ದಯವಿಟ್ಟು ಮನೆಯಲ್ಲೇ ಇರಿ ಎಂದು ವಿನಂತಿಸಿಕೊಂಡ ಕನ್ನಡ-ತುಳು ಚಿತ್ರ ತಾರೆಯರು
Team Udayavani, Mar 31, 2020, 6:36 PM IST
ಕೋವಿಡ್ 19 ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ದೇಶ ಜಯ ಸಾಧಿಸಬೇಕೆಂಬ ಉದ್ದೇಶದಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಈ ಮಾರಕ ವೈರಾಣು ಹರಡುವ ಚೈನ್ ಅನ್ನು ಮುರಿಯುವ ಉದ್ದೇಶದಿಂದ ಕೇಂದ್ರ ಸರಕಾರವು 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದೆ.
ಈ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿಯೇ ಇದ್ದು ‘ಸೆಲ್ಫ್ ಕ್ವಾರೆಂಟೈನ್’ ಮಾಡಿಕೊಳ್ಳುವ ಮೂಲಕ ಈ ಮಾರಕ ವೈರಾಣು ವಿರುದ್ಧದ ಸಮರದಲ್ಲಿ ಸೇನಾನಿಗಳಾಗೋಣ ಎಂದು ಸೆಲೆಬ್ರಿಟಿಗಳಾದ ರಘು ದೀಕ್ಷಿತ್, ರಮೇಶ್ ಅರವಿಂದ, ವಿಜಯ ರಾಘವೇಂದ್ರ, ನವೀನ್ ಡಿ. ಪಡೀಲ್, ರಾಗಿಣಿ ದ್ವಿವೇದಿ, ಪೂಜಾ ಹೆಗ್ಡೆ ಮೊದಲಾದವರು ಉದಯವಾಣಿ ಡಿಜಿಟಲ್ ಮಾಧ್ಯಮದ ಮೂಲಕ ರಾಜ್ಯದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.