ಇದು ಕಟೀಲು ದೇವಿಯ ಮಹಾತ್ಮೆಯ ಕಥೆ
Team Udayavani, Sep 28, 2019, 12:06 PM IST
ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರವು #ShreeDurgaparameshwariTempleKateel ಕರಾವಳಿ ಭಾಗದ ಪ್ರಮುಖ ಶಕ್ತಿ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ತುಳುನಾಡಿನ ಆಡುಮಾತಿನಲ್ಲಿ ‘ಕಟಿಲ್ದಪ್ಪೆ’ ಎಂದೇ ಭಕ್ತರಿಂದ ಕರೆಸಿಕೊಳ್ಳುವ ದುರ್ಗಾಮಾತೆಯು ತನ್ನ ವಿಶೇಷವಾದ ಕಾರಣಿಕ ವರಪ್ರಸಾದಿಂದ ನಂಬಿ ಬರುವ ಭಕ್ತಜನರ ಸಂಕಷ್ಟವನ್ನು ಪರಿಹರಿಸುವ ತಾಯಿಯಾಗಿ ನಂದಿನೀ ನದಿ ಮಧ್ಯದಲ್ಲಿ ವಿರಾಜಮಾನಳಾಗಿದ್ದಾಳೆ.
ನವರಾತ್ರಿ ಸಂಭ್ರಮ ಈ ಕ್ಷೇತ್ರದಲ್ಲಿ ವಿಶೇಷ ಭಕ್ತಿ ಭಾವಗಳಿಂದ ನೆರವೇರುತ್ತದೆ. ಈ ಸಂದರ್ಭದಲ್ಲಿ ರಂಗಪೂಜೆ ಸೇವೆಯು ವಿಶೇಷವಾಗಿ ನಡೆಯುತ್ತದೆ. ಹೂವಿನ ಪೂಜೆ ಹರಕೆಯು ಈ ಕ್ಷೇತ್ರದ ವಿಶೇಷ ಸೇವೆಗಳಲ್ಲಿ ಒಂದಾಗಿದೆ. ಇನ್ನು ನವರಾತ್ರಿ ಸಂದರ್ಭದಲ್ಲಿ ಲಲಿತ ಪಂಚಮಿಯ ದಿನದಂದು ಕ್ಷೇತ್ರದಲ್ಲಿ ಭಕ್ತರಿಗೆ ಸೀರೆ ಪ್ರಸಾದವನ್ನು ನೀಡುವಂತ ಪರಿಪಾಠವಿದೆ. ಶ್ರೀ ದೇವಿ ಸನ್ನಿಧಾನಕ್ಕೆ ಭಕ್ತರಿಂದ ಸೇವಾರೂಪದಲ್ಲಿ ಕೊಡಮಾಡಲ್ಪಟ್ಟ ಸೀರೆಗಳನ್ನು ಈ ದಿನದಂದು ಭಕ್ತಸಮೂಹಕ್ಕೆ ಪ್ರಸಾದ ರೂಪದಲ್ಲಿ ನೀಡಲಾಗುತ್ತಿರುವುದು ಕಟೀಲು ಕ್ಷೇತ್ರದ ವಿಶೇಷತೆಗಳಲ್ಲಿ ಒಂದಾಗಿದೆ. ಇನ್ನು ಮಹಾನವಮಿಯ ದಿನದಂದು ಇಲ್ಲಿ ಕಡುಬು ಪ್ರಸಾದ ವಿತರಣೆ ವಿಶೇಷವಾಗಿ ನಡೆಯುತ್ತದೆ. ಇದಕ್ಕಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ದೋಣಿಯ ಆಕಾರದ ದೊಡ್ಡ ಮರಿಗೆಯಲ್ಲಿ ಅಕ್ಕಿ ಮತ್ತು ಉದ್ದಿನ ಮಿಶ್ರಣವನ್ನು ಮಾಡಿ ಬಂದವನ್ನು ತಯಾರಿಸಿ ಕಡುಬಿನ ತಯಾರಿ ನಡೆಯುತ್ತದೆ. ಮತ್ತು ಮಹಾನವಮಿಯ ದಿನ ಕ್ಷೇತ್ರಕ್ಕೆ ಭೇಟಿ ನೀಡುವ ಊರ ಮತ್ತು ಪರ ಊರಿನ ಭಕ್ತರಿಗೆ ಕಡುಬು ಪ್ರಸಾದವನ್ನು ವಿತರಿಸಲಾಗುತ್ತದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್