Leopardಒಗ್ಗಟ್ಟಿನಲ್ಲಿ ಬಲವಿದೆ… ಮನೆಯೊಳಗೆ ನುಗ್ಗಿದ ಚಿರತೆಯನ್ನೇ ಓಡಿಸಿದ ಶ್ವಾನಗಳು
ವಿಡಿಯೋ ವೈರಲ್
Team Udayavani, Jul 28, 2023, 1:19 PM IST
ನಾಸಿಕ್ : ಮನೆಯಲ್ಲಿ ಶ್ವಾನಗಳಿದ್ದರೆ ಮನೆಮಂದಿಗೆ ಯಾವುದೇ ಭಯವಿಲ್ಲ ಅದೂ ರಾತ್ರಿ ಹೊತ್ತು ಕಳ್ಳ ಕಾಕರ ಹಾವಳಿ ಇರುವುದರಿಂದ ಹೆಚ್ಚಿನವರು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಹೀಗೆ ಸಾಕಿದ ನಾಯಿಗಳು ಅದೆಷ್ಟೋ ದರೋಡೆಕೋರರಿಂದ, ಕಾಡು ಪ್ರಾಣಿಗಳಿಂದ ತನ್ನ ಮನೆ ಮಂದಿಯನ್ನು ರಕ್ಷಿಸಿದ ಉದಾಹರಣೆಯೂ ಇದೆ.
ಅದೇ ರೀತಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ಮನೆಯೊಳಗೆ ನುಗ್ಗಲು ಯತ್ನಿಸಿದ ಚಿರತೆಯೊಂದನ್ನು ನಾಯಿಗಳು ಸೇರಿ ಹಿಮ್ಮೆಟ್ಟಿಸಿದ ಘಟನೆ ಬೆಳಕಿಗೆ ಬಂದಿದೆ.
ನಾಸಿಕ್ನ ಅಡ್ಗಾಂವ್ ಶಿವಾರ್ ಪ್ರದೇಶದಲ್ಲಿರುವ ಮನೆಯೊಂದರ ಕಾಂಪೌಂಡ್ ಹಾರಿ ಒಳ ಪ್ರವೇಶಿಸಿದ ಚಿರತೆಯೊಂದು ಮನೆಯ ಆವರಣದಲ್ಲಿ ಮಲಗಿದ್ದ ಶ್ವಾನದ ಮೇಲೆ ದಾಳಿ ನಡೆಸಿದೆ ಈ ವೇಳೆ ಅಲ್ಲೇ ಇದ್ದ ಇನ್ನೊಂದು ಶ್ವಾನ ಎಚ್ಚರಗೊಂಡು ಚಿರತೆ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಗಾಬರಿಗೊಂಡ ಚಿರತೆ ತನ್ನ ರಕ್ಷಣೆಗೆ ಮುಂದಾಗಿ ಸ್ಥಳದಿಂದ ಕಾಲ್ಕಿತ್ತಿದೆ.
ಘಟನೆಯ ದೃಶ್ಯ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎರಡು ನಾಯಿಗಳು ಜೊತೆಯಾಗಿ ದಾಳಿಗೆ ಮುಂದಾದ ಚಿರತೆಯನ್ನು ಹಿಮ್ಮೆಟ್ಟಿಸಿದೆ ಎಂಬುದನ್ನು ದೃಶ್ಯದಲ್ಲಿ ಕಾಣಬಹುದು.
ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಇಲ್ಲಿ ಒಂದೇ ಶ್ವಾನ ಇರುತ್ತಿದ್ದರೆ ಬಹುಶ ಬದುಕುಳಿಯುತ್ತಿರಲಿಲ್ಲವೇನೋ ಆದರೆ ಇನ್ನೊಂದು ಶ್ವಾನ ಬಂದಿರುವುದರಿಂದ ಚಿರತೆ ಗಾಬರಿಗೊಂಡು ಓಡಿ ಹೋಗಿದೆ ಹಾಗಾಗಿ ಈ ಶ್ವಾನದ ಜೀವ ಉಳಿಯಿತು.
🇮🇳: Still a Cat Though, Right? Dogs Chase Away #Leopard in #Nashik
#CCTV footage shows the moment the big cat tip-toes 🐾 its way towards a residence in the Adgaon Shivar area.Just when it was about to pounce, a dog on the porch wakes and the two of them attempt to fend the… pic.twitter.com/gYTwmhAFBI
— RT_India (@RT_India_news) July 28, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
MUST WATCH
ಹೊಸ ಸೇರ್ಪಡೆ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು