ಖ್ಯಾತಿಯ ಕನಸು ಕಡ್ತಲ ಹಾಗು ಕರಾವಳಿಯ ಪ್ರತಿಷ್ಠಿತ ಸಂಸ್ಥೆಯಾದ www.manipalchoice.com ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣ ಗೊಂಡ ಈ ಆಸರೆ ಆಲ್ಬಂ ಅರಳು ಪ್ರತಿಭೆಗಳಾದ ಉಮೇಶ್ ಆಚಾರ್ಯ ಅಭಿಲಾಶ್ ಪೂಜಾರಿ ಸಾಹಿತ್ಯದಲ್ಲಿ ಮೂಡಿಬಂದಿದ್ದು ಕರಾವಳಿ ಕರ್ನಾಟಕದ ಗಾನಕೋಗಿಲೆ ಬಿರುದಾಂಕಿತ ಗಂಗಾಧರ್ ಆಚಾರ್ಯ ಸ್ವರ ಸಂಯೋಜನೆಯನ್ನು ನೀಡಿದ್ದಾರೆ. ಚಂದನ ವಾಹಿನಿಯಲ್ಲಿ ಪ್ರಕಟವಾಗುತಿದ್ದ ಪರಿಭ್ರಮಣ, ಮಲೆನಾಡ ಮಕ್ಕಳು ಧಾರವಾಹಿಗಳಲ್ಲಿ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ಸೌಮ್ಯ ಮೆಂಡನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಮಿ ಇಂಡಿಯಾ ಫೈನಲಿಸ್ಟ್ ಆಗಿ ಮಿ.ಮಂಗಳೂರು 2018ರ ವಿನ್ನರ್ ಆಗಿ ಗುರುತಿಸಿಕೊಂಡಿದ್ದ ದರ್ಶಿತ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಕನಸು ಕ್ರಿಯೇಶನ್ಸನ ಮುಖ್ಯಸ್ಥ ಶ್ರೀಶನಾಯಕ್ ಅವರ ನಿರ್ದೇಶನದಲ್ಲಿ ಆಲ್ಬಂ ಮೂಡಿಬಂದಿದ್ದು ಬ್ರಾಹ್ಮರಿ ಸ್ಟೂಡಿಯೋದ ಸಹಕಾರವಿದೆ. ಸಿನಿಮಾ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ ಹೊಸ ಆಯಾಮದ ಮೂಲಕ ಆಲ್ಬಂನ್ನು ಚಿತ್ರಿಕರಿಸಲಾಗಿದೆ.
ಸದ್ಯಕ್ಕೆ ಪ್ರೋಮೊ ಯುಟ್ಯೂಬ್ನಲ್ಲಿ ರಿಲೀಸ್ ಮಾಡಲಾಗುತಿದ್ದು ವೈರಲ್ ಆಗುತಿದೆ.. ಹುಡುಗ ಹುಡುಗಿಯ ಪ್ರೀತಿ ಪ್ರಣಯ ಚಿತ್ರೀಕರಿಸಲಾಗಿದ್ದು ಭಾವನಾತ್ಮಕ ಸಂಬಂಧವನ್ನು ದಿಟ್ಟಗೊಳಿಸುವಂತೆ ಮಾಡಲಾಗಿದೆ.