
ಮದುವೆ ದಿನವೇ ಓಡಿಹೋದ ವಧುವಿಗಾಗಿ 13 ದಿನ ಮಂಟಪದಲ್ಲೇ ಕಾದು ಕುಳಿತ ವರ: ಕೊನೆಗೆ ಆದದ್ದು..
Team Udayavani, May 29, 2023, 5:14 PM IST

ಜೈಪುರ: ಮದುವೆ ದಿನವೇ ವಧು ಓಡಿ ಹೋಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ.
ಮೇ.3 ರಂದು ರಾಜಸ್ಥಾನದ ಸೈನಾ ಗ್ರಾಮದ ಮನಿಷಾ ಎಂಬ ಯುವತಿಯ ಮದುವೆ ಕಾರ್ಯಕ್ರಮದ ದಿನ. ವರ ಹಾಗೂ ಅವರ ಕುಟುಂಬಸ್ಥರು ವಧುವಿನ ಮನೆಗೆ ಮುಹೂರ್ತಕ್ಕಿಂತ ಮೊದಲೇ ಬಂದಿದ್ದಾರೆ. ಇನ್ನೇನು ಮದುವೆ ಶಾಸ್ತ್ರ ಯಶಸ್ವಿಯಾಗಿ ನಡೆಯಬೇಕು ಎನ್ನುವಷ್ಟರಲ್ಲೇ ವಧು ಹೊಟ್ಟೆ ನೋವೆಂದು ಹೇಳಿ ವಾಸ್ ರೂಮ್ ಹೋಗಿ ಬರುವುದಾಗಿ ವರನ ಬಳಿ ಹೇಳಿದ್ದಾಳೆ.
ಆಯಿತೆಂದು ಮಂಟಪದಲ್ಲೇ ವರ ಕಾದಿದ್ದಾನೆ. ಐದೈದು ನಿಮಿಷ ಕಾದರೂ ವಧು ಬಾರದೇ ಇದ್ದಾಗ, ಎಲ್ಲರೂ ವಧುವನ್ನು ಹುಡುಕಲು ಶುರು ಮಾಡಿದ್ದಾರೆ. ಇದಾದ ಕೆಲ ಸಮಯದ ಬಳಿಕ ವಧು ತನ್ನ ಸಹೋದರ ಸಂಬಂಧಿಯೊಬ್ಬನೊಂದಿಗೆ ಓಡಿಹೋಗಿದ್ದಾಳೆ ಎನ್ನುವುದು ಗೊತ್ತಾಗಿದೆ.
ಈ ಕುರಿತು ವರ ದೂರು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ವಧುವಿನ ಮನೆಯಲ್ಲೇ ಸಿದ್ದವಾದ ಮಂಟಪದಲ್ಲೇ ಕಾದಿದ್ದಾರೆ. ತನ್ನ ಕುಟುಂಬದ 20 ಸದಸ್ಯರನ್ನು ವಧುವಿನ ಗ್ರಾಮದಲ್ಲೇ ನಿಲ್ಲಿಸಿದ್ದಾನೆ. ವರ ಮಂಟಪದಲ್ಲೇ, ವಧುವಿನ ಮನೆಯಲ್ಲೇ ಆಕೆ ಬರುವವರೆಗೆ ಕಾದಿದ್ದಾರೆ.
13 ದಿನಗಳ ಬಳಿಕ ಅಂದರೆ ಮೇ.15 ರಂದು ವಧುವನ್ನು ಪೊಲೀಸರು ಪತ್ತೆ ಮಾಡಿದ್ದು, ಆಕೆಯನ್ನು ಪೊಲೀಸರು ಮನೆಗೆ ತಲುಪಿಸಿದ್ದಾರೆ. ಓಡಿ ಹೋದ ವಧು ಮನೆಗೆ ಬಂದ ಬಳಿಕ ಕುಟುಂಬಸ್ಥರು ಮೊದಲು ನಿಶ್ಚಯವಾಗಿದ್ದ ವರನೊಂದಿಗೆ ಕೊಟ್ಟು ಮದುವೆ ಮಾಡಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Paddy ಇಳುವರಿ ಕುಸಿತ? ತುಂಗಭದ್ರಾ,ಕಾವೇರಿ ತೀರದಲ್ಲಿ ನೀರಿಲ್ಲದೆ ಭತ್ತ ಬೆಳೆಗೆ ಸಂಕಷ್ಟ

Viral News; ಗುಜರಾತ್ ಕಡಲಿನಲ್ಲಿ ಕಾಣಿಸಿಕೊಂಡ ಸಿಂಹದ ಚಿತ್ರ: ಅಸಲಿಯತ್ತೇನು?

Nov. 25, 26: ಬೆಂಗಳೂರಿನಲ್ಲಿ ಕಂಬಳ: 125ಕ್ಕೂ ಅಧಿಕ ಜತೆ ಕೋಣಗಳ ಭಾಗವಹಿಸುವಿಕೆ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ

Mangaluru”14 ಮಿನಿಟ್ಸ್ ಮಿರಾಕಲ್’ ಯೋಜನೆ: ವಂದೇ ಭಾರತ್ ರೈಲಿನ ಸ್ವಚ್ಛತೆ