
VIRAL: ಮದುವೆ ದಿನ ಪರಾರಿಯಾಗಲು ಯತ್ನಿಸಿದ ವರ: 20ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ವಧು
Team Udayavani, May 23, 2023, 2:40 PM IST

ಲಕ್ನೋ: ಪರಸ್ಪರ ಪ್ರೀತಿಸಿ ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆ ಎನ್ನುವಾಗಲೇ ವರನೊಬ್ಬ ಮದುವೆ ಮಂಟಪಕ್ಕೆ ಬಾರದೇ ಪರಾರಿಯಾಗಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿರುವುದು ವರದಿಯಾಗಿದೆ.
ಕಳೆದ ಎರಡೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ, ಮದುವೆ ಸಲುವಾಗಿ ಎರಡೂ ಮನೆಯವರಿಂದ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಕೊನೆಗೂ ಇಬ್ಬರು ತಮ್ಮ – ತಮ್ಮ ಮನೆಯವರ ಮನವನ್ನು ಒಪ್ಪಿಸಿ ಮದುವೆಯಾಗಲು ರೆಡಿಯಾಗಿದ್ದಾರೆ.
ಬಾರಾಬಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಾದರಿ ಪ್ರದೇಶದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮದುವೆಯ ದಿನ ಬಂದಿದೆ. ವಧುವಿನ ಕುಟುಂಬಸ್ಥರು, ವರನಿಗಾಗಿ ಕಾಯಲು ಶುರು ಮಾಡಿದ್ದಾರೆ. ಇನ್ನೇನು ವರ ಬರುತ್ತಾನೆ ಎನ್ನುವ ನಿರೀಕ್ಷೆಯಿಂದ ವಧು ಮಂಟಪದಲ್ಲಿ ಕೂತಿದ್ದಾಳೆ. ಆದರೆ ಗಂಟೆಗಳು ಕಳೆದರೂ ವರ ಮಾತ್ರ ಬಂದಿಲ್ಲ.
ಇದನ್ನೂ ಓದಿ:ಏನು ಬೇಕಾದರೂ ಹೇಳಿಕೊಳ್ಳಲಿ..: ಎಂ.ಬಿ.ಪಾಟೀಲ್ 5 ವರ್ಷ ಸಿಎಂ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ
ಕೆಲ ಸಮಯದ ಬಳಿಕ ವರನಿಗೆ ವಧು ಕರೆ ಮಾಡಿದ್ದಾಳೆ. ಆ ವೇಳೆ ವರ ನಾನು ತಾಯಿಯನ್ನು ಕರೆದುಕೊಂಡು ಬರಲು ಬುಡೌನ್ ಗೆ ತೆರಳುತ್ತಿದ್ದೇನೆ ಎಂದಿದ್ದಾನೆ. ಆತನ ಮಾತನ್ನು ಕೇಳಿ, ಆತ ಓಡಿ ಹೋಗುತ್ತಿದ್ದಾನೆ ಎನ್ನುವ ಅನುಮಾನದಿಂದಲೇ ವಧುವೂ ಸೇರಿದಂತೆ ಆಕೆಯ ಮನೆಯವರು ವರನ ಪತ್ತೆಗೆ ತೆರಳಿದ್ದಾರೆ.
ಕೂಡಲೇ ವಧು ಬರೇಲಿಯಿಂದ ಸುಮಾರು 20 ಕಿಮೀ ದೂರ ಚೇಸ್ ಮಾಡಿ ಭೀಮೋರಾ ಪೊಲೀಸ್ ಠಾಣೆ ಬಳಿಯ ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದ ವರನನ್ನು ಪತ್ತೆ ಹಚ್ಚಿ ಆತನನ್ನು ಮದುವೆ ಮಂಟಪಕ್ಕೆ ಕರೆತಂದು ಮದುವೆಯಾಗಿದ್ದಾಳೆ.
ಈ ನಡುವೆ ರಸ್ತೆಯಲ್ಲಿ ಜೋಡಿಯ ನಡುವೆ ಹಲವು ವಾಗ್ವಾದ ನಡೆದಿದೆ. ಕೊನೆಗೆ ಎರಡೂ ಕುಟುಂಬದ ಸಮ್ಮುಖದಲ್ಲಿ ಇಬ್ಬರ ವಿವಾಹ ಜರುಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

Manish Sisodia ರಿಗೆ ಮಧ್ಯಂತರ ಪರಿಹಾರ; ಪತ್ನಿ ಭೇಟಿಗೆ ಕೋರ್ಟ್ ಅನುಮತಿ

UP; ಅಯೋಧ್ಯೆಯಲ್ಲಿ ಬ್ರಿಜ್ ಭೂಷಣ್ ‘ಮಹಾ ರ್ಯಾಲಿ’ಗೆ ಅನುಮತಿ ನಿರಾಕಾರ

ಕಾಲೇಜು ವಿದ್ಯಾರ್ಥಿನಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ! ಕೇರಳದಲ್ಲಿ ನಡೆದ ಘಟನೆ
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
