ಉದಯವಾಣಿಯ ‘ರೈತ ಸೇತು’ – ಇದು ಬೆಳೆಗಾರರು ಗ್ರಾಹಕರ ನಡುವಿನ ವ್ಯವಹಾರ ಸೇತು
Team Udayavani, Apr 9, 2020, 9:27 PM IST
ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲಾ ವರ್ಗಗಳಂತೆ ರೈತಾಪಿ ವರ್ಗವೂ ಸಹ ಸಂಕಷ್ಟಕ್ಕೆ ಸಿಲುಕಿತು. ಒಂದೆಡೆ ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾರದ ಸ್ಥಿತಿ ಇನ್ನೊಂದೆಡೆ ವರ್ಷದ ಶ್ರಮದ ಬೆಳೆ ಕಣ್ಣೆದುರೇ ನಾಶವಾಗುವ ಭೀತಿ. ಈ ಸಂಕೀರ್ಣ ಕಾಲಘಟ್ಟದಲ್ಲಿ ‘ರೈತ ಸೇತು’ ಎಂಬ ವಿಶಿಷ್ಟ ಕಾನ್ಸೆಪ್ಟ್ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರ ಪಾಲಿಗೆ ಆಪ್ತರಕ್ಷಕನಾಗಿ ಮೂಡಿಬಂದಿದ್ದೇ ಜನಮನದ ಜೀವನಾಡಿ ಎಂದು ಓದುಗರಿಂದ ಕರೆಯಿಸಿಕೊಳ್ಳುತ್ತಿರುವ ಉದಯವಾಣಿ. ಇದರ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ….