ಸ್ವತಃ ಅಡುಗೆ ಸಿದ್ಧಪಡಿಸಿ ಕೋಟೆ ಗ್ರಾಮದ ಅಶಕ್ತರಿಗೆ ಆಸರೆಯಾದ ಗ್ರಾಮ ಪಂಚಾಯತ್ ಅಧ್ಯಕ್ಷೆ
Team Udayavani, Apr 11, 2020, 7:34 PM IST
ಕಟಪಾಡಿ:ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕ್ರತಿಕಾ ರಾವ್, ಉಪಾಧ್ಯಕ್ಷ ಗಣೇಶ್ ಕುಮಾರ್, ಹಾಗೂ ಸದಸ್ಯರು ಜೊತೆ ಸೇರಿಕೊಂಡು ಕೋಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಅಶಕ್ತರು ನಿರ್ಗತಿಕರು ವಯೋವೃದ್ಧರ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಸಿದ್ಧಪಡಿಸಿ ಉಚಿತವಾಗಿ ನೀಡುವ ಮೂಲಕ ಲಾಕ್ ಡೌನ್ ಸಂದರ್ಭದ ಸಂಕಷ್ಟಕ್ಕೆ ಜೊತೆಯಾಗಿದ್ದಾರೆ. ದಿನವೊಂದರ ಕನಿಷ್ಠ 125 ರಷ್ಟು ಊಟವನ್ನು ಇವರು ವಿತರಿಸುತ್ತಿದ್ದಾರೆ. ಗೋಪಾಲಕೃಷ್ಣ ರಾವ್, ರತ್ನಾಕರ ಕೋಟಿಯಾನ್, ನವೀನ್ ಕುಮಾರ್, ವಸಂತಿ ಪೂಜಾರಿ, ನಿತಿನ್ ಶೆಣೈ, ಸಂತೋಷ್ ಮೆಂಡೊನ್,ಪ್ರಸನ್ನ ಭಟ್, ಸೃಜನ್ ಮಟ್ಟು,ರಕ್ಷಿತ್ ಮಟ್ಟು, ತನ್ವಿ, ತೇಜಸ್ ಇವರು ಅಡುಗೆ ಸಿದ್ಧತೆ ಮತ್ತು ಊಟ ವಿತರಣೆಯಲ್ಲಿ ಸೇವಾ ನಿರತರಾಗಿದ್ದಾರೆ.