ಧರ್ಮಸ್ಥಳ ಮಂಜೂಷ ಮ್ಯೂಸಿಯಂಗೆ ಹೊಸ ಅತಿಥಿಯ ಆಗಮನ
Team Udayavani, Feb 3, 2020, 4:41 PM IST
ಬೆಳ್ತಂಗಡಿ: ರಾಜಸ್ಥಾನ ಮೂಲದವಾರಾಗಿದ್ದು ಪ್ರಸ್ತುತ ಆಸ್ಟ್ರಿಯಾದಲ್ಲಿ ನೆಲೆಸಿರುವ ಮಾಧವಾನಂದಾಶ್ರಮದ ವಿಶ್ವಗುರು ಮಹಾಮಂಡಲೇಶ್ವರ್ ಪರಮಹಂಸ ಮಹೇಶ್ವರಾನಂದ ಸ್ವಾಮೀಜಿ ಅವರು ತಮ್ಮ ಹಳೆಯ ಕಾರೊಂದನ್ನು ಧರ್ಮಸ್ಥಳದ ಕಾರ್ ಮ್ಯೂಸಿಯಂಗೆ ಕೊಡುಗೆಯಾಗಿ ನೀಡಿದ್ದಾರೆ. ಆಸ್ಟ್ರಿಯಾ ದೇಶದ ಕೌನ್ಸಿಲರ್ ಒಬ್ಬರು ತನಗೆ ಕೊಡುಗೆಯಾಗಿ ನೀಡಿದ್ದ 1972ರ ಮಾಡಲ್ನ ಮರ್ಸಿಡಿಸ್ ಬೆಂಝ್ ಕಂಪೆನಿಯ 2-80 ಎಸ್ ಕಾರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಭಾನುವಾರ ಕಾರಿನ ಕೀಲಿ ಕೈ ನೀಡುವ ಮೂಲಕ ಸ್ವಾಮೀಜಿ ಹಸ್ತಾಂತರಿಸಿದರು. ಕಾರು ಈಗಲೂ ಸುಸ್ಥಿತಿಯಲ್ಲಿದೆ.