ಕ್ಯಾನ್ಸರ್ ಗಡ್ಡೆ ಎಂದು ವೃದ್ಧನ ಖಾಸಗಿ ಅಂಗವನ್ನೇ ಕತ್ತರಿಸಿದ ವೈದ್ಯ.! ನ್ಯಾಯಕ್ಕಾಗಿ ಪರದಾಟ
Team Udayavani, Mar 6, 2023, 1:13 PM IST
ರೋಮ್: ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ವೈದ್ಯರನ್ನು ನಂಬಿಕೊಂಡು, ವೈದ್ಯರು ಕೊಟ್ಟ ಔಷಧಿಯನ್ನು ತೆಗೆದುಕೊಳ್ಳುತ್ತೇವೆ. ಆದರೆ ವೈದ್ಯರೇ ಎಡವಟ್ಟು ಮಾಡಿ ಜೀವಕ್ಕೆ ಅಪಾಯ ತಂದರೆ ಏನು ಮಾಡುವುದು? ವೈದ್ಯನೊಬ್ಬ ತಪ್ಪು ಮಾಡಿದ ಪರಿಣಾಮ ವ್ಯಕ್ತಿಯೊಬ್ಬ ಜೀವನವಿಡೀ ಪರದಾಟ ನಡೆಸಿದ ಪ್ರಕರಣ ಇಟಲಿಯಲ್ಲಿ ನಡೆದಿದೆ.
ವೃದ್ಧ ವ್ಯಕ್ತಿಯೊಬ್ಬ ಜನನಾಂಗದ ಅಂಗದಲ್ಲಿ ನೋವು ಕಾಣಿಸಿಕೊಂಡ ಕಾರಣ ಇಟಲಿಯ ಸ್ಯಾನ್ ಡೊನಾಟೊ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸುತ್ತಾರೆ. 30 ವರ್ಷದ ವೈದ್ಯ ವ್ಯಕ್ತಿಯನ್ನು ಪರೀಕ್ಷೆ ಮಾಡಿದ ಬಳಿಕ ನಿಮಗೆ ಕ್ಯಾನ್ಸರ್ ಗಡ್ಡೆಯಾಗಿದೆ ಅದನ್ನು ಆಪರೇಷನ್ ಮಾಡಿ ತೆಗೆಯಬೇಕೆಂದು ಹೇಳಿದ್ದಾರೆ.
ಇದಾದ ಒಂದು ತಿಂಗಳ ಬಳಿಕ 2018 ರ ನವೆಂಬರ್ 13 ರಂದು ವ್ಯಕ್ತಿಗೆ ಆಪರೇಷನ್ ಮೂಲಕ ಗಡ್ಡೆಯನ್ನು ತೆಗೆಯಲು ವೈದ್ಯರು ಸಿದ್ದರಾಗುತ್ತಾರೆ. ಖಾಸಗಿ ಅಂಗದಲ್ಲೇ ಗಡ್ಡೆಯಾಗಿದೆ ಎಂದು ವೈದ್ಯ ಖಾಸಗಿ ಅಂಗವನ್ನೇ ಆಪರೇಷನ್ ಮೂಲಕ ಕತ್ತರಿಸಿ ತೆಗೆಯುತ್ತಾರೆ.
ಆಪರೇಷನ್ ಆದ ಬಳಿಕ ವೃದ್ದನಿಗೆ ಇದ್ದ ಸಮಸ್ಯೆ ಕ್ಯಾನ್ಸರ್ ಅಲ್ಲ ಅದನ್ನು ಔಷಧಿಯಿಂದಲೇ (ಶಿಶ್ನದ ಚರ್ಮದ ಮೇಲೆ ಸಿಫಿಲಿಸ್ ಸಮಸ್ಯೆಯಿತ್ತು ) ಗುಣಪಡಿಸಬಹುದಿತ್ತು ಎನ್ನುವುದು ತಿಳಿಯುತ್ತದೆ. ವೈದ್ಯ ಕ್ಯಾನ್ಸರ್ ಗೆಡ್ಡಯೆಂದು ತಪ್ಪಾಗಿ ರೋಗವನ್ನು ಪತ್ತೆ ಮಾಡಿದ ಪರಿಣಾಮ ವೃದ್ಧ ಇದೀಗ ಸಮಸ್ಯೆಗೆ ಒಳಗಾಗಿದ್ದಾನೆ.
ತಪ್ಪು ಮಾಡಿದ ವೈದ್ಯ ಈಗ ತನಿಖೆಗೆ ಒಳಗಾಗಿದ್ದಾನೆ. ತನಗೆ ನ್ಯಾಯಬೇಕೆಂದು ವೃದ್ಧ ಕೋರ್ಟಿನ ಮೆಟ್ಟಿಲು ಹತ್ತಿದ್ದಾರೆ. ಈ ಪ್ರಕರಣದ ವಿಚಾರಣೆ ಮಾರ್ಚ್ 9 ರಂದು ನಡೆಯಲಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ