Goat: ತಾನು ಬಲಿಕೊಟ್ಟು ತಂದ ಮೇಕೆಯ ಮಾಂಸವನ್ನು ತಿನ್ನುವಾಗಲೇ ಮೃತಪಟ್ಟ ವ್ಯಕ್ತಿ; ಆದದ್ದೇನು?
ಬಲಿಕೊಟ್ಟ ಮೇಕೆಯಿಂದಲೇ ಹೋಯಿತು ಪ್ರಾಣ.!
Team Udayavani, Jul 4, 2023, 2:17 PM IST
ಛತ್ತೀಸ್ಗಢ್: ಬಲಿಕೊಟ್ಟ ಮೇಕೆಯಿಂದಲೇ ವ್ಯಕ್ತಿಯೊಬ್ಬನ ಪ್ರಾಣ ಹೋಗಿರುವ ವಿಚಿತ್ರ ಘಟನೆ ಛತ್ತೀಸ್ಗಢದ ಸೂರಜ್ಪುರ ಜಿಲ್ಲೆಯಲ್ಲಿ ನಡೆದಿದೆ.
ಬಗರ್ ಸಾಯಿ (50) ಎಂಬ ವ್ಯಕ್ತಿ ತನ್ನ ಇಷ್ಟಾರ್ಥ ಈಡೇರಿದರೆ ಮೇಕೆಯನ್ನು ಬಲಿ ಕೊಡುವುದಾಗಿ ದೇವಸ್ಥಾನದಲ್ಲಿ ಹರಕೆ ಇಟ್ಟಿದ್ದರು. ಅದರಂತೆ ಬಗರ್ ಸಾಯಿ ಅವರ ಇಷ್ಟಾರ್ಥ ಈಡೇರಿದ್ದು, ಭಾನುವಾರ ( ಜು.2 ರಂದು) ಮೇಕೆಯನ್ನು ಹಿಡಿದುಕೊಂಡು ಮದನ್ಪುರ ಗ್ರಾಮದ ನಿವಾಸಿಗಳೊಂದಿಗೆ ಖೋಪಾಧಾಮ್ಗೆ ತೆರಳಿ ಅಲ್ಲಿ ಮೇಕೆಯನ್ನು ಬಲಿ ಕೊಟ್ಟಿದ್ದಾರೆ.
ಇದನ್ನೂ ಓದಿ: ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ ಪತ್ನಿ
ಮೇಕೆ ಬಲಿ ನೆರವೇರಿಸಿದ ನಂತರ ಗ್ರಾಮಸ್ಥರು ಅದರ ಮಾಂಸವನ್ನು ಬೇಯಿಸಿ ಊಟಕ್ಕೆ ಕುಳಿತಿದ್ದಾರೆ. ಈ ವೇಳೆ ಬಗರ್ ಸಾಯಿ ಅವರಿಗೆ ಮೇಕೆಯ ಮಾಂಸದಿಂದ ಮೇಕೆಯ ಕಣ್ಣು ಸಿಕ್ಕಿದೆ. ಇದನ್ನು ಬಗರ್ ಸಾಯಿ ಅವರು ನುಂಗಲು ಯತ್ನಿಸಿದ್ದಾರೆ. ಆದರೆ ಬೇಯಿಸಿದ ಮೇಕೆಯ ಕಣ್ಣು ಅವರ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ಉಸಿರುಗಟ್ಟಿದಂತೆ ಆಗಿದೆ. ಕೂಡಲೇ ಅವರನ್ನು ಊಟದ ಜಾಗದಿಂದಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್
NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ